text
stringlengths 0
61.5k
|
---|
“ಮನಸ್ಸನ್ನು ಸ್ವಚ್ಛ, ಬುದ್ಧಿಯನ್ನು ಕ್ಲಿಯರ್ ಆಗಿ ಇಟ್ಟುಕೊಂಡು ಡಬಲ್ ಲೈಟ್ ಫರಿಶ್ತಾ ಸ್ಥಿತಿಯ ಅನುಭವ ಮಾಡಿ” |
ಇಂದು ಬಾಪ್ದಾದಾರವರು ತನ್ನ ಸ್ವರಾಜ್ಯ ಅಧಿಕಾರಿ ಮಕ್ಕಳನ್ನು ನೋಡುತ್ತಿದ್ದಾರೆ. ಸ್ವರಾಜ್ಯ ಬ್ರಾಹ್ಮಣ ಜೀವನದ ಜನ್ಮ ಸಿದ್ಧ ಅಧಿಕಾರವಾಗಿದೆ. ಬಾಪ್ದಾದಾರವರು ಪ್ರತಿಯೊಂದು ಬ್ರಾಹ್ಮಣನಿಗೂ ಸ್ವರಾಜ್ಯದ ಸಿಂಹಾಸನಾಧೀಶರನ್ನಾಗಿ ಮಾಡಿಬಿಟ್ಟಿದ್ದಾರೆ. ಸ್ವರಾಜ್ಯದ ಅಧಿಕಾರ ಜನ್ಮವಾಗುತ್ತಿದ್ದಂತೆಯೇ ಪ್ರತಿಯೊಂದು ಬ್ರಾಹ್ಮಣ ಆತ್ಮನಿಗೆ ಪ್ರಾಪ್ತಿಯಾಗಿದೆ. ಎಷ್ಟು ಸ್ವರಾಜ್ಯದ ಮೇಲೆ ಸ್ಥಿತರಾಗುತ್ತೀರಿ ಅಷ್ಟು ತಮ್ಮಲ್ಲಿ ಲೈಟ್ (ಹಗುರತೆ, ಬೆಳಕು) ಹಾಗೂ ಮೈಟ್ನ (ಶಕ್ತಿಯ) ಅನುಭವ ಮಾಡುತ್ತೀರಿ. |
ಬಾಪ್ದಾದಾರವರು ಇಂದು ಪ್ರತಿಯೊಂದು ಮಗುವಿನ ಮಸ್ತಕದಲ್ಲಿ ಪ್ರಕಾಶದ ಕಿರೀಟವನ್ನು ನೋಡುತ್ತಿದ್ದಾರೆ. ಎಷ್ಟು ತಮ್ಮಲ್ಲಿ ಶಕ್ತಿಯನ್ನು ಧಾರಣೆ ಮಾಡಿಕೊಂಡಿದ್ದೀರಿ ಅಷ್ಟೇ ನಂಬರಿನಲ್ಲಿ ಪ್ರಕಾಶದ ಕಿರೀಟ ಹೊಳೆಯುತ್ತದೆ. ಬಾಪ್ದಾದಾರವರು ಎಲ್ಲಾ ಮಕ್ಕಳಿಗೂ ಸರ್ವಶಕ್ತಿಗಳನ್ನು ಅಧಿಕಾರದಲ್ಲಿ ಕೊಟ್ಟಿದ್ದಾರೆ. ಪ್ರತಿಯೊಬ್ಬರು ಮಾಸ್ಟರ್ ಸರ್ವ ಶಕ್ತಿವಂತರಾಗಿದ್ದಾರೆ, ಆದರೆ ಧಾರಣೆ ಮಾಡುವುದರಲ್ಲಿ ನಂಬರ್ವಾರ್ ಆಗಿದ್ದಾರೆ. ಬಾಪ್ದಾದಾರವರು ನೋಡಿದರು ಸರ್ವಶಕ್ತಿಗಳ ಜ್ಞಾನವು ಎಲ್ಲರಲ್ಲಿಯೂ ಇದೆ, ಧಾರಣೆಯು ಇದೆ ಆದರೆ ಒಂದು ಮಾತಿನಲ್ಲಿ ಅಂತರ ಬಂದುಬಿಡುತ್ತದೆ. ಯಾವುದೇ ಬ್ರಾಹ್ಮಣ ಆತ್ಮನೊಂದಿಗೆ ಕೇಳಿ- ಪ್ರತಿಯೊಂದು ಶಕ್ತಿಯ ವರ್ಣನೆಯನ್ನು ಬಹಳ ಚೆನ್ನಾಗಿ ಮಾಡುತ್ತಾರೆ, ಪ್ರಾಪ್ತಿಗಳ ವರ್ಣನೆಯನ್ನು ಸಹ ಬಹಳ ಚೆನ್ನಾಗಿ ಮಾಡುತ್ತಾರೆ, ಆದರೆ ಅಂತರ ಏನೆಂದರೆ - ಸಮಯದಲ್ಲಿ ಯಾವ ಶಕ್ತಿಯ ಅವಶ್ಯಕತೆ ಇದೆಯೋ, ಆ ಸಮಯದಲ್ಲಿ ಆ ಶಕ್ತಿ ಕರ್ಮದಲ್ಲಿ ತೊಡಗಿಸಲು ಸಾಧ್ಯವಾಗುವುದಿಲ್ಲ. ಸಮಯದ ನಂತರ ಅನುಭವ ಮಾಡುತ್ತಾರೆ- ಈ ಶಕ್ತಿಯ ಅವಶ್ಯಕತೆ ಇತ್ತು. ಬಾಪ್ದಾದಾರವರು ಮಕ್ಕಳಿಗೆ ಹೇಳುತ್ತಾರೆ- ಸರ್ವ ಶಕ್ತಿಗಳ ಆಸ್ತಿ ಎಷ್ಟು ಶಕ್ತಿಶಾಲಿಯಾಗಿದೆ ಯಾವುದರಿಂದ ಯಾವ ಸಮಸ್ಯೆಯೂ ಸಹ ನಿಮ್ಮ ಎದುರು ನಿಲ್ಲಲು ಸಾಧ್ಯವಿಲ್ಲ. ಸಮಸ್ಯೆ ಮುಕ್ತ ಆಗಬಹುದು. ಕೇವಲ ಸರ್ವ ಶಕ್ತಿಗಳನ್ನು ಇಮರ್ಜ್ ರೂಪದಲ್ಲಿ ಸ್ಮೃತಿಯಲ್ಲಿ ಇಟ್ಟುಕೊಳ್ಳಿ ಹಾಗೂ ಸಮಯ ದಲ್ಲಿ ಕಾರ್ಯದಲ್ಲಿ ತೊಡಗಿಸಿ. ಇದಕ್ಕಾಗಿ ನೀವು ಬುದ್ಧಿಯ ಲೈನನ್ನು ಕ್ಲಿಯರ್ ಆಗಿ ಇಟ್ಟುಕೊಳ್ಳಿ. ಎಷ್ಟು ಬುದ್ಧಿಯ ಲೈನ್ ಕ್ಲಿಯರ್ ಹಾಗೂ ಕ್ಲೀನ್ ಇರುತ್ತದೆ ಅಷ್ಟು ನಿರ್ಣಯ ಶಕ್ತಿ ತೀವ್ರವಾಗಿರುವ ಕಾರಣ ಯಾವ ಸಮಯ ಯಾವ ಶಕ್ತಿಯ ಅವಶ್ಯಕತೆ ಇದೆಯೋ ಅದನ್ನು ಕಾರ್ಯದಲ್ಲಿ ತೊಡಗಿಸಬಹುದು. ಏಕೆಂದರೆ ಸಮಯ ಪ್ರಮಾಣ ಬಾಪ್ದಾದಾರವರು ಪ್ರತಿಯೊಂದು ಮಗುವನ್ನು ವಿಘ್ನಮುಕ್ತ, ಸಮಸ್ಯೆ ಮುಕ್ತ, ಪರಿಶ್ರಮದ ಪುರುಷಾರ್ಥದಿಂದ ಮುಕ್ತರನ್ನಾಗಿ ನೋಡಲು ಬಯಸುತ್ತಾರೆ. ಎಲ್ಲರೂ ಆಗಬೇಕೆಂದು ಬಯಸುತ್ತಾರೆ ಆದರೆ ಬಹಳ ಕಾಲದ ಈ ಅಭ್ಯಾಸದ ಅವಶ್ಯಕತೆ ಇದೆ. ಬ್ರಹ್ಮಾ ತಂದೆಯ ವಿಶೇಷ ಸಂಸ್ಕಾರವನ್ನು ನೋಡಿ-"ತಕ್ಷಣ ಧಾನ ಮಹಾಪುಣ್ಯ" ಜೀವನದ ಆರಂಭದಿಂದ ಪ್ರತಿ ಕಾರ್ಯದಲ್ಲಿ ತಕ್ಷಣ ದಾನವು ಮಾಡಿದರು ಹಾಗೂ ತಕ್ಷಣ ಕೆಲಸವನ್ನು ಮಾಡಿದರು. ಬ್ರಹ್ಮಾ ತಂದೆಯ ವಿಶೇಷತೆಯಾಗಿದೆ- ನಿರ್ಣಯ ಶಕ್ತಿ ಸದಾ ಫಾಸ್ಟ್ ಆಗಿತ್ತು. ಬಾಪ್ದಾದಾರವರು ಫಲಿತಾಂಶದಲ್ಲಿ ನೋಡಿದರು. ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಲೇಬೇಕು. ಬಾಪ್ದಾದಾರವರೊಂದಿಗೆ ಬರುವವರಾಗಿದ್ದೀರಲ್ಲವೇ! ಅಥವಾ ಹಿಂದೆ ಹಿಂದೆ ಬರುವವರಾಗಿದ್ದೀರಾ? ಜೊತೆಯಲ್ಲಿ ಹೋಗಬೇಕೆಂದರೆ ಬ್ರಹ್ಮಾ ತಂದೆಯನ್ನು ಅನುಕರಿಸಿ. ಕರ್ಮದಲ್ಲಿ ಫಾಲೋ ಬ್ರಹ್ಮಾ ತಂದೆ ಹಾಗೂ ಸ್ಥಿತಿಯಲ್ಲಿ ನಿರಾಕರಿ ಶಿವ ತಂದೆಯನ್ನು ಫಾಲೋ ಮಾಡಬೇಕು. ಫಾಲ್ಲೋ ಮಾಡುವುದು ಬರುತ್ತದೆ ಅಲ್ಲವೇ? |
ಡಬಲ್ ವಿದೇಶಿಯರಿಗೆ ಫಾಲೋ ಮಾಡಲು ಬರುತ್ತದೆಯೇ? ಫಾಲೋ ಮಾಡುವುದಂತೂ ಸಹಜವಾಗಿದೆ ಅಲ್ಲವೇ! ಫಾಲೋ ಮಾಡಬೇಕೆಂದರೆ ಏಕೆ, ಏನು, ಹೇಗೆ.... ಇದೆಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ. ಹಾಗೂ ಎಲ್ಲರಿಗೂ ಅನುಭವವಿದೆ- ಏಕೆ, ಏನು, ಹೇಗೆ ಇದೆ ವ್ಯರ್ಥ ಸಂಕಲ್ಪಗಳ ನಿಮಿತ್ತ ಆಗಿದೆ, ಇದೆ ಆಧಾರವಾಗಿದೆ. ಫಾಲೋ ಫಾದರ್ ಮಾಡುವುದರಲ್ಲಿ ಈ ಶಬ್ದಗಳು ಸಮಾಪ್ತಿಯಾಗಿ ಬಿಡುತ್ತದೆ. ಹೇಗೆ ಎನ್ನುವುದಲ್ಲ ಹೀಗೆ! ಬುದ್ಧಿ ತಕ್ಷಣ ನಿರ್ಣಯ ಮಾಡುತ್ತದೆ ಈ ರೀತಿ ನಡೆ, ಈ ರೀತಿ ಮಾಡು. ಎಂದ ಮೇಲೆ ಇಂದು ಬಾಪ್ದಾದಾರವರು ವಿಶೇಷ ಎಲ್ಲಾ ಮಕ್ಕಳಿಗೂ ಭಲೇ ಮೊದಲ ಬಾರಿ ಬಂದಿರುವಿರಿ, ಅಥವಾ ಹಳೆಯವರಾಗಿದ್ದೀರಿ, ಎಲ್ಲರಿಗೂ ಇದೆ ಸೂಚನೆಯನ್ನು ಕೊಡುತ್ತಿದ್ದಾರೆ- ತಮ್ಮ ಮನಸ್ಸನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ಹಲವರ ಮನಸ್ಸನಲ್ಲಿ ಈಗಲೂ ಸಹ ವ್ಯರ್ಥ ಹಾಗೂ ನಕಾರಾತ್ಮಕತೆಯ ಸಣ್ಣಪುಟ್ಟ ಕಲೆ ಇದೆ. ಇದರ ಕಾರಣ ಪುರುಷಾರ್ಥದ ಶ್ರೇಷ್ಠ ವೇಗ, ತೀವ್ರಗತಿಯಲ್ಲಿ ಅಡೆತಡೆ ಬರುತ್ತದೆ. ಬಾಪ್ದಾದಾರವರು ಸದಾ ಶ್ರೀಮತವನ್ನು ಕೊಡುತ್ತಾರೆ- ಮನಸ್ಸಿನಲ್ಲಿ ಸದಾ ಪ್ರತಿಯೊಂದು ಆತ್ಮದ ಪ್ರತಿ ಶುಭ ಭಾವನೆ ಹಾಗೂ ಶುಭಕಾಮನೆಯನ್ನು ಇಡಿ- ಇದಾಗಿದೆ ಸ್ವಚ್ಛ ಮನಸ್ಸು. ಅಪಕಾರಿಯ ಮೇಲೆಯೂ ಉಪಕಾರದ ವೃತ್ತಿ ಇಡುವುದು- ಇದೆ ಸ್ವಚ್ಛ ಮನಸ್ಸಾಗಿದೆ. ಸ್ವಯಂನ ಪ್ರತಿ ಹಾಗೂ ಅನ್ಯರ ಪ್ರತಿ ವ್ಯರ್ಥ ಸಂಕಲ್ಪ ಬರುವುದು- ಇದು ಸ್ವಚ್ಛ ಮನಸ್ಸಲ್ಲ. ಸ್ವಚ್ಛ ಮನಸ್ಸು ಹಾಗೂ ಶುದ್ಧ ಮತ್ತು ಕ್ಲಿಯರ್ ಬುದ್ಧಿ. ಪರಿಶೀಲನೆ ಮಾಡಿ, ತಮ್ಮನ್ನು ತಾವು ಗಮನವಿಟ್ಟು ನೋಡಿ, ಮೇಲೆ ಮೇಲೆ ಪರಿಶೀಲನೆ ಮಾಡುವುದಲ್ಲ ಸರಿಯಾಗಿದೆ, ಸರಿಯಾಗಿದೆ. ಹೀಗಲ್ಲ. ಯೋಚಿಸಿ ನೋಡಿ- ಮನಸ್ಸು ಹಾಗೂ ಬುದ್ಧಿ ಸ್ಪಷ್ಟವಾಗಿದೆಯೇ, ಶ್ರೇಷ್ಠವಾಗಿದೆಯೇ? ಆಗ ಡಬಲ್ ಲೈಟ್ ಸ್ಥಿತಿ ಬರಲು ಸಾಧ್ಯ. ತಂದೆಯ ಸಮಾನ ಸ್ಥಿತಿಯನ್ನು ಮಾಡಲು ಇದೇ ಸಾಧನವಾಗಿದೆ. ಹಾಗೂ ಈ ಅಭ್ಯಾಸ ಅಂತ್ಯದಲ್ಲಿ ಅಲ್ಲ, ಬಹು ಕಾಲದ ಅಭ್ಯಾಸ ಅವಶ್ಯಕ ವಾಗಿದೆ. ಚೆಕ್ ಮಾಡಲು ಬರುತ್ತದೆಯೇ? ತಮ್ಮನ್ನು ತಾವು ಚೆಕ್ ಮಾಡಿಕೊಳ್ಳಬೇಕು, ಬೇರೆಯವರನ್ನಲ್ಲ ಬಾಪ್ದಾದಾರವರು ಮೊದಲು ಸಹ, ಹಾಸ್ಯದ ಮಾತನ್ನು ಹೇಳಿದ್ದರು- ಮಕ್ಕಳಿಗೆ ದೂರದ ದೃಷ್ಟಿ ಬಹಳ ತೀಕ್ಷ್ಣವಾಗಿದೆ ಹಾಗೂ ಹತ್ತಿರದ ದೃಷ್ಟಿ ಬಲಹೀನವಾಗಿದೆ. ಆದ್ದರಿಂದ ಅನ್ಯರನ್ನು ಜಡ್ಜ್ (ತೀರ್ಮಾನ) ಮಾಡುವುದರಲ್ಲಿ ಬಹಳ ಬುದ್ಧಿವಂತರಾಗಿದ್ದೀರಿ. ತನ್ನನ್ನು ತಾನು ಚೆಕ್ ಮಾಡುವುದರಲ್ಲಿ ಬಲಹೀನರಾಗಬೇಡಿ. |
ಬಾಪ್ದಾದಾರವರು ಮೊದಲು ಸಹ ಹೇಳಿದ್ದರು- ಹೇಗೆ ಈಗ ನಿಮಗೆ ನಿಶ್ಚಯವಿದೆ ನಾನು ಬ್ರಹ್ಮಾಕುಮಾರಿ/ ಬ್ರಹ್ಮಾಕುಮಾರನಾಗಿದ್ದೇನೆ. ನಡೆಯುತ್ತಾ- ಓಡಾಡುತ್ತಾ- ಯೋಚಿಸುತ್ತ - ನಾನು ಬ್ರಹ್ಮಾಕುಮಾರಿ ಆಗಿದ್ದೇನೆ, ನಾನು ಬ್ರಹ್ಮಾಕುಮಾರ ಬ್ರಾಹ್ಮಣ ಆತ್ಮನಾಗಿದ್ದೇನೆ. "ನಾನು ಫರಿಶ್ತಾ ಆಗಿದ್ದೇನೆ" ಇದನ್ನು ಸ್ವಾಭಾವಿಕ ಸ್ಮೃತಿ ಹಾಗೂ ಸ್ವಭಾವವನ್ನಾಗಿ ಮಾಡಿಕೊಳ್ಳಿ. ಅಮೃತ ವೇಳೆ ಏಳುತ್ತಲೇ ಇದನ್ನು ಪಕ್ಕಾ ಮಾಡಿಕೊಳ್ಳಿ- ನಾನು ಫರಿಶ್ತಾ ಪರಮಾತ್ಮ- ಶ್ರೀಮತದ ಅಡಿಯಲ್ಲಿ ಈ ಸಾಕಾರ ತನುವಿನಲ್ಲಿ ಬಂದಿದ್ದೇನೆ, ಎಲ್ಲರಿಗೂ ಸಂದೇಶವನ್ನು ಕೊಡುವುದಕ್ಕಾಗಿ ಹಾಗೂ ಶ್ರೇಷ್ಠ ಕರ್ಮವನ್ನು ಮಾಡುವುದಕ್ಕಾಗಿ. ಕಾರ್ಯ ಪೂರ್ಣವಾದ ತಕ್ಷಣ ತಮ್ಮ ಶಾಂತಿಯ ಸ್ಥಿತಿಯಲ್ಲಿ ಸ್ಥಿತರಾಗಿ ಬಿಡಿ. ಶ್ರೇಷ್ಠ ಸ್ಥಿತಿಯಲ್ಲಿ ಹೋಗಿಬಿಡಿ. ಒಬ್ಬರು ಇನ್ನೊಬ್ಬರನ್ನು ಸಹ ಫರಿಶ್ತಾ ಸ್ಥಿತಿಯಲ್ಲಿಯೇ ನೋಡಿ. ನಿಮ್ಮ ವೃತ್ತಿ ಅನ್ಯರನ್ನು ಸಹ ನಿಧಾನವಾಗಿ ಫರಿಶ್ತೆಗಳನ್ನಾಗೆ ಮಾಡಿಬಿಡುವುದು. ನಿಮ್ಮ ದೃಷ್ಟಿ ಅನ್ಯರ ಮೇಲೆಯೂ ಪ್ರಭಾವ ಬೀರುವುದು. ನಾವು ಫರಿಶ್ತೆಗಳಾಗಿದ್ದೇವೆ ಎಂದು ಪಕ್ಕಾ ಇದೆಯೇ? `ಫರಿಶ್ತಾ ಭವ'ದ ವರದಾನ ಎಲ್ಲರಿಗೂ ಸಿಕ್ಕಿದೆಯೇ? ಒಂದು ಸೆಕೆಂಡಿನಲ್ಲಿ ಫರಿಶ್ತಾ ಸ್ಥಿತಿ ಅರ್ಥಾತ್ ಡಬಲ್ ಲೈಟ್ ಆಗಲು ಸಾಧ್ಯವೇ? ಒಂದು ಸೆಕೆಂಡಿನಲ್ಲಿ, ಒಂದು ನಿಮಿಷದಲ್ಲಿ ಅಲ್ಲ, 10 ನಿಮಿಷದಲ್ಲಿ ಅಲ್ಲ, ಒಂದು ಸೆಕೆಂಡ್ನಲ್ಲಿ ಯೋಚಿಸಿದಿರಿ ಹಾಗೂ ಆಗಿಬಿಟ್ಟಿರಿ, ಈ ರೀತಿಯ ಅಭ್ಯಾಸವಿದೆಯೇ? ಒಳ್ಳೆಯದು, ಯಾರು ಒಂದು ಸೆಕೆಂಡಿನಲ್ಲಿ ಆಗಬಲ್ಲರು, 2 ಸೆಕೆಂಡಿನಲ್ಲಿ ಅಲ್ಲ, ಒಂದು ಸೆಕೆಂಡ್ನಲ್ಲಿ ಆಗುತ್ತೀರಿ ಎನ್ನುವವರು ಒಂದು ಕೈಯಿಂದ ಚಪ್ಪಾಳೆ ಹೊಡೆಯಿರಿ. ಆಗಲು ಸಾಧ್ಯವೇ? ಸುಮ್ಮನೆ ಕೈ ಎತ್ತಬೇಡಿ. ಡಬಲ್ ವಿದೇಶಿಯರು ಕೈ ಎತ್ತುತ್ತಿಲ್ಲ! ಸಮಯ ಬೇಕಾಗುತ್ತದೆಯೇ? ಒಳ್ಳೆಯದು ಯಾರು ಸ್ವಲ್ಪ ಸಮಯ ಬೇಕು ಎಂದು ತಿಳಿಯುತ್ತೀರಿ, ಒಂದು ಸೆಕೆಂಡ್ನಲ್ಲಿ ಅಲ್ಲ, ಸ್ವಲ್ಪ ಸಮಯ ಬೇಕಾಗುತ್ತದೆ ಎನ್ನುವವರು ಕೈ ಎತ್ತಿ. (ಬಹುತೇಕರು ಕೈಯೆತ್ತಿದರು) ಒಳ್ಳೆಯದು, ಆದರೆ ಕೊನೆಯ ಸಮಯದ ಪೇಪರ್ ಒಂದು ಸೆಕೆಂಡ್ನಲ್ಲಿ ಬರುವಂತಹದ್ದಾಗಿದೆ, ಆಗ ಏನು ಮಾಡುವಿರಿ? ಇದ್ದಕ್ಕಿದ್ದಂತೆಯೇ ಬರುತ್ತದೆ ಹಾಗೂ ಸೆಕೆಂಡ್ ನಲ್ಲಿ ಬರುತ್ತದೆ. ಕೈ ಎತ್ತಿದಿರಿ, ಯಾವುದೇ ತೊಂದರೆ ಇಲ್ಲ. ಅನುಭೂತಿ ಮಾಡಿದಿರಿ, ಇದು ಸಹ ಬಹಳ ಒಳ್ಳೆಯದು. ಆದರೆ ಈ ಅಭ್ಯಾಸ ಮಾಡಲೇಬೇಕು. ಮಾಡಬೇಕಾಗುತ್ತದೆ ಅಲ್ಲ, ಮಾಡಲೇಬೇಕು. ಈ ಅಭ್ಯಾಸ ಬಹಳ ಬಹಳ- ಬಹಳ ಅವಶ್ಯಕವಾಗಿದೆ. ಹೋಗಲಿ, ಬಾಪ್ದಾದಾರವರು ನಿಮಗೆ ಇನ್ನು ಸ್ವಲ್ಪ ಸಮಯ ಕೊಡುತ್ತಾರೆ. ಎಷ್ಟು ಸಮಯ ಬೇಕು? ಎರಡು ಸಾವಿರದ ವರೆಗೂ ಬೇಕೆ? 21ನೇ ಶತಮಾನವಂತು ನೀವೆಲ್ಲರೂ ಚಾಲೆಂಜ್ (ಸವಾಲು) ಮಾಡಿದ್ದೀರಿ- ಗೋಲ್ಡನ್ ಏಜ್ ಪ್ರಪಂಚ ಬರುವುದು ಹಾಗೂ ವಾತಾವರಣವನ್ನು ತಯಾರು ಮಾಡುತ್ತೇವೆ. ಚಾಲೆಂಜ್ ಮಾಡಿದ್ದಿರಲ್ಲವೇ! ಎಂದ ಮೇಲೆ ಅಷ್ಟರವರೆಗೂ ಬಹಳ ಸಮಯವಿದೆ. ಎಷ್ಟು ಸ್ವಯಂನ ಮೇಲೆ ಗಮನ ಕೊಡಲು ಸಾಧ್ಯವೂ, ಕೊಡಲು ಸಾಧ್ಯವೇ? ಅಲ್ಲ, ಕೊಡಲೇಬೇಕು. ಹೇಗೆ ದೇಹಭಾನದಲ್ಲಿ ಬರಲು ಎಷ್ಟು ಸಮಯ ಬೇಕಾಗುತ್ತದೆ! ಎರಡು ಸೆಕೆಂಡ್? ಬಯಸದಿದ್ದರೂ ಸಹ ದೇಹ ಭಾನದಲ್ಲಿ ಬಂದುಬಿಡುತ್ತೀರಿ, ಎಂದ ಮೇಲೆ ಎಷ್ಟು ಸಮಯ ಹಿಡಿಸುತ್ತದೆ? ಒಂದು ಸೆಕೆಂಡ್ ಅಥವಾ ಅದಕ್ಕಿಂತಲೂ ಕಡಿಮೆ? ಗೊತ್ತೇ ಆಗುವುದಿಲ್ಲ- ದೇಹ ಭಾನದಲ್ಲಿ ಬಂದುಬಿಟ್ಟಿದ್ದೇವೆ. ಇದೇ ರೀತಿ ಈ ಅಭ್ಯಾಸವನ್ನು ಮಾಡಿ- ಏನೇ ಆಗಲಿ, ಏನೆ ಮಾಡುತ್ತಿರಲಿ ಆದರೆ ಗೊತ್ತೇ ಆಗದಿದ್ದಂತೆ ಆತ್ಮ ಅಭಿಮಾನಿ, ಶಕ್ತಿಶಾಲಿ ಸ್ಥಿತಿಯಲ್ಲಿ ಸ್ವತಹವಾಗಿ ಬಂದುಬಿಟ್ಟಿದ್ದೇನೆ. ಫರಿಶ್ತಾ ಸ್ಥಿತಿಯು ಸಹ ಸ್ವತಹವಾಗಿ ಬಂದುಬಿಡಬೇಕು. ಎಷ್ಟು ತಮ್ಮ ಸ್ವಭಾವ ಫರಿಶ್ತಾತನದ್ದಾಗಿ ಮಾಡಿಕೊಳ್ಳುತ್ತೀರಿ, ಪ್ರಕೃತಿ ಈ ಸ್ಥಿತಿಯನ್ನು ನ್ಯಾಚುರಲ್ (ಸ್ವತಹವಾಗಿ) ಮಾಡಿಬಿಡುತ್ತದೆ. ಹಾಗಾದರೆ ಬಾಪ್ದಾದಾರವರು ಎಷ್ಟು ಸಮಯದ ನಂತರ ಕೇಳಬಹುದು? ಎಷ್ಟು ಸಮಯ ಬೇಕು? ಜಯಂತಿ ಹೇಳಿ- ಎಷ್ಟು ಸಮಯ ಬೇಕು? ವಿದೇಶಿಯರ ಕಡೆಯಿಂದ ನೀವು ಹೇಳಿ- ವಿದೇಶಿಯರಿಗೆ ಎಷ್ಟು ಸಮಯ ಬೇಕು? ಜನಕ್ ಹೇಳಿ. (ದಾದೀಜಿಯವರು ಹೇಳಿದರು ಇವತ್ತೆ ಆಗುತ್ತೇವೆ, ನಾಳೆ ಅಲ್ಲ) ಒಂದು ವೇಳೆ ಇಂದೇ ಆಗುತ್ತೀರಿ ಎಂದರೆ ಎಲ್ಲರೂ ಫರಿಶ್ತಾ ಆಗಿಬಿಟ್ಟಿದ್ದೀರಿ? ಆಗಿಬಿಡುತ್ತೇವೆ ಅಲ್ಲ. ಆಗಿಬಿಡುತ್ತೇವೆ ಎಂದರೆ ಎಲ್ಲಿಯವರೆಗೆ ಆಗುವಿರಿ? ಬಾಪ್ದಾದಾರವರು ಇಂದು ಬ್ರಹ್ಮಾ ತಂದೆಯ ಯಾವ ಸಂಸ್ಕಾರವನ್ನು ಹೇಳಿದರು?- `ತಕ್ಷಣ ದಾನ ಮಹಾಪುಣ್ಯ'. |
ಬಾಪ್ದಾದಾರವರಿಗೆ ಪ್ರತಿಯೊಂದು ಮಗುವಿನ ಮೇಲೆ ಪ್ರೀತಿ ಇದೆ. ಒಂದು ಮಗುವನ್ನು ಸಹ ಕಡಿಮೆ ಎಂದು ತಿಳಿಯುವುದಿಲ್ಲ. ನಂಬರ್ವಾರ್ ಏಕೆ? ಎಲ್ಲರೂ ನಂಬರ್ ಒನ್ ಆಗಿಬಿಟ್ಟರೆ ಎಷ್ಟು ಚೆನ್ನಾಗಿರುತ್ತೆ. ಒಳ್ಳೆಯದು ಇಂದು ಬಹಳ ಗುಂಪುಗಳು ಬಂದಿದ್ದಾರೆ. |
ಪ್ರಶಾಸಕ ವರ್ಗ (ಅಡ್ಮಿನಿಸ್ಟ್ರೇಟಿವ್ ವಿಂಗ್)ನ ಸಹೋದರ ಸಹೋದರಿಯರೊಂದಿಗೆ:- ಪರಸ್ಪರ ಸೇರಿಕೊಂಡು ಯಾವ ಪ್ರೋಗ್ರಾಮ್ ಮಾಡಿದ್ದೀರಿ? ಇಂತಹ ತೀವ್ರ ಪುರುಷಾರ್ಥದ ಯೋಜನೆಯನ್ನು ಮಾಡಿ ಯಾವುದರಿಂದ ಬೇಗ ನೀವು ಶ್ರೇಷ್ಠ ಆತ್ಮರ ಕೈಯಲ್ಲಿ ಈ ಕಾರ್ಯ ಬಂದು ಬಿಡಬೇಕು. ವಿಶ್ವ ಪರಿವರ್ತನೆ ಮಾಡಬೇಕೆಂದರೆ ಇಡೀ ಅಡ್ಮಿನಿಸ್ಟ್ರೇಷನ್ (ಪ್ರಶಾಸನ) ಬದಲಾಯಿಸಬೇಕಾಗುತ್ತದೆ ಅಲ್ಲವೇ! ಹೇಗೆ ಈ ಕಾರ್ಯ ಸಹಜವಾಗಿ ಮುಂದುವರೆಯುತ್ತಾ ಹೋಗುವುದು, ಹರಡುತ್ತಾ ಹೋಗುವುದು, ಇದರ ಯೋಚನೆ ಮಾಡಿದ್ದೀರಾ? ಯಾರೆಲ್ಲಾ ಕಡಿಮೆ ಎಂದರೆ ಕಡಿಮೆ ದೊಡ್ಡ ದೊಡ್ಡ ನಗರಗಳಲ್ಲಿ ನಿಮಿತ್ತರಾಗಿದ್ದಾರೆ ಅವರಿಗೆ ಪರ್ಸನಲ್ (ವೈಯಕ್ತಿಕವಾಗಿ) ಸಂದೇಶ ಕೊಡುವ ಯೋಜನೆ ಮಾಡಿದ್ದೀರಾ? ಕಡಿಮೆ ಎಂದರೆ ಕಡಿಮೆ ಇವರಾದರೂ ತಿಳಿದುಕೊಳ್ಳಲಿ- ಈಗ ಆಧ್ಯಾತ್ಮಿಕತೆಯ ಮೂಲಕ ಪರಿವರ್ತನೆ ಆಗಬಹುದು ಹಾಗೂ ಆಗಲೇಬೇಕು. ಹಾಗಾದರೆ ತಮ್ಮ ವರ್ಗದವರನ್ನು ಎದ್ದೇಳಿಸಿ ಆದ್ದರಿಂದ ಈ ವರ್ಗಗಳನ್ನು ಮಾಡಲಾಗಿದೆ. ಬಾಪ್ದಾದಾರವರು ವರ್ಗದವರ ಸೇವೆಯನ್ನು ನೋಡಿ ಖುಷಿಯಾಗಿದ್ದಾರೆ ಆದರೆ ಈ ಫಲಿತಾಂಶವನ್ನು ನೋಡಬೇಕಾಗಿದೆ- ಪ್ರತಿ ವರ್ಗದವರು ತಮ್ಮ ತಮ್ಮ ವರ್ಗದವರಿಗೆ ಎಲ್ಲಿಯವರೆಗೂ ಸಂದೇಶವನ್ನು ತಲುಪಿಸಿದ್ದಾರೆ! ಅಲ್ಪಸ್ವಲ್ಪ ಎದ್ದೇಳಿಸಿದ್ದೀರಾ ಅಥವಾ ಜೊತೆಗಾರರನ್ನಾಗಿ ಮಾಡಿಕೊಂಡಿದ್ದೀರಾ? ಸಹಯೋಗಿ, ಜೊತೆಗಾರರನ್ನಾಗಿ ಮಾಡಿಕೊಂಡಿದ್ದೀರಾ? ಬ್ರಹ್ಮಾಕುಮಾರನನ್ನಾಗಿ ಮಾಡಿಕೊಂಡಿಲ್ಲ ಆದರೆ ಸಹಯೋಗಿ ಜೊತೆಗಾರರನ್ನಾಗಿ ಮಾಡಿಕೊಂಡಿದ್ದೀರಾ? |
ಎಲ್ಲಾ ವರ್ಗದವರಿಗೆ ಬಾಪ್ದಾದಾರವರು ಹೇಳುತ್ತಿದ್ದಾರೆ- ಹೇಗೆ ಈಗ ಧಾರ್ಮಿಕ ನಾಯಕರು ಬಂದರು, ಅವರು ನಂಬರ್ಒನ್ ಆಗಿರಲಿಲ್ಲ ಆದರೂ ಸಹ ಒಂದೇ ವೇದಿಕೆಯ ಮೇಲೆ ಎಲ್ಲರೂ ಒಟ್ಟಾದರೂ ಹಾಗೂ ಎಲ್ಲರ ಮುಖದಿಂದ ಬಂತು- ನಾವೆಲ್ಲರೂ ಸೇರಿಕೊಂಡು ಆಧ್ಯಾತ್ಮಿಕ ಶಕ್ತಿಯನ್ನು ಹರಡಿಸಬೇಕು. ಈ ರೀತಿ ಪ್ರತಿಯೊಂದು ವರ್ಗದವರು ಯಾರೆಲ್ಲಾ ಬಂದಿದ್ದೀರಿ, ಈ ಪ್ರತಿಯೊಂದು ವರ್ಗದವರು ಸಹ ಇಂತಹ ಫಲಿತಾಂಶವನ್ನು ತೆಗೆಯಬೇಕು- ನಮ್ಮ ವರ್ಗದವರಿಗೆ ಎಲ್ಲಿಯವರೆಗೂ ಸಂದೇಶ ತಲುಪಿದೆ? |
ಎರಡನೆಯದು- ಆಧ್ಯಾತ್ಮಿಕತೆಯ ಅವಶ್ಯಕತೆ ಇದೆ ಹಾಗೂ ನಾವು ಸಹಯೋಗಿಗಳಾಗುತ್ತೇವೆ ಇಂತಹ ಫಲಿತಾಂಶವಿರಲಿ. ರೆಗುಲರ್ (ನಿಯಮಿತ) ವಿದ್ಯಾರ್ಥಿಗಳಾಗುವುದಿಲ್ಲ ಆದರೆ ಸಹಯೋಗಿ ಆಗಬಹುದು. ಇಲ್ಲಿಯವರೆಗೂ ಪ್ರತಿಯೊಂದು ವರ್ಗದವರಿಗೂ ಏನೆಲ್ಲ ಸೇವೆ ಮಾಡಿದ್ದೀರಿ, ಹೇಗೆ ಈಗ ಧಾರ್ಮಿಕ ನಾಯಕರನ್ನು ಕರೆದಿರಿ, ಇದೇ ರೀತಿ ಪ್ರತಿಯೊಂದು ದೇಶದಿಂದ ಪ್ರತಿಯೊಂದು ವರ್ಗದವರಿಗೆ ಮಾಡಿ. ಮೊದಲು ಭಾರತದಲ್ಲಿಯೇ ಮಾಡಿ, ನಂತರ ಇಂಟನ್ರ್ಯಾಷನಲ್ (ಅಂತರಾಷ್ಟ್ರೀಯವಾಗಿ) ಮಾಡಿ, ಪ್ರತಿಯೊಂದು ವರ್ಗದ ಇಂತಹ ಭಿನ್ನ-ಭಿನ್ನ ಪದವಿಯವರು ಒಟ್ಟಾಗಲಿ ಹಾಗೂ ಇಂತಹ ಅನುಭವ ಮಾಡಲಿ- ನಾವು ಇವರ ಸಹಯೋಗಿಗಳಾಗಬೇಕು. ಪ್ರತಿಯೊಂದು ವರ್ಗದ ಈ ಫಲಿತಾಂಶ ಎಲ್ಲಿಯವರೆಗೂ ಇದೆ? ಹಾಗೂ ಮುಂದಿನ ಯೋಜನೆ ಏನಾಗಿದೆ? ಏಕೆಂದರೆ ಒಂದು ವರ್ಗ, ಒಬ್ಬೊಬ್ಬರನ್ನು ಒಂದು ವೇಳೆ ಲಕ್ಷ್ಯವಿಟ್ಟುಕೊಂಡು ಸಮೀಪ ತರುತ್ತಿರಿ ಎಂದರೆ ನಂತರ ಎಲ್ಲಾ ವರ್ಗದ ಯಾರೆಲ್ಲ ಸಮೀಪ ಸಹಯೋಗಿಗಳಿದ್ದಾರಲ್ಲವೇ, ಅವರ ಸಂಘಟನೆಯನ್ನು ಮಾಡಿ ದೊಡ್ಡ ಸಂಘಟನೆಯನ್ನು ಮಾಡೋಣ. ಹಾಗೂ ಒಬ್ಬರು ಇನ್ನೊಬ್ಬರನ್ನು ನೋಡುತ್ತಾ ಉಮಂಗ ಉತ್ಸಾಹವು ಸಹ ಬರುತ್ತದೆ. ಈಗ ಹರಡಿಕೊಂಡಿದ್ದಾರೆ, ಒಂದು ನಗರದಲ್ಲಿ ಕೆಲವರು, ಇನ್ನೊಂದು ನಗರದಲ್ಲಿ ಕೆಲವರು. ಒಳ್ಳೆಯವರಾಗಿದ್ದಾರೆ ಆದರೆ ಎಲ್ಲಕ್ಕಿಂತ ಮೊದಲು ಸಂಘಟನೆಯನ್ನು ಸೇರಿಸಿ ಹಾಗೂ ನಂತರ ಎಲ್ಲರನ್ನು ಸೇರಿಸಿ ಸಂಘಟನೆ ಮಧುಬನದಲ್ಲಿ ಮಾಡೋಣ. ಇಂತಹ ಯೋಜನೆಯನ್ನು ಮಾಡಿದ್ದೀರಾ? ಅವಶ್ಯವಾಗಿ ಮಾಡಿರಬಹುದು. ಫಾರಿನ್ ಅವರಿಗೆ( ವಿದೇಶದವರಿಗೆ) ಸಹ ಸಂದೇಶವನ್ನು ಕಳುಹಿಸಿದ್ದೆವು, ಬಹಳ ಹರಡಿಕೊಂಡಿದ್ದಾರೆ. ಭಾರತದಲ್ಲಿಯೂ ನೋಡಿ ಒಳ್ಳೊಳ್ಳೆಯ ಆತ್ಮಗಳು ಬೇರೆ ಬೇರೆ ಜಾಗಗಳಲ್ಲಿ ಹೊರ ಬಂದಿದ್ದಾರೆ ಆದರೆ ಗುಪ್ತವಾಗಿ ಇದ್ದುಬಿಡುತ್ತಾರೆ. ಅವರನ್ನು ಭೇಟಿ ಮಾಡಿಸಿ ವಿಶೇಷ ಕಾರ್ಯಕ್ರಮವನ್ನು ಮಾಡಿ ಅನುಭವವನ್ನು ಹಂಚಿಸಿ, ಇದರಿಂದ ಅಂತರ ಬಂದುಬಿಡುತ್ತದೆ, ಸಮೀಪ ಬಂದುಬಿಡುತ್ತಾರೆ. ಕೆಲವು ವರ್ಗದಲ್ಲಿ ಐದು ಇರುತ್ತಾರೆ, ಕೆಲವು ವರ್ಗದಲ್ಲಿ ಎಂಟು ಇರುತ್ತಾರೆ, ಕೆಲವು ವರ್ಗದಲ್ಲಿ 25 - 30 ಸಹ ಇರುತ್ತಾರೆ. ಸಂಘಟನೆಯಲ್ಲಿ ಬರುವುದರಿಂದ ಮುಂದುವರೆದು ಬಿಡುತ್ತಾರೆ. ಉಮಂಗ - ಉಲ್ಲಾಸ ವೃದ್ಧಿಯಾಗುತ್ತದೆ. ಹಾಗಾದರೆ ಇಲ್ಲಿಯವರೆಗೂ ಏನೆಲ್ಲಾ ವರ್ಗಗಳ ಸೇವೆಯಾಗಿದೆ, ಅದರ ಫಲಿತಾಂಶವನ್ನು ತೆಗೆಯಬೇಕು. ಕೇಳಿಸಿತೇ, ಎಲ್ಲಾ ವರ್ಗದವರು ಕೇಳಿಸಿಕೊಳ್ಳುತ್ತಿದ್ದೀರಿ ಅಲ್ಲವೇ! ಎಲ್ಲಾ ವರ್ಗದವರು ಯಾರೆಲ್ಲ ಇಂದು ವಿಶೇಷವಾಗಿ ಬಂದಿದ್ದೀರಿ ಅವರು ಕೈ ಎತ್ತಿ. ಬಹಳ ಇದ್ದಾರೆ. ಹಾಗಾದರೆ ಈಗ ಫಲಿತಾಂಶವನ್ನು ಕೊಡಿ- ಎಷ್ಟು ಎಷ್ಟು, ಯಾರು ಯಾರು ಹಾಗೂ ಎಷ್ಟು ಪಸೆರ್ಂಟೇಜ್ ಸಮೀಪ ಸಹಯೋಗಿಗಳಾಗಿದ್ದಾರೆ? ನಂತರ ಅವರಿಗಾಗಿ ರಮಣೀಕ ಕಾರ್ಯಕ್ರಮವನ್ನು ತಯಾರಿಸೋಣ. ಸರಿಯೇ! |
ಮಧುಬನದವರು ಖಾಲಿಯಾಗಿ ಇರಬಾರದು. ಖಾಲಿಯಾಗಿರಲು ಬಯಸುತ್ತೀರಾ? ವ್ಯಸ್ತರಾಗಿರಲು ಬಯಸುತ್ತೀರಿ ಅಲ್ಲವೇ! ಅಥವಾ ದಣಿದು ಬಿಡುತ್ತೀರಾ? ಮಧ್ಯ ಮಧ್ಯದಲ್ಲಿ 15 ದಿನ ರಜೆಯೂ ಇರುತ್ತದೆ ಹಾಗೂ ಇರಲೇಬೇಕು. ಆದರೆ ಕಾರ್ಯಕ್ರಮದ ಹಿಂದೆ ಕಾರ್ಯಕ್ರಮ ಲಿಸ್ಟ್ನಲ್ಲಿ ಇರಬೇಕು ಆಗ ಉಮಂಗ ಉತ್ಸಾಹವಿರುತ್ತದೆ. ಇಲ್ಲವಾದರೆ ಯಾವಾಗ ಸೇವೆ ಇರುವುದಿಲ್ಲ ಎಂದರೆ ದಾದಿ ಒಂದು ದೂರನ್ನು ಕೊಡುತ್ತಾರೆ. ಯಾವ ದೂರು ಹೇಳಲೇ? ದಾದಿ ಹೇಳುತ್ತಾರೆ, ಎಲ್ಲರೂ ಹೇಳುತ್ತಾರೆ- ತಮ್ಮ ತಮ್ಮ ಊರಿಗೆ ಹೋಗುತ್ತೇವೆ, ಸುತ್ತಾಡಲು ಹೋಗುತ್ತೇವೆ, ಸೇವೆಗಾಗಿಯೂ ಸುತ್ತಾಡಲು ಹೋಗುತ್ತೇವೆ ಆದ್ದರಿಂದ ವ್ಯಸ್ತರಾಗಿರುವುದು ಒಳ್ಳೆಯದಾಗಿದೆ. ವ್ಯಸ್ತರಾಗಿದ್ದರೆ ಕಿಟ್ ಕಿಟ್ ಆಗುವುದಿಲ್ಲ. ಹಾಗೂ ನೋಡಿ ಮಧುಬನದವರ ಒಂದು ವಿಶೇಷತೆಯ ಮೇಲೆ ಬಾಪ್ದಾದಾರವರು ಪದಮದಷ್ಟು ಶುಭಾಶಯಗಳನ್ನು ಕೊಡುತ್ತಾರೆ, ನೂರರಷ್ಟು ಸಹ ಅಲ್ಲ, ಪದಮದಷ್ಟು. ಯಾವ ಮಾತಿನ ಮೇಲೆ? ಯಾವಾಗಲೂ ಯಾರೇ ಬರುತ್ತಾರೆ ಎಂದರೆ ಮಧುಬನ ನಿವಾಸಿಯರಲ್ಲಿ ಇಂತಹ ಸೇವೆಯ ಲಗನ್ ಬಂದುಬಿಡುತ್ತದೆ ಏನೇ ಒಳಗಡೆ ಇದ್ದರೂ ಅದು, ಮರೆಯಾಗಿ ಹೋಗುತ್ತದೆ. ಅವ್ಯಕ್ತ ಕಾಣಿಸುತ್ತದೆ. ಅವಿಶ್ರಾಂತರಾಗಿ ಕಾಣಿಸುತ್ತಾರೆ ಹಾಗೂ ರಿಮಾರ್ಕ್ ಬರೆದು ಹೋಗುತ್ತಾರೆ- ಇಲ್ಲಂತೂ ಪ್ರತಿಯೊಬ್ಬರೂ ಫರಿಶ್ತೆಗಳಂತೆ ಎನಿಸುತ್ತಾರೆ. ಈ ವಿಶೇಷತೆ ಬಹಳ ಒಳ್ಳೆಯದಾಗಿದೆ- ಆ ಸಮಯದಲ್ಲಿ ವಿಶೇಷವಾಗಿ ವಿಲ್ ಪವರ್ ಬಂದುಬಿಡುತ್ತದೆ. ಸೇವೆಯ ಹೊಳಪು ಬಂದುಬಿಡುತ್ತದೆ. ಎಂದ ಮೇಲೆ ಈ ಪ್ರಮಾಣ ಪತ್ರವನ್ನು ಬಾಪ್ದಾದಾರವರು ಕೊಡುತ್ತಾರೆ. ಶುಭಾಶಯಗಳು? ಚಪ್ಪಾಳೆ ಅಂತೂ ಹೊಡೆಯಿರಿ ಮಧುಬನದವರು. ಬಹಳ ಒಳ್ಳೆಯದು. ಬಾಪ್ದಾದಾರವರು ಸಹ ಆ ಸಮಯ ಸುತ್ತಾಡಲು ಬರುತ್ತಾರೆ, ನಿಮಗೆ ಗೊತ್ತಾಗುವುದಿಲ್ಲ ಆದರೆ ಬಾಪ್ದಾದಾರವರು ಸುತ್ತಾಡಲು ಬರುತ್ತಾರೆ. ಈ ಮಧುಬನದ ವಿಶೇಷತೆ ಇನ್ನಷ್ಟು ಮುಂದುವರೆಯುತ್ತಾ ಹೋಗುವುದು. ಒಳ್ಳೆಯದು. |
ಮೀಡಿಯಾ ವಿಂಗ್: ವಿದೇಶದಲ್ಲಿಯೂ ಮೀಡಿಯಾ ಶುರುವಾಗಿದೆ ಅಲ್ಲವೇ! ಬಾಪ್ದಾದಾರವರು ನೋಡಿದರೂ ಮೀಡಿಯಾದಲ್ಲಿ ಒಳ್ಳೆಯ ಪರಿಶ್ರಮ ಪಟ್ಟಿದ್ದೀರಿ. ಈಗ ನ್ಯೂಸ್ ಪೇಪರ್ನಲ್ಲಿ (ಸುದ್ದಿ ಪತ್ರಿಕೆಯಲ್ಲಿ) ಬರಲು ಶುರುವಾಗಿದೆ ಹಾಗೂ ಪ್ರೀತಿಯಿಂದ ಕೊಡುತ್ತಾರೆ. ಪರಿಶ್ರಮದ ಫಲವು ಸಿಗುತ್ತಿದೆ. ಈಗ ಇನ್ನೂ ವಿಶೇಷವಾಗಿ ಸುದ್ದಿ ಪತ್ರಿಕೆಗಳಲ್ಲಿ, ದೂರದರ್ಶನದಲ್ಲಿ ಸದಾ ಕಾಲಕ್ಕಾಗಿ ಸ್ವಲ್ಪ ಸಮಯ ಕೊಟ್ಟಿದ್ದಾರೆ! ಪ್ರತಿದಿನ ನಡೆಯುತ್ತದೆ ಅಲ್ಲವೇ. ಈ ಉನ್ನತಿ ಚೆನ್ನಾಗಿದೆ. ಎಲ್ಲರಿಗೂ ಕೇಳಿಸಿಕೊಳ್ಳುವುದರಲ್ಲಿ ಒಳ್ಳೆಯ ಅನುಭವವಾಗುತ್ತದೆ ಈ ರೀತಿ ಸುದ್ಧಿ ಪತ್ರಿಕೆಯಲ್ಲಿ ವಿಶೇಷ ಸಪ್ತಾಹಿಕವಾಗಿರಲಿ, ಅಥವಾ ಪ್ರತಿನಿತ್ಯ ವಾಗಿರಲಿ ಅಥವಾ ಎರಡು ದಿನಕ್ಕೆ ಒಮ್ಮೆ ಒಂದು ಭಾಗ ನಿಗದಿಯಾಗಲಿ- ಇದು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಅವಕಾಶವಾಗಿದೆ. ಈ ರೀತಿ ಪುರುಷಾರ್ಥ ಮಾಡಿ. ಸಫಲತೆ ಇದೆ, ಕನೆಕ್ಷನ್ ಕೂಡ ಚೆನ್ನಾಗಿ ವೃದ್ಧಿಯಾಗುತ್ತ ಹೋಗುತ್ತದೆ. ಈಗ ಸುದ್ದಿ ಪತ್ರಿಕೆಯಲ್ಲಿ ಏನಾದರೂ ಅದ್ಭುತವನ್ನು ಮಾಡಿ ತೋರಿಸಿ ಸುದ್ಧಿ ಪತ್ರಿಕೆಯಲ್ಲಿ. ಮಾಡಲು ಸಾಧ್ಯವೇ? ಗುಂಪು ಮಾಡಲು ಸಾಧ್ಯವೇ? ಕೈ ಎತ್ತಿ- ಆಯಿತು ಮಾಡುತ್ತೇವೆ. ಉಮಂಗ ಉತ್ಸಾಹ ಇದ್ದಲ್ಲಿ ಸಫಲತೆ ಇದ್ದೇ ಇದೆ. ಏಕೆ ಆಗಲು ಸಾಧ್ಯವಿಲ್ಲ! ಅಂತಿಮದಲ್ಲಿ ಸಮಯ ಬರುತ್ತದೆ ಯಾವಾಗ ಎಲ್ಲಾ ಸಾಧನೆಗಳು ನಿಮ್ಮ ಕಡೆಯಿಂದ ಬಳಸಲಾಗುತ್ತದೆ. ನಿಮಗೆ ನೀಡುತ್ತಾರೆ. ಏನಾದರೂ ಕೊಡಿ, ಏನಾದರೂ ಕೊಡಿ ಎಂದು ನೀಡುತ್ತಾರೆ. ಸಹಯೋಗವನ್ನು ತೆಗೆದುಕೊಳ್ಳಿ. ಈಗ ನೀವು ಹೇಳಬೇಕಾಗುತ್ತದೆ- ಸಹ ಯೋಗಿಗಳಾಗಿ ಎಂದು, ನಂತರ ಅವರು ಹೇಳುತ್ತಾರೆ ನಮ್ಮನ್ನು ಸಹಯೋಗಿಗಳನ್ನಾಗಿ ಮಾಡಿಕೊಳ್ಳಿ. ಕೇವಲ ಒಂದು ಮಾತನ್ನು ಪಕ್ಕಾ ಮಾಡಿಕೊಳ್ಳಿ- ಫರಿಶ್ತೆ, ಫರಿಶ್ತೆ, ಫರಿಶ್ತೆ. ನಂತರ ನೋಡಿ ನಿಮ್ಮ ಕೆಲಸ ಎಷ್ಟು ಬೇಗ ಆಗುತ್ತದೆ. ಹಿಂದೆ ಬೀಳುವ ಅವಶ್ಯಕತೆ ಇರುವುದಿಲ್ಲ ಆದರೆ ನೆರಳಿನಂತೆ ಅವರೇ ನಿಮ್ಮ ಹಿಂದೆ ಬರುತ್ತಾರೆ. ಕೇವಲ ನಿಮ್ಮ ಸ್ಥಿತಿ ನಿಂತಿರುವುದರಿಂದ ಇನ್ನು ನಿಂತುಕೊಂಡಿದೆ. ಸದಾ ಸಿದ್ದರಾಗಿ ಬಿಟ್ಟರೆ ಕೇವಲ ವಿಚ್ ಒತ್ತುವುದಷ್ಟೇ ತಡವಾಗಿರುತ್ತದೆ, ಅಷ್ಟೇ. ಚೆನ್ನಾಗಿ ಮಾಡುತ್ತಿದ್ದೀರಿ ಹಾಗೂ ಮಾಡುವಿರಿ. |
ನಾಲ್ಕಾರು ಕಡೆಯ ದೇಶ ವಿದೇಶದ ಸಹಕಾರ ಸ್ವರೂಪದಲ್ಲಿ ಅಥವಾ ಸೂಕ್ಷ್ಮ ಸ್ವರೂಪದಲ್ಲಿ ಮಿಲನ ಆಚರಿಸುವಂತಹ ಸರ್ವ ಸ್ವರಾಜ್ಯ ಅಧಿಕಾರಿ ಆತ್ಮಗಳಿಗೆ ಸದಾ ಈ ಶ್ರೇಷ್ಠ ಅಧಿಕಾರವನ್ನು ತಮ್ಮ ಚಲನೆ ಹಾಗೂ ಚಹರೆಯಿಂದ ಪ್ರತ್ಯಕ್ಷ ಮಾಡುವಂತಹ ವಿಶೇಷ ಆತ್ಮಗಳಿಗೆ, ಸದಾ ಬಾಪ್ದಾದಾರವರನ್ನು ಪ್ರತಿಯೊಂದು ಹೆಜ್ಜೆಯಲ್ಲಿ ಫಾಲೋ ಮಾಡುವಂತಹ, ಸದಾ ಮನಸ್ಸನ್ನು ಸ್ವಚ್ಛ ಹಾಗೂ ಬುದ್ಧಿಯನ್ನು ಸ್ಪಷ್ಟವಾಗಿಟ್ಟುಕೊಳ್ಳುವಂತಹ ಇಂತಹ ಸ್ವತಹ ತೀವ್ರ ಪುರುಷಾರ್ಥಿ ಆತ್ಮಗಳಿಗೆ, ಸದಾ ಜೊತೆಯಲ್ಲಿರುವಂತಹ ಹಾಗೂ ಜೊತೆಯಲ್ಲಿ ನಡೆಯುವಂತಹ ಮಕ್ಕಳಿಗೆ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ |
ಓಂ ಶಾಂತಿ. ಈ ಹಾಡನ್ನು ಯಾರು ಹಾಡುತ್ತಿರುವರು? ಯಾರು ತಂದೆಯಿಂದ ಮೂರು ಜಗತ್ತಿನ ರಾಜ್ಯಭಾಗ್ಯವನ್ನು ಪಡೆಯುತ್ತಿದ್ದಾರೆ. ತಮ್ಮಿಂದ ಏನೆಲ್ಲವೂ ಸಿಕ್ಕಿದೆಯೋ ಅದನ್ನ್ಯಾರೂ ದೂರಗೊಳಿಸಲು ಸಾಧ್ಯವಿಲ್ಲ. ನಮ್ಮನ್ನು ಯಾರೂ ದೂರಗೊಳಿಸಲು ಸಾಧ್ಯವಿಲ್ಲ ಅರ್ಥಾತ್ ಕಾಲ (ಮೃತ್ಯು) ಕಬಳಿಸಲು ಸಾಧ್ಯವಿಲ್ಲ. ಹಾಗೆಯೇ ನಮ್ಮ ರಾಜ್ಯವನ್ನೂ ಸಹ ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮಕ್ಕಳಿಗೆ ಗೊತ್ತಿದೆ - ನಾವು ಆ ಮಾಲೀಕನಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ, ತಂದೆಯನ್ನು ಮಾಲೀಕನೆಂದೂ ಸಹ ಹೇಳುತ್ತಾರೆ ಆದರೆ ಆ ಮಾಲೀಕನಿಂದ ಏನು ಸಿಗುತ್ತದೆ ಎನ್ನುವುದೇನೂ ಗೊತ್ತಿಲ್ಲ. ಮಾಲೀಕನನ್ನು ನೆನಪು ಮಾಡುವುದು ಹೇಗೆ, ಅವರ ನಾಮ-ರೂಪವೇನು? ಇದೂ ಸಹ ಗೊತ್ತಿಲ್ಲ. ಮಾಲೀಕನಂತು ಸೃಷ್ಟಿಯ ಮಾಲೀಕನಾದರಲ್ಲವೆ, ಅವರು ರಚೈತನಾದರು ಮತ್ತು ನಾವು ರಚನೆಯಾದೆವು. ಬಾಬಾರವರು ವಾರಸುಧಾರ(ಮಕ್ಕಳು)ರನ್ನು ರಚಿಸುತ್ತಾರೆ ಅಥವಾ ತನ್ನ ಮಕ್ಕಳನ್ನು ಪುನಃ ಮಾಲೀಕರನ್ನಾಗಿ ಮಾಡುತ್ತಾರೆ. ನಂತರ ಮಕ್ಕಳು ತಂದೆಯ ಮಾಲೀಕರಾಗಿ ಬಿಡುತ್ತಾರೆ. ಮಕ್ಕಳು ಹೇಳುವರು - ನನ್ನ ತಂದೆಯ ಆಸ್ತಿಯೇನಿದೆಯೋ ಅದರ ಮಾಲೀಕನು ನಾನಾಗಿರುವೆನು. ತಂದೆಯವರಂತು ಈ ರೀತಿ ಎಂದಿಗೂ ಹೇಳುವುದಿಲ್ಲ - ಮಕ್ಕಳ ಆಸ್ತಿಗೆ ನಾನು ಮಾಲೀಕನಾಗಿದ್ದೇನೆ. ಇದು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ಇದನ್ನು ಬುದ್ಧಿವಂತ ಮಕ್ಕಳೇ ತಿಳಿದುಕೊಳ್ಳಲು ಸಾಧ್ಯವಾಗುವುದು. ಬುದ್ಧಿಯು ಸ್ವಚ್ಛವಿರದಿದ್ದರೆ ಜ್ಞಾನರತ್ನಗಳು ಧಾರಣೆಯಾಗಲು ಸಾಧ್ಯವಿಲ್ಲ. ಯಾವಾಗ ದೇಹೀ-ಅಭಿಮಾನಿ ಆಗುತ್ತೀರಿ ಆಗಲೇ ಈ ರತ್ನಗಳು ನಿಲ್ಲಲು ಸಾಧ್ಯವಾಗುವುದು. ಇದಕ್ಕಾಗಿ ದೇಹಿ-ಅಭಿಮಾನಿ ಆಗಿರಬೇಕು ಹಾಗೂ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಆ ತಂದೆಯನ್ನು ನೆನಪು ಮಾಡಬೇಕಾಗಿದೆ. ಹೇಗೆ ಲೌಕಿಕ ತಂದೆಯು ಮಕ್ಕಳಿಗೆ ಜನ್ಮ ಕೊಡುತ್ತಾರೆಂದರೆ, ಮಕ್ಕಳು ಮಾಲೀಕರಾಗಿ ಬಿಡುತ್ತಾರೆ. ಮಕ್ಕಳು ನನ್ನ ತಂದೆ ಎಂದು ಹೇಳಿದರೆ, ತಂದೆಯು ಇವರು ನನ್ನ ಮಕ್ಕಳೆಂದು ಹೇಳುವರು. ಆದರೆ ಮಕ್ಕಳ ಬಳಿಯಂತು ಏನೂ ಇಲ್ಲ, ಅವರಿಗಂತು ತಂದೆಯ ಆಸ್ತಿಯು ಸಿಗುತ್ತದೆ. ಆದರೆ ತಂದೆಯೆಂದಿಗೂ ಮಕ್ಕಳ ಆಸ್ತಿಯು ನನ್ನದೆಂದು ಹೇಳುವುದಿಲ್ಲ. ತಂದೆಯು ತಿಳಿಯುತ್ತಾರೆ - ಮಕ್ಕಳು ನನ್ನ ಆಸ್ತಿಯ ಮಾಲೀಕರು. ಇದು ಬಹಳ ಧಾರಣಾಯುಕ್ತವಾದ ಮಾತುಗಳಾಗಿವೆ. ಧಾರಣೆಯಾಗುವುದಿಲ್ಲ ಏಕೆಂದರೆ ಅವಗುಣಗಳಿವೆ. ನನ್ನಲ್ಲಿ ಬಹಳ ಅವಗುಣಗಳಿವೆ ಎನ್ನುವುದನ್ನು ತಿಳಿಯಬೇಕು. ಇದರಲ್ಲಿ ಮೊಟ್ಟ ಮೊದಲ ಅವಗುಣ ಅಥವಾ ಕೊರತೆಯೆಂದರೆ - ಶ್ರೀಮತದನುಸಾರ ನಡೆಯದಿರುವುದು. ಶ್ರೀಮತದಿಂದಲೇ ಶ್ರೇಷ್ಠರಾಗಬೇಕು. ಶ್ರೀಮತವು ರಾಜಯೋಗವನ್ನು ಕಲಿಸುತ್ತದೆ. ಶ್ರೀ ಎಂದರೆ ನಿರಾಕಾರ ಭಗವಾನುವಾಚ ಆಗಿದೆ ಆದ್ದರಿಂದ ನಾವು ಪ್ರಶ್ನೆ ಕೇಳುತ್ತೇವೆ – ಜ್ಞಾನ ಸಾಗರ ಪತಿತ-ಪಾವನ ಪರಮಪಿತ ಪರಮಾತ್ಮನೊಂದಿಗೆ ನಿಮ್ಮ ಸಂಬಂಧವೇನಿದೆ? ಇದನ್ನು ಬಹಳ ದೊಡ್ಡ ಬೋರ್ಡ್ ಮೇಲೆ ಬರೆಯಬೇಕು. ಪರಮಾತ್ಮನು ಸ್ವರ್ಗದ ರಚೈತನಾಗಿದ್ದಾರೆ ಅಂದಮೇಲೆ ಯಾರ ಸಂಬಂಧವು ಪರಮಾತ್ಮನೊಂದಿಗೆ ಇದೆಯೋ ಅವರೂ ಸಹ ಅವಶ್ಯವಾಗಿ ಸ್ವರ್ಗದ ಮಾಲೀಕರಾಗಿ ಬಿಡುವರು. |
ತಂದೆಯು ಬಂದು ಮಕ್ಕಳಿಗೆ ಸಲಾಂ (ಗೌರವ) ಮಾಡುತ್ತಾರೆ. ಸಲಾಂ ಮಾಲೇಕಂ ಮಕ್ಕಳೆ. ಅದಕ್ಕೆ ಮಕ್ಕಳು ಹೇಳುತ್ತಾರೆ - ಮಾಲೇಕಂ ಸಲಾಂ. ನಾವಂತು ಕೇವಲ ಬ್ರಹ್ಮಾಂಡದ ಮಾಲೀಕರಾಗಿದ್ದೇವೆ, ನೀವು ಬ್ರಹ್ಮಾಂಡ ಹಾಗೂ ವಿಶ್ವ - ಇವೆರಡಕ್ಕೂ ಮಾಲೀಕರಾಗುತ್ತೀರಿ ಆದ್ದರಿಂದ ತಂದೆಯು ಮಕ್ಕಳಿಗೆ ಡಬಲ್ ಸಲಾಂ ಮಾಡುತ್ತಾರೆ. ಬೇಹದ್ದಿನ ತಂದೆಯೊಬ್ಬರೇ ನಿಮಗಾಗಿ ಎಷ್ಟೊಂದು ನಿಷ್ಕಾಮ ಸೇವೆ ಮಾಡುವರು. ಲೌಕಿಕ ತಂದೆಯು ನಿಷ್ಕಾಮರಾಗಿ ಇರುವುದಿಲ್ಲ. ಅವರಿಗೆ ಆಸೆಯಿರುತ್ತದೆ - ನಾವು ವಾನಪ್ರಸ್ಥ ಸ್ಥಿತಿಯಲ್ಲಿದ್ದಾಗ, ನಮ್ಮ ಸೇವೆಯನ್ನು ಮಕ್ಕಳು ಮಾಡುವರು. ಸತ್ಯವಾಗಿಯೂ ಮಕ್ಕಳು ತಂದೆಯ ಸೇವೆ ಮಾಡುತ್ತಿದ್ದರು, ಈ ನಿಯಮವೂ ಇತ್ತು. ಇತ್ತೀಚೆಗೆ ಹಣವನ್ನು ವ್ಯರ್ಥವಾಗಿ ಕಳೆಯುತ್ತಾರೆ. ನೀವು ಮಕ್ಕಳಿಗೆ ಗೊತ್ತಿದೆ - ನಮಗೆ ತಂದೆಯಿಂದ ಅಂತಹ ರಾಜ್ಯಭಾಗ್ಯವು ಸಿಗುತ್ತದೆ. ಲಕ್ಷ್ಮೀ-ನಾರಾಯಣನ ಬಗ್ಗೆಯೂ ಬರೆಯಿರಿ - ಇವರನ್ನು ತಿಳಿದಿದ್ದೀರಾ? ಇವರಿಗೆ ಈ ಸ್ವರ್ಗದ ರಾಜ್ಯಭಾಗ್ಯವನ್ನು ಯಾರು ಕೊಟ್ಟರು? ಅವಶ್ಯವಾಗಿ ಸ್ವರ್ಗ ಸ್ಥಾಪನೆ ಮಾಡುವವರೇ ಕೊಡುವರು. ಹಳೆಯ ಪ್ರಪಂಚವಾದಾಗ ಹೊಸ ಪ್ರಪಂಚದ ಸ್ಥಾಪನೆಯನ್ನು ಮಾಡುವರು ಅಂದಮೇಲೆ ಲಕ್ಷ್ಮೀ-ನಾರಾಯಣರು ಈ ಆಸ್ತಿಯನ್ನು ಶ್ರೀಮತದನುಸಾರ ನಡೆಯುವುದರಿಂದ ಪಡೆದರು. ಶ್ರೀಮತವು ರಾಜಯೋಗ ಹಾಗೂ ಸಹಜ ಜ್ಞಾನವನ್ನು ಕಲಿಸಿಕೊಡುತ್ತದೆ. ಯಾರಿಗೆ ತಿಳಿಸುತ್ತಾರೆಯೋ ಅವರು ರಾಜರಾಗಿ ಬಿಡುತ್ತಾರೆ. ಮೊದಲ ನಂಬರಿನಲ್ಲಿ ಶ್ರೀಕೃಷ್ಣನಿದ್ದಾನೆ, ಅವನು ಅಂತಹ ಯಾವ ಕರ್ಮವನ್ನು ಮಾಡಿದನು? ಅದರಿಂದ ತನ್ನ ತಾಯಿ-ತಂದೆಗಿಂತಲೂ ಶ್ರೇಷ್ಠ ಪದವಿಯನ್ನು ಪಡೆದರು! ಆ ಮಹಾರಾಜ-ಮಹಾರಣಿ ಎಲ್ಲಿದ್ದರು, ಅವರ ಬಳಿ ಕೃಷ್ಣನ ಜನ್ಮವಾಯಿತು! ಎಲ್ಲಿಯವರೆಗೆ ನಿರ್ವಿಕಾರಿಯಾಗಿ ಇರುವುದಿಲ್ಲವೋ ಅಲ್ಲಿಯವರೆಗೆ ಬುದ್ಧಿಯಲ್ಲಿ ಅವಿನಾಶಿ ಜ್ಞಾನವು ಧಾರಣೆಯಾಗಲು ಸಾಧ್ಯವಿಲ್ಲ. ಯಾವಾಗ ಪವಿತ್ರವಾಗಿರುತ್ತೀರಿ ಆಗಲೇ ಬುದ್ಧಿಯ ಬೀಗವು ತೆರೆಯಲ್ಪಡುತ್ತದೆ. ಅಪವಿತ್ರರಾಗುವುದರಿಂದ ಬುದ್ಧಿಯಿಂದ ಎಲ್ಲವೂ ಹೊರಟು ಹೋಗುತ್ತದೆ. ಬಹಳ ಮಕ್ಕಳು ವಿಚ್ಛೇದನವನ್ನೂ ಕೊಟ್ಟು ಬಿಡುತ್ತಾರೆ, ವಿದ್ಯಾಭ್ಯಾಸ ಮಾಡುವುದನ್ನೇ ಬಿಟ್ಟು ಬಿಡುತ್ತಾರೆ. ಅವರೆಂದಿಗೂ ಯಾರಿಗೂ ಜ್ಞಾನವನ್ನು ತಿಳಿಸಲು ಸಾಧ್ಯವಿಲ್ಲ. ಪತಿತರಾಗುತ್ತಾರೆ, ಆಹಾರ-ಪಾನೀಯಗಳನ್ನೂ ಅಶುದ್ಧವಾಗಿರುವುದನ್ನೇ ಸ್ವೀಕರಿಸುತ್ತಾರೆ, ಹೋಗಿ ಮಾಯಾವಿ ಮನುಷ್ಯರೊಂದಿಗೆ ಭೇಟಿಯಾಗುತ್ತಾರೆ, ಅಂತಹವರ ಗಂಟಲು ಒಣಗಿ ಬಿಡುತ್ತದೆ (ಜ್ಞಾನವನ್ನು ತಿಳಿಸಲು ಸಾಧ್ಯವಾಗುವುದಿಲ್ಲ). ಈ ಮಾತುಗಳೂ ಸಹ ಶಾಸ್ತ್ರಗಳಲ್ಲಿದೆ - ಬೃಂದಾವನದಲ್ಲಿ ರಾಸ್ ಮುಂತಾದವು ಆಗುತ್ತಿದ್ದವು, ಮಾಡುವುದಕ್ಕೆ ಅಡ್ಡಿ ಮಾಡುತ್ತಿದ್ದರು - ಯಾರಿಗೇ ತಿಳಿಸುತ್ತೀರೆಂದರೆ ಗಂಟಲು ಒಣಗಿ ಬಿಡುತ್ತದೆ - ಇದು ಜ್ಞಾನದ (ತಿಳಿದುಕೊಳ್ಳುವ) ಮಾತುಗಳಾಗಿವೆ. ಒಂದುವೇಳೆ ತಂದೆಯವರಿಗೆ ವಿಚ್ಛೇದನ ಕೊಟ್ಟು, ಅಲ್ಲಿಂದ ಹೊರಟು ನಿಂದನೆ ಮಾಡಿದರೆ ಗಂಟಲು ಒಣಗಿ ಬಿಡುತ್ತದೆ. ಹೇಳುತ್ತಾರಲ್ಲವೆ - ಸದ್ಗುರುವಿನ ನಿಂದಕರು ನೆಲೆಯನ್ನು ಪಡೆಯುವುದಿಲ್ಲ. ತಂದೆಯು ಹೇಳುವರು - ಯಾವಾಗ ಸೃಷ್ಟಿಯು ಪತಿತ, ಹಳೆಯದಾಗುತ್ತದೆಯೋ ಆಗ ನಾನು ಬರುವೆನು. ಮನುಷ್ಯರು ತಮೋಪ್ರಧಾನರು ಆಗಲೇಬೇಕು. ಯಾವ ಕರ್ತವ್ಯವನ್ನು ಮಾಡುವರೋ ಅದನ್ನು ಅವರು ಉಲ್ಟಾ ಆಗಿಯೇ ಮಾಡುವರು ಏಕೆಂದರೆ ಉಲ್ಟಾ ಮತವು ಸಿಗುತ್ತಿದೆ, ಶ್ರೀಮತವಿಲ್ಲ. ಉಲ್ಟಾ ಮತವು ಪತಿತ ಭ್ರಷ್ಟಾಚಾರಿಯನ್ನಾಗಿ ಮಾಡುತ್ತದೆ. ಇದಕ್ಕೆ ಮುಂಚೆ ಭ್ರಷ್ಟಾಚಾರಿ ಎಂಬ ಶಬ್ಧವೇ ಇರಲಿಲ್ಲ. ಸನ್ಯಾಸಿಗಳು ಪಾವನರಾಗುವುದಕ್ಕಾಗಿ ವಿಕಾರಗಳ ಸನ್ಯಾಸ ಮಾಡುತ್ತಾರೆ. |
ಆದ್ದರಿಂದ ಮೊಟ್ಟ ಮೊದಲು ಈ ಮಾತಿನ ತಿಳುವಳಿಕೆ ಕೊಡಬೇಕು - ಪರಮಪಿತ ಪರಮಾತ್ಮನೊಂದಿಗೆ ನಿಮ್ಮ ಸಂಬಂಧವೇನು? ಎಲ್ಲರೂ ಭಗವಂತನನ್ನು ನೆನಪು ಮಾಡುತ್ತಾರೆ. ಭಗವಂತನು ಹೇಳುತ್ತಾರೆ - ನನಗೆ ಎಲ್ಲಾ ಭಕ್ತರೂ ಪ್ರಿಯರಾಗಿದ್ದಾರೆ ಏಕೆಂದರೆ ಅವರೆಲ್ಲರಿಗೂ ನಾನೇ ಗತಿ-ಸದ್ಗತಿ ಕೊಡಬೇಕು. ಭಗವಂತನು ಬಂದು ಭಕ್ತರಿಗೆ ಭಕ್ತಿಯ ಫಲವನ್ನು ಕೊಡುತ್ತಾರೆ ಆದ್ದರಿಂದ ಭಕ್ತರು ಭಗವಂತನಿಗೆ ಪ್ರಿಯವರೆಂದು ಅವರು ತಿಳಿಯುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ದುರ್ಗತಿಯನ್ನು ಪಡೆದಿದ್ದೀರಿ, ನಾನೀಗ ಸದ್ಗತಿ ಕೊಡುವುದಕ್ಕಾಗಿ ಬಂದಿರುವೆನು. ಭಕ್ತಿಯ ನಂತರ ಅವಶ್ಯವಾಗಿ ಭಗವಂತನು ಬರಬೇಕಾಗಿದೆ. ನಾನು ಮೊದಲು ನಿಮಗೇ ಭಕ್ತಿಯ ಫಲವನ್ನು ಕೊಡಬೇಕಾಗುತ್ತದೆ. ಅನ್ಯರಂತು ಪ್ರಾರಂಭದಿಂದ ನನ್ನ ಭಕ್ತರಾಗುವುದಿಲ್ಲ, ಅವರಂತು ಅನೇಕರ ಭಕ್ತಿ ಮಾಡುತ್ತಾರೆ. ನಿನ್ನ ನನ್ನ ಪ್ರಿಯವಾದ ಮಕ್ಕಳಾಗಿದ್ದೀರಿ, ನೀವು ಮಾಲೀಕರಿದ್ದಿರಿ ನಂತರ ಮಾಯಾ ರಾವಣನು ನಿಮ್ಮ ಮೇಲೆ ವಿಜಯ ಪಡೆದನು, ತದನಂತರ ಭಕ್ತಿಯ ಆರಂಭವಾಗಿ ಬಿಟ್ಟಿತು. ಇದೂ ಸಹ ಡ್ರಾಮಾ ಆಗಿದೆ. ನಾನಂತು ಎಲ್ಲರ ಸದ್ಗತಿ ಮಾಡುತ್ತೇನೆ, ನೀವೀಗ ನನ್ನ ಮತದಂತೆ ನಡೆಯುವಿರಲ್ಲವೆ! ಮತ ಕೊಡುವುದಕ್ಕಾಗಿ ನಾನು ಬರಬೇಕಾಗುತ್ತದೆ. ಇಲ್ಲದಿದ್ದರೆ ಸದ್ಗತಿಯ ಮಾರ್ಗವನ್ನು ಹೇಗೆ ತಿಳಿಸುವುದು! ನಾನು ಮೊದಲ ನಂಬರಿನ ಈ ಭಕ್ತನ ತನುವಿನಲ್ಲಿ ಬರುತ್ತೇನೆ, ಇದು ನಂದಿಯಾಗಿದೆ. ಶಿವನ ಮಂದಿರದಲ್ಲಿ ಶಿವನ ಮುಂದೆ ನಂದಿಯನ್ನಿಡುತ್ತಾರೆ. ಈಗ ವಿಚಾರ ಮಾಡಿ - ಪರಮಪಿತ ಪರಮಾತ್ಮನು ಎತ್ತಿನ ತನುವಿನಲ್ಲಂತು ಬರುವುದಿಲ್ಲ. ಎತ್ತಿನ ಮೂಲಕ ರಾಜಯೋಗವನ್ನು ಕಲಿಸಿ ಕೊಡುವುದು ಹೇಗೆ? ಜ್ಞಾನ ಸಾಗರನು ಎತ್ತಿನಲ್ಲಿ ಪ್ರವೇಶ ಮಾಡುವರೇನು! ನೀವೀಗ ಬುದ್ಧಿವಂತರಾಗಿದ್ದೀರಿ, ಶ್ರೀಮತದಂತೆ ನಡೆದು ಲಕ್ಷ್ಮೀ-ನಾರಾಯಣ, ಸೂರ್ಯವಂಶಿ ರಾಜ-ರಾಣಿಯರಾಗುತ್ತಿದ್ದೀರಿ. ಆ ರಾಜಧಾನಿಯನ್ನೆಂದಿಗೂ ಯಾರೂ ಸಹ ನಮ್ಮಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ, ಯಾವುದೇ ಬಿರುಗಾಳಿಗಳು ಬರಲು ಸಾಧ್ಯವಿಲ್ಲ. ನಾವು ಅಮರ ಪುರಿಯ ಮಾಲೀಕರಾಗುತ್ತೇವೆ, ಇದು ಮೃತ್ಯುಲೋಕವಾಗಿದೆ. ಅಮರನಾಥ ತಂದೆಯೇ ಕಾಲನ ಮೇಲೆ ವಿಜಯಿಗಳನ್ನಾಗಿ ಮಾಡುವವರಾಗಿದ್ದಾರೆ, ಅವರ ಪಾತ್ರವೇ ಭಿನ್ನವಾಗಿದೆ. ನೀವೆಲ್ಲರೂ ಪಾರ್ವತಿಯರು ಆಗಿದ್ದೀರಿ, ನಾನು ಅಮರನಾಥನಾಗಿದ್ದೇನೆ. ನಾನೆಂದಿಗೂ ಜನನ-ಮರಣದಲ್ಲಿ ಬರುವುದಿಲ್ಲ. ಅಮರಪುರಿ ಸ್ವರ್ಗದ ಮಾಲೀಕರನ್ನಾಗಿ ನಿಮ್ಮನ್ನು ಮಾಡುತ್ತೇನೆ. ಭಾರತವಾಸಿಗಳಿಗೆ ವೈಕುಂಠವೆಂದರೆ ಬಹಳ ಪ್ರಿಯ, ಹೇಳುತ್ತಾರೆ - ಇಂತಹವರು ವೈಕುಂಠವಾಸಿ ಆದರು. ಬಾಯನ್ನು ಬಹಳ ಸಿಹಿ ಮಾಡಿ ಬಿಟ್ಟರು. ಆ ವೈಕುಂಠವಂತು ಈಗ ಸತ್ಯಯುಗದಲ್ಲಾಗುವುದು. ಯಾವಾಗ ಸತ್ಯಯುಗವಿರುತ್ತದೆಯೋ ಆಗ ಪುನರ್ಜನ್ಮವೂ ಸತ್ಯಯುಗದಲ್ಲಿಯೇ ಪಡೆಯುತ್ತಾರೆ. ನಂತರ ತ್ರೇತಾದಲ್ಲಿ ಬರುತ್ತಾರೆಂದರೆ ಪುನರ್ಜನ್ಮವನ್ನೂ ತ್ರೇತಾದಲ್ಲಿಯೇ ಪಡೆಯುತ್ತಾರೆ. ನಂತರ ದ್ವಾಪರದಲ್ಲಿ ಬರುತ್ತಾರೆಂದರೆ ಪುನರ್ಜನ್ಮವೂ ದ್ವಾಪರದಲ್ಲಿಯೇ ಪಡೆಯುತ್ತಾರೆ. ಆದರೆ ಈ ರೀತಿಯೆಂದಾದರೂ ಆಗಲು ಸಾಧ್ಯವೇ - ಯಾರು ಕಲಿಯುಗದಲ್ಲಿ ಶರೀರ ಬಿಡುವರೋ ಅವರ ಪುನರ್ಜನ್ಮವು ಸತ್ಯಯುಗದಲ್ಲಾಗುತ್ತದೆ. ಸ್ವರ್ಗದಲ್ಲಿ ಜನ್ಮವನ್ನು ತೆಗೆದುಕೊಳ್ಳುವುದಕ್ಕೆ ಆಧಾರವಾಗಿದೆ - ವಿದ್ಯಾಭ್ಯಾಸದ ಆಧಾರದ ಮೇಲೆ. ತಂದೆಯು ಹೇಳುತ್ತಾರೆ - ನಾನು ನಿಮ್ಮನ್ನು ಸೃಷ್ಟಿಯ ಮಾಲೀಕರನ್ನಾಗಿ ಮಾಡುತ್ತೇನೆ, ನಾನು ನಿಷ್ಕಾಮಿ ಆಗಿದ್ದೇನೆ. ನಾನು ವಿಶ್ವದ ಮಾಲೀಕನಾಗುವುದಿಲ್ಲ. ನೀವು ಸ್ವರ್ಗದಲ್ಲಿ ಹೋಗುತ್ತೀರೆಂದರೆ, ನಾನು ವಿಶ್ರಾಂತಿಯಲ್ಲಿ ಹೋಗುತ್ತೇನೆ. ನಾನು ಈ ಚಕ್ರದಲ್ಲಿ ಬರುವುದಿಲ್ಲ. ಈ ಈಶ್ವರೀಯ ಜನ್ಮದ ನಂತರ ನೀವು ದೇವತೆಗಳ ಮಡಿಲಿನಲ್ಲಿ ಜನ್ಮ ಪಡೆಯುವಿರಿ. ಈಗ ನೀವು ಜನ್ಮ-ಜನ್ಮಾಂತರವು ಆಸುರಿ ಮಡಿಲಿನಲ್ಲಿ ಜನ್ಮವನ್ನು ತೆಗೆದುಕೊಳ್ಳುತ್ತೀರಿ, ಭ್ರಷ್ಟಾಚಾರಿಗಳು ಆಗಿ ಬಿಟ್ಟಿದ್ದೀರಿ. ಸತ್ಯಯುಗದಲ್ಲಿ ಎಲ್ಲರೂ ಶ್ರೇಷ್ಠಾಚಾರಿ ಆಗಿರುತ್ತಾರೆ. ನೀವೀಗ ಶ್ರೀಮತದಿಂದ ಶ್ರೇಷ್ಠಾಚಾರಿ ಆಗುತ್ತಿದ್ದೀರಿ. ಅಲ್ಲಿ ವಿಕಾರಗಳಿರುವುದಿಲ್ಲ. ಇಲಿ ಭಲೆ ಸನ್ಯಾಸಿಗಳಿದ್ದಾರೆ ಆದರೆ ಜನ್ಮವಂತು ವಿಕಾರಗಳಿಂದ ತೆಗೆದುಕೊಳ್ಳುವರಲ್ಲವೆ. ಸತ್ಯಯುಗದಲ್ಲಿ ವಿಕಾರಗಳಿಂದ ಜನ್ಮವಾಗುವುದಿಲ್ಲ, ಇಲ್ಲದಿದ್ದರೆ ಅವರನ್ನು ಸಂಪೂರ್ಣ ನಿರ್ವಿಕಾರಿ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲಿ ಮಾಯೆಯಿರುವುದಿಲ್ಲ ಆದರೆ ಈ ಮಾತುಗಳೂ ಸಹ ಯಾರ ಬುದ್ಧಿಯಲ್ಲಿಯಾದರೂ ಕುಳಿತುಕೊಳ್ಳಬೇಕು ಅಷ್ಟೇ (ಧಾರಣೆ). |
ಈಗ ಬಾಬಾರವರು ಹೇಳುತ್ತಾರೆ - ಮಕ್ಕಳೇ, ನೀವು ಮನೆಗೆ ನಡೆಯಬೇಕಾಗಿದೆ ನಂತರ ಸ್ವರ್ಗದಲ್ಲಿ ಬಂದು ರಾಜ್ಯಾಡಳಿತ ಮಾಡಬೇಕಾಗಿದೆ. ಆತ್ಮರು ಪರಮಧಾಮದಿಂದ ಪಾತ್ರವನ್ನು ಅಭಿನಯಿಸುವುದಕ್ಕಾಗಿ ಬರುತ್ತಾರೆ, ನಂತರ ಎಲ್ಲಿಯವರೆಗೆ ಪತಿತ ಪಾವನನು ಬಂದು ಮುಕ್ತಗೊಳಿಸುವುದಿಲ್ಲವೋ ಅಲ್ಲಿಯವರೆಗೆ ಒಬ್ಬರೂ ಸಹ ಹೋಗಲು ಸಾಧ್ಯವಿಲ್ಲ. ಆದರೆ ಇಂತಹವರು ನಿರ್ವಾಣ ಗೈದರು ಎಂದು ಸುಳ್ಳು ಹೇಳುತ್ತಿರುತ್ತಾರೆ. ತಂದೆಯು ಇವೆಲ್ಲಾ ಮಾತುಗಳನ್ನು ಬಹಳ ಸ್ಪಷ್ಟವಾಗಿ ತಿಳಿಸುತ್ತಾರೆ. ಯಾರಿಗೇ ಆಗಲಿ ಮೊಟ್ಟ ಮೊದಲು ಇದನ್ನು ತಿಳಿಸಿರಿ - ಪರಮಪಿತ ಪರಮಾತ್ಮನೊಂದಿಗೆ ನಿಮ್ಮ ಸಂಬಂಧವೇನಿದೆ! ಈ ಪ್ರಶ್ನೆಯನ್ನು ಕೇಳುವುದಕ್ಕೂ ಸಹ ಮತ್ತ್ಯಾರಿಗೂ ಬರುವುದಿಲ್ಲ. ನೀವು ಕಲ್ಪ-ಕಲ್ಪವೂ ಕಲ್ಲು ಬುದ್ಧಿಯವರಿಗೆ ಪಾರಸ ಬುದ್ಧಿ ಹಾಗೂ ಪಾರಸ ಬುದ್ಧಿಯಿಂದ ಕಲ್ಲು ಬುದ್ಧಿಯವರು ಆಗುತ್ತಾ ಬಂದಿದ್ದೀರಿ. ಇದನ್ನಂತು ಬಹಳಚೆನ್ನಾಗಿ ತಿಳಿಸಲಾಗುತ್ತದೆ ಆದರೆ ಯಾವಾಗ ನಾವು ಅವಶ್ಯವಾಗಿ ಶಿವ ತಂದೆಯ ಮಕ್ಕಳು ಎಂಬುದು ನಿಶ್ಚಯ ಕುಳಿತುಕೊಳ್ಳುತ್ತದೆಯೋ ಆಗಲೇ ತಿಳಿದುಕೊಳ್ಳುವರು. ಬಾಬಾರವರು ಹೇಳುತ್ತಾರೆ - ನಾನೀಗ ನಿಮ್ಮನ್ನು ಸುಖಧಾಮದಲ್ಲಿ ಕರೆದೊಯ್ಯಲು ಬಂದಿದ್ದೇನೆ, ಹೊರಡುವಿರಾ? ಅಲ್ಲಿ ಈ ವಿಕಾರವು ಸಿಗುವುದಿಲ್ಲ. ಇದರ ಮುಖ್ಯ ಮಾತೇ ಪವಿತ್ರತೆಯದಾಗಿದೆ. ಯಾರು ಕಲ್ಪದ ಮೊದಲು ಇದ್ದರೋ ಅವರೇ ಈಗಲೂ ಪವಿತ್ರವಾಗಿರಲು ಸಾಧ್ಯ. ಬಹಳ ಮಕ್ಕಳು ಬರೆಯುತ್ತಾರೆ - ಬಾಬಾ, ಈ ಬಂಧನವು ಯಾವಾಗ ತುಂಡಾಗುತ್ತದೆಯೋ ಗೊತ್ತಿಲ್ಲ, ಅದಕ್ಕೆ ಯುಕ್ತಿ ತಿಳಿಸಿರಿ. ತಂದೆಯು ಹೇಳುತ್ತಾರೆ - ಮಕ್ಕಳೇ, ತನ್ನ ಸಮಯದಲ್ಲಿ ಬಂಧನಗಳು ಕಳೆಯುತ್ತವೆ. ಇದರಲ್ಲಿ ಬಾಬಾರವರೇನು ಮಾಡುವರು? ಒಂದು ಬಂಧನದಿಂದ ಭಲೆ ಮುಕ್ತರಾಗುತ್ತೀರಿ, ನಂತರ ಮಕ್ಕಳು ಇತ್ಯಾದಿಗಳ ಕಡೆ ಮೋಹವುಂಟಾಗುತ್ತದೆ. ಇವೆಲ್ಲದರಿಂದ ಬುದ್ಧಿಯನ್ನು ತೆಗೆಯುವುದರಲ್ಲಿ ಬಹಳ ಕಷ್ಟ ಪಡಬೇಕಾಗುತ್ತದೆ. ಕೆಲವರಂತು ಇನ್ನಷ್ಟು ಹೆಚ್ಚಾಗಿಯೇ ಮೋಹದಲ್ಲಿ ಬಂದು ಬಿಡುತ್ತಾರೆ. ಅನೇಕರಿದ್ದಾರೆ ಅವರು ಮೋಹದಲ್ಲಿ ಸಿಲುಕಿ ಬಿಡುತ್ತಾರೆ. ತಂದೆಯು ಹೇಳುವರು - ನೀವು ಒಬ್ಬ ತಂದೆಯಲ್ಲಿ ಮೋಹವಿಟ್ಟಾಗ ಧಾರಣೆಯಾಗುವುದು. ಯಾರೇ ಆಗಲಿ ಜ್ಞಾನವನ್ನು ಪಾಲನೆ ಮಾಡಲು ಆಗದಿದ್ದರೆ ಓಡಿ ಹೋಗುತ್ತಾರೆ. ನಂತರ ಹೆಸರಿಗೆ ಕಳಂಕವಾಗುವುದು. ಇದು ಡ್ರಾಮಾದಲ್ಲಿ ಕಲ್ಪದ ಮೊದಲೂ ಆಗಿತ್ತು, ಒಂದು ಸೆಕೆಂಡ್ ಕಳೆಯಿತೆಂದರೂ ಡ್ರಾಮಾ ಅಷ್ಟೇ. ಅಮ್ಮ ಸತ್ತರೂ ಹಲ್ವಾ ಸ್ವೀಕರಿಸಿರಿ (ಜ್ಞಾನದ ಚಿಂತನೆ), ಸ್ತ್ರೀಯ ಮರಣವಾದರೂ ಹಲ್ವಾ ತಿನ್ನಿರಿ..... ಅರ್ಧಂಬರ್ಧ ಜ್ಞಾನಿಗಳಿಗೆ ತೂಕಡಿಕೆ ಬರುತ್ತದೆ. ಅನೇಕ ಸನ್ಯಾಸಿಗಳೂ ಸಹ ಹೀಗೆಯೇ ಇರುತ್ತಾರೆ, ಅಂತಹವರು ಅಲ್ಲಿರಲು ಸಾಧ್ಯವಿಲ್ಲ. ಮತ್ತೆ ಗೃಹಸ್ಥದಲ್ಲಿಯೇ ಹೊರಟು ಹೋಗುತ್ತಾರೆ. ಚಲನೆಯೇ ಹಾಗಿರುತ್ತದೆ. ಇಲ್ಲಂತು ಮುಖ್ಯವಾದ ಮಾತು ಒಂದೇ ಆಗಿದೆ. ನಾವೂ ಸಹ ಆ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ, ನೀವೂ ಸಹ ಅವರನ್ನು ತಂದೆಯೆಂದು ತಿಳಿಯುತ್ತೀರಿ, ಅಂದಮೇಲೆ ಬಂದು ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳಿರಿ. ಇದೊಂದೇ ಮಾತಿದೆ - ಸೆಕೆಂಡಿನಲ್ಲಿ ಜೀವನ್ಮುಕ್ತಿ, ಅಂತ್ಯದಲ್ಲಿ ಸ್ವಲ್ಪ ತಿಳಿಸಿದರೂ ತಕ್ಷಣದಲ್ಲಿಯೇ ತಿಳಿದು ಬಿಡುತ್ತಾರೆ. ಅನೇಕ ಮತಗಳಿರುವುದರಿಂದ ಭಾರತವು ಭ್ರಷ್ಟವಾಗಿ ಬಿಟ್ಟಿದೆ. ಮತ್ತೆ ಒಂದು ಮತದಿಂದ ಭಾರತವು ಅರ್ಧಕಲ್ಪಕ್ಕಾಗಿ ಶ್ರೇಷ್ಠಾಚಾರಿ ಆಗುತ್ತದೆ. ಅವಶ್ಯವಾಗಿ ತಂದೆಯವರೇ ಶ್ರೇಷ್ಠರನ್ನಾಗಿ ಮಾಡುವರು. ಸರ್ವರನ್ನೂ ಕರೆದುಕೊಂಡು ಹೋಗುವವರು ಒಬ್ಬ ತಂದೆಯೇ ಆಗಿದ್ದಾರೆ ಅಂದಮೇಲೆ ಅವಶ್ಯವಾಗಿ ಮುಳುಗಿಸುವವರೂ ಸಹ ಯಾರಾದರೂ ಇರಬೇಕು. ತಂದೆಯು ಸರ್ವರಿಗೂ ಹೇಳುತ್ತಾರೆ - ವಿಕಾರಗಳ ಸನ್ಯಾಸ ಮಾಡಬೇಕಾಗುತ್ತದೆ, ಇದರಿಂದಲೇ ನೀವು ಪವಿತ್ರ ಪ್ರಪಂಚದ ಮಾಲೀಕರಾಗಬಹುದು. ತಂದೆಯು ಆಸ್ತಿಯನ್ನು ಕೊಡುತ್ತಿದ್ದಾರೆ, ಬಹಳ ಬ್ರಹ್ಮಾಕುಮಾರಿಯರು ಇದ್ದಾರೆ. ನೀವೂ ಬಿ.ಕೆ., ಆಗಿದ್ದೀರಿ, ಆಸ್ತಿಯು ಆತ್ಮದ ತಂದೆಯಿಂದ ಸಿಗುತ್ತದೆ, ಇದೆಷ್ಟು ಸಹಜವಿದೆ ಆದರೆ ಕೆಲವರು ಕೇವಲ ಕೇಳುತ್ತಾರೆ, ಮಾಡುವುದಿಲ್ಲ ಆದ್ದರಿಂದ ಯಾರಿಗೂ ಬಾಣ ನಾಟುವುದಿಲ್ಲ. ಹೇಳುವುದರಿಂದ ಭಲೆ ಯಾರದಾದರೂ ಕಲ್ಯಾಣವಾಗುತ್ತದೆ ಆದರೆ ಸ್ವಯಂ ಮಾಡದಿದ್ದರೆ ಬೀಳುತ್ತಾರೆ. ಯಾರಿಗೆ ಜ್ಞಾನ ಕೊಡುತ್ತಾರೆ ಅವರು ಶ್ರೇಷ್ಠ ಮಟ್ಟಕ್ಕೆ ಹೋಗುತ್ತಾರೆ, ಸ್ವಯಂ ಮಾತ್ರ ಬೀಳುತ್ತಾರೆ. ಇಂತಹವರು ಅನೇಕರಿದ್ದಾರೆ, ಬಾಬಾರವರು ಮಕ್ಕಳಿಗೆ ಸಂಪೂರ್ಣ ಆಸ್ತಿಯನ್ನು ವ್ಹಿಲ್ ಮಾಡಿ ಬಿಡುತ್ತಾರೆ. ನೀವೀಗ ಯೋಗ್ಯರಾಗಿ ಸ್ವರ್ಗದ ಮಾಲೀಕರಾಗಿರಿ. ಒಳ್ಳೆಯದು! |
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಶ್ರೇಷ್ಠಾಚಾರಿ ಆಗುವುದಕ್ಕಾಗಿ ತಮ್ಮಲ್ಲಿರುವ ಸರ್ವ ಅವಗುಣಗಳನ್ನು ತೆಗೆದು, ಸದಾ ಶ್ರೀಮತದಂತೆ ನಡೆಯಬೇಕಾಗಿದೆ. ದೇಹಿ-ಅಭಿಮಾನಿಯಾಗಿದ್ದು ಬುದ್ಧಿಯಲ್ಲಿ ಜ್ಞಾನ ರತ್ನಗಳ ಧಾರಣೆ ಮಾಡಿಕೊಳ್ಳಬೇಕಾಗಿದೆ. |
2. ತಾವು ಹೇಳುವುದು ಮತ್ತು ಮಾಡುವುದನ್ನು ಒಂದೇ ಸಮಾನ ಮಾಡಬೇಕಾಗಿದೆ. ಜ್ಞಾನದ ಧಾರಣೆಗಾಗಿ ಎಲ್ಲದರಿಂದ ಮೋಹ ತೆಗೆದು, ಒಬ್ಬ ತಂದೆಯಲ್ಲಿಯೇ ಮೋಹವನ್ನಿಡಬೇಕಾಗಿದೆ. |
ಯೋಗಯುಕ್ತ-ಯುಕ್ತಿಯುಕ್ತರಾಗುವ ಯುಕ್ತಿ |
ಇಂದು ಬಾಪ್ದಾದಾ ತನ್ನ ಸರ್ವ ಮಕ್ಕಳಲ್ಲಿ ವಿಶೇಷ ಎರಡು ಪ್ರಕಾರದ ಮಕ್ಕಳನ್ನು ನೋಡುತ್ತಿದ್ದಾರೆ. ಒಂದನೆಯ ಪ್ರಕಾರದವರು ಸದಾ ಯೋಗಯುಕ್ತರು ಮತ್ತು ಪ್ರತೀ ಮಾತಿನಲ್ಲಿ ಯುಕ್ತಿಯುಕ್ತರಾಗಿದ್ದಾರೆ. ಎರಡನೆಯವರು ಯೋಗಿಗಳಾಗಿದ್ದಾರೆ ಆದರೆ ಸದಾ ಯೋಗಯುಕ್ತರಲ್ಲ ಮತ್ತು ಸದಾ ಪ್ರತೀ ಕರ್ಮದಲ್ಲಿ ಸ್ವತಹ ಯುಕ್ತಿಯುಕ್ತರೂ ಅಲ್ಲ. ಮನಸ್ಸಾ-ವಾಚಾ ಹಾಗೂ ಕರ್ಮ - ಮೂರರಲ್ಲಿಯೂ ಕೆಲಕೆಲವೊಮ್ಮೆ ಕೆಲವೊಂದರಲ್ಲಿ ಯುಕ್ತಿಯುಕ್ತರಾಗಿಲ್ಲ. ವಾಸ್ತವದಲ್ಲಿ ಬ್ರಾಹ್ಮಣ ಜೀವನ ಅರ್ಥಾತ್ ಸ್ವತಹ ಯೋಗಯುಕ್ತ ಮತ್ತು ಸದಾ ಯುಕ್ತಿಯುಕ್ತವಾದುದು. ಬ್ರಾಹ್ಮಣ ಜೀವನದ ಅಲೌಕಿಕತೆ ಹಾಗೂ ವಿಶೇಷತೆ ಮತ್ತು ಭಿನ್ನ ಹಾಗೂ ಪ್ರಿಯ ಸ್ಥಿತಿಯು ಇದೇ ಆಗಿದೆ – “ಯೋಗಯುಕ್ತ” ಮತ್ತು ``ಯುಕ್ತಿಯುಕ್ತ'' ಆದರೆ ಕೆಲವು ಮಕ್ಕಳು ಈ ವಿಶೇಷತೆಯಲ್ಲಿ ಸಹಜ ಮತ್ತು ಸ್ವಾಭಾವಿಕವಾಗಿ ನಡೆಯುತ್ತಿದ್ದಾರೆ ಮತ್ತು ಕೆಲವರು ಗಮನವನ್ನೂ ಇಡುತ್ತಾರೆ ಆದರೂ ಸಹ ಸದಾ ಎರಡು ಮಾತುಗಳ ಅನುಭವ ಮಾಡಲು ಸಾಧ್ಯವಿಲ್ಲ, ಇದಕ್ಕೆ ಕಾರಣವೇನು? ಜ್ಞಾನವಂತೂ ಎಲ್ಲರಿಗೂ ಇದೆ ಮತ್ತು ಎಲ್ಲರ ಲಕ್ಷ್ಯವೂ ಒಂದೇ ಆಗಿದೆ - ಆದರೂ ಸಹ ಕೆಲವರು ಲಕ್ಷ್ಯದ ಆಧಾರದಿಂದ ಇವೆರಡೂ ಲಕ್ಷ್ಯಗಳು ಅರ್ಥಾತ್ ಯೋಗಯುಕ್ತ ಮತ್ತು ಯುಕ್ತಿಯುಕ್ತ ಸ್ಥಿತಿಯ ಅನುಭೂತಿಗೆ ಸಮೀಪವಿದ್ದಾರೆ. ಇನ್ನೂ ಕೆಲವರು ಕೆಲವೊಮ್ಮೆ ತೀವ್ರ ಪುರುಷಾರ್ಥದಿಂದ ಸಮೀಪ ಬರುತ್ತಾರೆ ಆದರೆ ಕೆಲವೊಮ್ಮೆ ಸಮೀಪ, ಇನ್ನೂ ಕೆಲವೊಮ್ಮೆ ನಡೆಯುತ್ತಾ-ನಡೆಯುತ್ತಾ ಯಾವುದಾದರೊಂದು ಕಾರಣಕ್ಕೆ ವಶರಾಗಿ ನಿಂತು ಬಿಡುತ್ತಾರೆ ಆದರೆ ಸದಾ ಲಕ್ಷಣದ ಸಮೀಪ ಅನುಭೂತಿ ಮಾಡುವುದಿಲ್ಲ. ಸರ್ವ ಬ್ರಾಹ್ಮಣ ಆತ್ಮರಲ್ಲಿ ಈ ಶ್ರೇಷ್ಠಲಕ್ಷ್ಯದವರೆಗೆ ನಂಬರ್ವನ್ ಸಮೀಪ ಯಾರು? ಬ್ರಹ್ಮಾತಂದೆ ಅಂದಮೇಲೆ ಯಾವ ವಿಧಿಯನ್ನು ಅಳವಡಿಸಿಕೊಂಡ ಕಾರಣ ಈ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಂಡರು? ಸದಾ ಯೋಗಯುಕ್ತರಾಗಿರುವ ಸರಳ ವಿಧಿಯಾಗಿದೆ - ಸದಾ ತನ್ನನ್ನು ``ಸಾರಥಿ'' ಮತ್ತು ``ಸಾಕ್ಷಿ'' ಎಂದು ತಿಳಿದು ನಡೆಯುವುದು. |
ತಾವೆಲ್ಲಾ ಶ್ರೇಷ್ಠಾತ್ಮರು ಈ ರಥಕ್ಕೆ ಸಾರಥಿಯಾಗಿದ್ದೀರಿ, ರಥವನ್ನು ನಡೆಸುವಂತಹ ಆತ್ಮ ಸಾರಥಿಯಾಗಿದ್ದೀರಿ. ಈ ಸ್ಮೃತಿಯು ಸ್ವತಹವಾಗಿಯೇ ಈ ರಥ ಅಥವಾ ದೇಹದಿಂದ ಭಿನ್ನ ಮಾಡಿ ಬಿಡುತ್ತದೆ. ಯಾವುದೇ ಪ್ರಕಾರದ ದೇಹದ ಪರಿವೆಯಿಂದ ಭಿನ್ನ ಮಾಡಿ ಬಿಡುತ್ತದೆ. ದೇಹಭಾನವು ಇಲ್ಲವೆಂದರೆ ಸಹಜವಾಗಿ ಯೋಗಯುಕ್ತರಾಗಿ ಬಿಡುತ್ತೀರಿ ಮತ್ತು ಪ್ರತೀ ಕರ್ಮದಲ್ಲಿ ಯೋಗಯುಕ್ತ, ಯುಕ್ತಿಯುಕ್ತರು ಸ್ವತಹ ಆಗಿ ಬಿಡುತ್ತೀರಿ. ಸ್ವಯಂನ್ನು ಸಾರಥಿಯೆಂದು ತಿಳಿಯುವುದರಿಂದ ಸರ್ವ ಕರ್ಮೇಂದ್ರಿಯಗಳು ತನ್ನ ನಿಯಂತ್ರಣದಲ್ಲಿ ಇರುತ್ತವೆ ಅರ್ಥಾತ್ ಸರ್ವ ಕರ್ಮೇಂದ್ರಿಯಗಳನ್ನು ಸದಾ ಲಕ್ಷ್ಯ ಮತ್ತು ಲಕ್ಷಣದ ಗುರಿಯ ಸಮೀಪಕ್ಕೆ ತರುವ ನಿಯಂತ್ರಣ ಶಕ್ತಿಯು ಬಂದು ಬಿಡುತ್ತದೆ. ಸ್ವಯಂ ``ಸಾರಥಿ''ಯಾವುದೇ ಕರ್ಮೇಂದ್ರಿಯಕ್ಕೆ ವಶವಾಗುವುದಿಲ್ಲ ಏಕೆಂದರೆ ಮಾಯೆಯು ಯಾರ ಮೇಲಾದರೂ ಯುದ್ಧ ಮಾಡುತ್ತದೆಯೆಂದರೆ ಮಾಯೆಯು ಯುದ್ಧ ಮಾಡುವ ವಿಧಿಯು ಇದೇ ಆಗಿರುತ್ತದೆ - ಮೊದಲು ಅದು ಯಾವುದಾದರೊಂದು ಸ್ಥೂಲ ಕರ್ಮೇಂದ್ರಿಯ ಅಥವಾ ಸೂಕ್ಷ್ಮ ಶಕ್ತಿಗಳಾದ ``ಮನ-ಬುದ್ಧಿ-ಸಂಸ್ಕಾರ''ದ ಪರವಶರನ್ನಾಗಿ ಮಾಡಿ ಬಿಡುತ್ತದೆ. ತಾವು ಸಾರಥಿ ಆತ್ಮರಿಗೆ ತಂದೆಯಿಂದ ಯಾವ ಮಹಾಮಂತ್ರವು ವಶೀಕರಣ ಮಂತ್ರ ಸಿಕ್ಕಿದೆಯೋ ಅದನ್ನು ಪರಿವರ್ತನೆ ಮಾಡಿ ವಶೀಕರಣದ ಬದಲು ವಶೀಭೂತರನ್ನಾಗಿ ಮಾಡಿ ಬಿಡುತ್ತದೆ ಮತ್ತು ಒಂದು ಮಾತಿನಲ್ಲಿ ವಶೀಭೂತರಾಗಿ ಬಿಟ್ಟರೆ ಎಲ್ಲಾ ಭೂತಗಳು ಪ್ರವೇಶವಾಗಿ ಬಿಡುತ್ತವೆ ಏಕೆಂದರೆ ಈ ಭೂತಗಳಲ್ಲಿ ಪರಸ್ಪರ ಒಗ್ಗಟ್ಟಿದೆ. ಒಂದು ಭೂತವು ಬಂದಿತೆಂದರೆ ಅದು ಮತ್ತೆಲ್ಲಾ ಭೂತಗಳ ಆಹ್ವಾನ ಮಾಡುತ್ತದೆ ನಂತರ ಏನಾಗುವುದು? ಈ ಭೂತವು ಸಾರಥಿಯಿಂದ ಸ್ವಾರ್ಥಿಯನ್ನಾಗಿ ಮಾಡಿ ಬಿಡುತ್ತದೆ ಮತ್ತು ತಾವೇನು ಮಾಡುತ್ತೀರಿ? ಯಾವಾಗ ಸಾರಥಿತನದ ಸ್ಮೃತಿಯಲ್ಲಿ ಬರುತ್ತೀರೋ ಆಗ ಭೂತಗಳನ್ನು ಓಡಿಸುವ ಯುದ್ಧ ಮಾಡುತ್ತೀರಿ, ಯುದ್ಧದ ಸ್ಥಿತಿಯನ್ನು ಯೋಗಯುಕ್ತ ಸ್ಥಿತಿಯೆಂದು ಹೇಳುವುದಿಲ್ಲ ಆದ್ದರಿಂದ ಯೋಗಯುಕ್ತ ಮತ್ತು ಯುಕ್ತಿಯುಕ್ತ ಗುರಿಯ ಸಮೀಪಕ್ಕೆ ಹೋಗುವ ಬದಲು ನಿಂತು ಬಿಡುತ್ತೀರಿ ಮತ್ತು ಮೊದಲ ನಂಬರಿನ ಸ್ಥಿತಿಯಿಂದ ಎರಡನೇ ನಂಬರಿಗೆ ಬಂದು ಬಿಡುತ್ತೀರಿ. ಸಾರಥಿ ಎಂದರೆ ಅವರು ವಶರಾಗುವವರಲ್ಲ ಬದಲಾಗಿ ವಶಪಡಿಸಿಕೊಂಡು ನಡೆಸುವವರಾಗಿರುತ್ತಾರೆ ಅಂದಮೇಲೆ ತಾವೆಲ್ಲರೂ ಯಾರಾಗಿದ್ದೀರಿ? ಸಾರಥಿಗಳಲ್ಲವೆ. |
ಸಾರಥಿ ಅರ್ಥಾತ್ ಆತ್ಮಾಭಿಮಾನಿ ಏಕೆಂದರೆ ಆತ್ಮನೇ ಸಾರಥಿಯಾಗಿದೆ, ಬ್ರಹ್ಮಾ ತಂದೆಯು ಈ ವಿಧಿಯಿಂದ ನಂಬರ್ವನ್ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಂಡರು ಆದ್ದರಿಂದ ತಂದೆಯೂ ಸಹ ಇವರಿಗೆ ಸಾರಥಿಯಾದರು. ಸಾರಥಿಯಾಗುವ ನೆನಪಾರ್ಥವನ್ನು ತಂದೆಯು ಮಾಡಿ ತೋರಿಸಿದರು. ಫಾಲೋ ಫಾದರ್ ಮಾಡಿರಿ. ಸಾರಥಿಯಾಗಿ ಸದಾ ಸಾರಥಿ ಜೀವನದಲ್ಲಿ ಅತಿ ಭಿನ್ನ ಮತ್ತು ಪ್ರಿಯ ಸ್ಥಿತಿಯನ್ನು ಅನುಭವ ಮಾಡಿಸಿದರು ಏಕೆಂದರೆ ದೇಹವನ್ನು ಅಧೀನ ಮಾಡಿಕೊಂಡು ತಂದೆಯು ಪ್ರವೇಶಿಸುತ್ತಾರೆ ಅರ್ಥಾತ್ ಸಾರಥಿಯಾಗುತ್ತಾರೆಯೇ ಹೊರತು ದೇಹಕ್ಕೆ ಅಧೀನರಾಗುವುದಿಲ್ಲ ಆದ್ದರಿಂದ ಭಿನ್ನ ಮತ್ತು ಪ್ರಿಯರಾಗಿದ್ದಾರೆ. ಹಾಗೆಯೇ ತಾವೆಲ್ಲಾ ಬ್ರಾಹ್ಮಣ ಆತ್ಮರೂ ಸಹ ತಂದೆಯ ಸಮಾನ ಸಾರಥಿ ಸ್ಥಿತಿಯಲ್ಲಿರಿ. ನಡೆಯುತ್ತಾ-ತಿರುಗಾಡುತ್ತಾ ಇದನ್ನು ಪರಿಶೀಲನೆ ಮಾಡಿಕೊಳ್ಳಿ - ನಾನು ಸಾರಥಿ ಅರ್ಥಾತ್ ಸರ್ವರನ್ನು ನಡೆಸುವಂತಹ ಭಿನ್ನ ಮತ್ತು ಪ್ರಿಯಸ್ಥಿತಿಯಲ್ಲಿ ಸ್ಥಿತನಾಗಿದ್ದೇನೆಯೇ? ಇದನ್ನೂ ಮಧ್ಯ-ಮಧ್ಯದಲ್ಲಿ ಪರಿಶೀಲಿಸಿಕೊಳ್ಳಿ. ಇಡೀ ದಿನ ಹಾಗೆಯೇ ಕಳೆದು ಹೋದ ಮೇಲೆ ನಂತರ ರಾತ್ರಿಯಲ್ಲಿ ಪರಿಶೀಲನೆ ಮಾಡಿಕೊಳ್ಳುವುದಲ್ಲ, ಇಡೀ ದಿನ ಕಳೆದು ಹೋಯಿತೆಂದರೆ ಕಳೆದು ಹೋಗಿರುವ ಸಮಯವು ಸದಾಕಾಲಕ್ಕಾಗಿ ಸಂಪಾದನೆಯಿಂದ ಹೊರಟು ಹೋಯಿತು ಆದ್ದರಿಂದ ಕಳೆದುಕೊಂಡ ಮೇಲೆ ಎಚ್ಚೆತ್ತುಕೊಳ್ಳಬೇಡಿ, ಇದನ್ನು ಸ್ವತಹ ಸ್ವಾಭಾವಿಕ ಸಂಸ್ಕಾರವನ್ನಾಗಿ ಮಾಡಿಕೊಳ್ಳಿ. ಯಾವುದನ್ನು? ಪರಿಶೀಲನೆ ಮಾಡಿಕೊಳ್ಳುವ ಸಂಸ್ಕಾರ. ಹೇಗೆ ಯಾರದೇ ಯಾವುದೇ ಹಳೆಯ ಸಂಸ್ಕಾರವು ಈ ಬ್ರಾಹ್ಮಣ ಜೀವನದಲ್ಲಿ ಈಗಲೂ ಸಹ ಮುಂದುವರೆಯುವುದರಲ್ಲಿ ವಿಘ್ನರೂಪ ಆಗಿ ಬಿಡುತ್ತದೆ ಎಂದರೆ ಬಯಸದಿದ್ದರೂ ಸಂಸ್ಕಾರಕ್ಕೆ ವಶರಾಗಿ ಬಿಡುತ್ತೇವೆ ಎಂದು ಹೇಳುತ್ತೀರಲ್ಲವೆ. ಯಾವುದನ್ನು ಮಾಡಲು ಬಯಸದಿದ್ದರೂ ಸಹ ಅದನ್ನು ಮಾಡಿ ಬಿಡುತ್ತೀರಿ, ಯಾವಾಗ ಉಲ್ಟಾ ಸಂಸ್ಕಾರವು ಬಯಸದಿದ್ದರೂ ಸಹ ಯಾವುದೇ ಕರ್ಮ ಮಾಡಿಸಿ ಬಿಡುತ್ತದೆ ಅಂದಮೇಲೆ ಈ ಸ್ವಾಭಾವಿಕ ಪರಿಶೀಲನೆಯ ಶುದ್ಧ ಸಂಸ್ಕಾರವನ್ನು ನಿಮ್ಮಿಂದ ಅಳವಡಿಸಿಕೊಳ್ಳಲು ಸಾಧ್ಯವಿಲ್ಲವೆ? ಪರಿಶ್ರಮವಿಲ್ಲದೆ ಪರಿಶೀಲನೆಯ ಶುದ್ಧ ಸಂಸ್ಕಾರವು ಸ್ವತಹವಾಗಿ ಕಾರ್ಯ ಮಾಡಿಸುತ್ತಾ ಇರುತ್ತದೆ. ಮರೆತು ಹೋಗುತ್ತೇವೆ ಅಥವಾ ಬಹಳ ಬ್ಯುಜಿûಯಾಗಿರುತ್ತೇವೆ ಎಂದು ಹೇಳುವುದಿಲ್ಲ. ಅಶುದ್ಧ ಅಥವಾ ವ್ಯರ್ಥ ಸಂಸ್ಕಾರವಿದೆ, ಕೆಲವು ಮಕ್ಕಳಲ್ಲಿ ಅಶುದ್ಧ ಸಂಸ್ಕಾರವಿಲ್ಲದಿದ್ದರೆ ವ್ಯರ್ಥ ಸಂಸ್ಕಾರವಾದರೂ ಇರುತ್ತದೆ. ಈ ಅಶುದ್ಧ, ವ್ಯರ್ಥ ಸಂಸ್ಕಾರವು ಮರೆಸಿದರೂ ಸಹ ಮರೆತು ಹೋಗುವುದಿಲ್ಲ ಮತ್ತು ನಂತರ ಇದನ್ನೇ ಹೇಳುತ್ತೀರಿ - ನನಗೆ ಅಂತಹ ಭಾವನೆಯಿರಲಿಲ್ಲ ಆದರೆ ಏನು ಮಾಡುವುದು? ಇದು ನನ್ನ ಹಳೆಯ ಸ್ವಭಾವವಾಗಿದೆ ಅಥವಾ ಸಂಸ್ಕಾರವಾಗಿದೆ ಅಂದಮೇಲೆ ಅಶುದ್ಧ ಸಂಸ್ಕಾರವು ಮರೆತರೂ ಮರೆಯುವುದಿಲ್ಲ ಆದರೆ ಶುದ್ಧ ಸಂಸ್ಕಾರವು ಹೇಗೆ ಮರೆತು ಹೋಗುತ್ತದೆ? ಸಾರಥಿತನದ ಸ್ಥಿತಿಯು ಸ್ವತಹವಾಗಿ ಸ್ವ-ಉನ್ನತಿಯ ಶುದ್ಧ ಸಂಸ್ಕಾರವನ್ನು ಇಮರ್ಜ್ ಮಾಡುತ್ತದೆ ಮತ್ತು ಸ್ವಾಭಾವಿಕವಾಗಿ ಸಮಯ ಪ್ರಮಾಣ ಸಹಜವಾಗಿ ಪರಿಶೀಲನೆ ನಡೆಯುತ್ತಾ ಇರುತ್ತದೆ, ಅಶುದ್ಧ ಹವ್ಯಾಸದಿಂದ ದೂರವಾಗಿ ಬಿಡುತ್ತೀರಿ ಮತ್ತು ಈ ಹವ್ಯಾಸದಿಂದ ಬಲವಾಗಿ ಬಿಡುತ್ತೀರಿ. ಅಂದಾಗ ಕೇಳಿದಿರಾ - ಸದಾ ಯೋಗಯುಕ್ತ-ಯುಕ್ತಿಯುಕ್ತರಾಗಿರುವ ವಿಧಿ ಏನಾಗಿದೆ? ಸಾರಥಿಯಾಗಿ ನಡೆಯುವುದು. ಸಾರಥಿಯು ಸ್ವತಹ ಸಾಕ್ಷಿಯಾಗಿ ಮಾಡುತ್ತಾರೆ, ನೋಡುತ್ತಾರೆ, ಕೇಳುತ್ತಾರೆ. ಸಾಕ್ಷಿಯಾಗಿ ನೋಡುವ, ಕೇಳುವ, ಮಾಡುವ ಎಲ್ಲದರಲ್ಲಿಯೂ ಎಲ್ಲವನ್ನೂ ಮಾಡುತ್ತಿದ್ದರೂ ಸಹ ನಿರ್ಲೇಪವಾಗಿರುತ್ತಾರೆ ಅರ್ಥಾತ್ ಮಾಯೆಯ ಲೇಪದಿಂದ ಭಿನ್ನವಾಗಿರುತ್ತಾರೆ ಅಂದಮೇಲೆ ಪಾಠವನ್ನು ಪಕ್ಕಾ ಮಾಡಿಕೊಂಡಿರಲ್ಲವೆ. ಬ್ರಹ್ಮಾ ತಂದೆಯನ್ನು ಫಾಲೋ ಮಾಡುವವರಾಗಿದ್ದೀರಲ್ಲವೆ. ಬ್ರಹ್ಮಾ ತಂದೆಯೊಂದಿಗೆ ಬಹಳ ಪ್ರೀತಿಯಿದೆ ಅಂದಮೇಲೆ ಪ್ರೀತಿಗೆ ಗುರುತಾಗಿದೆ - ``ಸಮಾನರಾಗುವುದು'' ಅರ್ಥಾತ್ ಫಾಲೋ ಮಾಡುವುದು. |
ಎಲ್ಲಾ ಟೀಚರ್ಸ್ಗೆ ತಂದೆಯೊಂದಿಗೆ ಎಷ್ಟು ಪ್ರೀತಿಯಿದೆ! ತಂದೆಯು ಸದಾ ಟೀಚರ್ಸ್ನ್ನು ತನ್ನ ಸೇವೆಯ ಸಮೀಪ ಜೊತೆಗಾರರೆಂದು ತಿಳಿಯುತ್ತೇವೆ ಅಂದಮೇಲೆ ಮೊದಲು ಟೀಚರ್ಸ್ ಫಾಲೋ ಮಾಡುತ್ತೀರಲ್ಲವೆ! ಇದರಲ್ಲಿ ಸದಾ ಇದೇ ಲಕ್ಷ್ಯವನ್ನು ಇಟ್ಟುಕೊಳ್ಳಿ - ``ಮೊದಲು ನಾನು''. ಈರ್ಷ್ಯೆಯಲ್ಲಿ ಮೊದಲು ನಾನು ಎಂಬುದಲ್ಲ, ಇದು ನಷ್ಟವನ್ನು ಉಂಟು ಮಾಡುತ್ತದೆ. ಶಬ್ಧವು ಅದೇ ಆಗಿದೆ - ``ಮೊದಲು ನಾನು'' ಆದರೆ ಒಂದಾಗಿದೆ - ಈರ್ಷ್ಯೆಗೆ ವಶರಾಗಿ ಮೊದಲು ನಾನು ಎಂದು ಹೇಳುವುದು, ಇದರಿಂದ ಮೊದಲು ಬರುವ ಬದಲು ಹಿಂದುಳಿದು ಬಿಡುತ್ತಾರೆ. ಮೊದಲಿನಿಂದ ಕೊನೆಗೆ ಬಂದು ಬಿಡುತ್ತಾರೆ ಆದ್ದರಿಂದ ಫಾಲೋ ಮಾಡುವುದರಲ್ಲಿ ``ಮೊದಲು ನಾನು'' ಎಂದು ಹೇಳಿರಿ ಮತ್ತು ಮಾಡಿರಿ ಆಗ ತಾವೇ ಮೊದಲು ಹೊರಟು ಬಿಡುತ್ತೀರಿ. ಬ್ರಹ್ಮಾ ತಂದೆಯು ಮೊದಲು ಹೋದರಲ್ಲವೆ ಅಂದಮೇಲೆ ಸದಾ ಈ ಲಕ್ಷ್ಯವನ್ನಿಟ್ಟುಕೊಳ್ಳಿ - ಟೀಚರ್ಸ್ ಅರ್ಥಾತ್ ಫಾಲೋ ಫಾದರ್ ಮತ್ತು ನಂಬರ್ವನ್ ಫಾಲೋ ಫಾದರ್. ಹೇಗೆ ಬ್ರಹ್ಮಾರವರು ನಂಬರ್ವನ್ ಆದರು ಅಂದಮೇಲೆ ಫಾಲೋ ಮಾಡುವವರೂ ಸಹ ನಂಬರ್ವನ್ ಬರುವ ಲಕ್ಷ್ಯವನ್ನು ಇಟ್ಟುಕೊಳ್ಳಿ. ಎಲ್ಲಾ ಟೀಚರ್ಸ್ ಇದರಲ್ಲಿ ಪಕ್ಕಾ ಇದ್ದೀರಲ್ಲವೆ. ಫಾಲೋ ಮಾಡುವ ಧೈರ್ಯವಿದೆಯಲ್ಲವೆ ಏಕೆಂದರೆ ಟೀಚರ್ಸ್ ಅರ್ಥಾತ್ ನಿಮಿತ್ತರಾಗುವವರು. ಅನೇಕ ಆತ್ಮರಿಗೆ ನಿಮಿತ್ತರಾಗಿದ್ದೀರಿ ಅಂದಮೇಲೆ ನಿಮಿತ್ತರಾಗುವವರ ಮೇಲೆ ಎಷ್ಟೊಂದು ಜವಾಬ್ದಾರಿಯಿದೆ! ಹೇಗೆ ಬ್ರಹ್ಮಾ ತಂದೆಯು ನಿಮಿತ್ತರಾಗಿದ್ದರಲ್ಲವೆ ಆದ್ದರಿಂದ ಬ್ರಹ್ಮಾ ತಂದೆಯನ್ನು ನೋಡಿ ಎಷ್ಟೊಂದು ಮಂದಿ ಬ್ರಾಹ್ಮಣರು ತಯಾರಾದರು! ಅದೇರೀತಿ ಟೀಚರ್ಸ್ ಯಾವುದೇ ಕಾರ್ಯವನ್ನು ಮಾಡುತ್ತೀರಿ, ಅಡಿಗೆಯನ್ನೇ ಮಾಡುತ್ತೀರೋ ಅಥವಾ ಸ್ವಚ್ಛತೆಯನ್ನು ಮಾಡುತ್ತಿದ್ದೀರೋ ಆದರೆ ಪ್ರತೀ ಕರ್ಮ ಮಾಡುತ್ತಾ ಈ ಸ್ಮೃತಿಯಿರಲಿ - ನಾನು ಅನೇಕ ಆತ್ಮರ ಪ್ರತಿ ನಿಮಿತ್ತನಾಗಿದ್ದೇನೆ. ನಾನು ``ಯಾವುದನ್ನೂ'' ಮತ್ತು ``ಹೇಗೆ'' ಮಾಡುತ್ತೇನೆಯೋ ನಾನು ನಿಮಿತ್ತ ಆತ್ಮನನ್ನು ನೋಡಿ ಅನ್ಯರೂ ಮಾಡುತ್ತಾರೆ ಆದ್ದರಿಂದ ಬಾಪ್ದಾದಾ ಸದಾ ಹೇಳುತ್ತಾರೆ – ಒಂದು ಕಡೆ ಭಾಷಣ ಮಾಡುವುದು ಮತ್ತು ಇನ್ನೊಂದು ಕಡೆ ಪಾತ್ರೆ ತೊಳೆಯುವುದು - ಎರಡರಲ್ಲಿಯೂ ಯೋಗಯುಕ್ತ-ಯುಕ್ತಿಯುಕ್ತ ಸ್ಥಿತಿಯಿರಲಿ. ಯಾವುದೇ ಕೆಲಸವಾಗಿರಲಿ ಆದರೆ ಸ್ಥಿತಿಯು ಸದಾ ಯೋಗಯುಕ್ತ ಮತ್ತು ಯುಕ್ತಿಯುಕ್ತವಾಗಿರಲಿ. ಭಾಷಣ ಮಾಡುತ್ತಿದ್ದೇವೆಂದು ಹೇಳಿ ಯೋಗಯುಕ್ತರು ಆಗಿರುವುದಲ್ಲ ಮತ್ತು ಪಾತ್ರೆ ತೊಳೆಯುವುದು ಅರ್ಥಾತ್ ಸಾಧಾರಣ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿ ಸಾಧಾರಣ ಸ್ಥಿತಿಯಾಗಿ ಬಿಡುವುದಲ್ಲ, ಪ್ರತೀ ಸಮಯ ಫಾಲೋ ಫಾದರ್ ಮಾಡಿ. ತಿಳಿಯಿತೆ! |
ಮುಂದೆ ಕುಳಿತುಕೊಳ್ಳುತ್ತೀರಿ ಅಂದಮೇಲೆ ಮುಂದೆ ಕುಳಿತುಕೊಳ್ಳಲು ಎಷ್ಟೊಂದು ಇಷ್ಟವಾಗುತ್ತದೆ. ಮತ್ತು ಸದಾ ಮುಂದುವರೆಯುವುದರಲ್ಲಿ ಎಷ್ಟು ಚೆನ್ನಾಗಿರುತ್ತದೆ! ಯಾವುದೇ ಇಂತಹ ಕಠಿಣ ಸಂಸ್ಕಾರವು ಹಿಂದೇಟಾಕುವ ಪ್ರಯತ್ನ ಮಾಡಿದರೆ ಆಗ ಈ ದೃಶ್ಯವನ್ನು ನೆನಪು ಮಾಡಿಕೊಳ್ಳಿ. ಯಾವಾಗ ಮುಂದೆ ಕುಳಿತುಕೊಳ್ಳಲು ಎಷ್ಟು ಚೆನ್ನಾಗಿರುತ್ತದೆ ಅಂದಮೇಲೆ ಮುಂದುವರೆಯುವುದರಲ್ಲಿ ನಾವೇಕೆ ಹಿಂದುಳಿಯಬೇಕು? ಯಾವುದೇ ಮಾತು ಬಂದರೆ ಮಧುಬನಕ್ಕೆ ತಲುಪಿ ಬಿಡಿ ಮತ್ತು ತನ್ನನ್ನು ಧೈರ್ಯ, ಉಮ್ಮಂಗದಲ್ಲಿ ತಂದುಕೊಳ್ಳಿ ಏಕೆಂದರೆ ಹಿಂದೆ ಇರುವವರು ಕೊನೆಯಲ್ಲಿ ಇನ್ನೂ ಅನೇಕರು ಬರುತ್ತಾರೆ. ತಾವೆಲ್ಲರೂ ಒಂದುವೇಳೆ ಹಿಂದೆ ಉಳಿದುಕೊಂಡರೆ ಮತ್ತೆ ಹಿಂದಿರುವವರು ಮುಂದೆ ಬರಬೇಕಾಗುತ್ತದೆ ಆದ್ದರಿಂದ ಸದಾ ಇದನ್ನೇ ಸ್ಮೃತಿಯಿಟ್ಟುಕೊಳ್ಳಿ - ನಾವು ಮುಂದೆ ಇರುವವರಾಗಿದ್ದೇವೆ. ಹಿಂದೆ ಇರುವುದು ಅರ್ಥಾತ್ ಪ್ರಜೆಗಳಾಗುವುದು. ಪ್ರಜೆಗಳಂತೂ ಆಗಬಾರದಲ್ಲವೆ. ಪ್ರಜಾಯೋಗಿಗಳಲ್ಲ, ರಾಜಯೋಗಿಗಳಾಗಿದ್ದೀರಲ್ಲವೆ! ಅಂದಮೇಲೆ ಫಾಲೋ ಫಾದರ್ ಮಾಡಿ. ಒಳ್ಳೆಯದು- |
ವಿದೇಶಿಯರು ಏನು ಮಾಡುತ್ತೀರಿ? ಫಾಲೋ ಫಾದರ್ ಮಾಡುತ್ತೀರಲ್ಲವೆ! ಎಲ್ಲಿಯತನಕ ತಲುಪುತ್ತೀರಿ? ಎಲ್ಲರೂ ಮುಂದೆ ಬರುತ್ತೀರಿ. ಯಾರೆಲ್ಲಾ ಬಂದಿದ್ದೀರೋ ಎಲ್ಲರೂ ಫಾಲೋ ಫಾದರ್ ಮಾಡಿ ಫಾಸ್ಟ್ ಮತ್ತು ಫಸ್ಟ್ ಬನ್ನಿರಿ. ಒಬ್ಬರೇ ಮೊಟ್ಟ ಮೊದಲಿಗೆ ಬರುವರು ಎಂದು ತಿಳಿಯಬೇಡಿ. ಫಸ್ಟ್ ಗ್ರೇಡ್ನಲ್ಲಂತೂ ಅನೇಕರಿರುವರಲ್ಲವೆ. ಫಸ್ಟ್ ನಂಬರಿನಲ್ಲಂತೂ ಬ್ರಹ್ಮಾ ತಂದೆಯು ಬರುವರು ಆದರೆ ಫಸ್ಟ್ ಗ್ರೇಡ್ನಲ್ಲಿ ಜೊತೆಗಾರರಿರುತ್ತಾರೆ ಆದ್ದರಿಂದ ಎಲ್ಲರೂ ತಂದೆಯ ಜೊತೆಯಲ್ಲಿ ಬನ್ನಿರಿ. ಒಬ್ಬರೇ ಫಸ್ಟ್ ಇರುವುದಿಲ್ಲ, ಫಸ್ಟ್ ಗ್ರೇಡ್ನವರು ಅನೇಕರಿರುತ್ತಾರೆ ಆದ್ದರಿಂದ ಮೊದಲ ನಂಬರಂತೂ ನಿಗಧಿಯಾಯಿತು ಆದ್ದರಿಂದ ನಾವು ಎರಡನೇ ಗ್ರೇಡ್ನಲ್ಲಿ ಬರುತ್ತೇವೆಂದು ತಿಳಿಯಬೇಡಿ. ಯಾರು ಮೊದಲು ಮಾಡುವರೋ ಅವರೇ ಅರ್ಜುನರು. ಮೊದಲ ನಂಬರಿನವರು ಅರ್ಜುನರು. ಎಲ್ಲರಿಗೂ ಫಸ್ಟ್ನಲ್ಲಿ ಬರುವ ಅವಕಾಶವಿದೆ, ಎಲ್ಲರೂ ಬರಬಹುದಾಗಿದೆ. ಫಸ್ಟ್ಗ್ರೇಡ್ ಅಪರಿಮಿತವಾಗಿದೆ, ಕಡಿಮೆಯಿಲ್ಲ ಆದ್ದರಿಂದ ಎಲ್ಲರೂ ಫಸ್ಟ್ನಲ್ಲಿ ಬರುತ್ತೀರಲ್ಲವೆ, ಪಕ್ಕಾ ಇದ್ದೀರಾ? ಒಳ್ಳೆಯದು! |
ಸದಾ ಬ್ರಹ್ಮಾ ತಂದೆಯನ್ನು ಫಾಲೋ ಮಾಡುವವರು, ಸದಾ ಸ್ವತಹ ಯೋಗಯುಕ್ತ-ಯುಕ್ತಿಯುಕ್ತರಾಗಿರುವವರು, ಸದಾ ಸಾರಥಿಯಾಗಿ ಕರ್ಮೇಂದ್ರಿಯಗಳನ್ನು ಶ್ರೇಷ್ಠ ಮಾರ್ಗದಲ್ಲಿ ನಡೆಸುವವರು, ಸದಾ ಗುರಿಯ ಸಮೀಪ ಇರುವವರು ಇಂತಹ ಸರ್ವ ಶ್ರೇಷ್ಠ ಆತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ. |
ಅವ್ಯಕ್ತ ಬಾಪ್~ದಾದಾರವರ ಜೋನ್ ಪ್ರಕಾರ ಉಚ್ಛರಿಸಲ್ಪಟ್ಟ ಮಹಾವಾಕ್ಯಗಳು - ಇಂದೋರ್ ಜೋನ್ ಗ್ರೂಪ್: |
ಬಾಪ್ದಾದಾರವರ ಶ್ರೇಷ್ಠ ಮತವು ಶ್ರೇಷ್ಠ ಗತಿಯನ್ನು ಪ್ರಾಪ್ತಿ ಮಾಡಿಸಿತು - ಇಂತಹ ಅನುಭವ ಮಾಡುತ್ತೀರಲ್ಲವೆ! ಮತದಂತೆ ಗತಿಯಾಗುತ್ತದೆ ಅಂದಮೇಲೆ ತಂದೆಯ ಶ್ರೇಷ್ಠ ಮತವಿದೆಯೆಂದರೆ ಗತಿಯೂ ಶ್ರೇಷ್ಠವಾಗಿ ಇರುತ್ತದೆಯಲ್ಲವೇ! ಹೇಗೆ ಅಂತ್ಯ ಮತಿ ಸೊ ಗತಿ ಎಂದು ಹೇಳುತ್ತಾರೆ..... ಈ ರೀತಿ ಏಕೆ ಮಹಿಮೆ ಮಾಡಲಾಗಿದೆ? ಏಕೆಂದರೆ ತಂದೆಯವರು ಚಕ್ರದ ಅಂತಿಮದಲ್ಲಿಯೇ ಬಂದು ಶ್ರೇಷ್ಠ ಮತವನ್ನು ಕೊಡುತ್ತಾರೆ ಅಂದಮೇಲೆ ಅಂತಿಮ ಸಮಯದಲ್ಲಿ ಶ್ರೇಷ್ಠ ಮತವನ್ನು ತೆಗೆದುಕೊಳ್ಳುತ್ತೀರಿ ಹಾಗೂ ಅನೇಕ ಜನ್ಮಗಳ ಸದ್ಗತಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಈ ಸಮಯದಲ್ಲಿ ಬೇಹದ್ದಿನ ``ಅಂತ್ಯ ಮತಿ ಸೊ ಗತಿ'' ಶ್ರೇಷ್ಠವಾಗಿ ಬಿಡುತ್ತದೆ. ಹಾಗಾದರೆ ಈ ಸಮಯದ್ದೇ ನೆನಪಾರ್ಥವು ಭಕ್ತಿಮಾರ್ಗದಲ್ಲಿ ನಡೆದುಬಂದಿದೆ. ಒಂದು ಜನ್ಮದ ಶ್ರೇಷ್ಠ ಮತದಿಂದ ಎಷ್ಟೊಂದು ಜನ್ಮಗಳವರೆಗೆ ಶ್ರೇಷ್ಠ ಗತಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ! ಎಲ್ಲಾ ನೆನಪಾರ್ಥಗಳು ಈ ಸಂಗಮಯುಗದ್ದೇ ಆಗಿದೆ. ನೆನಪಾರ್ಥವೇಕೆ ಆಗಿದೆ? ಏಕೆಂದರೆ ಈ ಸಮಯದಲ್ಲಿ ನೆನಪಿನಲ್ಲಿದ್ದು ಕರ್ಮವನ್ನು ಮಾಡುತ್ತೀರಿ. ಪ್ರತಿಯೊಂದು ಕರ್ಮದ ನೆನಪಾರ್ಥವಾಗಿ ಬಿಟ್ಟಿದೆ. ತಾವು ಅಮೃತವೇಳೆಯಲ್ಲಿ ವಿಧಿಪೂರ್ವಕವಾಗಿ ಏಳುತ್ತೀರೆಂದರೆ ನೋಡಿರಿ, ತಮ್ಮ ನೆನಪಾರ್ಥ ಚಿತ್ರಗಳಲ್ಲಿಯೂ ವಿಧಿಪೂರ್ವಕವಾಗಿ ಏಳಿಸುತ್ತಾರೆ ಮತ್ತು ಎಷ್ಟೊಂದು ಪ್ರೀತಿಯಿಂದ ಏಳಿಸುತ್ತಾರೆ. ಅದಂತು ಜಡಚಿತ್ರವಿದೆ ಆದರೆ ಎಷ್ಟೊಂದು ಮನಃಪೂರ್ವಕವಾಗಿ ಸ್ನೇಹದಿಂದ ಏಳಿಸುತ್ತಾರೆ! ಏಳುವುದರ ಜೊತೆಗೆ ನೈವೇದ್ಯವನ್ನೂ ಇಡುತ್ತಾರೆ, ಮಲಗಿಸುವುದನ್ನೂ ಮಾಡುತ್ತಾರೆ ಏಕೆಂದರೆ ತಾವು ಈ ಸಮಯದಲ್ಲಿ ಎಲ್ಲಾ ಕಾರ್ಯಗಳನ್ನು ವಿಧಿಪೂರ್ವಕವಾಗಿ ನೆನಪಿನಲ್ಲಿದ್ದು ಮಾಡುತ್ತೀರಿ. ಸೇವಿಸುವುದೂ ಸಹ ವಿಧಿಪೂರ್ವಕವಾಗಿ, ಭೋಗವನ್ನಿಟ್ಟು ಸೇವಿಸುತ್ತೀರಲ್ಲವೆ ಅಥವಾ ಹೇಗಿದೆಯೋ ಹಾಗೆಯೇ ಸೇವಿಸುತ್ತೀರಾ? ಕೆಲವೊಮ್ಮೆ ಯಾರಿಗಾದರೂ ಊಟ ಕೊಡಬೇಕು. ಆದ್ದರಿಂದ ಅವಸರದಲ್ಲಿ ಭೋಗವನ್ನಿಡಲಿಲ್ಲ - ಈ ರೀತಿಯಂತು ಆಗುವುದಿಲ್ಲವೆ! ಒಂದುವೇಳೆ ಯಾರಿಗಾದರೂ ಕೊಡಬೇಕಾಗುವುದು, ಯಾವುದಾದರೂ ವಿವಶತೆಯಿದೆ ಎಂದರೂ ಸಹ ಮೊದಲು ಭೋಗಕ್ಕಿಡುವುದನ್ನಂತು ತೆಗೆಯಿರಿ. ಯಾರಿಗೋ ಊಟ ಕೊಟ್ಟು ನಂತರ ಭೋಗವನ್ನಿಡುವಂತೆ ಆಗಬಾರದು. ವಿಧಿಪೂರ್ವಕವಾಗಿ ಸೇವಿಸುವುದರಿಂದ ಸಿದ್ಧಿಯು ಪ್ರಾಪ್ತಿಯಾಗುವುದು ಹಾಗೂ ಖುಷಿಯಾಗುತ್ತದೆ, ನಿರಂತರ ಸಹಜವಾಗಿಯೇ ನೆನಪಿರುತ್ತದೆ. |
ಅಂದಮೇಲೆ ಅಮೃತವೇಳೆಯಿಂದ ರಾತ್ರಿಯವರೆಗೆ ಏನೆಲ್ಲಾ ಕರ್ಮವನ್ನು ಮಾಡುತ್ತೀರಿ, ನೆನಪಿನ ವಿಧಿಪೂರ್ವಕವಾಗಿ ಮಾಡಿದಾಗ ಪ್ರತೀ ಕರ್ಮದ ಸಿದ್ಧಿಯು ಸಿಗುವುದು. ಸಿದ್ಧಿ ಎಂದರೆ ಪ್ರತ್ಯಕ್ಷಫಲದ ಪ್ರಾಪ್ತಿಯಾಗುತ್ತಾ ಇರುತ್ತದೆ. ಅತಿ ಶ್ರೇಷ್ಠವಾದ ಸಿದ್ಧಿಯೆಂದರೆ ಪ್ರತ್ಯಕ್ಷಫಲದ ರೂಪದಲ್ಲಿ ಅತೀಂದ್ರಿಯ ಸುಖದ ಅನುಭೂತಿಯಾಗುವುದು. ಸದಾ ಸುಖದ ಪ್ರಕಂಪನಗಳಲ್ಲಿ, ಖುಷಿಯ ಪ್ರಕಂಪನಗಳಲ್ಲಿ ತೇಲಾಡುತ್ತಾ ಇರುವಿರಿ. ಮೊದಲು ಪ್ರತ್ಯಕ್ಷಫಲ ಸಿಗುತ್ತದೆ, ನಂತರ ಭವಿಷ್ಯಫಲವು ಸಿಗುವುದು. ಈ ಸಮಯದ ಪ್ರತ್ಯಕ್ಷಫಲವು ಭವಿಷ್ಯ ಅನೇಕ ಜನ್ಮಗಳ ಫಲಕ್ಕಿಂತಲೂ ಶ್ರೇಷ್ಠವಾದುದು. ಒಂದುವೇಳೆ ಈಗ ಪ್ರತ್ಯಕ್ಷಫಲವನ್ನು ಅನುಭವಿಸದಿದ್ದರೆ, ಇಡೀ ಕಲ್ಪದಲ್ಲೆಂದಿಗೂ ಪ್ರತ್ಯಕ್ಷಫಲವು ಸಿಗುವುದಿಲ್ಲ. ಈಗೀಗ ಮಾಡಿದಿರಿ, ಈಗೀಗ ಸಿಕ್ಕಿತು- ಇದಕ್ಕೆ ಪ್ರತ್ಯಕ್ಷಫಲವೆಂದು ಹೇಳಲಾಗುವುದು. ಸತ್ಯಯುಗದಲ್ಲಿಯೂ ಯಾವ ಫಲ ಸಿಗುತ್ತದೆಯೋ ಅದು ಈ ಜನ್ಮದ್ದೇ ಸಿಗುತ್ತದೆ, ಮುಂದಿನ ಜನ್ಮದಲ್ಲ. ಆದರೆ ಇಲ್ಲೇನು ಸಿಗುತ್ತದೆಯೋ ಅದು ಪ್ರತ್ಯಕ್ಷಫಲವಾಗಿದೆ ಅರ್ಥಾತ್ ಈಗೀಗ ಪಡೆಯುವ ಫಲವಾಗಿದೆ. ಅಂದಮೇಲೆ ಪ್ರತ್ಯಕ್ಷಫಲದಿಂದ ವಂಚಿತರಾಗಬಾರದು, ಸದಾ ಫಲವನ್ನು ಅನುಭವಿಸುವುದಂತು ಚೆನ್ನಾಗಿರುತ್ತದೆ ಅಲ್ಲವೆ! ಇಂತಹ ಭಾಗ್ಯವನ್ನೆಂದಿಗಾದರೂ ಯೋಚಿಸಿದ್ದಿರಾ? ಭಗವಂತನ ಮೂಲಕ ಸಿಗುತ್ತದೆ ಎಂಬುದನ್ನು ಸ್ವಪ್ನದಲ್ಲಿಯೂ ಇರಲಿಲ್ಲ! ಅಂದಮೇಲೆ ಯಾವ ಮಾತು ಸ್ವಪ್ನ-ಸಂಕಲ್ಪದಲ್ಲಿಯೂ ಇರಲಿಲ್ಲವೋ ಅದು ಆಗಿಬಿಟ್ಟಿತೆಂದರೆ ಎಷ್ಟೊಂದು ಖುಷಿಯಾಗುತ್ತದೆ! ವರ್ತಮಾನ ಸಮಯದಲ್ಲಿ ಯಾರಿಗಾದರೂ ಲಾಟರಿಯಿಂದ ಹಣ ಬರುತ್ತದೆಯೆಂದರೆ ಎಷ್ಟೊಂದು ಖುಷಿಯಾಗುತ್ತದೆ! ಇದಂತು ಪ್ರತ್ಯಕ್ಷಫಲವಾಗಿದೆ, ಇದರಿಂದ ಭವಿಷ್ಯದ ಫಲವೂ ಆಗಿ ಬಿಡುತ್ತದೆ. ಅಂದಮೇಲೆ ನಶೆಯಿರುತ್ತದೆಯಲ್ಲವೆ, ಕೆಲವೊಮ್ಮೆ ಹೆಚ್ಚು ಕೆಲವೊಮ್ಮೆ ಕಡಿಮೆಯಂತು ಆಗುವುದಿಲ್ಲವೇ? ಸದಾ ಏಕರಸ ಸ್ಥಿತಿಯಲ್ಲಿ ಹಾರುತ್ತಿರಿ. ಸೆಕೆಂಡಿನಲ್ಲಿ ಹಾರುವುದನ್ನು ಕಲಿತಿದ್ದೀರಲ್ಲವೆ ಅಥವ ಹಾರುವುದರಲ್ಲಿ ಹೆಚ್ಚು ಸಮಯ ಹಿಡಿಸುತ್ತದೆಯೇ? ಸಂಕಲ್ಪ ಮಾಡಿದೆವು ಮತ್ತು ತಲುಪಿದೆ ಎನ್ನುವಷ್ಟು ತೀವ್ರಗತಿಯಿದೆಯೇ? ಒಳ್ಳೆಯದು! |
ಇಂದೋರ್ ಜೋನಿನವರೆಲ್ಲರೂ ಸಂತುಷ್ಟವಾಗಿದ್ದೀರಲ್ಲವೆ, ಮಾತೆಯರು ಸದಾ ಸಂತುಷ್ಟವಾಗಿ ಇದ್ದೀರಾ? ಕೆಲವೊಮ್ಮೆ ಪರಿವಾರದಲ್ಲಿ ಲೌಕಿಕದಿಂದ ಅಸಂತುಷ್ಟರಂತು ಆಗುವುದಿಲ್ಲವೇ? ಕೆಲವೊಮ್ಮೆ ಬೇಸರವಾಗುತ್ತದೆಯೇ? ಕೆಲವೊಮ್ಮೆ ಚಂಚಲವಿರುವ ಮಕ್ಕಳಿಂದ ಬೇಸರವಾಗುವುದಿಲ್ಲವೇ? ಎಂದಿಗೂ ಸಹ ಬೇಸರವಾಗಬಾರದು, ತಾವೆಷ್ಟು ಬೇಸರವಾಗುವಿರಿ, ಅವರು ಅಷ್ಟೇ ಬೇಸರ ಪಡಿಸುವರು. ಆದ್ದರಿಂದ ನಿಮಿತ್ತರಾಗಿದ್ದು, ಸೇವಾಧಾರಿಯಾಗಿದ್ದು ಸೇವೆ ಮಾಡಿರಿ. ನನ್ನ ಮಗು ಮತ್ತೆ ಈ ರೀತಿ ಮಾಡುತ್ತದೆ ಎಂಬ ನನ್ನದೆನ್ನುವುದು ಬಂದರೆ ಬೇಸರವಾಗುವಿರಿ! ಅಂದಾಗ ಎಲ್ಲಿ ನನ್ನದೆನ್ನುವುದು ಇರುತ್ತದೆಯೋ ಅಲ್ಲಿ ಬೇಸರವಾಗುವಿರಿ ಹಾಗೂ ಎಲ್ಲಿ ನಿನ್ನದು-ನಿನ್ನದು (ತಂದೆಯದು) ಬರುತ್ತದೆಯೋ ಅಲ್ಲಿ ತೇಲಾಡುತ್ತೀರಿ. ಹಾಗಾದರೆ ತೇಲಾಡುವವರಲ್ಲವೆ! ಸದಾ ನಿನ್ನದು ಅಂದರೆ ಸ್ವಮಾನದಲ್ಲಿರುವುದು. ನನ್ನದು-ನನ್ನದು ಎಂದು ಹೇಳುವುದೆಂದರೆ ಅಭಿಮಾನ ಬರುವುದು, ನಿನ್ನದು-ನಿನ್ನದು ಎನ್ನುವುದೆಂದರೆ ಸ್ವಮಾನದಲ್ಲಿರುವುದು. ಹಾಗಾದರೆ ಸದಾ ಸ್ವಮಾನದಲ್ಲಿ ಇರುವವರು ಅರ್ಥಾತ್ ನಿನ್ನದೆಂದು ಸ್ವೀಕರಿಸುವುದು - ಇದನ್ನೇ ನೆನಪಿಟ್ಟುಕೊಳ್ಳಿರಿ. ಒಳ್ಳೆಯದು. |
ಡಬಲ್ ವಿದೇಶಿಗಳೂ ಸಹ ಅಗಲಿ ಮರಳಿ ಸಿಕ್ಕಿರುವವರು, ಸ್ವಲ್ಪವೇ ಇದ್ದಾರೆ. ಇದರಲ್ಲೆಷ್ಟು ಖುಷಿಯಿರುತ್ತದೆ ಎಂಬುದನ್ನು ವರ್ಣನೆ ಮಾಡಬಲ್ಲಿರಾ? ಬೇಹದ್ದಿನ ತಂದೆಯಾಗಿದ್ದಾರೆ ಅಂದಮೇಲೆ ಪ್ರಾಪ್ತಿಯೂ ಬೇಹದ್ದಿನದಾಗಿದೆ ಆದ್ದರಿಂದ ಅದ್ದನ್ನು ಎಣಿಕೆ ಮಾಡಲು ಸಾಧ್ಯವಿಲ್ಲ. ಬಾಪ್ದಾದಾರವರಂತು ಡಬಲ್ ವಿದೇಶಿ ಮಕ್ಕಳನ್ನು ತೀವ್ರ ಪುರುಷಾರ್ಥಿಯ ಲೆಕ್ಕದಿಂದ ನೋಡಿ ಖುಷಿಯಾಗುವರು. ಭಾರತವಾಸಿಗಳಂತು ಭಾರತದ ಮಾತುಗಳನ್ನು ತಿಳಿದುಕೊಂಡಿದ್ದಾರೆ ಆದರೆ ಇವರುಗಳು ತಿಳಿಯದೇ ಇದ್ದರೂ ಇಷ್ಟು ಸಮೀಪ ತೀವ್ರ ಪುರುಷಾರ್ಥಿ ಆಗಿ ಬಿಟ್ಟರು, ಅಂದಾಗ ಚಮತ್ಕಾರವಲ್ಲವೆ! ಹಾಗಾದರೆ ಡಬಲ್ ಭಾಗ್ಯಶಾಲಿ ಆಗಿ ಬಿಟ್ಟಿರಿ! ಮತ್ತು ಭಾರತವಾಸಿಗಳಿಗೇನು ನಶೆಯಿದೆ - ನಾವೇ ಪ್ರತೀ ಕಲ್ಪದಲ್ಲಿ ಅವಿನಾಶಿ ಭಾರತವಾಸಿ ಆಗುವೆವು. ಅವಿನಾಶಿ ಖಂಡ ಭಾರತವೇ ಆಗಿದೆ ಎಂಬ ನಶೆಯಿದೆಯಲ್ಲವೆ! ಪ್ರತಿಯೊಬ್ಬರಿಗೂ ತಮ್ಮ-ತಮ್ಮ ನಶೆಯಿದೆ. ಎಲ್ಲರೂ ಭಾರತದಲ್ಲಿಯೇ ಬರಬೇಕಾಗುತ್ತದೆ ಅಲ್ಲವೆ ಹಾಗೂ ಕುಳಿತಿರುವುದೂ ಭಾರತದಲ್ಲಿಯೇ ಕುಳಿತಿದ್ದೀರಿ. ಒಳ್ಳೆಯದು - ಎಲ್ಲರಿಗೂ ನೆನಪುಗಳು. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಆತ್ಮಿಕ ಮಕ್ಕಳಿಗೆ ಆಂಗ್ಲ ಭಾಷೆಯಲ್ಲಿ ಸ್ಪಿರಿಚ್ಯುಯಲ್ ಚಿಲ್ಡ್ರನ್ ಎಂದು ಹೇಳಲಾಗುತ್ತದೆ. ಸ್ಪಿರಿಚ್ಯುಯಲ್ ಫಾದರ್ ಮತ್ತು ಸ್ಪಿರಿಚ್ಯುಯಲ್ ಚಿಲ್ಡ್ರನ್. ಈಗ ಇದಂತೂ ಆತ್ಮಿಕ ಮಕ್ಕಳಿಗೆ ತಿಳಿದಿದೆ - ನಾವಾತ್ಮರಿಗೆ ಅಲ್ಲಿ ಶರೀರವಿರುವುದಿಲ್ಲ, ಆದ್ದರಿಂದ ಅಲ್ಲಿ ಯಾವುದೇ ವಾರ್ತಾಲಾಪ ನಡೆಯುವುದಿಲ್ಲ. ಯಾವಾಗ ಇಬ್ಬರಿಗೂ ಶರೀರವಿರುವುದೋ ಆಗಲೇ ಪರಸ್ಪರ ವಾರ್ತಾಲಾಪವಾಗುವುದು. ಆತ್ಮರಿಗೆ ಇಲ್ಲಂತೂ ತಮ್ಮ-ತಮ್ಮ ಶರೀರವಿದೆ, ಬಾಕಿ ಯಾರು ಜ್ಞಾನಸಾಗರ ಆತ್ಮಿಕ ತಂದೆಯಿದ್ದಾರೆಯೋ ಅವರಿಗೇ ತಮ್ಮ ಶರೀರವಿಲ್ಲ, ಅವರು ನಿರಾಕಾರನಾಗಿದ್ದಾರೆ. ಶಾಂತಿಧಾಮದಲ್ಲಿ ನಾವಾತ್ಮರೂ ಸಹ ಅಶರೀರಿಯಾಗಿರುತ್ತೇವೆ ಎಂದು ಮಕ್ಕಳೂ ತಿಳಿದುಕೊಂಡಿದ್ದೀರಿ. ಹೇಗೆ ತಂದೆಯು ಅಶರೀರಿ ಹಾಗೂ ವಿಚಿತ್ರನಾಗಿದ್ದಾರೆಯೋ ಹಾಗೆಯೇ ನೀವಾತ್ಮರೂ ಸಹ ಅಲ್ಲಿ ಅಶರೀರಿಯಾಗಿರುತ್ತೀರಿ. ಇದು ತಿಳಿದುಕೊಳ್ಳುವ ಮಾತಾಗಿದೆ. ಅಶರೀರಿಯಾಗಿ ಬಂದಿದ್ದೇವೆ, ಅಶರೀರಿಯಾಗಿ ಹೋಗಬೇಕಾಗಿದೆ ಎಂಬ ಮಾತನ್ನೂ ಹೇಳುತ್ತಾರೆ ಅಂದರೆ ಈ ಶರೀರರೂಪಿ ವಸ್ತ್ರವಿರುವುದಿಲ್ಲ. ಆತ್ಮವು ಶಾಂತಿಧಾಮದಲ್ಲಿದ್ದಾಗ ಅಶರೀರಿಯಾಗಿರುತ್ತದೆ, ಶಾಂತಿಯಲ್ಲಿರುತ್ತದೆ. ಈಗ ಆತ್ಮಿಕ ತಂದೆಯು ಈ ಜ್ಞಾನವನ್ನು ತಿಳಿಸುತ್ತದೆ, ಇಡೀ ಪ್ರಪಂಚದಲ್ಲಿ ಆತ್ಮಿಕ ತಂದೆಯು ಮತ್ತ್ಯಾರೂ ಇಲ್ಲ, ಮತ್ತೆಲ್ಲರೂ ಶರೀರದ ತಂದೆಯರಾಗಿದ್ದಾರೆ. ಆತ್ಮಿಕ ತಂದೆಯು ಸ್ವಯಂ ಹೇಳುತ್ತಾರೆ - ನಾನು ಅಶರೀರಿಯಾಗಿದ್ದೆನು, ಆದ್ದರಿಂದ ಮಾತನಾಡುವ ಸಮಯದಲ್ಲಿ ಶರೀರದ ಆಧಾರ ತೆಗೆದುಕೊಳ್ಳಬೇಕಾಗುತ್ತದೆ. ಭಲೆ ಶಾಸ್ತ್ರಗಳಲ್ಲಿ ಪ್ರಕೃತಿಯ ಆಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಬರೆದಿದ್ದಾರೆ ಆದರೆ ತಂದೆಯು ತಿಳಿಸುತ್ತಾರೆ - ಪ್ರಕೃತಿಯಿಂದಲೇ ಶರೀರವು ಮಾಡಲ್ಪಟ್ಟಿದೆ. ನಾನು ಸಾಧಾರಣ ಶರೀರದ ಆಧಾರ ತೆಗೆದುಕೊಳ್ಳುತ್ತೇನೆ. |
ಆತ್ಮಿಕ ತಂದೆಯು ಆತ್ಮಿಕ ಸರ್ಜನ್ ಎಂದು ಹೇಳಲಾಗುತ್ತದೆ ಏಕೆಂದರೆ ನೆನಪು ಅಥವಾ ಯೋಗವನ್ನು ಕಲಿಸುತ್ತಾರೆ, ಇದರಿಂದ ನಾವಾತ್ಮರು ಸದಾ ನಿರೋಗಿಗಳಾಗಿ ಬಿಡುತ್ತೇವೆ. 21 ಜನ್ಮಗಳವರೆಗೆ ಎಂದೂ ರೋಗಿಗಳಾಗುವುದಿಲ್ಲ ನಂತರ ಮಾಯಾರಾಜ್ಯವಾದಾಗ ನಾವು ರೋಗಿಗಳಾಗಿ ಬಿಡುತ್ತೇವೆ. ತಂದೆಯು ಬಂದು ನಮ್ಮನ್ನು 21 ಜನ್ಮಗಳಿಗಾಗಿ ನಿರೋಗಿಗಳನ್ನಾಗಿ ಮಾಡುತ್ತಾರೆ. ತಂದೆಗೆ ಯಾತ್ರೆಯನ್ನು ಕಲಿಸುವಂತಹ ಮಾರ್ಗದರ್ಶಕನೆಂದೂ ಹೇಳಲಾಗುತ್ತದೆ. ನಾವು ವಿಚಿತ್ರವಾದ ಆತ್ಮಿಕ ಯಾತ್ರಿಕರಾಗಿದ್ದೇವೆ. ಈ ಆತ್ಮಿಕ ಯಾತ್ರೆಯನ್ನು ಮತ್ತ್ಯಾವುದೇ ಮನುಷ್ಯ ಮಾತ್ರರು ಪ್ರಪಂಚದಲ್ಲಿ ತಿಳಿದುಕೊಂಡಿಲ್ಲ. ವಿಶೇಷವಾಗಿ ಭಾರತ ಮತ್ತು ಇಡೀ ಪ್ರಪಂಚ, ಯಾವಾಗಲೂ ಇದೇರೀತಿ ಹೇಳಲಾಗುತ್ತದೆ. ವಿಶೇಷವಾಗಿ ನಮಗೆ ಈ ಆತ್ಮಿಕ ಯಾತ್ರೆಯನ್ನು ಕಲಿಸುತ್ತಾರೆ. ಯಾರು ಕಲಿಸುತ್ತಾರೆ? ಆತ್ಮಿಕ ತಂದೆ. ದೈಹಿಕ ಯಾತ್ರೆಗಳನ್ನಂತೂ ಮನುಷ್ಯರು ಜನ್ಮ-ಜನ್ಮಾಂತರದಿಂದ ಮಾಡುತ್ತಾ ಬಂದಿದ್ದಾರೆ. ಕೆಲಕೆಲವರಂತೂ ಒಂದು ಜನ್ಮದಲ್ಲಿ 2-4 ಯಾತ್ರೆಗಳನ್ನಾದರೂ ಮಾಡುತ್ತಾರೆ. ಅದು ಜೀವಾತ್ಮರ ಯಾತ್ರೆಯೆಂದು ಹೇಳುತ್ತಾರೆ ಮತ್ತು ಇದು ಆತ್ಮರ ಯಾತ್ರೆಯಾಗಿದೆ. ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ನಡೆಯುತ್ತಾ-ತಿರುಗಾಡುತ್ತಾ ಬುದ್ಧಿಯಲ್ಲಿ ತಂದೆಯನ್ನು ನೆನಪಿಟ್ಟುಕೊಳ್ಳಬೇಕಾಗಿದೆ ಆಗ ಅಂತ್ಯಮತಿ ಸೋ ಗತಿಯಾಗಿ ಬಿಡುವುದು. ತಂದೆಯ ನೆನಪಿನಲ್ಲಿ ನಾವು ತಂದೆಯ ಬಳಿಗೆ ಹೊರಟು ಹೋಗುತ್ತೇವೆ. ಈಗ ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯು ಈ ಯಾತ್ರೆಯನ್ನು ಕಲಿಸುತ್ತಾರೆ. ಗೀತೆಯಲ್ಲಿ ಮನ್ಮನಾಭವ ಅಕ್ಷರವಿದೆ ಆದರೆ ಅದರ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿರಿ ಅದರಿಂದ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ಮತ್ತೇನಾಗುವುದು? ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನಾವು ನೆನಪಿನಿಂದ ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೇವೆ. ಈ ಸಮಯದಲ್ಲಿ ಎಲ್ಲರೂ ತಮೋಪ್ರಧಾನರಾಗಿದ್ದಾರೆ. ಇಡೀ ವೃಕ್ಷವು ಜಡಜಡೀಭೂತವಾಗಿ ಬಿಟ್ಟಿದೆ. ಈಗ ಆತ್ಮವು ಸತೋಪ್ರಧಾನವಾಗುವುದು ಹೇಗೆ? ಹಿಂತಿರುಗಿ ಮನೆಗೆ ಹೋಗುವುದು ಹೇಗೆ? ಅಲ್ಲಂತೂ ಪವಿತ್ರ ಆತ್ಮರೇ ಇರುತ್ತಾರೆ. ಮತ್ತೆ ಇಲ್ಲಿ ಬಂದು ಶರೀರ ಧಾರಣೆ ಮಾಡುತ್ತಾ ರಜೋ, ತಮೋದಲ್ಲಿ ಬರುತ್ತಾರೆ. ಪ್ರತೀ ವಸ್ತುವಿಗೂ ಹಂತಗಳಿರುತ್ತವೆ. ಪ್ರಪಂಚವು ಬದಲಾಗುತ್ತಿದೆ ಎಂದು ಹಾಡುತ್ತಾರೆ. ಇದಕ್ಕೆ ಹಳೆಯ ಪ್ರಪಂಚ, ಕಲಿಯುಗವೆಂದು ಹೇಳಲಾಗುತ್ತದೆ. ಹೊಸ ಪ್ರಪಂಚಕ್ಕೆ ಸತ್ಯಯುಗ, ಸ್ವರ್ಗವೆಂದು ಹೇಳಲಾಗುತ್ತದೆ. ಈಗ ಮಕ್ಕಳ ಬುದ್ಧಿಯಲ್ಲಿ ಇದು ಇರಬೇಕಾಗಿದೆ, ಯಾವಾಗ ಸತ್ಯಯುಗವಿತ್ತೋ ಆಗ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು ಈಗ ಆ ಧರ್ಮವಿಲ್ಲ. ದೇವತಾ ಧರ್ಮವು ಇಸ್ಲಾಂ, ಬೌದ್ಧ, ಕ್ರಿಶ್ಚಿಯನ್.... ಇವು ಮುಖ್ಯವಾಗಿದೆ. ಯುಗಗಳಲ್ಲಿಯೂ ಮುಖ್ಯವಾಗಿ ನಾಲ್ಕು ಯುಗಗಳಿವೆ. ಬಾಕಿ ಈ ಬ್ರಾಹ್ಮಣರ ಸಂಗಮಯುಗವು ಗುಪ್ತ ಯುಗವಾಗಿದೆ. ಪರಮಪಿತ ಪರಮಾತ್ಮನೇ ಬಂದು ಬ್ರಾಹ್ಮಣ, ದೇವತಾ, ಕ್ಷತ್ರಿಯ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ಇವೆಲ್ಲಾ ಮಾತುಗಳನ್ನು ಮಕ್ಕಳು ನೆನಪಿಟ್ಟುಕೊಳ್ಳಬೇಕು ಮತ್ತು ತಮ್ಮ ಬುದ್ಧಿಯೋಗವನ್ನು ತಂದೆಯ ಜೊತೆ ಜೋಡಿಸಬೇಕಾಗಿದೆ. ವಿಕರ್ಮಾಜೀತರಾಗುವುದೇ ಮೂಲ ಮಾತಾಗಿದೆ. ನಾವು ಸಂಪೂರ್ಣ ಸತೋಪ್ರಧಾನ ಪವಿತ್ರರಾಗಿದ್ದೆವು, ಮೂಲತಃ 24 ಕ್ಯಾರೇಟ್ ಚಿನ್ನದಂತೆ ಇದ್ದೆವು ನಂತರ ಸತೋದಲ್ಲಿ ಬಂದು 22 ಕ್ಯಾರೇಟ್ ಆದೆವು. ನಂತರ ರಜೋದಲ್ಲಿ 18 ಕ್ಯಾರೇಟ್, ತಮೋದಲ್ಲಿ 9 ಕ್ಯಾರೇಟ್ ಚಿನ್ನದಂತಾದೆವು. ಚಿನ್ನಕ್ಕೂ ಡಿಗ್ರಿಗಳಿರುತ್ತವೆ, ಇದು ಆತ್ಮದ ಮಾತಾಗಿದೆ. ಹೇಗೆ ಭ್ರಮರಿಯು ಛೀ ಛೀ ಕೀಟಗಳನ್ನು ತೆಗೆದುಕೊಂಡು ಬರುತ್ತದೆ. ಅದನ್ನು ಭೂ ಭೂ (ಜ್ಞಾನದ ಧ್ವನಿ) ಮಾಡಿ ತನ್ನ ಸಮಾನ ಮಾಡುತ್ತದೆ. ನೀವೂ ಸಹ ಜ್ಞಾನದ ಭೂ ಭೂ ಮಾಡಿ ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತೀರಿ. ಭ್ರಮರಿಯು ಕೀಟಗಳನ್ನು ತಂದು ಮನೆಯಲ್ಲಿ ಏಕಾಂತದಲ್ಲಿ ಇಡುತ್ತದೆ. ಅದಕ್ಕೂ ಎಷ್ಟೊಂದು ತಿಳುವಳಿಕೆಯಿದೆ! ನೀವಾತ್ಮರಲ್ಲಿಯೂ ಡ್ರಾಮಾನುಸಾರ ಪಾತ್ರವು ನಿಗಧಿತವಾಗಿದೆ. |
ನೀವು ತಿಳಿದುಕೋಂಡಿದ್ದೀರಿ - ಕಲ್ಪದ ಮೊದಲೂ ಸಹ ಆತ್ಮಿಕ ತಂದೆಯಿಂದ ನಾವು ಆತ್ಮಿಕ ಜ್ಞಾನವನ್ನು ಕೇಳಿದ್ದೆವು. ಕಲ್ಪ-ಕಲ್ಪವೂ ಕೇಳುತ್ತಾ ಇರುತ್ತೇವೆ, ನತಿಂಗ್ನ್ಯೂ. ಇದನ್ನು ತಂದೆಯೇ ತಿಳಿಸುತ್ತಾರೆ - ಬೀಜಕ್ಕೆ ವೃಕ್ಷದ ಜ್ಞಾನವಿರುತ್ತದೆಯಲ್ಲವೆ. ತಂದೆಯು ನಿಮ್ಮನ್ನು ತ್ರಿಕಾಲದರ್ಶಿಗಳನ್ನಾಗಿ ಮಾಡಲು ಬರುತ್ತಾರೆ. ಮೂರುಕಾಲಗಳ ಜ್ಞಾನವನ್ನು ಕೊಡುತ್ತಾರಲ್ಲವೆ. ನಿಮ್ಮನ್ನು ಜೀವಿಸಿದ್ದಂತೆಯೇ ದತ್ತು ಮಾಡಿಕೊಳ್ಳುತ್ತಾರೆ. ಹೇಗೆ ಕನ್ಯೆಯನ್ನೂ ಸಹ ಜೀವಿಸಿದ್ದಂತೆಯೇ ಇವರು ನನ್ನ ಸ್ತ್ರೀ ಎಂದು ದತ್ತು ಮಾಡಿಕೊಳ್ಳುತ್ತಾರೆ. ಈಗ ಪ್ರಜಾಪಿತ ಬ್ರಹ್ಮನಿಗಂತೂ ಸ್ತ್ರೀ ಯಾರೂ ಇಲ್ಲ ಅಂದಾಗ ಇಲ್ಲಿ ಪರಮಪಿತ ಪರಮಾತ್ಮನು ಬ್ರಹ್ಮನ ಮೂಲಕ ದತ್ತು ಮಾಡಿಕೊಳ್ಳುತ್ತಾರೆ. ಇವರು ನಮ್ಮ ತಂದೆಯಾಗಿದ್ದಾರೆಂದು ನೀವೂ ಹೇಳುತ್ತೀರಿ. ಪರಮಪಿತ ಪರಮಾತ್ಮ ತಂದೆಯೂ ಸಹ ನೀವು ನನ್ನ ಮಕ್ಕಳಾಗಿದ್ದೀರಿ ಎಂದು ಹೇಳುತ್ತಾರೆ. ಶಿವ ತಂದೆಯು ಆತ್ಮಿಕ ತಂದೆಯಾಗಿದ್ದಾರೆ, ಪ್ರಜಾಪಿತ ಬ್ರಹ್ಮಾ ಶರೀರಧಾರಿಯಾಗಿದ್ದಾರೆ. ಆತ್ಮಿಕ ತಂದೆಯು ಇವರ ಶರೀರದಲ್ಲಿ ಬರುವವರೆಗೆ ಜ್ಞಾನವನ್ನು ಹೇಗೆ ತಿಳಿಸುವರು! ಪರಮಪಿತ ಪರಮಾತ್ಮನನ್ನು ಜ್ಞಾನ ಸಾಗರನೆಂದು ಹೇಳಲಾಗುತ್ತದೆ, ಎಲ್ಲಾ ಪ್ರಕಾರದ ಜ್ಞಾನವು ಯಾವಾಗಲೂ ಆತ್ಮನಲ್ಲಿಯೇ ಇರುತ್ತದೆ. ಲೌಕಿಕ ಜ್ಞಾನವನ್ನೂ ಸಹ ಆತ್ಮವೇ ಓದುತ್ತದೆಯಲ್ಲವೆ ಆದರೆ ತಮೋಪ್ರಧಾನರಾಗಿರುವ ಕಾರಣ ಯಾರಿಗೂ ಆತ್ಮಾಭಿಮಾನವಿರುವುದೇ ಇಲ್ಲ. ನೀವೀಗ ಆತ್ಮಾಭಿಮಾನಿಗಳಾಗುತ್ತೀರಿ. ಸತ್ಯಯುಗದಲ್ಲಿ ಈ ಮಾತುಗಳನ್ನು ತಿಳಿಸಲಾಗುವುದಿಲ್ಲ, ಈ ಸಮಯದಲ್ಲಿಯೇ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿರಿ ಏಕೆಂದರೆ ಈ ಸಮಯದಲ್ಲಿ ತಲೆಯ ಮೇಲೆ ಪಾಪದ ಹೊರೆಯಿದೆ. ಅದನ್ನೂ ಕಳೆಯಬೇಕಾಗಿದೆ. ಪತಿತ-ಪಾವನನೇ ಬಂದು ನಮ್ಮನ್ನು ಪಾವನ ಮಾಡಿ ಎಂದು ಈ ಸಮಯದಲ್ಲಿಯೇ ತಂದೆಯನ್ನು ಕರೆಯುತ್ತಾರೆ. ಆತ್ಮವೇ ಪತಿತ, ತಮೋಪ್ರಧಾನವಾಗಿದೆ ಆದ್ದರಿಂದ ತಂದೆಯನ್ನು ನೆನಪು ಮಾಡುತ್ತದೆ ಆದರೆ ಪರಮಪಿತ ಪರಮಾತ್ಮನು ಬಿಂದು ರೂಪವಾಗಿದ್ದಾರೆ ಎಂಬುದು ಭಕ್ತರಿಗೆ ತಿಳಿದಿಲ್ಲ. ಕೇವಲ ಬಿಂದುವಿಗೆ ಮಂದಿರವನ್ನು ಕಟ್ಟಿಸಲು ಆಗುವುದಿಲ್ಲ, ಶೋಭಿಸುವುದೇ ಇಲ್ಲ ಆದ್ದರಿಂದ ಲಿಂಗಾಕಾರವಾಗಿ ಮಾಡಿಸುತ್ತಾರೆ. ನಂತರ ಸಾಕ್ಷಾತ್ಕಾರಕ್ಕಾಗಿ ಅವರು ಕೋಟಿಸೂರ್ಯ ತೇಜೋಮಯನೆಂದು ಹೇಳುತ್ತಾರೆ ಅಂದಮೇಲೆ ಲಿಂಗವು ಅಷ್ಟು ತೇಜೋಮಯವಾಗಿದೆ? ಹೇಗೆ ಅರ್ಜುನನಿಗಾಗಿ ತೋರಿಸಿದ್ದಾರಲ್ಲವೆ - ಅರ್ಜುನನಿಗೆ ತೇಜೋಮಯ ರೂಪದ ಸಾಕ್ಷಾತ್ಕಾರವಾಯಿತು, ನಾನು ಇದನ್ನು ಸಹಿಸಲಾರೆ ಎಂದು ಹೇಳಿದನು. ಈ ಮಾತನ್ನು ಕೇಳಿಸಿಕೊಂಡಿದ್ದಾರಲ್ಲವೆ. ಇಲ್ಲಿಯೂ ಸಹ ಅನೇಕರಿಗೆ ಸಾಕ್ಷಾತ್ಕಾರವಾಗಿತ್ತು, ಸಾಕು ನಿಲ್ಲಿಸಿ, ನಮ್ಮಿಂದ ಸಹನೆ ಮಾಡಲು ಆಗುವುದಿಲ್ಲವೆಂದು ಹೇಳುತ್ತಿದ್ದರು. ಕಣ್ಣು ಕೆಂಪಗಾಗಿ ಬಿಡುತ್ತಿತ್ತು. ನಮಗೆ ಪರಮಾತ್ಮನ ಸಾಕ್ಷಾತ್ಕಾರವಾಯಿತು ಎಂದು ಅವರು ತಿಳಿದುಕೊಳ್ಳುತ್ತಾರೆ. ಯಾರು ಮಾಡಿಸಿದರು? ಕೃಷ್ಣನಂತೂ ಮಾಡಿಸಲಿಲ್ಲ, ಶಿವ ತಂದೆಯೇ ಸಾಕ್ಷಾತ್ಕಾರ ಮಾಡಿಸಿದರು. ಅವರಿಗೆ ದಿವ್ಯದೃಷ್ಟಿದಾತನೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ನಾನು ನೀವು ಮಕ್ಕಳಿಗೆ ದಿವ್ಯದೃಷ್ಟಿಯ ಚಾಬಿಯನ್ನು ಕೊಡುವುದಿಲ್ಲ. ಇದು ನನಗೆ ಭಕ್ತಿಮಾರ್ಗದಲ್ಲಿ ಕೆಲಸಕ್ಕೆ ಬರುತ್ತದೆ. ಸತ್ಯಯುಗದಲ್ಲಿ ಇದರ ಅವಶ್ಯಕತೆಯಿರುವುದಿಲ್ಲ. ನೀವು ಪೂಜಾರಿಗಳಿಂದ ಪೂಜ್ಯರಾಗಿ ಬಿಡುತ್ತೀರಿ. ನಾನು ನಿಮಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಟ್ಟು ಪರಮಧಾಮದಲ್ಲಿ ಹೋಗಿ ಕುಳಿತು ಬಿಡುತ್ತೇನೆ, ನಾನು ಸದಾ ಪೂಜ್ಯನು ಎಂದೂ ಪೂಜಾರಿಯಾಗುವುದಿಲ್ಲ. |
ನೀವು ಮಕ್ಕಳು ಈಗ ಬುದ್ಧಿವಂತರಾಗಿದ್ದೀರಿ. ಚಲನೆಯಿಂದಲೇ ಇವರು ಎಷ್ಟು ಮಧುರವಾಗಿದ್ದಾರೆ, ಇವರಿಗೆ ಎಷ್ಟು ಚೆನ್ನಾಗಿ ಧಾರಣೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ. ತಂದೆಯು ಯಾವ ವಿಷಯಗಳನ್ನು ತಿಳಿಸುತ್ತಾರೆಯೋ ಅದನ್ನು ಬರೆದಿಟ್ಟುಕೊಳ್ಳಬೇಕು, ಇಂದು ಯಾತ್ರೆಯ ವಿಷಯದ ಬಗ್ಗೆ ತಿಳಿಸಬೇಕು. ಯಾತ್ರೆಯು ಎರಡು ಪ್ರಕಾರದ್ದಿರುತ್ತದೆ, ಇದು ನಂಬರ್ವನ್ ವಿಷಯವಾಗಿದೆ. ಮನುಷ್ಯರೆಲ್ಲರೂ ಭಕ್ತಿಮಾರ್ಗದಲ್ಲಿ ದೈಹಿಕ ಯಾತ್ರೆಗಳನ್ನು ಮಾಡಿಸುತ್ತಾರೆ, ಜ್ಞಾನಮಾರ್ಗದಲ್ಲಿ ದೈಹಿಕ ಯಾತ್ರೆಯಿರುವುದಿಲ್ಲ, ನಿಮ್ಮದು ಆತ್ಮಿಕ ಯಾತ್ರೆಯಾಗಿದೆ. ತಂದೆಯು ತಿಳಿಸುತ್ತಾರೆ - ನೀವು ಈ ಯಾತ್ರೆಯಿಂದಲೇ ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ಆತ್ಮವು ಪವಿತ್ರನಾಗದೆ ಮನೆಗೆ ಹೋಗಲು ಸಾಧ್ಯವಿಲ್ಲ. ಎಲ್ಲಾ ಆತ್ಮರು ಇಲ್ಲಿಯೇ ಬರುತ್ತಾ ಇರುತ್ತಾರೆ, ಹೋಗುವುದಂತೂ ಯಾರೂ ಇಲ್ಲ. ಸರ್ಕಾರಕ್ಕೂ ನೀವು ತಿಳಿಸಬಹುದು - ಸತ್ಯಯುಗದಲ್ಲಿ ದೇವಿ-ದೇವತೆಗಳ ರಾಜ್ಯವಿದ್ದಾಗ ಒಬ್ಬ ಮಗ, ಒಬ್ಬ ಮಗಳು ಇರುತ್ತಿದ್ದರು, ಅದೂ ಯೋಗಬಲದಿಂದ. ವಿಚಾರ ಮಾಡಿ - ಸತ್ಯಯುಗದಲ್ಲಿ ಎಷ್ಟು ಕಡಿಮೆ ಜನಸಂಖ್ಯೆಯಿರಬಹುದು ಮತ್ತು ಸಂಪೂರ್ಣ ನಿರ್ವಿಕಾರಿ ಲಕ್ಷ್ಮೀ-ನಾರಾಯಣರ ರಾಜ್ಯಭಾರವು ನಡೆಯಿತು ಅಂದಮೇಲೆ ಅವಶ್ಯವಾಗಿ ಮಗನೂ ಇರುವರು. ನಾವು ಯೋಗಬಲದಿಂದ ವಿಶ್ವದ ಮಾಲೀಕರಾಗುತ್ತೇವೆ ಅಂದಮೇಲೆ ಯೋಗಬಲದಿಂದ ಮಕ್ಕಳಾಗಲು ಸಾಧ್ಯವಿಲ್ಲವೆ? ಇದು ಡ್ರಾಮಾದಲ್ಲಿ ನಿಗಧಿಯಾಗಿದೆ, ಪವಿತ್ರರಾಗಿರುವ ಕಾರಣ ಈಗ ಮಗುವಾಗುವುದು ಎಂದು ಸಾಕ್ಷಾತ್ಕಾರವಾಗುತ್ತದೆ, ಆ ಖುಷಿಯಿರುತ್ತದೆ. ವಿಕಾರದ ಯಾವುದೇ ಮಾತಿರುವುದಿಲ್ಲ. ಅಲ್ಲಿ ಮಕ್ಕಳು ಹೇಗೆ ಜನಿಸುತ್ತಾರೆ ಎಂದು ನಿಮ್ಮೊಂದಿಗೆ ಕೆಲವರು ಕೇಳುತ್ತಾರೆ ಆಗ ಹೇಳಿರಿ, ಪಪ್ಪಾಯಿಯ ಗಿಡಗಳು ಗಂಡು ಮತ್ತು ಹೆಣ್ಣು ಒಂದು ಇನ್ನೊಂದರ ಪಕ್ಕದಲ್ಲಿದ್ದಾಗ ಅದರಿಂದ ಫಲ ಬರುತ್ತದೆ. ಒಂದುವೇಳೆ ಒಂದು ಇನ್ನೊಂದರ ಪಕ್ಕದಲ್ಲಿ ಇಲ್ಲದಿದ್ದರೆ ಫಲ ಕೊಡುವುದಿಲ್ಲ. ಅದ್ಬುತವಲ್ಲವೆ. ಅಂದಮೇಲೆ ಸತ್ಯಯುಗದಲ್ಲಿ ಯೋಗಬಲದಿಂದ ಮಕ್ಕಳಾಗಲು ಏಕೆ ಸಾಧ್ಯವಿಲ್ಲ! ನವಿಲಿನ ಉದಾಹರಣೆಯೂ ಇದೆ ಅದಕ್ಕೆ ರಾಷ್ಟ್ರ ಪಕ್ಷಿಯೆಂದು ಹೇಳಲಾಗುತ್ತದೆ. ಪ್ರೇಮದ ಕಣ್ಣೀರಿನಿಂದ ಗರ್ಭ ಧಾರಣೆಯಾಗಿ ಬಿಡುತ್ತದೆ, ಇದು ವಿಕಾರ ಆಗಲಿಲ್ಲ ಅಲ್ಲವೆ. ಈ ಭಾರತವು ಶಿವಾಲಯವಾಗಿತ್ತು, ಶಿವ ತಂದೆಯು ಸ್ಥಾಪನೆ ಮಾಡಿದ್ದರು, ಈಗ ರಾವಣನು ವೇಶ್ಯಾಲಯವನ್ನಾಗಿ ಮಾಡಿದ್ದಾನೆ. ಶಿವ ಜಯಂತಿಯನ್ನು ಆಚರಿಸುತ್ತಾರೆ ಆದರೆ ರಾವಣನ ಜಯಂತಿ ಎಂದು ಯಾರಿಗೂ ತಿಳಿದಿಲ್ಲ. ರಾವಣನ ಬಗ್ಗೆ ಯಾರಿಗೂ ಅರ್ಥವಾಗುವುದಿಲ್ಲ. ದಸರಾ ದಿನದಂದು ರಾವಣನ ಪ್ರತಿಮೆ ಮಾಡಿ ಅದನ್ನು ಸಮಾಪ್ತಿ ಮಾಡುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ರಾವಣನ ಐದು ವಿಕಾರಗಳನ್ನು ಈ ಪಟಾಕಿಗಳಿಂದ ಸುಡುವುದಲ್ಲ, ಯೋಗಬಲದಿಂದ ವಿಜಯ ಪಡೆಯಬೇಕಾಗಿದೆ. ಯಾವ ಯೋಗವನ್ನು ತಂದೆಯೇ ಬಂದು ಕಲಿಸುತ್ತಾರೆ, ಯೋಗಿ ಭವ, ಪವಿತ್ರ ಭವ ಎಂದು ಹೇಳುತ್ತಾರೆ. ಗೀತೆಯಲ್ಲಿ ಈ ಶಬ್ಧವಿದೆ - ಮನ್ಮನಾಭವ. ನನ್ನನ್ನು ನೆನಪು ಮಾಡಿರಿ, ಈ ಯಾತ್ರೆಯಿಂದಲೇ ನೀವು ಶಾಂತಿಧಾಮಕ್ಕೆ ಹೊರಟು ಹೋಗುವಿರಿ ನಂತರ ಅಮರಲೋಕದಲ್ಲಿ ಬರುವಿರಿ. ಮನುಷ್ಯರು ಯಾತ್ರೆ ಮಾಡಲು ಪವಿತ್ರವಾಗಿರುತ್ತಾರೆ, ಕಾಶಿಗೆ ಹೋಗುವವರೂ ಪವಿತ್ರರಾಗಿರುತ್ತಾರೆ ಆದರೆ ಕಾಶಿಯಲ್ಲಿರುವವರು ಯಾರೂ ಪವಿತ್ರರಾಗಿರುವುದಿಲ್ಲ. ಈ ರಾವಣ ರಾಜ್ಯದಲ್ಲಿ ಪತಿತರೊಂದಿಗೆ ಪತಿತರ ವ್ಯವಹಾರವಿದೆ, ಅಲ್ಲಿ ಪಾವನರ ವ್ಯವಹಾರವು ಪಾವನ ಮನುಷ್ಯರೊಂದಿಗೇ ಇರುತ್ತದೆ ಆದರೂ ಮತ್ತೆ ಕೆಳಗಿಳಿಯಲೇಬೇಕಾಗುತ್ತದೆ. |
ತಂದೆಯು ತಿಳಿಸಿದ್ದಾರೆ - ಅರ್ಧಕಲ್ಪ ದಿನ, ಅರ್ಧಕಲ್ಪ ರಾತ್ರಿಯಾಗುತ್ತದೆ, ಇದೂ ಸಹ ಬ್ರಾಹ್ಮಣರ ಮಾತಾಗಿದೆ. ಬ್ರಾಹ್ಮಣರೇ ಮತ್ತೆ ದೇವತೆಗಳಾಗುತ್ತೀರಿ. ಹೊಸ ಪ್ರಪಂಚದಲ್ಲಿ ಲಕ್ಷ್ಮೀ-ನಾರಾಯಣರು ಎಲ್ಲಿಂದ ಬಂದರು? ಯಾವುದೇ ಯುದ್ಧವನ್ನಂತೂ ಮಾಡಲಿಲ್ಲ. ಮಹಾಭಾರತ ಯುದ್ಧವನ್ನು ತೋರಿಸುತ್ತಾರೆ ಆದರೆ ನಂತರ ಅದರ ಫಲಿತಾಂಶ ಏನನ್ನೂ ತೋರಿಸುವುದಿಲ್ಲ. ಪಂಚ ಪಾಂಡವರಿದ್ದರು ಎಂದು ಹೇಳುತ್ತಾರೆ, ನೀವು ಎಷ್ಟೊಂದು ಮಂದಿ ಪಾಂಡವರಿದ್ದೀರಿ, ನೀವು ಆತ್ಮಿಕ ಪಂಡರಾಗಿದ್ದೀರಿ. ಎಲ್ಲರೂ ಈಗ ಹಿಂತಿರುಗಿ ಹೋಗಬೇಕು ಎಂಬುದನ್ನು ತಿಳಿದುಕೊಂಡಿದ್ದೀರಿ, ತಂದೆಯು ಬರುವುದೇ ಎಲ್ಲರನ್ನೂ ಕರೆದುಕೊಂಡು ಹೋಗಲು, ಅವರು ಸುಪ್ರೀಂ ಮಾರ್ಗದರ್ಶಕ ಅಥವಾ ಮುಕ್ತಿದಾತನಾಗಿದ್ದಾರೆ, ಮಾಯೆಯಿಂದ ಮುಕ್ತ ಮಾಡಿ ಜೊತೆ ಕರೆದುಕೊಂಡು ಹೋಗುತ್ತಾರೆ. ಜೊತೆಯಲ್ಲಿ ಕರೆದುಕೊಂಡು ಹೋಗಲು ಮಾರ್ಗದರ್ಶಕರಂತೂ ಅವಶ್ಯವಾಗಿ ಬೇಕಾಗಿದೆ. ಈ ಮಾತುಗಳನ್ನು ಬುದ್ಧಿಯಲ್ಲಿ ನೆನಪಿಟ್ಟುಕೊಳ್ಳಬೇಕು. ಆ ಶಾಸ್ತ್ರಗಳಂತೂ ಗ್ರಂಥಗಳಲ್ಲಿ ಮುದ್ರಿತವಾಗಿದೆ. ಯಾರು ಬೇಕಾದರೂ ಹೋಗಿ ಓದಬಹುದು. ಈ ಜ್ಞಾನವನ್ನು ತಂದೆಯೇ ತಿಳಿಸುತ್ತಾರೆ ಮತ್ತೆ ಶಾಸ್ತ್ರಗಳನ್ನು ಓದುವ ಮಾತೇ ಇಲ್ಲ. ತಂದೆಯಿಂದ ಕೇಳಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ನೆನಪಿನ ಯಾತ್ರೆ ನಂಬರ್ವನ್ ಆಗಿದೆ, ಅದರಿಂದಲೇ ಪವಿತ್ರರಾಗುತ್ತೀರಿ. ಚರಿತ್ರೆ-ಭೂಗೋಳವನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಈ ಯಾತ್ರೆಯಲ್ಲಿ ಬಹಳ ಮಕ್ಕಳು ಕಚ್ಚಾ ಇದ್ದಾರೆ, ನೆನಪಿನಲ್ಲಿಯೇ ವಿಘ್ನಗಳು ಬೀಳುತ್ತವೆ. ಜ್ಞಾನವು ಬಹಳ ಸಹಜವಾಗಿದೆ. |
ತಂದೆಯು ತಿಳಿಸುತ್ತಾರೆ - ಇದು ಸೃಷ್ಟಿಚಕ್ರವಾಗಿದೆ. ಇದರ ನಾಲ್ಕೂ ಭಾಗಗಳು ಸರಿಸಮವಾಗಿವೆ. ಒಂದುವೇಳೆ ಇದರ ಆಯಸ್ಸು ಲಕ್ಷಾಂತರ ವರ್ಷಗಳಾಗಿದ್ದರೆ ಮನುಷ್ಯರು ಹೆಚ್ಚಾಗಿ ಬಿಡುತ್ತಿದ್ದರು. ಜನಸಂಖ್ಯೆಯು ಕಡಿಮೆಯಾಗಬೇಕೆಂದು ಸರ್ಕಾರವೂ ಸಹ ಹೇಳುತ್ತದೆ ಆದರೆ ಇದು ತಂದೆಯ ಕೆಲಸವಾಗಿದೆ. ಮನುಷ್ಯರೆಲ್ಲರೂ ದೈಹಿಕ ಯುಕ್ತಿಗಳನ್ನೇ ರಚಿಸುತ್ತಿರುತ್ತಾರೆ. ತಂದೆಯದು ಇದು ಆತ್ಮಿಕ ಯುಕ್ತಿಯಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಅನೇಕ ಧರ್ಮಗಳ ವಿನಾಶ ಮಾಡಿ ಒಂದು ಧರ್ಮದ ಸ್ಥಾಪನೆ ಮಾಡಲು ಬರುತ್ತೇನೆ. ಒಂದು ಮತವು ಸತ್ಯಯುಗದಲ್ಲಿಯೇ ಇರುವುದು, ಇಲ್ಲಿರಲು ಸಾಧ್ಯವಿಲ್ಲ. ತಮ್ಮನ್ನು ಯಾರೂ ಸಹ ಪರಸ್ಪರ ಸಹೋದರನೆಂದು ತಿಳಿದುಕೊಳ್ಳುವುದೇ ಇಲ್ಲ. ತಂದೆಯು ಮಕ್ಕಳಿಗೆ ಬಹಳ ಯುಕ್ತಿಗಳನ್ನು ತಿಳಿಸುತ್ತಾ ಇರುತ್ತಾರೆ. ತಮ್ಮ ಬಳಿ ಭಾಷಣದ ವಿಷಯಗಳ ಪಟ್ಟಿಯನ್ನು ಇಟ್ಟುಕೊಳ್ಳಬೇಕು. ಒಂದೊಂದು ವಿಷಯವೂ ಬಹಳ ಸುಂದರವಾಗಿದೆ. ತಂದೆಯು ತಿಳಿಸುತ್ತಾರೆ - ನೀವು ಮಕ್ಕಳು ಹೆಚ್ಚು ಟಾಂ ಟಾಂ ಹೊಡೆಯಬಾರದು, ಕೇವಲ ಇಷ್ಟನ್ನೇ ತಿಳಿಸಬೇಕು – ಶಿವ ತಂದೆಯು ಹೇಳುತ್ತಾರೆ, ನಾನು ಎಲ್ಲಾ ಆತ್ಮರ ತಂದೆ ಪರಮ ಆತ್ಮನಾಗಿದ್ದೇನೆ. ನನ್ನನ್ನೇ ಭಗವಂತನೆಂದು ಹೇಳುತ್ತಾರೆ. ಯಾವುದೇ ಮನುಷ್ಯರಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಆತ್ಮಿಕ ಯಾತ್ರೆ ಮತ್ತು ದೈಹಿಕ ಯಾತ್ರೆಯ ವಿಷಯವು ಬಹಳ ಚೆನ್ನಾಗಿದೆ. ದೈಹಿಕ ಯಾತ್ರೆಯು ಮೃತ್ಯುಲೋಕದಲ್ಲಿ ಇರುತ್ತದೆ, ಇದು ಮೃತ್ಯುಲೋಕ, ಅದು ಅಮರಲೋಕವಾಗಿದೆ. ನೀವು ಮಕ್ಕಳು ಕಲ್ಪ-ಕಲ್ಪವೂ ತಂದೆಯ ಜೊತೆ ಸಹಯೋಗಿಗಳಾಗುತ್ತೀರಿ, ಆದ್ದರಿಂದ ನೀವು ಆತ್ಮೀಯ ಮಧುರ ಮಕ್ಕಳಾಗಿದ್ದೀರಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಾವು ಬುದ್ಧಿವಂತರಾಗಿ ಅನ್ಯರನ್ನೂ ಮಾಡಬೇಕಾಗಿದೆ. ತಮ್ಮ ಚಲನೆಯನ್ನು ಬಹಳ ರಾಯಲ್ ಮತ್ತು ಮಧುರವಾಗಿಟ್ಟುಕೊಳ್ಳಬೇಕಾಗಿದೆ. |
2. ಆತ್ಮಿಕ ಯಾತ್ರೆಯಲ್ಲಿ ತತ್ಪರರಾಗಿರಬೇಕಾಗಿದೆ. ತಮ್ಮ ಬಳಿ ಒಳ್ಳೊಳ್ಳೆಯ ವಿಷಯಗಳನ್ನು ಬರೆದಿಟ್ಟುಕೊಳ್ಳಬೇಕು. ಒಂದೊಂದು ವಿಷಯದ ಮೇಲೆ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. |
ಓಂ ಶಾಂತಿ. ಮಕ್ಕಳಿಗೆ ಈಗ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವಂತೂ ಬುದ್ಧಿಯಲ್ಲಿದೆ. ಇದನ್ನೂ ಸಹ ತಿಳಿದುಕೊಂಡಿದ್ದೀರಿ - ನಾವು ಭಾರತವಾಸಿಗಳು ಮೊಟ್ಟ ಮೊದಲು ಸತ್ಯಯುಗದಲ್ಲಿ ಸತೋಪ್ರಧಾನರಾಗಿದ್ದೆವು. ಈ ನೆನಪು ಮಕ್ಕಳಿಗಾಗಿ ಬಹಳ ಅವಶ್ಯವಾಗಿದೆ. ಪ್ರತೀಕ್ಷಣ ನೆನಪಿನ ಯಾತ್ರೆಯಲ್ಲಿರಬೇಕು. ಇದರಲ್ಲಿ ಬಹಳ ಪರಿಶ್ರಮ ಪಡಬೇಕು ಆದರೆ ರಚಯಿತ ಮತ್ತು ರಚನೆಯ ಜ್ಞಾನವಂತೂ ಬುದ್ಧಿಯಲ್ಲಿರಬೇಕಲ್ಲವೆ. ನಾವು ಸತ್ಯಯುಗದಲ್ಲಿ ದೇವಿ-ದೇವತೆಗಳಾಗಿದ್ದೆವು, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ದೇವಿ-ದೇವತೆಗಳು ವಿಶ್ವದ ಮಾಲೀಕರಾಗಿದ್ದರು, ಒಂದೇ ಧರ್ಮವಿತ್ತು. ಶಬ್ಧಗಳನ್ನೂ ಸಹ ಪೂರ್ಣ ತಿಳಿದುಕೊಳ್ಳಬೇಕು. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಸತ್ಯಯುಗದ ಆದಿಯಲ್ಲಿ ನಾವು ಸೂರ್ಯವಂಶಿ ಮನೆತನದಲ್ಲಿದ್ದೆವು. ರಚಯಿತ ತಂದೆಯು ಆದಿ-ಮಧ್ಯ-ಅಂತ್ಯದ ಯಾವ ಜ್ಞಾನವನ್ನು ತಿಳಿಸಿದ್ದಾರೆಯೋ ಅದು ಪ್ರತಿಯೊಬ್ಬರ ಬುದ್ಧಿಯಲ್ಲಿರಬೇಕು. ಇದನ್ನು ಎಂದೂ ಮರೆಯಬಾರದು ಮತ್ತು ಇದನ್ನು ನೀವೇ ತಿಳಿದುಕೊಂಡಿದ್ದೀರಿ, ನಾವು ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ನಂತರ ತ್ರೇತಾದಲ್ಲಿ ಬಂದೆವು ಆಗ ಎರಡು ಕಲೆಗಳು ಕಡಿಮೆಯಾಯಿತು, ಸೃಷ್ಟಿಯೂ ಸಹ ಹಳೆಯದಾಗುತ್ತಾ ಹೋಗುತ್ತದೆ. ಇದನ್ನು ಚೆನ್ನಾಗಿ ಬುದ್ಧಿಯಲ್ಲಿಟ್ಟುಕೊಳ್ಳಬೇಕಾಗಿದೆ. ಎಷ್ಟು ನೀವು ನೆನಪು ಮಾಡುತ್ತಾ ಇರುತ್ತೀರಿ ಅಷ್ಟು ಖುಷಿಯ ನಶೆಯೇರಿರುವುದು ಮತ್ತೆ ತ್ರೇತಾದ ಅಂತ್ಯದ ನಂತರ ದ್ವಾಪರವು ಬರುತ್ತದೆ. ದ್ವಾಪರದ ಆರಂಭದಿಂದ ಅನ್ಯ ಧರ್ಮಗಳು ಸ್ಥಾಪನೆಯಾಗುತ್ತವೆ ಮತ್ತು ನಾವು ಇಳಿಯುತ್ತಾ-ಇಳಿಯುತ್ತಾ ಭಕ್ತಿಮಾರ್ಗದಲ್ಲಿ ಬರುತ್ತೇವೆ, ಆ ಸಮಯದಲ್ಲಿ ಅನ್ಯ ಧರ್ಮದವರೂ ಭಕ್ತಿಮಾರ್ಗದಲ್ಲಿ ಇರುತ್ತಾರೆಂದಲ್ಲ, ಈ ಕಥೆಯು ನೀವು ಭಾರತವಾಸಿಗಳಿಗಾಗಿಯೇ ಇದೆ. ಭಲೆ ರಾವಣ ರಾಜ್ಯವಾಗಿದೆ ಆದರೆ ಅವರಿಗಾಗಿ ರಾವಣ ರಾಜ್ಯವೆಂದು ಹೇಳುವುದಿಲ್ಲ, ಅವರು ತಮ್ಮ ಸಮಯದಲ್ಲಿ ಸತೋಪ್ರಧಾನರಿಂದ ಸತೋ, ರಜೋ, ತಮೋದಲ್ಲಿ ಬರುತ್ತಾರೆ. ಧರ್ಮಗಳ ಸ್ಥಾಪನೆಯಾಗಬೇಕಾಗಿದೆ ನಂತರ ವೃದ್ಧಿ ಹೊಂದುತ್ತಾ ಹೋಗುತ್ತಾರೆ ಮತ್ತು ಕೆಳಗಿಳಿಯುತ್ತಲೂ ಇರುತ್ತಾರೆ. ಚಕ್ರವಂತೂ ಸುತ್ತಲೇಬೇಕಾಗಿದೆ, ಈ ಸಮಯದಲ್ಲಿ ನೀವು ತಿಳಿದುಕೊಂಡಿದ್ದೀರಿ- ದ್ವಾಪರದ ನಂತರ ಭಕ್ತಿಮಾರ್ಗವು ಆರಂಭವಾಗಿದೆ, ಅನ್ಯ ಧರ್ಮಗಳೂ ಸ್ಥಾಪನೆಯಾಗಿವೆ. ಈಗಂತೂ ಕಲಿಯುಗ ತಮೋಪ್ರಧಾನ ಪ್ರಪಂಚವಾಗಿದೆ. ಸೃಷ್ಟಿಯು ಹಳೆಯದಾಗಿರುವ ಕಾರಣ ಎಲ್ಲರೂ ತಮೋಪ್ರಧಾನರಾಗಿ ಬಿಟ್ಟಿದ್ದಾರೆ. ಈ ಜ್ಞಾನವನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಇದು ಸಹಜಕ್ಕಿಂತ ಸಹಜ ಮಾತಾಗಿದೆ ಯಾವುದನ್ನು ಮಕ್ಕಳೂ ಸಹ ನೆನಪಿಟ್ಟುಕೊಳ್ಳಬಹುದು ಆದರೆ ಅವರು ಗಿಳಿಯ ಪಾಠದಂತೆ ನೆನಪು ಮಾಡುತ್ತಾರೆ. ನೀವು ಮಕ್ಕಳಿಗಂತೂ ಭಾಸವಾಗುತ್ತದೆ ಅದರನುಸಾರ ತಿಳಿಸುತ್ತೀರಿ. ನಿಮಗೆ ತಿಳಿದಿದೆ - ಇಡೀ ವೃಕ್ಷವೇ ಜಡಜಡೀಭೂತ ಸ್ಥಿತಿಯನ್ನು ಹೊಂದಿದೆ. ಮೊಟ್ಟ ಮೊದಲು ಯಾವ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತೋ ಅದರ ಬುನಾದಿಯು ಈಗ ಇಲ್ಲ, ಭಲೆ ಇದ್ದರೂ ಸಹ ಅವರು ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳುತ್ತಾರೆ ಆದ್ದರಿಂದ ದೇವಿ-ದೇವತಾಧರ್ಮವಿಲ್ಲ ಪ್ರಾಯಲೋಪವಾಗಿದೆ ಎಂದು ಹೇಳಲಾಗುತ್ತದೆ. ಎಲ್ಲರೂ ಪತಿತರಾಗಿ ಬಿಟ್ಟಿದ್ದಾರೆ ಆದ್ದರಿಂದ ತಮ್ಮನ್ನು ಯಾರೂ ದೇವತೆಗಳೆಂದು ಕರೆಸಿಕೊಳ್ಳುವುದಿಲ್ಲ. ಆ ಧರ್ಮವೂ ಇಲ್ಲ, ಆ ಕರ್ಮವೂ ಇಲ್ಲ. ಸತ್ಯಯುಗದಲ್ಲಿ ಎಲ್ಲರ ಕರ್ಮವು ಅಕರ್ಮವಾಗುತ್ತದೆ. ಇಲ್ಲಿ ಮನುಷ್ಯರು ಯಾವ ಕರ್ಮ ಮಾಡುವರೋ ಅದು ವಿಕರ್ಮವಾಗುತ್ತದೆ. ತಮೋಪ್ರಧಾನರಾಗಿರುವ ಕಾರಣ ತಮ್ಮನ್ನು ಯಾರೂ ಸಹ ದೇವತೆಗಳೆಂದು ಕರೆಸಿಕೊಳ್ಳುವುದಿಲ್ಲ. ಡ್ರಾಮಾಪ್ಲಾನ್ನುಸಾರ ಇದೂ ಸಹ ನಿಗಧಿಯಾಗಿದೆ, ಯಾವಾಗ ಧರ್ಮವು ಪ್ರಾಯಲೋಪವಾಗುವುದೋ ಆಗಲೇ ತಂದೆಯು ಬಂದು ಸದ್ಧರ್ಮದ ಸ್ಥಾಪನೆ ಮಾಡುವರು ಮತ್ತು ಅನೇಕ ಧರ್ಮಗಳ ವಿನಾಶ ಮಾಡಿಸುವರು. ಹೊಸ ಪ್ರಪಂಚದಲ್ಲಿ ಒಂದೇ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು. ಈಗ ಶಿವ ತಂದೆಯು ಬಂದು ಪುನಃ ಬ್ರಹ್ಮಾರವರ ಮೂಲಕ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ. ನೀವು ಮುಖವಂಶಾವಳಿ ಬ್ರಾಹ್ಮಣರಾಗಿದ್ದೀರಿ. ಕ್ರೈಸ್ಟ್ನ ಮೂಲಕ ಯಾರು ಕ್ರಿಶ್ಚಿಯನ್ನರಾದರೋ ಅವರನ್ನೂ ಮುಖವಂಶಾವಳಿಯೆಂದೇ ಹೇಳುತ್ತಾರೆ. ಮಕ್ಕಳಂತೂ ಆಗಿರಲಿಲ್ಲ ಅಲ್ಲವೆ. ಹಾಗೆಯೇ ನೀವೂ ಸಹ ಬ್ರಹ್ಮನ ಮೂಲಕ ಬ್ರಾಹ್ಮಣರಾಗಿದ್ದೀರಿ, ಮೂಲತಃ ನೀವು ಶಿವ ತಂದೆಯ ಮಕ್ಕಳಾಗಿದ್ದೀರಿ. ಈ ಸಮಯದಲ್ಲಿ ನೀವು ಬ್ರಹ್ಮಾರವರ ಮೂಲಕ ಬ್ರಾಹ್ಮಣರಾಗಿದ್ದೀರಿ. ಶಿವ ತಂದೆಯೇ ಸ್ವಯಂ ಇವರ ಮೂಲಕ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ ಏಕೆಂದರೆ ಅವರೇ ಹಳೆಯ ಪ್ರಪಂಚದ ವಿನಾಶವನ್ನೂ ಮಾಡಿಸಬೇಕಾಗಿದೆ. ಆ ವಿನಾಶದ ಕಾರ್ಯವನ್ನು ಮತ್ತ್ಯಾರೂ ಮಾಡುವುದಿಲ್ಲ. ಅವರಂತೂ ಬಂದು ತಮ್ಮ-ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ ನಂತರ ಆ ಧರ್ಮವು ವೃದ್ಧಿಯಾಗುತ್ತದೆ. ಈಗ ಇರುವುದೇ ತಮೋಪ್ರಧಾನ ಪ್ರಪಂಚ, ಕಲಿಯುಗದ ಅಂತ್ಯ. ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ, ನೀವು ತಿಳಿದುಕೊಂಡಿದ್ದೀರಿ - ಈ ಶಾಸ್ತ್ರಗಳೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಯಾಗಿದೆ. ಇದು ಸತ್ಯಯುಗದಲ್ಲಿರುವುದಿಲ್ಲ. ಅಲ್ಲಿ ಈ ಅನೇಕ ಧರ್ಮಗಳಿರುವುದಿಲ್ಲ. ಈ ಇಸ್ಲಾಮಿ, ಕ್ರಿಶ್ಚಿಯನ್ ಮುಂತಾದ ಎಲ್ಲಾ ಧರ್ಮಗಳು ದ್ವಾಪರದಲ್ಲಿ ಸ್ಥಾಪನೆಯಾಗುತ್ತವೆ. ನಂತರ ಪ್ರತಿಯೊಬ್ಬರೂ ತಮ್ಮ-ತಮ್ಮ ಶಾಸ್ತ್ರವನ್ನು ಬರೆದಿದ್ದಾರೆ, ಈಗ ಇಡೀ ಸೃಷ್ಟಿಯು ಪತಿತವಾಗಿದೆ ಆದ್ದರಿಂದ ಬಂದು ನಮ್ಮ ದುಃಖ ದೂರ ಮಾಡಿ, ಸುಖ ಕೊಡಿ ಎಂದು ಪತಿತ-ಪಾವನ ತಂದೆಯನ್ನೇ ಕರೆಯುತ್ತಾರೆ. ಮಾರ್ಗದರ್ಶಕನಾಗಿ ನಮ್ಮನ್ನು ಕರೆದುಕೊಂಡು ಹೋಗಿ ಎಂದು ಅವರೂ ಸಹ ಹೇಳುತ್ತಾರೆ. ಅವರು ಎಲ್ಲರಿಗೂ ಮಾರ್ಗದರ್ಶಕನಾಗುತ್ತಾರಲ್ಲವೆ. ನೀವೀಗ ಅಂತರವನ್ನು ತಿಳಿದುಕೊಂಡಿದ್ದೀರಿ, ಆ ಮಾರ್ಗದರ್ಶಕರಂತು ತೀರ್ಥ ಯಾತ್ರೆಗಳಲ್ಲಿ ಸುತ್ತಾಡಿಸುತ್ತಾರೆ. ನೀವು ಆತ್ಮಿಕ ಮಾರ್ಗದರ್ಶಕರಾಗಿದ್ದೀರಿ, ಪಾಂಡವ ಸಂಪ್ರದಾಯದವರಾಗಿದ್ದೀರಿ. ಶಿವ ತಂದೆಯ ಮಕ್ಕಳೂ ಸಹ ಮಾರ್ಗದರ್ಶಕರೆ ಆಗಿದ್ದೀರಿ ಆದ್ದರಿಂದ ಆತ್ಮಿಕ ಯಾತ್ರೆಯನ್ನು ಕಲಿಸುತ್ತಾರೆ. ಹೇ ಆತ್ಮ, ನೀನು ತನ್ನ ತಂದೆಯನ್ನು ನೆನಪು ಮಾಡು ಮತ್ತು ಮನೆಯನ್ನು ನೆನಪು ಮಾಡು. ತಂದೆಯನ್ನು ನೆನಪು ಮಾಡುವುದರಿಂದ ಮನೆಗೆ ತಲುಪುತ್ತೀರಿ, ನೆನಪು ಮಾಡದಿದ್ದರೆ ಪಾಪಗಳು ಕಳೆಯುವುದಿಲ್ಲ. ಭಲೆ ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ ಆದರೆ ಶಿಕ್ಷೆಗಳನ್ನನುಭವಿಸಿ ಲೆಕ್ಕಾಚಾರಗಳನ್ನು ಮುಗಿಸಬೇಕಾಗುತ್ತದೆ ಅಥವಾ ಯೋಗಬಲದಿಂದ ಕಳೆಯಬೇಕಾಗುತ್ತದೆ ಆದರೆ ಅವಶ್ಯವಾಗಿ ಲೆಕ್ಕಾಚಾರವನ್ನು ಮುಗಿಸಲೇಬೇಕಾಗಿದೆ. |
ನಾವೀಗ ಜಮಾ ಮಾಡಿಕೊಳ್ಳುತ್ತಿದ್ದೇವೆಂದು ನಿಮಗೆ ತಿಳಿದಿದೆ. ಪವಿತ್ರರಾಗಿ ಎಷ್ಟು ಸಂಪಾದನೆ ಮಾಡಿಕೊಳ್ಳುವಿರೋ ಅಷ್ಟು ಜಮಾ ಆಗುತ್ತದೆ. ಪುರುಷಾರ್ಥ ಮಾಡದಿದ್ದರೆ ಏನೂ ಜಮಾ ಆಗುವುದಿಲ್ಲ, ನಷ್ಟವುಂಟಾಗುವುದು. ನೀವು ತಿಳಿದುಕೊಂಡಿದ್ದೀರಿ - ಅರ್ಧಕಲ್ಪ ನಾವು ನಷ್ಟ ಹೊಂದುತ್ತಲೇ ಬಂದಿದ್ದೇವೆ, ಈಗ ಸಂಪೂರ್ಣ ದಿವಾಳಿಯಾಗಿ ಬಿಟ್ಟಿದ್ದೇವೆ, ಪ್ರತೀ ಮಾತಿನಲ್ಲಿ ದಿವಾಳಿ. ಈಗ ಮಕ್ಕಳು 21 ಜನ್ಮಗಳಿಗಾಗಿ ಜಮಾ ಮಾಡಿಕೊಳ್ಳಬೇಕಾಗಿದೆ. ಅದಕ್ಕಾಗಿ ಮುಖ್ಯವಾದುದು ನೆನಪಿನ ಯಾತ್ರೆಯಾಗಿದೆ. ಇದನ್ನು ಸದಾ ಸ್ಮೃತಿಯಲ್ಲಿಟ್ಟುಕೊಳ್ಳಿ. ಸಮಯ ಇರುವಾಗಲೆಲ್ಲಾ ಈ ಸ್ಮೃತಿಯಲ್ಲಿರಿ - ತಂದೆಯು ಜ್ಞಾನಸಾಗರನಾಗಿದ್ದಾರೆ ಅಂದಮೇಲೆ ನಿಮಗೂ ಸಹ ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ತಂದೆಯು ತಮ್ಮ ಸಮಾನರನ್ನಾಗಿ ಮಾಡುತ್ತಾರೆ. ಹೇಗೆ ಬ್ಯಾರಿಸ್ಟರ್, ಇಂಜಿನಿಯರ್ ಮೊದಲಾದವರು ವಿದ್ಯೆಯನ್ನು ಓದಿಸಿ ತಮ್ಮ ಸಮಾನರನ್ನಾಗಿ ಮಾಡುತ್ತಾರಲ್ಲವೆ. ಹಾಗೆಯೇ ತಂದೆಯೂ ಸಹ ಮಕ್ಕಳನ್ನೂ ತಮ್ಮಸಮಾನ ದೇಹೀ-ಅಭಿಮಾನಿಗಳನ್ನಾಗಿ ಮಾಡುತ್ತಾರೆ. ತಂದೆಯು ದೇಹಾಭಿಮಾನವನ್ನು ಇಟ್ಟುಕೊಳ್ಳುವುದಿಲ್ಲ, ಇದು ವಿದ್ಯೆಯಾಗಿದೆಯಲ್ಲವೆ. ಯಾವ ಜ್ಞಾನವು ತಂದೆಯಲ್ಲಿದೆಯೋ ಅದನ್ನು ತಂದೆಯು ನಿಮಗೆ ಕೊಡುತ್ತಾರೆ. ತಂದೆಯು ಪವಿತ್ರತೆಯ ಸಾಗರನಾಗಿದ್ದಾರೆ ಅಂದಮೇಲೆ ನಿಮ್ಮನ್ನೂ ತಮ್ಮ ಸಮಾನ ಪವಿತ್ರರನ್ನಾಗಿ ಮಾಡುತ್ತಾರೆ. ಯಾರು ಪವಿತ್ರರಾಗುವುದಿಲ್ಲವೋ ಅವರು ಶಿಕ್ಷೆಗಳನ್ನನುಭವಿಸುತ್ತಾರೆ ಮತ್ತು ಪದವಿಯೂ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಧನದಿಂದ ನೀವು ಸಾಹುಕಾರರಾಗಬೇಕು ಎಂದಲ್ಲ. ತಂದೆಯು ತಿಳಿಸಿದ್ದಾರೆ - ಬಡವರ ಒಂದು ಪೈಸೆ ಸಾಹುಕಾರರ ಒಂದು /ರೂಪಾಯಿಗೆ ಸಮಾನ. ಇಬ್ಬರಿಗೂ ಅಷ್ಟೇ ಆಸ್ತಿಯು ಸಿಗುತ್ತದೆ, ತಂದೆಯು ಬಡವರ ಬಂಧುವಾಗಿದ್ದಾರೆ ಆದ್ದರಿಂದ ಅಜಾಮೀಳರಂತಹ ಪಾಪಿಗೂ ಅಹಲ್ಯೆಯರು, ಗಣಿಕೆಯರು, ಕುಬ್ಜೆಯರು ಎಲ್ಲರ ಉದ್ಧಾರ ಮಾಡುತ್ತಾರೆಂದು ಗಾಯನವಿದೆ. ಸಾಹುಕಾರರ ಹೆಸರನ್ನೂ ಗಾಯನ ಮಾಡುವುದಿಲ್ಲ. ಇದೂ ಸಹ ತಿಳಿದುಕೊಳ್ಳುವ ಮಾತುಗಳಾಗಿವೆ. ನಾವು ಮೊಟ್ಟ ಮೊದಲು ಎಲ್ಲರಿಗಿಂತ ಸಾಹುಕಾರರಾಗಿದ್ದೆವು ಎಂದು ನೀವು ಹೇಳುತ್ತೀರಿ ಮತ್ತು ಇಲ್ಲಿ ಜ್ಞಾನವನ್ನು ನಂಬರ್ವಾರ್ ತೆಗೆದುಕೊಂಡರೆ ಅಲ್ಲಿ ಪದವಿಯೂ ನಂಬರ್ವಾರ್ ಪಡೆಯುತ್ತಾರೆ ಆದ್ದರಿಂದ ಮಾತಾಪಿತರನ್ನು ಪೂರ್ಣ ಅನುಸರಿಸಬೇಕಾಗಿದೆ. ಹೇಗೆ ಬಾಬಾರವರು (ಬ್ರಹ್ಮಾ) ಪುರುಷಾರ್ಥ ಮಾಡಿ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ, ಮಮ್ಮಾ-ಬಾಬಾರವರೂ ಸಹ ಸರ್ವೀಸ್ ಮಾಡುತ್ತಾರಲ್ಲವೆ. ನಿಮ್ಮದು ಇದು ಆತ್ಮಿಕ ಸೇವೆಯಾಗಿದೆ. ಮನೆ-ಮನೆಗೆ ಸಂದೇಶವನ್ನು ತಲುಪಿಸಬೇಕಾಗಿದೆ. ನಮಗೆ ತಂದೆಯು ಬಂದಿರುವ ಸಂದೇಶವೇ ಸಿಗಲಿಲ್ಲವೆಂದರೆ ಹೇಗೆ ನೆನಪು ಮಾಡುವುದು ಎಂದು ಕೊನೆಗೆ ಯಾರೂ ಹೇಳುವಂತಾಗಬಾರದು. ಭಗವಂತನಿಗೂ ದೂರು ಕೊಟ್ಟರು ಎಂದು ಕೆಲವು ಕಥೆಗಳು ಶಾಸ್ತ್ರಗಳಲ್ಲಿವೆ ಆದ್ದರಿಂದ ಎಲ್ಲರಿಗೆ ತಂದೆಯ ಸಂದೇಶ ತಿಳಿಸಬೇಕು. ಸ್ವಲ್ಪವೇ ಸಮಯವಿದೆ, ದಿನ-ಪ್ರತಿದಿನ ಹೆಚ್ಚು-ಹೆಚ್ಚು ಪ್ರದರ್ಶನಿ, ಮೇಳಗಳು ಆಗುತ್ತಾ ಇರುತ್ತವೆ. ಈ ಜ್ಞಾನವು ವಿದೇಶದ ಪತ್ರಿಕೆಗಳಲ್ಲಿಯೂ ಬರುತ್ತದೆ. ಯಜ್ಞದ ಆದಿಯಲ್ಲಿ ಭಟ್ಟಿಯಾದಾಗ ವಿದೇಶದವರೆಗೆ ಪತ್ರಿಕೆಗಳಲ್ಲಿ ಹೆಸರು ಹೋಯಿತು. ಈಗ ಪುನಃ ಆಗುವುದು- ಪರಮಪಿತ ಪರಮಾತ್ಮನು ಬಂದು ಎಲ್ಲರನ್ನೂ ಮುಕ್ತಗೊಳಿಸುತ್ತಿದ್ದಾರೆ ಮತ್ತು ತಿಳಿಸುತ್ತಾರೆ - ಎಲ್ಲಾ ಕಡೆಯಿಂದ ಬುದ್ಧಿಯೋಗವನ್ನು ತೆಗೆಯಿರಿ, ತಂದೆಯಾದ ನನ್ನೊಬ್ಬನನ್ನೇ ನೆನಪು ಮಾಡಿ, ಆಗ ನೀವು ಪಾವನರಾಗಿ ಮುಕ್ತಿಧಾಮದಲ್ಲಿ ಹೋಗುವಿರಿ. ಕೆಲವರಂತೂ ಬಹಳ ಚೆನ್ನಾಗಿ ತಿಳಿದುಕೊಂಡು ನೆನಪು ಮಾಡತೊಡಗುತ್ತಾರೆ. ಧರ್ಮದಲ್ಲಿ ಯಾರು ಮುಖ್ಯಸ್ಥರಿರುವರೋ ಅವರು ನಂಬರ್ವಾರ್ ಆಗಿ ಬರುತ್ತಾರೆ. ಎಲ್ಲಾ ಧರ್ಮಗಳ ವೃಕ್ಷವು ನಿರಾಕಾರಿ ಪ್ರಪಂಚದಿಂದ ಇಲ್ಲಿ ಬಂದು ವೃದ್ಧಿಯಾಗುತ್ತದೆ. ಮತ್ತೆ ಪತಿತ ಪ್ರಪಂಚದಿಂದ ನಿರಾಕಾರಿ ಪಾವನ ಪ್ರಪಂಚದಲ್ಲಿ ಹೊರಟು ಹೋಗುತ್ತಾರೆ. ನಂತರ ಪ್ರತಿಯೊಬ್ಬರೂ ತಮ್ಮ-ತಮ್ಮ ಸಮಯದಲ್ಲಿ ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ. ಇದು ಬುದ್ಧಿಯಲ್ಲಿರಬೇಕು. ಸತ್ಯಯುಗದಲ್ಲಿ ಒಂದೇ ಧರ್ಮವಿತ್ತು, ಅದು ವೃದ್ಧಿಯಾಗುತ್ತಾ-ಆಗುತ್ತಾ ಅನೇಕ ಧರ್ಮ, ಅನೇಕ ಮತಗಳಾಗಿ ಬಿಡುತ್ತದೆ. ನೀವು ತಿಳಿದುಕೊಂಡಿದ್ದೀರಿ - ಈ ಭಾರತವು ಅವಿನಾಶಿ ಖಂಡವಾಗಿದೆ, ಇದರಲ್ಲಿ ಪ್ರಳಯವೆಂದೂ ಆಗುವುದಿಲ್ಲ. ಈ ಮಾತುಗಳನ್ನು ಸ್ಮರಣೆ ಮಾಡುತ್ತಾ ಇರಿ. |
ಇದು ನಿಮ್ಮ ಈಶ್ವರೀಯ ಮೆಷಿನ್ ಆಗಿದೆ. ಸೇವಾಕೇಂದ್ರಗಳು ತೆರೆಯುತ್ತಾ ಹೋಗುತ್ತವೆ, ಈಗ ವಿನಾಶವೂ ಸನ್ಮುಖದಲ್ಲಿ ನಿಂತಿದೆ. ಈ ಕಣ್ಣುಗಳಿಂದ ಏನೆಲ್ಲಾ ನೋಡುತ್ತೀರೋ ಅದೆಲ್ಲವೂ ಸತ್ಯಯುಗದಲ್ಲಿ ಇರುವುದಿಲ್ಲ, ಅರಣ್ಯವಾಗಿ ಬಿಡುವುದು. ಅಬುಪರ್ವತವು ಸತ್ಯಯುಗದಲ್ಲಿರುವುದಿಲ್ಲ, ಅದರ ಅವಶ್ಯಕತೆಯೇ ಇಲ್ಲ. ಈ ಮಂದಿರ ಇತ್ಯಾದಿಗಳೆಲ್ಲವೂ ನಂತರ ಭಕ್ತಿಮಾರ್ಗದಲ್ಲಿ ಮಾಡಲ್ಪಡುತ್ತವೆ. ಎಷ್ಟು ಎತ್ತರದ ಪರ್ವತಗಳ ಮೇಲೆ ಮಂದಿರಗಳನ್ನು ಕಟ್ಟಿಸುತ್ತಾರೆ ಮತ್ತೆ ಚಳಿಗಾಲದಲ್ಲಿ ಅದನ್ನು ಮುಚ್ಚಿ ಕೆಳಗಡೆ ಬಂದು ಬಿಡುತ್ತಾರೆ. ನೀವಂತೂ ಪರ್ವತಗಳ ಮೇಲೆ ಕುಳಿತಿದ್ದೀರಿ. ಅಂತ್ಯದಲ್ಲಿ ಎಲ್ಲವೂ ಬೆಟ್ಟಗಳ ಮೇಲೆ ಸಾಕ್ಷಾತ್ಕಾರವಾಗುತ್ತದೆ. ಬ್ರಹ್ಮಾ ತಂದೆಯು ತಿಳಿಸುತ್ತಾರೆ - ನನಗೂ ಸಹ ಸಾಕ್ಷಾತ್ಕಾರವಾದಾಗ ನಾನು ಪರ್ವತದ ಮೇಲಿದ್ದೆನು, ಈಗಲೂ ಸಹ ಪರ್ವತಗಳ ಮೇಲೆ ಬಂದು ಕುಳಿತಿದ್ದೇವೆ. ಇಲ್ಲಿ ಕುಳಿತು-ಕುಳಿತಿದ್ದಂತೆಯೇ ನೀವು ಎಲ್ಲವನ್ನು ಕೇಳುತ್ತೀರಿ ಮತ್ತು ನೋಡುತ್ತೀರಿ. ಹೇಗೆ ಬೆಂಕಿ ಬೀಳುತ್ತದೆ, ಏನೇನು ನಡೆಯುತ್ತದೆ ಎಂಬುದು ಇಲ್ಲಿ ಕುಳಿತಿದ್ದಂತೆಯೇ ಸಾಕ್ಷಾತ್ಕಾರವಾಗುತ್ತದೆ. ರೇಡಿಯೋಗಳಿಂದ, ಪತ್ರಿಕೆಗಳಿಂದ ನೀವು ಎಲ್ಲವನ್ನೂ ಕೇಳುತ್ತೀರಿ. ಟಿ.ವಿ.,ಯಲ್ಲಿಯೂ ನೋಡುತ್ತೀರಿ. ಮುಂದೆ ಹೋದಂತೆ ಇಂತಹ ವಸ್ತುಗಳನ್ನು ಕಂಡುಹಿಡಿಯುತ್ತಾರೆ ಅದರಿಂದ ಮನೆಯಲ್ಲಿ ಕುಳಿತುಕೊಂಡೇ ಎಲ್ಲವನ್ನೂ ನೋಡಬಹುದು, ರೇಡಿಯೋಗಳಲ್ಲಿ ಎಲ್ಲೆಲ್ಲಿನ ಶಬ್ಧಗಳು ಕೇಳಿಬರುತ್ತದೆ, ಇದೆಲ್ಲವೂ ಮಾಯೆಯ ಶೋ ಆಗಿದೆ ಆದ್ದರಿಂದ ಇದೇ ಸ್ವರ್ಗವೆಂದು ಮನುಷ್ಯರು ತಿಳಿದುಕೊಳ್ಳುತ್ತಾರೆ ಆದರೆ ಯಾವಾಗ ವಿನಾಶವಾಗುವುದೋ ಆಗಲೇ ಸ್ವರ್ಗವು ಬರಲು ಸಾಧ್ಯ. ಅಲ್ಲಿ ಸಿಹಿ ನೀರಿನ ನದಿಗಳ ತೀರದಲ್ಲಿ ಮಹಲುಗಳಿರುತ್ತವೆ. ಪರ್ವತಗಳ ಮೇಲೆ ಹೋಗುವ ಅವಶ್ಯಕತೆಯಿರುವುದಿಲ್ಲ, ಅಲ್ಲಿ ಸದಾ ವಸಂತ ಋತುವಿರುತ್ತದೆ. ಇಂದು ಬಿಸಿಲು, ಚಳಿ.... ಎಲ್ಲದರಲ್ಲಿ ದುಃಖವಿದೆ. ಸ್ವರ್ಗದಲ್ಲಿ ದುಃಖದ ಹೆಸರೇ ಇರುವುದಿಲ್ಲ. ನೀವು ಅಂತಹ ಸ್ಥಾನಕ್ಕೆ ಹೋಗುತ್ತೀರಿ, ಇದು ಬುದ್ಧಿಯಲ್ಲಿದೆ - ನಾವು ಈ ಶರೀರವನ್ನು ಬಿಟ್ಟು ತಂದೆಯ ಬಳಿ ಹೋಗಬೇಕಾಗಿದೆ. ನಾವೀಗ ತಂದೆಯ ಮೂಲಕ ರಾಜಯೋಗವನ್ನು ಕಲಿಯುತ್ತಿದ್ದೇವೆ. 5000 ವರ್ಷಗಳ ಮೊದಲೂ ಸಹ ಕಲಿತಿದ್ದಿರಿ, ಬಾಬಾ ತಾವಂತೂ ಅದೇ ಕಲ್ಪದ ಹಿಂದಿನ ತಂದೆಯಾಗಿದ್ದೀರಿ ಎಂದು ಹೇಳುತ್ತೀರಿ. ತಂದೆಗೂ ಗೊತ್ತಿದೆ - ಯಾರು ಕಲ್ಪದ ಮೊದಲು ರಾಜ್ಯಭಾಗ್ಯವನ್ನು ಪಡೆದಿರುವರೋ ಅವರೇ ಈಗಲೂ ಪಡೆಯುತ್ತಾರೆ. ಈ ಚಕ್ರವು ಬುದ್ಧಿಯಲ್ಲಿರಬೇಕು. ಅವಶ್ಯವಾಗಿ 5000 ವರ್ಷಗಳ ಮೊದಲೂ ಭಾರತದಲ್ಲಿ ದೇವಿ-ದೇವತೆಗಳ ರಾಜ್ಯವಿತ್ತು, ಮತ್ತೆ ಅರ್ಧ ಸಮಯದ ನಂತರ ಮಾಯೆಯ ಪ್ರವೇಶತೆಯಾಯಿತು, ಅನ್ಯ ಧರ್ಮಗಳು ಬಂದವು, ಭಕ್ತಿಮಾರ್ಗವು ಆರಂಭವಾಯಿತು ಅರ್ಥಾತ್ ರಾವಣ ರಾಜ್ಯವು ಆರಂಭವಾಯಿತು. ಈ ಚಿತ್ರಗಳಲ್ಲಿ ಸ್ಪಷ್ಟವಾಗಿ ತಿಳಿಸಬಹುದು. ಸತೋಪ್ರಧಾನರಿಂದ ಹೇಗೆ ತಮೋಪ್ರಧಾನರಾಗುತ್ತಾರೆನ್ನುವುದು ಭಾರತದ ಕಥೆಯೇ ಆಗಿದೆ. ನಂತರ ಯಾವಾಗ ವಿನಾಶದ ಸಮಯವು ಬರುವುದೋ ಆಗ ಎಲ್ಲರೂ ವಿನಾಶಕಾಲೇ ವಿಪರೀತ ಬುದ್ಧಿಯವರಾಗಿ ಬಿಡುತ್ತಾರೆ. ಮೇಳ, ಪ್ರದರ್ಶನಿಗಳಲ್ಲಿ ಬಹಳ ಯುಕ್ತಿಯಿಂದ ಚಿತ್ರಗಳನ್ನಿಡಬೇಕು. ನಿಮ್ಮದು ಇದು ಗುಪ್ತ ಜ್ಞಾನವಾಗಿದೆ, ಇಲ್ಲಿ ಯಾವುದೇ ಆಯುಧ ಇತ್ಯಾದಿಗಳ ಮಾತಿಲ್ಲ. ನೀವು ಬಹಳ ಸಾಧಾರಣವಾಗಿದ್ದೀರಿ, ನೀವು ನಡೆಯುತ್ತಾ-ತಿರುಗಾಡುತ್ತಾ ತಂದೆಯ ನೆನಪಿನಲ್ಲಿರುತ್ತೀರಿ. ನೀವು ವೇದ-ಶಾಸ್ತ್ರಗಳನ್ನು ಒಪ್ಪುತ್ತೀರಾ ಎಂದು ಯಾರಾದರೂ ನಿಮ್ಮೊಂದಿಗೆ ಕೇಳಿದರೆ ತಿಳಿಸಿ, ಹೌದು ನಾವು ಬಹಳ ಚೆನ್ನಾಗಿ ತಿಳಿದುಕೊಂಡಿದ್ದೇವೆ- ಇವುಗಳಿಂದ ಭಗವಂತನ ಪ್ರಾಪ್ತಿಯಾಗಲು ಸಾಧ್ಯವಿಲ್ಲ. ಇದೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಯಾಗಿದೆ. ಸತ್ಯಯುಗದಲ್ಲಿ ಎಲ್ಲರೂ ಪಾವನ ಆತ್ಮರಿದ್ದರು. ಗೀತೆಯೂ ಇದೆಯಲ್ಲವೆ - ಎದ್ದೇಳಿ ಪ್ರಿಯತಮೆಯರೇ ಎದ್ದೇಳಿ... ಹೊಸ ಪ್ರಪಂಚದಲ್ಲಿ ಎಲ್ಲವೂ ಹೊಸದಾಗಿರುವುದು. ತಂದೆಯು ಬಂದು ಹೊಸ ಪ್ರಪಂಚಕ್ಕಾಗಿ ಹೊಸ ಕಥೆಗಳನ್ನು ತಿಳಿಸುತ್ತಾರೆ. ದೃಶ್ಯಾವಳಿಗಳೆಲ್ಲವೂ ಹೊಸದಾಗಿರುತ್ತವೆ. ಪ್ರದರ್ಶನಿಯಲ್ಲಿ ಅನೇಕರು ಬರುತ್ತಾರೆ, ಅಭಿಪ್ರಾಯವನ್ನೂ ಬರೆಯುತ್ತಾರೆ. ಇದು ಬಹಳ ಚೆನ್ನಾಗಿದೆ, ಇದನ್ನು ಎಲ್ಲರಿಗೆ ತಿಳಿಸಬೇಕು ಎಂದು ಹೇಳುತ್ತಾರೆ ಆದರೆ ಸ್ವಯಂ ಏನನ್ನೂ ತಿಳಿದುಕೊಳ್ಳುವುದಿಲ್ಲ. ಕೋಟಿಯಲ್ಲಿ ಕೆಲವರೇ ಬರುತ್ತಾರೆ ಆದರೆ ಸೇವೆಯಂತೂ ಆಗುವುದು. ಅನೇಕರು ಪ್ರಜೆಗಳು ತಯಾರಾಗುವರು. ನೀವು ಮಕ್ಕಳು ಈ ಜ್ಞಾನದ ಸ್ಮರಣೆ ಮಾಡುತ್ತಾ ಇರುತ್ತೀರೆಂದರೆ ಖುಷಿಯಿರುವುದು. ಈ ಪ್ರಪಂಚವೇ ದುಃಖದ ಪ್ರಪಂಚವಾಗಿದೆ, ನಷ್ಟವಾಯಿತು ದಿವಾಳಿಯಾದರು, ಭೂಕಂಪವಾಯಿತೆಂದರೆ ಎಲ್ಲರ ಹಣವೂ ಸಮಾಪ್ತಿಯಾಗುತ್ತದೆ ಆದ್ದರಿಂದಲೇ ಕೆಲವರದು ಮಣ್ಣು ಪಾಲಾಯಿತು, ಕೆಲವರದು ರಾಜ ತಿಂದನು..... ಎಂದು ಹೇಳುತ್ತಾರೆ. ಆದರೆ ಯಾರದು ಸಫಲವಾಗುವುದು? ಯಾರು ಈಶ್ವರೀಯ ಸ್ಥಾಪನಾ ಕಾರ್ಯದಲ್ಲಿ ತೊಡಗಿಸುತ್ತಿದ್ದಾರೆಯೋ ಅವರದೇ ಸಫಲವಾಗುತ್ತದೆ. ಇದು ಈಶ್ವರೀಯ ಬ್ಯಾಂಕ್ ಆಗಿದೆ, ಯಾರೆಷ್ಟು ಇದರಲ್ಲಿ ಸಫಲ ಮಾಡುವರೋ ಅಷ್ಟು ಜಮಾ ಆಗುತ್ತದೆ. ಯಾರೆಷ್ಟೇ ಕಲ್ಪದ ಮೊದಲು ಹಾಕಿರುವರೋ ಅಷ್ಟೇ ಶಿವ ತಂದೆಯ ಭಂಡಾರದಲ್ಲಿ ಹಾಕುತ್ತಾರೆ. ಇದಕ್ಕೆ ಪ್ರತಿಯಾಗಿ ಮತ್ತೆ ಹೊಸ ಪ್ರಪಂಚದಲ್ಲಿ 21 ಜನ್ಮಗಳಿಗಾಗಿ ಪ್ರಾಪ್ತಿಯಾಗುವುದು. ಭಕ್ತಿಮಾರ್ಗದಲ್ಲಿ ಶಿವ ತಂದೆಯ ಹುಂಡಿಯಲ್ಲಿ ಹಾಕುತ್ತಾರೆಂದರೆ ಅಲ್ಪಕಾಲದ ಕ್ಷಣ ಭಂಗುರ ಸುಖವು ಸಿಗುತ್ತದೆ. ಇಲ್ಲಂತೂ ಡೈರೆಕ್ಟ್ ಶಿವ ತಂದೆಯು ಸ್ವರ್ಗದ ಸ್ಥಾಪನೆ ಮಾಡುತ್ತಿದ್ದಾರೆ ಆದ್ದರಿಂದ 21 ಜನ್ಮಗಳಿಗಾಗಿ ಸಿಗುವುದು. ಭಕ್ತಿಮಾರ್ಗದಲ್ಲಿ ಅಲ್ಪಕಾಲದ ಸುಖವು ನರಕದಲ್ಲಿ ಸಿಗುತ್ತದೆ. ಈಗ ನಿಮ್ಮ ನಡವಳಿಕೆಯು ಬಹಳ ಚೆನ್ನಾಗಿರಬೇಕು, ಯಾರಿಗೂ ದುಃಖವನ್ನು ಕೊಡಬಾರದು ಇಲ್ಲದಿದ್ದರೆ ಹೆಸರಿಗೆ ಕಳಂಕ ತರುತ್ತೀರಿ. ಎಂದೂ ಕ್ರೋಧ ಮಾಡಿಕೊಳ್ಳಬಾರದು. ದೇಹಾಭಿಮಾನದಲ್ಲಿ ಬರುವುದರಿಂದ ಪಾಪಗಳಾಗುತ್ತವೆ. ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಹೇಳುತ್ತೀರಿ - ಬಾಬಾ, ಇದೆಲ್ಲವೂ ತಮ್ಮದಾಗಿದೆ. ಸತ್ಯ ಹೃದಯದವರ ಮೇಲೆ ಪ್ರಭು ಪ್ರಸನ್ನರಾಗುವರು. ಹೃದಯದಲ್ಲಿ ಯಾವುದೇ ಪ್ರಕಾರದ ಕೊರತೆಯಿರಬಾರದು. ಇಲ್ಲದಿದ್ದರೆ ಇನ್ನೂ ಕೆಳಗಿಳಿಯುತ್ತೀರಿ. ನೀವು ಪೈಗಂಬರನ ಮಕ್ಕಳಾಗಿದ್ದೀರಿ, ಎಲ್ಲರಿಗೆ ಸಂದೇಶವನ್ನು ಕೊಡುತ್ತೀರಿ - ತಂದೆಯು ಬಂದು ಸ್ವರ್ಗದ ಸ್ಥಾಪನೆ ಮಾಡುತ್ತಾರೆ, ಅದರ ಸಂದೇಶವನ್ನು ಎಲ್ಲರಿಗೆ ಕೊಡಬೇಕಾಗಿದೆ. ಹೊಸ ಪ್ರಪಂಚವು ಸ್ಥಾಪನೆಯಾಗುತ್ತಿದೆ ಅದಕ್ಕಾಗಿ ಯಾರಿಗೆ ರಾಜಯೋಗವನ್ನು ಕಲಿಯುವ ಇಚ್ಛೆಯಿದೆಯೋ ಅವರು ಬಂದು ಕಲಿಯಿರಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಒಳಗೆ ಯಾವುದೇ ಕೊರತೆಯಿದ್ದರೆ ಅದನ್ನು ತೆಗೆಯಬೇಕಾಗಿದೆ, ಸತ್ಯ ಹೃದಯವನ್ನಿಟ್ಟುಕೊಳ್ಳಬೇಕಾಗಿದೆ. ದೇಹಾಭಿಮಾನದಲ್ಲಿ ಬಂದು ಎಂದೂ ಕ್ರೋಧ ಮಾಡಬಾರದು. |
2. ಸಮಯ ಸಿಕ್ಕಿದರೆ ಸಾಕು ನೆನಪಿನ ಯಾತ್ರೆಯಲ್ಲಿದ್ದು ಸಂಪಾದನೆಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ. |
ಓಂ ಶಾಂತಿ. ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ಓಂ ಶಾಂತಿಯ ಅರ್ಥವನ್ನು ತಿಳಿಸಿದ್ದಾರೆ. ಓಂ ಎಂದರೆ ನಾನು ಎಂದು ಹೇಳಲಾಗುತ್ತದೆ. ನಾನಾತ್ಮ, ನನ್ನದು ಶರೀರ ಎರಡು ವಸ್ತುಗಳಿವೆ. ಓಂ ಶಾಂತಿ ಅರ್ಥಾತ್ ಶಾಂತಿಯು ನನ್ನ ಸ್ವಧರ್ಮವಾಗಿದೆ ಎಂದು ಆತ್ಮವು ಹೇಳಿತು. ಆತ್ಮದ ನಿವಾಸ ಸ್ಥಾನವು ಶಾಂತಿಧಾಮ ಅಥವಾ ಪರಮಧಾಮವಾಗಿದೆ, ಅದು ನಿರಾಕಾರಿ ಪ್ರಪಂಚವಾಗಿದೆ. ಇದು ಸಾಕಾರಿ ಮನುಷ್ಯರ ಪ್ರಪಂಚವಾಗಿದೆ. ಮನುಷ್ಯರಲ್ಲಿ ಆತ್ಮವಿದೆ ಮತ್ತು ಈ ಶರೀರವು ಪಂಚ ತತ್ವಗಳಿಂದಾಗಿದೆ. ಆತ್ಮವು ಅವಿನಾಶಿಯಾಗಿದೆ, ಅದು ಎಂದೂ ಸಾಯುವುದಿಲ್ಲ. ಆತ್ಮದ ತಂದೆ ಯಾರು? ಶರೀರದ ತಂದೆಯಂತೂ ಪ್ರತಿಯೊಬ್ಬರಿಗೂ ಬೇರೆ-ಬೇರೆಯಿರುತ್ತಾರೆ. ಬಾಕಿ ಎಲ್ಲಾ ಆತ್ಮರ ತಂದೆಯು ಒಬ್ಬರೇ ಪರಮಪಿತ ಪರಮಾತ್ಮನಾಗಿದ್ದಾರೆ. ಅವರ ಮೂಲ ಹೆಸರಾಗಿದೆ - ಶಿವ. ಮೊಟ್ಟ ಮೊದಲು ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ ನಂತರ ಬ್ರಹ್ಮ ದೇವತಾಯ ನಮಃ, ವಿಷ್ಣು ದೇವತಾಯ ನಮಃ ಎಂದು ಹೇಳುತ್ತಾರೆ, ಅವರಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಎಲ್ಲದಕ್ಕಿಂತ ಶ್ರೇಷ್ಠನು ನಿರಾಕಾರ ಪರಮಾತ್ಮನಾಗಿದ್ದಾರೆ ನಂತರ ಸೂಕ್ಷ್ಮ ದೇವತೆಗಳು, ಇಲ್ಲಿ ಎಲ್ಲರೂ ಮನುಷ್ಯರಾಗಿದ್ದಾರೆ ಆದ್ದರಿಂದ ಈಗ ಪ್ರಶ್ನೆ ಬರುತ್ತದೆ - ಆತ್ಮದ ರೂಪವೇನಾಗಿದೆ? ಭಾರತದಲ್ಲಿ ಶಿವನ ಪೂಜೆ ಮಾಡುತ್ತಾರೆ, ಶಿವಕಾಶಿ ಶಿವಕಾಶಿ ಎಂದು ಹೇಳುತ್ತಾರೆ. ಅವರು ಲಿಂಗವನ್ನು ಮಾಡುತ್ತಾರೆ, ಕೆಲವರು ದೊಡ್ಡ ಆಕಾರದಲ್ಲಿ ಮಾಡುತ್ತಾರೆ, ಕೆಲವರು ಚಿಕ್ಕದು. ಆದರೆ ಹೇಗೆ ಆತ್ಮನ ರೂಪವಿದೆಯೋ ಹಾಗೆಯೇ ಪರಮಾತ್ಮನ ರೂಪವಿದೆ, ಪರಮ ಆತ್ಮ ಎಂಬುದನ್ನು ಸೇರಿಸಿ ಪರಮಾತ್ಮ ಎಂದು ಹೇಳುತ್ತಾರೆ. ಪರಮಾತ್ಮನಿಗಾಗಿ ಅಖಂಡ ಜ್ಯೋತಿ ಸ್ವರೂಪನೆಂದು ಕೆಲವರು ಹೇಳುತ್ತಾರೆ. ಬ್ರಹ್ಮ ಮಹಾತತ್ವವೇ ಪರಮಾತ್ಮನೆಂದು ಕೆಲವರು ಹೇಳುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ಹೇಗೆ ನೀವಾತ್ಮರು ಬಿಂದುವಾಗಿದ್ದೀರೋ ಹಾಗೆಯೇ ನನ್ನ ರೂಪವೂ ಬಿಂದುವಾಗಿದೆ. ಯಾವಾಗ ರುದ್ರನ ಪೂಜೆ ಮಾಡುತ್ತಾರೆಯೋ ಅದರಲ್ಲಿ ಲಿಂಗವನ್ನೇ ಮಾಡುತ್ತಾರೆ. ಶಿವನ ದೊಡ್ಡ ಲಿಂಗ ಮತ್ತು ಸಾಲಿಗ್ರಾಮಗಳನ್ನು ಚಿಕ್ಕ-ಚಿಕ್ಕ ಗಾತ್ರದಲ್ಲಿ ಮಾಡಿಸುತ್ತಾರೆ. ಮನುಷ್ಯರಿಗೆ ಯಥಾರ್ಥವಾಗಿ ಆತ್ಮದ ಜ್ಞಾನವಾಗಲಿ, ಪರಮಾತ್ಮನ ಜ್ಞಾನವಾಗಲಿ ಇಲ್ಲ ಅಂದಮೇಲೆ ಆ ಮನುಷ್ಯರಿಂದೇನು ಪ್ರಯೋಜನ! ಎಲ್ಲರಲ್ಲಿ ಪಂಚ ವಿಕಾರಗಳು ಪ್ರವೇಶವಾಗಿದೆ, ದೇಹಾಭಿಮಾನದಲ್ಲಿ ಬಂದು ಒಬ್ಬರು ಇನ್ನೊಬ್ಬರನ್ನು ಕುಟುಕುತ್ತಾ ಇರುತ್ತಾರೆ. ಈ ವಿಕಾರವೇ ದುಃಖ ಕೊಡುವಂತಹದ್ದಾಗಿದೆ. ಯಾರಾದರೂ ಶರೀರ ಬಿಟ್ಟರೆ ದುಃಖವಾಯಿತು, ಇದೂ ಸಹ ಮುಳ್ಳು ಚುಚ್ಚಿದಂತೆ. ಯಾವ ಮನುಷ್ಯರಿಗೂ ಆತ್ಮಾನುಭೂತಿಯಾಗಲಿ, ಪರಮಾತ್ಮಾನುಭೂತಿಯಾಗಲಿ ಇಲ್ಲ. ಚಹರೆಯು ಮನುಷ್ಯರದು, ಗುಣಗಳು ವಿಕಾರಿಯಾಗಿದೆ ಆದ್ದರಿಂದ ರಾವಣ ಸಂಪ್ರದಾಯವೆಂದು ಹೇಳಲಾಗುತ್ತದೆ ಏಕೆಂದರೆ ರಾವಣ ರಾಜ್ಯವಾಗಿದೆ. ನಮಗೆ ರಾಮ ರಾಜ್ಯ ಬೇಕೆಂದು ಹೇಳುತ್ತಾರೆ. ಗೀತೆಯಲ್ಲಿಯೂ ಶಬ್ಧವಿದೆ- ಕೌರವ ಸಂಪ್ರದಾಯ, ಪಾಂಡವ ಸಂಪ್ರದಾಯ ಮತ್ತು ಯಾದವ ಸಂಪ್ರದಾಯ. ಈಗ ನೀವು ಮಕ್ಕಳು ರಾಜಯೋಗವನ್ನು ಕಲಿಯುತ್ತಿದ್ದೀರಿ. ರಾಜಯೋಗವನ್ನು ಶ್ರೀಕೃಷ್ಣನು ಕಲಿಸಲು ಸಾಧ್ಯವಿಲ್ಲ. ಕೃಷ್ಣನು ಸತ್ಯಯುಗದ ರಾಜಕುಮಾರನಾಗಿದ್ದಾನೆ. ಅವನ ಮಹಿಮೆಯಾಗಿದೆ- ಸರ್ವಗುಣ ಸಂಪನ್ನ..... ಪ್ರತಿಯೊಬ್ಬರ ಕರ್ತವ್ಯ, ಮಹಿಮೆಯು ಬೇರೆ-ಬೇರೆಯಾಗಿದೆ. ರಾಷ್ಟ್ರಪತಿಯ ಕರ್ತವ್ಯವೇ ಬೇರೆ, ಪ್ರಧಾನ ಮಂತ್ರಿಯ ಕರ್ತವ್ಯವೇ ಬೇರೆ. ಈಗ ಇವರು ಶ್ರೇಷ್ಠಾತಿ ಶ್ರೇಷ್ಠ ಬೇಹದ್ದಿನ ತಂದೆಯಾಗಿದ್ದಾರೆ, ಇವರ ಕರ್ತವ್ಯವನ್ನೂ ಸಹ ಮನುಷ್ಯರೇ ತಿಳಿದುಕೊಳ್ಳುವರು. ಪ್ರಾಣಿಗಳು ತಿಳಿದುಕೊಳ್ಳಲು ಸಾಧ್ಯವೇ! ಮನುಷ್ಯರು ಯಾವಾಗ ತಮೋಪ್ರಧಾನ ಆಗಿ ಬಿಡುತ್ತಾರೆಯೋ ಆಗ ಒಬ್ಬರು ಇನ್ನೊಬ್ಬರಿಗೆ ನಿಂದನೆ ಮಾಡುತ್ತಾರೆ. ಇದು ಹಳೆಯ ಕಲಿಯುಗೀ ಪ್ರಪಂಚವಾಗಿದೆ, ಇದಕ್ಕೆ ನರಕವೆಂದು ಹೇಳಲಾಗುತ್ತದೆ, ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ಸತ್ಯಯುಗಕ್ಕೆ ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ಆತ್ಮವು ಈ ಕರ್ಮೇಂದ್ರಿಯಗಳ ಮೂಲಕ ನಮಗೆ ರಾಮರಾಜ್ಯ ಬೇಕು, ಹೇ ಪತಿತ-ಪಾವನ ತಾವು ಬಂದು ಪಾವನ ಮಾಡಿ, ಶಾಂತಿಧಾಮ-ಸುಖಧಾಮದಲ್ಲಿ ಕರೆದುಕೊಂಡು ಹೋಗಿ ಎಂದು ಹೇಳುತ್ತದೆ. ತಂದೆಯು ತಿಳಿಸುತ್ತಾರೆ - ಸುಖ ದುಃಖದ ಆಟವು ಮಾಡಲ್ಪಟ್ಟಿದೆ, ಮಾಯೆಯೊಂದಿಗೆ ಸೋಲುವುದೇ ಸೋಲು, ಮಾಯೆಯೊಂದಿಗೆ ಗೆಲ್ಲುವುದೇ ಗೆಲುವು. ಯಾರಿಗೆ ಪೂಜೆ ಮಾಡುತ್ತಾರೆಯೋ ಅವರ ಕರ್ತವ್ಯವನ್ನೇ ಅರಿತುಕೊಂಡಿಲ್ಲ. ಇದಕ್ಕೆ ಅಂಧಶ್ರದ್ಧೆ ಅಥವಾ ಗೊಂಬೆಗಳ ಪೂಜೆಯೆಂದು ಹೇಳಲಾಗುತ್ತದೆ. ಹೇಗೆ ಮಕ್ಕಳು ಗೊಂಬೆಗಳನ್ನು ಮಾಡಿ ಆಟವಾಡಿದ ನಂತರ ಅದನ್ನು ಒಡೆದು ಹಾಕುತ್ತಾರೆ. ಮನುಷ್ಯರು ಶಿವ ಪರಮಾತ್ಮಾಯ ನಮಃ ಎಂದು ಹಾಡುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಶಿವನು ಶ್ರೇಷ್ಠಾತಿ ಶ್ರೇಷ್ಠ ತಂದೆಯಾಗಿದ್ದಾರೆ. ಬ್ರಹ್ಮನಿಗೂ ಸಹ ಪ್ರಜಾಪಿತನೆಂದು ಹೇಳುತ್ತಾರೆ. ಪ್ರಜೆಗಳೆಂದರೆ ಮನುಷ್ಯ ಸೃಷ್ಟಿ. ಶಿವನು ಆತ್ಮರ ತಂದೆಯಾಗಿದ್ದಾರೆ. ಎಲ್ಲರಿಗೂ ಇಬ್ಬರು ತಂದೆಯರಿದ್ದಾರೆ ಆದರೆ ಎಲ್ಲಾ ಆತ್ಮರ ತಂದೆಯು ಶಿವನಾಗಿದ್ದಾರೆ, ಅವರಿಗೆ ದುಃಖಹರ್ತ-ಸುಖಕರ್ತನೆಂದು ಹೇಳಲಾಗುತ್ತದೆ. ಕಲ್ಯಾಣಕಾರಿ ಎಂದೂ ಹೇಳುತ್ತಾರೆ. ದೇವತೆಗಳ ಮುಂದೆ ತಾವು ಸರ್ವಗುಣ ಸಂಪನ್ನರು, ನಾವು ನೀಚರು ಪಾಪಿಗಳಾಗಿದ್ದೇವೆ, ನಮ್ಮಲ್ಲಿ ಯಾವುದೇ ಗುಣವಿಲ್ಲವೆಂದು ಮಹಿಮೆಯನ್ನು ಹಾಡುತ್ತಾರೆ. ಸಂಪೂರ್ಣ ತುಚ್ಛ ಬುದ್ಧಿಯವರಾಗಿದ್ದಾರೆ. ದೇವತೆಗಳು ಸ್ವಚ್ಛ ಬುದ್ಧಿಯವರಾಗಿದ್ದರು, ಇಲ್ಲಿ ಎಲ್ಲರೂ ವಿಕಾರಿ ಪತಿತರಾಗಿದ್ದಾರೆ ಆದ್ದರಿಂದ ಗುರುಗಳನ್ನು ಮಾಡಿಕೊಳ್ಳುತ್ತಾರೆ. ವಾಸ್ತವದಲ್ಲಿ ಯಾರು ಸದ್ಗತಿ ಮಾಡುವರೋ ಅವರೇ ಗುರುವಾಗಿದ್ದಾರೆ. ಗುರುಗಳನ್ನು ವಾನಪ್ರಸ್ಥದಲ್ಲಿ ಮಾಡಿಕೊಳ್ಳಲಾಗುತ್ತದೆ. ನಾವು ಭಗವಂತನ ಬಳಿ ಹೋಗಲು ಬಯಸುತ್ತೇವೆಂದು ಹೇಳುತ್ತಾರೆ, ಸತ್ಯಯುಗದಲ್ಲಿ ವಾನಪ್ರಸ್ಥ ಸ್ಥಿತಿಯೆಂದು ಹೇಳುವುದಿಲ್ಲ. ಅಲ್ಲಿ ಇದು ತಿಳಿದಿರುತ್ತದೆ - ನಾವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳಬೇಕಾಗಿದೆ. ಇಲ್ಲಿ ಮನುಷ್ಯರು ಮುಕ್ತಿಯಲ್ಲಿ ಹೋಗುವುದಕ್ಕಾಗಿ ಗುರುಗಳನ್ನು ಮಾಡಿಕೊಳ್ಳುತ್ತಾರೆ ಆದರೆ ಯಾರೂ ಹೋಗುವುದಿಲ್ಲ. ಇವರೆಲ್ಲರೂ ಭಕ್ತಿಮಾರ್ಗದ ಗುರುಗಳಾಗಿದ್ದಾರೆ. ಶಾಸ್ತ್ರಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ, ಇದನ್ನು ತಂದೆಯೇ ತಿಳಿಸುತ್ತಾರೆ. ತಂದೆಯು ಒಬ್ಬರೇ ಆಗಿದ್ದಾರೆ, ಅವರೇ ಭಗವಂತನಾಗಿದ್ದಾರೆ. ಮನುಷ್ಯರಿಗೆ ಭಗವಂತನೆಂದು ಹೇಳಲು ಹೇಗೆ ಸಾಧ್ಯ! ಇಲ್ಲಂತೂ ಎಲ್ಲರಿಗೆ ಭಗವಂತನೆಂದು ಹೇಳುತ್ತಿರುತ್ತಾರೆ, ಸಾಯಿಬಾಬಾ ಭಗವಂತ, ನಾನೂ ಭಗವಂತ, ನೀವೂ ಭಗವಂತ, ಕಲ್ಲು-ಮುಳ್ಳು ಎಲ್ಲದರಲ್ಲಿ ಭಗವಂತನಿದ್ದಾರೆ ಎಂದು ಹೇಳಿಬಿಡುತ್ತಾರೆ. ನೀವೂ ಸಹ ಮೊದಲು ಕಲ್ಲು ಬುದ್ಧಿಯವರು ನರಕವಾಸಿಗಳಾಗಿದ್ದೀರಿ, ಈಗ ಸಂಗಮಯುಗಿಗಳಾಗಿದ್ದೀರಿ. ಮಹಿಮೆಯೆಲ್ಲವೂ ಸಂಗಮಯುಗದ್ದಾಗಿದೆ, ಪುರುಷೋತ್ತಮ ಮಾಸವನ್ನು ಆಚರಿಸುತ್ತಾರಲ್ಲವೆ ಆದರೆ ಅದರಲ್ಲಿ ಯಾರೂ ಉತ್ತಮ ಪುರುಷರಾಗುವುದಿಲ್ಲ. ನೀವೀಗ ಮನುಷ್ಯರಿಂದ ದೇವತೆಗಳು ಎಷ್ಟೊಂದು ಉತ್ತಮ ಪುರುಷರಾಗಿದ್ದೀರಿ! ತಂದೆಯು ತಿಳಿಸುತ್ತಾರೆ - ನಾನು ಕಲ್ಪದ ಸಂಗಮಯುಗದಲ್ಲಿ ಭಾರತವನ್ನು ಪುರುಷೋತ್ತಮವನ್ನಾಗಿ ಮಾಡಲು ಬರುತ್ತೇನೆ. ಇದನ್ನೂ ಸಹ ಮಕ್ಕಳಿಗೆ ತಿಳಿಸಿದ್ದಾರೆ - ಹೇಗೆ ಆತ್ಮವು ಬಿಂದುವಾಗಿದೆಯೋ ಹಾಗೆಯೇ ಪರಮಪಿತ ಪರಮಾತ್ಮನೂ ಬಿಂದುವಾಗಿದ್ದಾರೆ. ಭೃಕುಟಿಯ ನಡುವೆ ಹೊಳೆಯುವ ನಕ್ಷತ್ರವೆಂದು ಹೇಳುತ್ತಾರೆ, ಆತ್ಮವು ಸೂಕ್ಷ್ಮವಾಗಿದೆ, ಅದನ್ನು ಬುದ್ಧಿಯಿಂದ ಅರಿತುಕೊಳ್ಳಲಾಗುತ್ತದೆ. ಈ ಕಣ್ಣುಗಳಿಂದ ನೋಡಲು ಸಾಧ್ಯವಾಗುವುದಿಲ್ಲ. ದಿವ್ಯ ದೃಷ್ಟಿಯಿಂದ ನೋಡಬಹುದಾಗಿದೆ. ಉದಾಹರಣೆಗೆ: ಯಾರಾದರೂ ತೀವ್ರ ಭಕ್ತಿ ಮಾಡುತ್ತಾರೆಂದರೆ ಅದರಿಂದ ಸಾಕ್ಷಾತ್ಕಾರವಾಗುತ್ತದೆ ಆದರೆ ಅದರಿಂದ ಏನಾದರೂ ಸಿಕ್ಕಿತೇ? ಏನೂ ಇಲ್ಲ. ಸಾಕ್ಷಾತ್ಕಾರದಿಂದ ಸದ್ಗತಿಯಂತೂ ಆಗಲು ಸಾಧ್ಯವಿಲ್ಲ, ಸದ್ಗತಿದಾತ, ದುಃಖಹರ್ತ-ಸುಖಕರ್ತನು ಒಬ್ಬ ತಂದೆಯೇ ಆಗಿದ್ದಾರೆ. ಈ ಪ್ರಪಂಚವೇ ವಿಕಾರಿಯಾಗಿದೆ. ಸಾಕ್ಷಾತ್ಕಾರದಿಂದ ಯಾರೂ ಸ್ವರ್ಗಕ್ಕೆ ಹೋಗುವುದಿಲ್ಲ. ಶಿವನ ಭಕ್ತಿ ಮಾಡಿದರು, ಸಾಕ್ಷಾತ್ಕಾರವಾಯಿತೆಂದರೆ ಏನಾಯಿತು? ತಂದೆಯ ವಿನಃ ಮತ್ತ್ಯಾರೂ ಮರಳಿ ಕರೆದುಕೊಂಡು ಹೋಗಲು ಸಾಧ್ಯವಿಲ್ಲ, ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಮಾಡಿ-ಮಾಡಲ್ಪಟ್ಟಿರುವುದೇ ಆಗುತ್ತಿದೆ ಎಂದು ಹೇಳುತ್ತಾರೆ ಆದರೆ ಅರ್ಥವೇನನ್ನೂ ತಿಳಿದುಕೊಂಡಿಲ್ಲ. ಆತ್ಮದ ಜ್ಞಾನವೂ ಇಲ್ಲ. ಪ್ರತಿಯೊಂದು ಆತ್ಮವು 84 ಲಕ್ಷ ಜನ್ಮಗಳನ್ನು ತೆಗೆದುಕೊಳ್ಳುತ್ತದೆ, ಅದರಲ್ಲಿ ಒಂದು ಮನುಷ್ಯನ ಜನ್ಮವು ದುರ್ಲಭವಾಗಿದೆ ಎಂದು ಹೇಳುತ್ತಾರೆ ಆದರೆ ಈ ರೀತಿಯ ಯಾವುದೇ ಮಾತಿಲ್ಲ, ಮನುಷ್ಯರದಂತೂ ದೊಡ್ಡ ಪಾತ್ರವೇ ನಡೆಯುತ್ತದೆ. ಮನುಷ್ಯರೇ ಸ್ವರ್ಗವಾಸಿಗಳು, ಮನುಷ್ಯರೇ ನರಕವಾಸಿಗಳಾಗುತ್ತಾರೆ. ಭಾರತವೇ ಎಲ್ಲದಕ್ಕಿಂತ ಶ್ರೇಷ್ಠ ಖಂಡವಾಗಿತ್ತು. ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಅಲ್ಲಂತೂ ಬಹಳ ಕೆಲವರೇ ಮನುಷ್ಯರಿರುತ್ತಾರೆ. ಒಂದು ಮತ, ಒಂದು ಧರ್ಮವಿತ್ತು, ಭಾರತವು ಇಡೀ ವಿಶ್ವದ ಮಾಲೀಕನಾಗಿತ್ತು, ಮತ್ತ್ಯಾವುದೇ ಧರ್ಮವಿರಲಿಲ್ಲ. ಇದು ವಿದ್ಯೆಯಾಗಿದೆ. ಇದನ್ನು ಯಾರು ಓದಿಸುತ್ತಾರೆ? ಭಗವಾನುವಾಚ - ನಾನು ನಿಮ್ಮನ್ನು ಈ ರಾಜಯೋಗದ ಮೂಲಕ ರಾಜರಿಗೂ ರಾಜರನ್ನಾಗಿ ಮಾಡುತ್ತೇನೆ. ಭಗವಂತನು ಯಾರಿಗೆ ಗೀತೆಯನ್ನು ತಿಳಿಸಿದರು, ಗೀತೆಯಿಂದ ನಂತರ ಏನಾಯಿತು ಎಂದು ಯಾರಿಗೂ ತಿಳಿದಿಲ್ಲ. ಗೀತೆಯ ನಂತರ ಮಹಾಭಾರತವಾಗಿದೆ, ಗೀತೆಯಲ್ಲಿ ರಾಜಯೋಗವಿದೆ. ಭಗವಾನುವಾಚ - ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ಮನ್ಮನಾಭವದ ಅರ್ಥವೇನೆಂದರೆ ತಂದೆಯು ಹೇಳುತ್ತಾರೆ, ಯಾರು ಸೂರ್ಯವಂಶಿ ಪೂಜ್ಯರಾಗಿದ್ದಿರೋ ಅವರೇ ನಂತರ ಶೂದ್ರವಂಶಿ ಪೂಜಾರಿಗಳಾಗಿ ಬಿಟ್ಟಿದ್ದೀರಿ. ವಿರಾಟ ರೂಪದ ಅರ್ಥವನ್ನೂ ಸಹ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ವಿರಾಟ ರೂಪದಲ್ಲಿ ಬ್ರಾಹ್ಮಣರನ್ನು ತೋರಿಸುವುದೇ ಮರೆ ಮಾಡಿ ಬಿಟ್ಟಿದ್ದಾರೆ. ಬ್ರಾಹ್ಮಣರಂತೂ ಬಹಳ ಮಂದಿ ಎಂದು ಗಾಯನವಾಗುತ್ತದೆ. ಪ್ರಜಾಪಿತ ಬ್ರಹ್ಮನ ಸಂತಾನರಲ್ಲವೆ. ತಂದೆಯು ಬ್ರಹ್ಮಾರವರ ಮೂಲಕವೇ ರಚನೆಯನ್ನು ರಚಿಸುತ್ತಾರೆ, ದತ್ತು ಮಾಡಿಕೊಳ್ಳುತ್ತಾರೆ. ನೀವೀಗ ಶ್ರೇಷ್ಠ ಬ್ರಾಹ್ಮಣರಾಗಿದ್ದೀರಿ. ನಿಮ್ಮನ್ನು ರಚಿಸುವವರು ಸರ್ವಶ್ರೇಷ್ಠ ಭಗವಂತನಾಗಿದ್ದಾರೆ, ಅವರೇ ಎಲ್ಲರ ತಂದೆಯಾಗಿದ್ದಾರೆ. ಬ್ರಹ್ಮನಿಗೂ ಅವರು ತಂದೆಯಾಗಿದ್ದಾರೆ, ಪೂರ್ಣ ರಚನೆಗೆ ತಂದೆಯಾಗಿದ್ದಾರೆ ಅಂದಮೇಲೆ ರಚನೆಯಾದ ನೀವು ಪರಸ್ಪರ ಸಹೋದರರಾದಿರಿ. ಆಸ್ತಿಯು ತಂದೆಯಿಂದ ಸಿಗುತ್ತದೆಯೇ ಹೊರತು ಸಹೋದರನಿಂದಲ್ಲ. ಶಿವ ಜಯಂತಿಯನ್ನೂ ಆಚರಿಸಲಾಗುತ್ತದೆ. ಇಂದಿಗೆ 5000 ವರ್ಷಗಳ ಮೊದಲು ಬ್ರಹ್ಮನ ತನುವಿನಲ್ಲಿ ಶಿವ ತಂದೆಯು ಬಂದಿದ್ದರು, ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡಿದ್ದರು, ಬ್ರಾಹ್ಮಣರೇ ರಾಜಯೋಗವನ್ನು ಕಲಿತಿದ್ದಿರಿ, ಅದನ್ನು ಮತ್ತೆ ನೀವೀಗ ಕಲಿಯುತ್ತಿದ್ದೀರಿ. ಭಾರತವು ಮೊದಲು ಶಿವಾಲಯವಾಗಿತ್ತು. ಶಿವ ತಂದೆಯು ಶಿವಾಲಯ(ಸ್ವರ್ಗ)ವನ್ನು ರಚಿಸಿದರು ಮತ್ತು ಭಾರತವಾಸಿಗಳೇ ಸ್ವರ್ಗದಲ್ಲಿ ರಾಜ್ಯಭಾರ ಮಾಡುತ್ತಿದ್ದರು, ಈಗ ಎಲ್ಲಿ ರಾಜ್ಯ ಮಾಡುತ್ತಾರೆ? ಈಗ ಪತಿತ ಪ್ರಪಂಚ ನರಕವಾಗಿದೆ, ನಾವು ನರಕವಾಸಿಗಳೆಂಬುದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ಇಂತಹವರು ಶರೀರ ಬಿಟ್ಟರು, ಸ್ವರ್ಗವಾಸಿಯಾದರು ಎಂದು ಹೇಳುತ್ತಾರೆ ಅಂದಮೇಲೆ ತಮ್ಮನ್ನು ನರಕವಾಸಿಯೆಂದು ತಿಳಿದುಕೊಳ್ಳಬೇಕಲ್ಲವೆ. |
ತಂದೆಯು ತಿಳಿಸುತ್ತಾರೆ - ನಾನು ನೀವು ಮಕ್ಕಳನ್ನು ಸ್ವರ್ಗವಾಸಿಗಳನ್ನಾಗಿ ಮಾಡಿದ್ದೆನು, ಇಂದಿಗೆ 5000 ವರ್ಷಗಳಾಯಿತು. ಮೊದಲು ನೀವು ಬಹಳ ಸಾಹುಕಾರರಾಗಿದ್ದಿರಿ, ಇಡೀ ವಿಶ್ವದ ಮಾಲೀಕರಾಗಿದ್ದಿರಿ ಅಂದಮೇಲೆ ಅವಶ್ಯವಾಗಿ ಭಗವಂತನೇ ಈ ರೀತಿ ಮಾಡಿರುವರು. ಭಗವಾನುವಾಚ - ನಾನು ನಿಮ್ಮನ್ನು ರಾಜಾಧಿರಾಜರನ್ನಾಗಿ ಮಾಡುತ್ತೇನೆ ಅಂದಮೇಲೆ ಅವಶ್ಯವಾಗಿ ರಾಜರೂ ಆಗುತ್ತಾರೆ, ಪ್ರಜೆಗಳೂ ಆಗುತ್ತಾರೆ. ಅರ್ಧಕಲ್ಪ ದಿನ, ಸ್ವರ್ಗವಾಗಿದೆ. ಅರ್ಧಕಲ್ಪ ರಾತ್ರಿ ನರಕವಾಗಿದೆ. ಈಗ ತಂದೆಯು ಒಂದು ಬಾರಿ ಬರುವರಲ್ಲವೆ, ತಂದೆಯು ಎಲ್ಲರ ಮಾರ್ಗದರ್ಶಕನಾಗಿದ್ದಾರೆ, ಅವರು ಎಲ್ಲರನ್ನೂ ಮರಳಿ ಕರೆದುಕೊಂಡು ಹೋಗುತ್ತಾರೆ. ಅಲ್ಲಿಂದ ಮತ್ತೆ ಮೃತ್ಯುಲೋಕದಲ್ಲಿ ಬರುವುದಿಲ್ಲ. ಒಬ್ಬ ತಂದೆಯೇ ಅಂಧರಿಗೆ ಊರುಗೋಲಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ರಾವಣ ರಾಜ್ಯದ ವಿನಾಶವಾಗಲಿದೆ. ಇದು ಅದೇ ಮಹಾಭಾರತ ಯುದ್ಧವಾಗಿದೆ, ಮನುಷ್ಯರಂತೂ ಏನನ್ನೂ ತಿಳಿದುಕೊಳ್ಳುವುದಿಲ್ಲ. ಭಾರತವಾಸಿಗಳು ತಾವೇ ಪೂಜ್ಯರು, ತಾವೇ ಪೂಜಾರಿಗಳಾಗಿದ್ದಾರೆ, ಏಣಿ ಇಳಿಯುತ್ತಾ-ಇಳಿಯುತ್ತಾ ವಾಮಮಾರ್ಗದಲ್ಲಿ ಹೋಗುವುದರಿಂದ ಪೂಜಾರಿಗಳಾಗಿ ಬಿಡುತ್ತಾರೆ. ಮೊದಲು ನಾವೆಲ್ಲರೂ ಪೂಜ್ಯರು, ಸೂರ್ಯವಂಶಿಯರಾಗಿದ್ದೆವು ನಂತರ ಎರಡು ಕಲೆಗಳು ಕಡಿಮೆಯಾಗಿ ಚಂದ್ರವಂಶಿಯರಾದೆವು. ಇನ್ನೂ ಕೆಳಗಿಳಿಯುತ್ತಾ ಪೂಜಾರಿಗಳಾಗಿದ್ದೇವೆ. ಮೊಟ್ಟ ಮೊದಲು ಶಿವನ ಪೂಜೆಯಾಗುತ್ತದೆ, ಅದಕ್ಕೆ ಅವ್ಯಭಿಚಾರಿ ಪೂಜೆಯೆಂದು ಹೇಳಲಾಗುತ್ತದೆ. ಈಗ ತಂದೆಯು ತಿಳಿಸುತ್ತಾರೆ - ಒಬ್ಬ ನಿರಾಕಾರ ತಂದೆಯನ್ನು ನೆನಪು ಮಾಡಿರಿ, ಮತ್ತ್ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದು. ಹೇ ಪತಿತ-ಪಾವನ ಬಂದು ನಮ್ಮನ್ನು ಪಾವನ ಮಾಡಿರಿ ಎಂದು ಕರೆಯುತ್ತಾರೆ. ನನ್ನ ವಿನಃ ಮತ್ತ್ಯಾರಾದರೂ ಹೇಗೆ ಪಾವನ ಮಾಡುವರು? ಏಣಿಚಿತ್ರದಲ್ಲಿ ತೋರಿಸಿದ್ದಾರೆ - ಕಲಿಯುಗದ ಅಂತ್ಯದಲ್ಲಿ ಏನಾಗುತ್ತದೆ ಎಂದು. ಪಂಚ ತತ್ವಗಳಿಗೂ ಭಕ್ತಿ ಮಾಡುತ್ತಾರೆ. ಸಾಧು-ಸಂತರು ಬ್ರಹ್ಮತತ್ವದ ಸಾಧನೆ ಮಾಡುತ್ತಾರೆ. ಸ್ವರ್ಗದಲ್ಲಿ ಇದ್ಯಾವುದೂ ಇರುವುದಿಲ್ಲ. ಇದೆಲ್ಲಾ ನಾಟಕವು ಭಾರತದ ಪ್ರತಿ ಮಾಡಲ್ಪಟ್ಟಿದೆ, 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಇಲ್ಲಿ ಭಕ್ತಿಮಾರ್ಗದ ಯಾವುದೇ ದಂತಕಥೆಗಳಿಲ್ಲ. ಇದಂತೂ ವಿದ್ಯೆಯಾಗಿದೆ, ಇಲ್ಲಿ ಒಬ್ಬ ತಂದೆಯನ್ನು ನೆನಪು ಮಾಡಿರಿ ಎಂದು ಶಿಕ್ಷಣ ಸಿಗುತ್ತದೆ. ಬ್ರಹ್ಮಾ, ವಿಷ್ಣು, ಶಂಕರನನ್ನೂ ನೆನಪು ಮಾಡಬಾರದು, ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದಾಗಿದೆ. ನಮಗೆ ಒಬ್ಬ ಶಿವ ತಂದೆಯ ವಿನಃ ಮತ್ತ್ಯಾರೂ ಇಲ್ಲವೆಂದು ನೀವು ಮಕ್ಕಳೂ ಸಹ ಹೇಳುತ್ತೀರಿ. ತಂದೆಯೂ ಹೇಳುತ್ತಾರೆ- ಮಕ್ಕಳೇ, ಗೃಹಸ್ಥ ವ್ಯವಹಾರದಲ್ಲಿದ್ದು ಕಮಲಪುಷ್ಫ ಸಮಾನ ಪವಿತ್ರರಾಗಿರಿ. ಪತಿತ-ಪಾವನನೆಂದು ನನ್ನೊಬ್ಬನಿಗೇ ಹೇಳುತ್ತಾರೆ. ಅಂದಮೇಲೆ ಮನುಷ್ಯರು ಗುರುಗಳಾಗಲು ಹೇಗೆ ಸಾಧ್ಯ! ಯಾವಾಗ ಸ್ವಯಂ ತಾನೇ ಮರಳಿ ಹೋಗಲು ಸಾಧ್ಯವಿಲ್ಲ ಅಂದಮೇಲೆ ಅನ್ಯರನ್ನು ಹೇಗೆ ಕರೆದುಕೊಂಡು ಹೋಗುವರು? ಮತ್ತು ಜ್ಯೋತಿಯಲ್ಲಿ ಜ್ಯೋತಿ ಸಮಾವೇಶವಾಗುವುದೂ ಇಲ್ಲ. ಪಾತ್ರವನ್ನಭಿನಯಿಸುವವರೆಲ್ಲರೂ ಇಲ್ಲಿ ಪುನರ್ಜನ್ಮದಲ್ಲಿದ್ದಾರೆ, ನೀವೆಲ್ಲರೂ ಪ್ರಿಯತಮೆಯರಾಗಿದ್ದೀರಿ. ಒಬ್ಬ ಪ್ರಿಯತಮನನ್ನು ನೆನಪು ಮಾಡುತ್ತೀರಿ. ಅವರು ದಯಾಹೃದಯಿ, ಮುಕ್ತಿದಾತನಾಗಿದ್ದಾರೆ. ಇಲ್ಲಿ ದುಃಖವಿದೆ, ಆದ್ದರಿಂದಲೇ ಅವರನ್ನು ನೆನಪು ಮಾಡುತ್ತಾರೆ. ಸತ್ಯಯುಗದಲ್ಲಿ ಯಾರೂ ನೆನಪು ಮಾಡುವುದಿಲ್ಲ. ತಂದೆಯು ತಿಳಿಸುತ್ತಾರೆ - ನನ್ನ ಪಾತ್ರವೇ ಸಂಗಮಯುಗದಲ್ಲಿದೆ, ಬಾಕಿ ಯುಗೇ ಯುಗೇ ಎಂಬ ಶಬ್ಧವನ್ನು ತಪ್ಪಾಗಿ ಬರೆದು ಬಿಟ್ಟಿದ್ದಾರೆ. ಈ ಕಲ್ಯಾಣಕಾರಿ ಪುರುಷೋತ್ತಮ ಯುಗವು ಯಾರಿಗೂ ಗೊತ್ತಿಲ್ಲ. ಮೊದಲ ಮುಖ್ಯ ಮಾತಾಗಿದೆ - ತಂದೆಯನ್ನು ಅರಿತುಕೊಳ್ಳುವುದು, ಇಲ್ಲದಿದ್ದರೆ ತಂದೆಯಿಂದ ಆಸ್ತಿಯನ್ನು ಹೇಗೆ ತೆಗೆದುಕೊಳ್ಳುವಿರಿ! ರಚನೆಯಿಂದ ಆಸ್ತಿಯು ಸಿಗಲು ಸಾಧ್ಯವಿಲ್ಲ. ತಂದೆಯು ಬ್ರಹ್ಮಾರವರ ಮೂಲಕ ದತ್ತು ಮಾಡಿಕೊಂಡಿದ್ದಾರೆ. ಇಷ್ಟೊಂದು ಮಂದಿ ಪ್ರಜೆಗಳು ಹೇಗೆ ರಚಿಸಲ್ಪಡುವರು ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಪ್ರಜಾಪಿತನಿದ್ದಾರಲ್ಲವೆ. ಸರಸ್ವತಿಯು ತಾಯಿಯೋ ಅಥವಾ ಮಗಳಾಗಿದ್ದಾರೆಯೋ? ಎಂಬುದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ನಿಮಗೆ ತಾಯಿಯಂತು ಗುಪ್ತವಾಗಿದ್ದಾರೆ, ಶಿವ ತಂದೆಯು ಬ್ರಹ್ಮಾರವರ ಮೂಲಕ ನಿಮ್ಮನ್ನು ದತ್ತು ಮಾಡಿಕೊಳ್ಳುತ್ತಾರೆ. ನೀವೀಗ ರಾಜ ಋಷಿಗಳಾಗಿದ್ದೀರಿ. ಋಷಿ ಶಬ್ಧವು ಪವಿತ್ರತೆಯ ಸಾಂಕೇತಿಕವಾಗಿದೆ. ಸನ್ಯಾಸಿಗಳು ಹಠಯೋಗಿಗಳಾಗಿದ್ದಾರೆ, ಅವರು ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಯಾವ ಗೀತೆಯನ್ನು ತಿಳಿಸುತ್ತಾರೆಯೋ ಅದೂ ಸಹ ಭಕ್ತಿಮಾರ್ಗದ್ದಾಗಿದೆ, ಎಷ್ಟೊಂದು ಗೀತೆಗಳನ್ನು ರಚಿಸಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ಸಂಸ್ಕೃತದಲ್ಲಂತೂ ಓದಿಸುವುದಿಲ್ಲ, ಶ್ಲೋಕ ಇತ್ಯಾದಿಗಳ ಮಾತೂ ಇಲ್ಲ. ನಾನು ಬಂದು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ. ರಾಜಯೋಗದಿಂದ ನೀವು ಪಾವನರಾಗಿ ಪಾವನ ಪ್ರಪಂಚದ ಮಾಲೀಕರಾಗಿ ಬಿಡುತ್ತೀರಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಎಂದೂ ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದು. ನನ್ನವರು ಒಬ್ಬ ಶಿವ ತಂದೆಯ ವಿನಃ ಮತ್ತ್ಯಾರೂ ಇಲ್ಲ, ಈ ಪಾಠವನ್ನು ಪಕ್ಕಾ ಮಾಡಿಕೊಳ್ಳಬೇಕಾಗಿದೆ. |
2. ತಂದೆಯ ಸಮಾನ ಆತ್ಮಿಕ ಮಾರ್ಗದರ್ಶಕರಾಗಿ ಎಲ್ಲರಿಗೆ ಮನೆಯ ಮಾರ್ಗವನ್ನು ತಿಳಿಸಬೇಕಾಗಿದೆ. ಅಂಧರಿಗೆ ಊರುಗೋಲಾಗಬೇಕಾಗಿದೆ. |
ಓಂ ಶಾಂತಿ. ಈ ಸಮಯದ ಮನುಷ್ಯರ ಜೀವನಕ್ಕೆ ಅಮೂಲ್ಯ ಜೀವನವೆಂದು ಹೇಳಲಾಗುತ್ತದೆ. ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ ಮತ್ತು ತಂದೆಯೂ ತಿಳಿಸುತ್ತಾರೆ - ಇದು ನಿಮ್ಮ ಅಂತಿಮ ಮನುಷ್ಯ ಜನ್ಮವಾಗಿದೆ. ಇದು ಬಹಳ ಅಮೂಲ್ಯವಾಗಿದೆ, ಇದಕ್ಕೆ ಯಾರೂ ಮೌಲ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ಹಾಗೆಯೇ ಈ ಸಮಯವೂ ಸಹ ಬಹಳ ಅಮೂಲ್ಯವಾಗಿದೆ, ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಈಗ ಕವಡೆಯಿಂದ ವಜ್ರ ಸಮಾನರು, ಭಿಕಾರಿಗಳಿಂದ ರಾಜಕುಮಾರರು, ಬಡವರಿಂದ 100% ಸಾಹುಕಾರಾಗುತ್ತಿದ್ದೀರಿ. ಈ ನಿಮ್ಮ ಮನುಷ್ಯ ಶರೀರವು ಬಹಳ ಅಮೂಲ್ಯವಾಗಿದೆ ಏಕೆಂದರೆ ತಂದೆಯ ಮಕ್ಕಳಾಗಿದ್ದೀರಿ. ಅನ್ಯಮನುಷ್ಯರ ಜೀವನವು ಅಮೂಲ್ಯವಲ್ಲ, ನೀವು ಮಕ್ಕಳು ಈ ಸಮಯದಲ್ಲಿ ತಮ್ಮ ಶ್ವಾಸವನ್ನೂ ವ್ಯರ್ಥವಾಗಿ ಕಳೆಯಬಾರದು. ಅದನ್ನು ಹೇಗೆ ಸಫಲ ಮಾಡಿಕೊಳ್ಳಬೇಕು ಎಂಬುದನ್ನು ತಂದೆಯು ತಿಳಿಸುತ್ತಾರೆ. ಶ್ವಾಸ-ಶ್ವಾಸದಲ್ಲಿ ತಂದೆಯನ್ನು ನೆನಪು ಮಾಡಿರಿ, ಮನುಷ್ಯರು ಭಕ್ತಿಮಾರ್ಗದಲ್ಲಿ ಅನೇಕ ಪ್ರಕಾರದ ಸ್ಮರಣೆ ಮಾಡುತ್ತಾರೆ. ಅದು ಅನೇಕರ ವ್ಯಭಿಚಾರಿ ನೆನಪಾಗಿದೆ, ನೀವು ಮಕ್ಕಳೇ ಒಬ್ಬ ತಂದೆಯ ವಿನಃ ಮತ್ತ್ಯಾರನ್ನೂ ನೆನಪು ಮಾಡುವುದಿಲ್ಲ ಏಕೆಂದರೆ ತಿಳಿದುಕೊಂಡಿದ್ದೀರಿ, ನಮ್ಮ ಶ್ವಾಸವೂ ವ್ಯರ್ಥವಾಗಿ ಹೋಗದಿರಲಿ. ಶ್ವಾಸ-ಶ್ವಾಸವು ಪ್ರಯತ್ನ ಮಾಡಿ ತಂದೆಯನ್ನು ನೆನಪು ಮಾಡಬೇಕಾಗಿದೆ ಎಂಬ ಆದೇಶ ಸಿಗುತ್ತದೆ, ಇದರಲ್ಲಿ ಜಪ ಮಾಡುವಂತಿಲ್ಲ. ಶಬ್ಧದಿಂದ ದೂರವಿರುವುದೇ ನಮ್ಮ ಸ್ವಧರ್ಮವಾಗಿದೆ, ಈ ಶರೀರದ ಮೂಲಕ ನಾವು ಪಾತ್ರವನ್ನಭಿನಯಿಸುತ್ತೇವೆ. ಆತ್ಮವು ಮೂಲತಃ ಶಾಂತಿಧಾಮ ನಿವಾಸಿಯಾಗಿದೆ. ಇದನ್ನು ನಮ್ಮ ವಿನಃ ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ - ನಾವು ಮೂಲತಃ ಶಾಂತಿಧಾಮದ ನಿವಾಸಿಗಳು ಎಂದು. ನೀವು ಎಲ್ಲಿನ ನಿವಾಸಿಗಳಾಗಿದ್ದೀರಿ ಎಂದು ಯಾರಾದರೂ ಕೇಳಿದರೆ ನೀವು ಹೇಳುತ್ತೀರಿ - ನಾವಾತ್ಮರು ಶಾಂತಿಧಾಮದ ವಾಸಿಗಳಾಗಿದ್ದೇವೆ ಬಾಕಿ ಇಲ್ಲಿನ ವಿಳಾಸವನ್ನು ಕೇಳಿದಾಗ ನಾವು ಇಂತಹಕಡೆ ಇರುವವರೆಂದು ಹೇಳುತ್ತೀರಿ. ಶಾಂತಿಧಾಮದಿಂದ ಇಲ್ಲಿ ಬಂದು ಶರೀರವನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸಲೇಬೇಕಾಗಿದೆ, ಈಗ ಇದು ಈ ಮೃತ್ಯುಲೋಕದ ಅಂತಿಮ ಜನ್ಮವಾಗಿದೆ. ಇದರಲ್ಲಿ ಒಂದು ಶ್ವಾಸವನ್ನೂ ವ್ಯರ್ಥವಾಗಿ ಕಳೆಯಬಾರದು, ಆ ಮನುಷ್ಯರಂತು ಬಹಳ ವ್ರತಗಳನ್ನಿಟ್ಟುಕೊಳ್ಳುತ್ತಾರೆ. ಅವರಿಗೆ ಹೇಳಬೇಕಾಗಿದೆ - ನೀವು ಏಕೆ ಸಮಯವನ್ನು ವ್ಯರ್ಥ ಮಾಡುತ್ತೀರಿ? ಇದಕ್ಕಿಂತಲೂ ಶ್ರೇಷ್ಠಾತಿ ಶ್ರೇಷ್ಠ ತಂದೆಯನ್ನು ನೆನಪು ಮಾಡಿರಿ, ಉಪವಾಸವಿರುವುದೂ ನೀವು ಜೀವಘಾತ ಮಾಡಿದಂತೆ. ಆತ್ಮಘಾತವೆಂದು ಹೇಳುವುದಿಲ್ಲ ಏಕೆಂದರೆ ಆತ್ಮದ ಘಾತವೆಂದೂ ಆಗುವುದಿಲ್ಲ, ಜೀವಘಾತಿ ಮಹಾಪಾಪಿ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ತಮ್ಮ ಶರೀರಕ್ಕೆ ತೊಂದರೆ ಕೊಡುವುದೂ ಸಹ ಮಹಾಪಾಪವಾಗಿದೆ. ನೀವು ಇದನ್ನು ಹೇಳಬಲ್ಲಿರಿ, ಈ ಸಮಯದಲ್ಲಿ ನೀವು ಈ ಪುರುಷಾರ್ಥದಿಂದ ಮಹಾನ್ ಪುಣ್ಯಾತ್ಮರಾಗಬಹುದು ಏಕೆಂದರೆ ಇಲ್ಲಿ ತಂದೆಯು ಬಂದಿದ್ದಾರೆ ಎಂಬುದು ಅವರಿಗೆ ತಿಳಿದಿಲ್ಲ. ಇವರು ಬಾಪ್ದಾದಾ ಆಗಿದ್ದಾರಲ್ಲವೆ. ಶಿವ ತಂದೆ, ಬ್ರಹ್ಮಾದಾದಾ. ಪ್ರಜಾಪಿತ ಬ್ರಹ್ಮನು ಪ್ರಸಿದ್ಧವಾಗಿದ್ದಾರೆ ಅಂದಮೇಲೆ ಇಂತಹ ಅಮೂಲ್ಯ ಶರೀರದ ಘಾತವನ್ನೇಕೆ ಮಾಡಿಕೊಳ್ಳುತ್ತೀರಿ, ಇದಕ್ಕಿಂತಲೂ ಮನ್ಮನಾಭವ ಆಗಿ ತಂದೆಯನ್ನು ನೆನಪು ಮಾಡಿರಿ. ಇದರಿಂದ ಜೀವನ್ಮುಕ್ತಿ ಸಿಗುವುದೆಂದು ಹೇಳಬಹುದು ಅಥವಾ ಯಾರ ಮೂಲಕವಾದರೂ ಸಂದೇಶವನ್ನು ಕಳುಹಿಸಿರಿ. ಈ ಸಮಯದಲ್ಲಿ ಈ ಪ್ರಪಂಚವು ಬದಲಾಗುತ್ತಿದೆ, ಈ ಪುರುಷಾರ್ಥದಿಂದ ನಿಮಗೆ ಜೀವನ್ಮುಕ್ತಿ ಪ್ರಾಪ್ತಿಯಾಗುತ್ತದೆ ಎಂದು ದೆಹಲಿಯ ಮಕ್ಕಳೂ ಸಹ ಕಳುಹಿಸಬಹುದು. ನೋಡುತ್ತೀರಿ, ಸನ್ಮುಖದಲ್ಲಿ ಮಹಾಭಾರತ ಯುದ್ಧವೂ ಇದೆ ಆದ್ದರಿಂದ ಮಕ್ಕಳು ಒಂದು ಶ್ವಾಸವನ್ನೂ ಸಹ ವ್ಯರ್ಥ ಮಾಡಬಾರದು. ಇಡೀ ಕಲ್ಪ ಏಣಿಯನ್ನಿಳಿಯುತ್ತಾ-ಇಳಿಯುತ್ತಾ ತಮೋಪ್ರಧಾನರಾಗಿ ಬಿಟ್ಟಿದ್ದೀರಿ, ಈಗ ಮತ್ತೆ ಸತೋಪ್ರಧಾನರಾಗಬೇಕಾಗಿದೆ, ಇದರಲ್ಲಿ ಪರಿಶ್ರಮವಾಗುತ್ತದೆ. ಇದು ಚಿಕ್ಕಮ್ಮನ ಮನೆಯಂತಲ್ಲ. ಜನಕನಿಗೆ ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿ ಹೇಗೆ ಸಿಕ್ಕಿತು? ಅದನ್ನೂ ನೀವು ತಿಳಿದುಕೊಂಡಿದ್ದೀರಿ ಮತ್ತು ಬರೆಯಬಲ್ಲಿರಿ - ಒಂದು ಸೆಕೆಂಡಿನಲ್ಲಿ ಕವಡೆಯೂ ಖರ್ಚಿಲ್ಲದೆ ಜೀವನ್ಮುಕ್ತಿ ಪ್ರಾಪ್ತಿಯಾಗುತ್ತದೆ ಎಂದು. |
ಇದು ಮೃತ್ಯುಲೋಕದ ಅಂತಿಮ ಜನ್ಮವಾಗಿದೆ. ಅಮರಲೋಕದಲ್ಲಿ ಜೀವನ್ಮುಕ್ತಿಯಿರುತ್ತದೆ. ಮೃತ್ಯುಲೋಕದಲ್ಲಿ ಜೀವನ ಬಂಧನವಾಗಿದೆ. ಇದು ಭಾಗವತದಲ್ಲಿಯೂ ಇದೆ. ಜನಕನಿಗೆ ಜ್ಞಾನ ಕೊಡುವವರು ಯಾರೂ ಸಿಗಲಿಲ್ಲ ಎಂದು ಒಂದು ಕಥೆಯನ್ನು ಬರೆದು ಬಿಟ್ಟಿದ್ದಾರೆ. ಪರಮಪಿತ ಪರಮಾತ್ಮನು ಬ್ರಹ್ಮಾರವರ ಮೂಲಕ ಜ್ಞಾನವನ್ನು ಕೊಡುತ್ತಾರೆ, ಇದನ್ನೇ ಬ್ರಹ್ಮಜ್ಞಾನವೆಂದು ಹೇಳಲಾಗುತ್ತದೆ. ಬ್ರಹ್ಮನಿಗೂ ಸಹ ಅವಶ್ಯವಾಗಿ ಯಾರಾದರೂ ಕೊಟ್ಟಿರಬೇಕಲ್ಲವೆ. ಜ್ಞಾನಸಾಗರನು ಪರಮಪಿತ ಪರಮಾತ್ಮನಾಗಿದ್ದಾರೆ. ಅವರು ಬ್ರಹ್ಮಾರವರ ಮೂಲಕ ಬಂದು ಜ್ಞಾನವನ್ನು ಕೊಡುತ್ತಾರೆ. ತ್ರಿಮೂರ್ತಿ ಚಿತ್ರದಲ್ಲಿ ನೀವು ಬಹಳ ಚೆನ್ನಾಗಿ ತಿಳಿಸಬಹುದು. ಯಾರಾದರೂ ಒಳಗೆ ಬರುತ್ತಾರೆಂದರೆ ಅವರನ್ನು ಕೇಳಿರಿ, ಬೋರ್ಡ್ನ್ನು ನೋಡಿದಿರಾ? ಅದರ ಮೇಲೆ ಏನು ಬರೆಯಲ್ಪಟ್ಟಿದೆ? ಬ್ರಹ್ಮಾಕುಮಾರ-ಕುಮಾರಿಯರು ಪ್ರಜಾಪಿತ ಬ್ರಹ್ಮನ ಮಕ್ಕಳಾದರು. ಪ್ರಜಾಪಿತನಿಗೆ ಕೇವಲ ಕುಮಾರಿಯರೇ ಇರುತ್ತಾರೆಯೇ? ಅವಶ್ಯವಾಗಿ ಕುಮಾರರೂ ಇದ್ದಾರೆ ಅಂದಮೇಲೆ ನಮ್ಮದು ಇದು ಪರಿವಾರವಾಯಿತು. ಬ್ರಹ್ಮನು ತಂದೆಯಾಗಿದ್ದಾರೆ, ಅಂದಾಗ ಬ್ರಹ್ಮನು ಯಾರ ಮಗನಾಗಿದ್ದಾರೆ? ಶಿವ ತಂದೆಯ ಮಗನಾಗಿದ್ದಾರೆ. ತಂದೆಯು ಇವರ ಮೂಲಕ ಸ್ಥಾಪನೆ ಮಾಡುತ್ತಿದ್ದಾರೆ. ಇದು ಪರಿವಾರವೂ ಆಗಿದೆ, ಪಾಠಶಾಲೆಯೂ ಆಗಿದೆ. ಸರ್ವರ ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರೆ, ಅವರೇ ಈ ಪ್ರಪಂಚವನ್ನು ಸ್ಥಾಪನೆ ಮಾಡುತ್ತಿದ್ದಾರೆ. ಅಂದಮೇಲೆ ಅವಶ್ಯವಾಗಿ ಆಸುರೀ ಪ್ರಪಂಚವು ಸಮಾಪ್ತಿಯಾಗುವುದು. ಭಾರತದ ಉನ್ನತಿ ಮತ್ತು ಅವನತಿಯಾಗುತ್ತದೆ. ಭಾರತವೇ ಸ್ವರ್ಗದಿಂದ ನರಕ, ಶ್ರೇಷ್ಠದಿಂದ ಕನಿಷ್ಟವಾಗುತ್ತದೆ. ಸ್ವರ್ಗವೆಂದು ಹೊಸ ಪ್ರಪಂಚ. ಯಾರು ಬುದ್ಧಿವಂತರಾಗಿರುವರೋ ಅವರು ಅವಶ್ಯವಾಗಿ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತೆಂದು ತಿಳಿದುಕೊಳ್ಳುತ್ತಾರೆ. ನೀವು ಇದನ್ನೂ ಬರೆಯುತ್ತೀರಿ – ದೇವತಾ ಧರ್ಮವು ಹೇಗೆ ಸ್ಥಾಪನೆಯಾಗುತ್ತಿದೆ, ಒಂದು ಸೆಕೆಂಡಿನಲ್ಲಿ ಹೇಗೆ ಜೀವನ್ಮುಕ್ತಿ ಸಿಗುತ್ತದೆ.... ಎಂಬುದನ್ನು ಬಂದು ತಿಳಿದುಕೊಳ್ಳಿ. ಈಗ ಇದು ಹಳೆಯ ಪ್ರಪಂಚವಾಗಿದೆ. ಇದು ಬದಲಾಗಿ ಹೊಸ ಪ್ರಪಂಚವಾಗುತ್ತಿದೆ ಆದ್ದರಿಂದ ಈ ಅಂತಿಮ ಜನ್ಮವು ಬಹಳ ಅಮೂಲ್ಯವಾಗಿದೆ, ಇದಕ್ಕೆ ಬಹಳ ಮಹತ್ವಿಕೆಯಿದೆ ಯಾವಾಗ ನಾವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ ಮತ್ತು ಆದಿ ಸನಾತನ ದೇವಿ-ದೇವತಾ ಧರ್ಮದವರೇ ಬಂದು ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ. ಒಂದುವೇಳೆ ತೆಗೆದುಕೊಳ್ಳಲಿಲ್ಲವೆಂದರೆ ಇವರು 84 ಜನ್ಮಗಳನ್ನು ತೆಗೆದುಕೊಳ್ಳುವವರಲ್ಲ. ಸೂರ್ಯವಂಶದಲ್ಲಿ ಬರುವವರಲ್ಲ, ಕೊನೆಯಲ್ಲಿ ಬರುತ್ತಾರೆಂದು ತಿಳಿಯಬೇಕು. ಯಾರದು ಪೂರ್ಣ ಜ್ಯೋತಿಯು ಬೆಳಗುತ್ತದೆಯೋ ಅವರು ಸತ್ಯಯುಗದಲ್ಲಿ ಬರುತ್ತಾರೆ. ಕೊನೆಯಲ್ಲಿ ದಿನ-ಪ್ರತಿದಿನ ಇನ್ನೂ ಕಡಿಮೆ ಶಕ್ತಿಯುಳ್ಳವರು, ಬರುತ್ತಾರೆ. ಮಹಾನ್ ಸೌಭಾಗ್ಯಶಾಲಿಗಳೇ ಅಕ್ಯೂರೇಟ್ ಹೊಸ ಪ್ರಪಂಚದಲ್ಲಿ ಬರುತ್ತಾರೆ. ಹೊಸ ಮನೆಯಲ್ಲಿಯೇ ಇರಬೇಕಲ್ಲವೆ. 10-12 ವರ್ಷಗಳ ನಂತರ ಹೋಗಿ ಇರುವಂತಹ ಕಚ್ಚಾ ಪುರುಷಾರ್ಥವನ್ನು ಏಕೆ ಮಾಡಬೇಕು! ಮಮ್ಮಾ-ಬಾಬಾರವರು ಹೊಸ ಪ್ರಪಂಚದಲ್ಲಿ ಮಹಾರಾಜ-ಮಹಾರಾಣಿ ಆಗುತ್ತಾರೆಂದರೆ ನಾವೂ ಸಹ ಏಕೆ ಆಗಬಾರದು. ಸರ್ವೀಸನ್ನು ವೃದ್ಧಿ ಮಾಡಬೇಕು. ಮಕ್ಕಳಿಗೆ ಇದೇ ವಿಚಾರ ನಡೆಯಬೇಕು. |
ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಇಂದು ಬಹಳ ಗುಹ್ಯ ಮಾತುಗಳನ್ನು ತಿಳಿಸುತ್ತೇನೆ. ತಂದೆಯನ್ನು ಅರಿತುಕೊಂಡಿರಿ ಮತ್ತು ಜೀವನ್ಮುಕ್ತಿಗೆ ಹಕ್ಕುದಾರರಾಗಿಯೇ ಬಿಡುತ್ತೀರಿ. ಜ್ಞಾನದ ವಿನಾಶವೆಂದೂ ಆಗುವುದಿಲ್ಲ. ಕೆಲವು ಮನುಷ್ಯರು ಬಹಳ ಚೆನ್ನಾಗಿ ತಿಳಿದುಕೊಳ್ಳುತ್ತಾರೆ, ಇನ್ನೂ ಕೆಲವರು ಏನನ್ನೂ ತಿಳಿದುಕೊಳ್ಳುವುದಿಲ್ಲ. ಹಾಗೆಯೇ ನೋಡಿಕೊಂಡು ಹೊರಟು ಹೋಗುತ್ತಾರೆ. ಕೆಲವರು ನಾವು ಖಂಡಿತ ಬರುತ್ತೇವೆಂದು ಹೇಳಿ ಹೋಗುತ್ತಾರೆ ಆದರೆ ಮಾಯೆಯು ಮತ್ತೆ ಮರೆಸಿ ಬಿಡುತ್ತದೆ. ಮಾಯಾ ಬೆಕ್ಕು ಕಡಿಮೆಯಿಲ್ಲ, ಗುಲಾಬ್ ಕಾವಲಿ ಎಂಬ ಒಂದು ಆಟವನ್ನೂ ತೋರಿಸುತ್ತಾರೆ. ಈ ಉದಾಹರಣೆಯೂ ನಿಮಗಾಗಿಯೇ ಇದೆ. ತಂದೆಯೇ ತಿಳಿಸುತ್ತಾರೆ. ಇಲ್ಲಿ ನೀವು ಮಾಯೆಯ ಮೇಲೆ ಜಯ ಗಳಿಸಿ ಜಗಜ್ಜೀತರಾಗಲು ಬಂದಿದ್ದೀರಿ, ಇದರಮೇಲೆ ಕಥೆಯೂ ಮಾಡಲ್ಪಟ್ಟಿದೆ. ನೀವು ಮಾಯೆಯ ಮೇಲೆ ಜಯ ಗಳಿಸುವುದಕ್ಕಾಗಿ ಯೋಗಬಲದಲ್ಲಿರುತ್ತೀರಿ ಆದರೆ ಮಾಯಾಬೆಕ್ಕು ತಿರುಗಿಸಿ ಬಿಡುತ್ತದೆ. ಗುಲಾಬ್ ಕಾವಲಿ, ಅಲ್ಲಾ ಅವಲುದ್ದೀನ್ ಇವೆಲ್ಲವೂ ಈ ಸಮಯದ ಮಾತುಗಳಾಗಿವೆ. ಅಲ್ಲಾರವರೇ ಅವಲುದ್ಧೀನ್, ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ. ಹತಮತಾಯಿ ಆಟವೂ ಈ ಸಮಯದ್ದಾಗಿದೆ. ತಂದೆಯನ್ನು ನೆನಪು ಮಾಡದಿದ್ದರೆ ಮಾಯೆಯು ಬಂದು ಬಿಡುತ್ತದೆ. ಏನೆಲ್ಲವೂ ಆಗಿ ಬಿಟ್ಟಿದೆಯೋ ಅದನ್ನು ನಂತರ ಕುಳಿತು ಕಥೆಗಳ ರೂಪದಲ್ಲಿ ಬರೆಯುತ್ತಾರೆ. ಏನು ಆಗಲಿದೆಯೋ ಅದನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಹಿಂದೆ ಏನೆಲ್ಲವೂ ಕಳೆದು ಹೋಗಿದೆಯೋ ಅದರ ನಾಟಕವನ್ನು ರಚಿಸುತ್ತಾರೆ. ಕಂಸ ವಧೆ, ಅಮೃತ ಮಂಥನ, ಭಿನ್ನ-ಭಿನ್ನ ಪ್ರಕಾರದ ಆಟಗಳನ್ನು ರಚಿಸುತ್ತಾರೆ ಆದರೆ ಇದು ಬೇಹದ್ದಿನ ನಾಟಕವಾಗಿದೆ ಎಂಬುದನ್ನು ಪಾಪ ಅವರು ತಿಳಿದುಕೊಂಡಿಲ್ಲ. ನಿಮಗೆ ತಿಳಿದಿದೆ - ಇದು ಅನಾದಿ, ಅವಿನಾಶಿ ನಾಟಕವಾಗಿದೆ. ಈ ನಾಟಕವು ಎಷ್ಟು ವರ್ಷಗಳದಾಗಿದೆ ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಚರಿತ್ರೆಯು ಪುನರಾವರ್ತನೆಯಾಗುತ್ತದೆ ಎಂದು ಹೇಳುತ್ತಾರೆ, ತಿಳಿದುಕೊಳ್ಳುವುದಿಲ್ಲ. ತಂದೆಯು ಭಿನ್ನ-ಭಿನ್ನ ಪ್ರಕಾರದ ರಹಸ್ಯಗಳನ್ನು ತಿಳಿಸುತ್ತಾರೆ ಯಾವುದರಿಂದ ನಮ್ಮ ಈ ಅಂತಿಮ ಜನ್ಮವು ಬಹಳ ಅಮೂಲ್ಯವಾಗಿದೆ, ಇದರಲ್ಲಿ ಸಮಯವನ್ನು ವ್ಯರ್ಥ ಮಾಡಬಾರದು ಎಂಬುದನ್ನು ಬುದ್ಧಿಯಲ್ಲಿ ಕುಳಿತುಕೊಳ್ಳಲಿ ಎಂದು. ಕೈಕೆಲಸ ಮಾಡಲಿ, ಬುದ್ಧಿಯು ತಂದೆಯನ್ನು ನೆನಪು ಮಾಡಲಿ. ಬುದ್ಧಿಯು ಆತ್ಮದಲ್ಲಿದೆಯಲ್ಲವೆ. ನನಗೆ ತೊಂದರೆ ಕೊಡಬೇಡಿ, ನನ್ನ ಮನಸ್ಸನ್ನು ದುಃಖಿಯನ್ನಾಗಿ ಮಾಡಬೇಡಿ ಎಂದು ಆತ್ಮವೇ ಹೇಳುತ್ತದೆ. ಬುದ್ಧಿಯು ತಿಳಿದುಕೊಳ್ಳುತ್ತದೆ ಮತ್ತು ಇವರು ನಮಗೆ ಸುಖ ಕೊಡುತ್ತಾರೆ, ಇವರು ದುಃಖ ಕೊಡುತ್ತಾರೆ ಎಂದು ನಿರ್ಣಯ ಮಾಡುತ್ತದೆ. ಆತ್ಮವು ಶರೀರವಿಲ್ಲದೆ ಮಾತನಾಡಲು ಸಾಧ್ಯವಿಲ್ಲ. ಆತ್ಮವೇ ಎಲ್ಲವನ್ನು ಕಲಿಯುತ್ತದೆ. ಸಂಸ್ಕಾರವು ಆತ್ಮದಲ್ಲಿಯೇ ತುಂಬುತ್ತದೆ. ಈಗ ನಿಮಗೆ ಪರಮಪಿತ ಪರಮಾತ್ಮನು ಕಲಿಸುತ್ತಿದ್ದಾರೆ. ನೀವು ತಿಳಿದುಕೊಂಡಿದ್ದೀರಿ, ತಂದೆಯು ಜ್ಞಾನಸಾಗರ, ಪತಿತ-ಪಾವನನಾಗಿದ್ದಾರೆ. ಅವರು ಭಾರತಕ್ಕಾಗಿ ವೈಕುಂಠದ ಉಡುಗೊರೆಯನ್ನು ತೆಗೆದುಕೊಂಡು ಬರುತ್ತಾರೆ ಆದ್ದರಿಂದ ಸರ್ವರ ಸದ್ಗತಿದಾತನೆಂದು ಗಾಯನವಿದೆ. ಅವರ ಜನ್ಮ ಸ್ಥಾನವು ಭಾರತವಾಗಿದೆ. ಸೋಮನಾಥ ಮಂದಿರವು ಇಲ್ಲಿಯೆ ಇದೆ. ಶಿವ ತಂದೆಯು ಬಂದಿದ್ದರು ಆದ್ದರಿಂದಲೇ ಅವರ ನೆನಪಾರ್ಥ ಮಂದಿರವನ್ನು ನಿರ್ಮಿಸಿದ್ದಾರೆ. ಅವರು ಯಾವಾಗ ಬಂದರು, ಏನು ಮಾಡಿ ಹೋದರು ಎಂಬುದನ್ನು ತಿಳಿದುಕೊಂಡಿಲ್ಲ. ಲಕ್ಷ್ಮೀ-ನಾರಾಯಣರಿದ್ದರು ನಂತರ ಅವರು ಎಲ್ಲಿ ಹೋದರು, ಅವರು ಈ ಪತಿತ ಪ್ರಪಂಚದಲ್ಲಿದ್ದಾರೆ. ಸತೋಪ್ರಧಾನರಾಗಿದ್ದರು ಮತ್ತೆ ಚಕ್ರವನ್ನು ಸುತ್ತಿ ತಮೋಪ್ರಧಾನರಾಗಿದ್ದಾರೆಂದು ತಿಳಿದುಕೊಳ್ಳುತ್ತಾರೆಯೇ! ನಾಮ-ರೂಪವಂತೂ ಬದಲಾಗುತ್ತದೆಯಲ್ಲವೆ. ಪ್ರತೀ ಜನ್ಮದಲ್ಲಿ ಮುಖ ಲಕ್ಷಣಗಳು ಬದಲಾಗುತ್ತದೆ. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಇದರಲ್ಲಿ ಸ್ವಲ್ಪವೂ ಅಂತರವಾಗಲು ಸಾಧ್ಯವಾಗುವುದಿಲ್ಲ. ಒಬ್ಬರ ರೂಪವು ಇನ್ನೊಬ್ಬರಿಗೆ ಹೋಲುವುದಿಲ್ಲ. ಮಕ್ಕಳು ತಮ್ಮ ತಂದೆಯನ್ನು ಅರಿತುಕೊಳ್ಳಲಿ ಎಂದು ತಂದೆಗೆ ಮಕ್ಕಳ ಮೇಲೆ ದಯೆ ಬರುತ್ತದೆ, ಅರ್ಥವಾಗುತ್ತದೆಯಲ್ಲವೆ. ಬ್ರಹ್ಮಾಕುಮಾರ-ಕುಮಾರಿಯರು ವೃದ್ಧಿಯಾಗುತ್ತಾ ಹೋಗುತ್ತಾರೆ. ಇದು ಒಂದುದಿನ ಬರುವುದು. ಎಲ್ಲರೂ ಸುತ್ತುವರೆಯುತ್ತಾ ಇರುತ್ತಾರೆ. ನಿಮ್ಮ ಪ್ರದರ್ಶನಿಗೆ ಎಲ್ಲರೂ ಬರುತ್ತಾರೆ, ದಿನ ಕಳೆದಂತೆ ಪ್ರಸಿದ್ಧಿಯಾಗುತ್ತಾ ಹೋಗುತ್ತದೆ. ತಂದೆಯು ಅಭಿಪ್ರಾಯದ ಪುಸ್ತಕವನ್ನು ಮುದ್ರಿಸುತ್ತಾರೆ. ಅದೂ ಸಹ ಒಂದು ದಿನ ಕೆಲಸಕ್ಕೆ ಬರುವುದು, ಅನೇಕರಿಗೆ ಕಳುಹಿಸಬೇಕಾಗುವುದು. ಯಾವ ಮಕ್ಕಳು ಸೇವಾಧಾರಿಗಳಾಗಿದ್ದಾರೆಯೋ ಅವರು ಇಡೀ ದಿನ ಈ ವಿಚಾರಗಳನ್ನು ಮಾಡಬೇಕಾಗುತ್ತದೆ. ಆಗ ಭಲೆ ಬಿ.ಕೆ.,ಗಳು ಬಂದು ಮಿಲನ ಮಾಡಲಿ ಎಂದು ದೊಡ್ಡ-ದೊಡ್ಡವರೂ ಸಹ ಕೂಡಲೇ ಹೇಳುತ್ತಾರೆ. ಉಪವಾಸ ಸತ್ಯಾಗ್ರಹಗಳನ್ನೂ ಸಹ ಮಾಡುತ್ತಾರೆಂದರೆ 10-12 ದಿನಗಳ ನಂತರ ಶಕ್ತಿಹೀನರಾಗಿ ಬಿಡುತ್ತಾರೆ, ಮಾತನಾಡುವುದಕ್ಕೂ ಆಗುವುದಿಲ್ಲ. ನಿಮ್ಮ ಮಾತನ್ನು ತಿಳಿದುಕೊಳ್ಳುತ್ತಾರೆ ಮತ್ತು ಅವಶ್ಯವಾಗಿ ಜೀವನ್ಮುಕ್ತಿಯನ್ನು ಪಡೆಯಲು ಇದೇ ಸರಿಯಾದ ಮಾರ್ಗ ಎಂಬುದನ್ನು ಹೇಳುತ್ತಾರೆ. ಸರ್ವರ ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರೆ ಉಳಿದೆಲ್ಲರೂ ಭಕ್ತಿಮಾರ್ಗದ ಗುರುಗಳಾಗಿದ್ದಾರೆ. ಗುರುಗಳಂತೂ ಅನೇಕ ಮಂದಿ ಆಗಿ ಹೋದರಲ್ಲವೆ. ಸ್ತ್ರೀಗೆ ಪತಿಯೂ ಗುರುವಾಗಿದ್ದಾರೆ, ಕಥೆ ಹೇಳುವವರಿಗೂ ಗುರುಗಳೆಂದು ಹೇಳುತ್ತಾರೆ. ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಮಕ್ಕಳಿಗೆ ಸರ್ವೀಸಿಗಾಗಿ ಬಹಳ ವಿಶಾಲ ಮನೋಭಾವನೆಯಿರಬೇಕು. ತಂದೆಯನ್ನು ನೆನಪು ಮಾಡಿ ರಾವಣನ ಮೇಲೆ ವಿಜಯ ಗಳಿಸಬೇಕಾಗಿದೆ. ಶ್ವಾಸವನ್ನು ವ್ಯರ್ಥವಾಗಿ ಕಳೆಯಬಾರದು. ಯಾರು ಸಮಯವನ್ನು ವ್ಯರ್ಥವಾಗಿ ಕಳೆಯುವರೋ ಅವರಿಗೆ ಬುದ್ಧಿಹೀನರೆಂದು ಹೇಳಲಾಗುತ್ತದೆ. ತಂದೆಯು ಹೇಳುತ್ತಾರೆ - ಯಾರದೇ ಜೀವನವನ್ನು ವಜ್ರ ಸಮಾನವನ್ನಾಗಿ ಮಾಡಲು ನೀವು ಸರ್ವೀಸ್ ಮಾಡುವುದಿಲ್ಲವೇ! ಎಷ್ಟೊಂದು ಸಮಯವನ್ನೂ ಶಕ್ತಿಯನ್ನೂ ವ್ಯರ್ಥವಾಗಿ ಕಳೆಯುತ್ತೀರಿ, ಏನನ್ನೂ ತಿಳಿದುಕೊಳ್ಳುವುದಿಲ್ಲ. ಆದ್ದರಿಂದ ಕಲ್ಲು ಬುದ್ಧಿಯವರೆಂದು ಹೇಳಲಾಗುತ್ತದೆ, ಇದರಲ್ಲಿ ಎಲ್ಲವೂ ಯೋಗದ ಮಾತಾಗಿದೆ. ತಂದೆಯನ್ನು ನೆನಪು ಮಾಡಿ ಮತ್ತು ಆಸ್ತಿಯನ್ನು ತೆಗೆದುಕೊಳ್ಳಿರಿ. ಇದರ ಅರ್ಥವನ್ನು ಎಂದೂ ಯಾರೂ ತಿಳಿದುಕೊಳ್ಳುವುದಿಲ್ಲ, ಅವರಂತೂ ಬ್ರಹ್ಮತತ್ವವನ್ನೂ ನೆನಪು ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುವುದು. ಬ್ರಹ್ಮತತ್ವವು ಪತಿತ-ಪಾವನನಾಗಿದೆಯೇ? ಪತಿತ-ಪಾವನನು ಪರಮಪಿತ ಪರಮಾತ್ಮನಾಗಿದ್ದಾನೆ, ಬ್ರಹ್ಮತತ್ವವಲ್ಲ. ಪಾಪ ಮನುಷ್ಯರು ಬಹಳ ಮರೆತು ಹೋಗಿದ್ದಾರೆ. ತಂದೆಯು ಮಕ್ಕಳಿಗೆ ಪುನಃ ಹೇಳುತ್ತಾರೆ- ಮಕ್ಕಳೇ, ಸಮಯವನ್ನು ವ್ಯರ್ಥ ಮಾಡಬೇಡಿರಿ, ತಂದೆಯನ್ನು ನೆನಪು ಮಾಡಿರಿ. ತಂದೆಗೆ ಗೊತ್ತಿದೆ, ಕೆಲವು ಮಕ್ಕಳು ದಿನ-ರಾತ್ರಿ ಬಹಳ ಸಮಯವನ್ನು ವ್ಯರ್ಥ ಮಾಡುತ್ತಾರೆ, ಇಡೀ ದಿನ ಏನೂ ಪುರುಷಾರ್ಥ ಮಾಡುವುದಿಲ್ಲ. ತಂದೆಯು ತಮ್ಮ ಉದಾಹರಣೆಯನ್ನೂ ತಿಳಿಸುತ್ತಾರೆ. ಭೋಜನ ಮಾಡಲು ಕುಳಿತುಕೊಂಡರೂ ತಂದೆಯನ್ನು ನೆನಪು ಮಾಡುತ್ತೇನೆ. ನಾವಿಬ್ಬರೂ ಒಟ್ಟಿಗೆ ತಿನ್ನುತ್ತೇವೆ ಎಂದು. ಶರೀರದಲ್ಲಿ ಎರಡೂ ಆತ್ಮಗಳಿವೆಯಲ್ಲವೆ, ಹೀಗೆ ನೆನಪು ಮಾಡುತ್ತಾ-ಮಾಡುತ್ತಾ ಮತ್ತೆ ಮರೆತು ಹೋಗುತ್ತೇನೆ. ಬೇರೆ-ಬೇರೆ ವಿಚಾರಗಳು ಬಂದು ಬಿಡುತ್ತವೆ ಏಕೆಂದರೆ ಇವರ ಮೇಲೆ ಬಹಳ ಜವಾಬ್ದಾರಿಯಿದೆ. ಬಹಳಷ್ಟು ವಿಚಾರಗಳು ಬರುತ್ತವೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಇವರಿಗಿಂತಲೂ ಹೆಚ್ಚು ನೆನಪಿನಲ್ಲಿರಬಹುದು. ಇವರಂತು ಪರಿಶ್ರಮ ಪಡಬೇಕಾಗುತ್ತದೆ, ಸದಾ ಶಿವ ತಂದೆಯು ತಿಳಿಸುತ್ತಾರೆಂದು ತಿಳಿದುಕೊಳ್ಳಿ. ಅವರನ್ನು ನೆನಪು ಮಾಡಿರಿ, ಬ್ರಹ್ಮನನ್ನು ನೆನಪು ಮಾಡುವುದರಿಂದ ಶಿವ ತಂದೆಯು ಮರೆತು ಹೋಗುವರು. ಮಕ್ಕಳು ಮೊದಲು ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ ನಂತರ ಅನ್ಯರದು. ಕೆಲವರಂತೂ ಅನ್ಯರ ಕಲ್ಯಾಣ ಮಾಡುತ್ತಾ ಇರುತ್ತಾರೆ. ತಮ್ಮ ಉನ್ನತಿ ಮಾಡಿಕೊಳ್ಳುವುದಿಲ್ಲ. ಅನ್ಯರನ್ನು ತಮ್ಮ ಸಮಾನರನ್ನಾಗಿ ಮಾಡುತ್ತಾ ಮತ್ತೆ ತಾವೇ ಮಾಯವಾಗಿ ಬಿಡುತ್ತಾರೆ. ಆಶ್ಚರ್ಯವಲ್ಲವೆ! ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ನೀವು ಅನುಭವವನ್ನೂ ತಿಳಿಸುತ್ತೀರಿ, ಮತ್ತ್ಯಾವುದೇ ಸತ್ಸಂಗ ಇತ್ಯಾದಿಗಳಲ್ಲಿ ತಿಳಿಸುವುದಿಲ್ಲ. ಇಲ್ಲಿಯೂ ನಂಬರ್ವಾರ್ ಧಾರಣೆಯಾಗುತ್ತದೆ. ಈ ಜ್ಞಾನವನ್ನು ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಲಾಗುತ್ತದೆ, ಜೋಳಿಗೆಯನ್ನು ತುಂಬಿಸು ಎಂದು ಹಾಡುತ್ತಾರೆ, ಈ ಜ್ಞಾನವನ್ನು ಬುದ್ಧಿಯಲ್ಲಿ ತುಂಬಿಸಲಾಗುವುದೋ ಅಥವಾ ಜೋಳಿಗೆಯಲ್ಲಿಯೋ? ಪಾರಸ ಬುದ್ಧಿ ಮತ್ತು ಕಲ್ಲು ಬುದ್ಧಿಯವರೆಂದು ಹೇಳಿಕೆಯಿದೆ, ನಿಮ್ಮ ಈ ಜೀವನವು ಬಹಳ ಅಮೂಲ್ಯವಾಗಿದೆ. ಅದರಲ್ಲಿ ಬಹಳ ಪುರುಷಾರ್ಥದ ಅವಶ್ಯಕತೆಯಿದೆ. ಗೃಹಸ್ಥ ವ್ಯವಹಾರದಲ್ಲಿದ್ದು ಎಲ್ಲವನ್ನೂ ಮಾಡಬೇಕಾಗಿದೆ. ಸನ್ನಿವೇಶಗಳನ್ನು ನೋಡಬೇಕಾಗುತ್ತದೆ. ಭಲೆ ಕುಮಾರರಾಗಿದ್ದರೆ ಚೆನ್ನಾಗಿ ಸರ್ವೀಸ್ ಮಾಡುವಂತಿದ್ದರೆ ಅವರಿಂದ ನೌಕರಿಯನ್ನು ಬಿಡಿಸಬಹುದು, ಪ್ರತಿಯೊಬ್ಬರ ಸ್ಥಿತಿಗತಿಗಳನ್ನು ನೋಡಿ ನಂತರ ಸಲಹೆ ನೀಡಲಾಗುತ್ತದೆ. ಸರ್ಜನ್ ನಾಡಿ ನೋಡದೆ ಸಲಹೆ ನೀಡಲು ಸಾಧ್ಯವಿಲ್ಲ. ಇವರು ಅವಿನಾಶಿ ಸರ್ಜನ್ ಆಗಿದ್ದಾರೆ, ಆತ್ಮಕ್ಕೆ ಮನ್ಮನಾಭವದ ಇಂಜೆಕ್ಷನ್ ಕೊಡುತ್ತಾರೆ. ಇವರದು ಇದು ಒಂದೇ ಇಂಜೆಕ್ಷನ್ ಆಗಿದೆ ಯಾವುದು 21 ಜನ್ಮಗಳಿಗಾಗಿ ಸದಾ ಆರೋಗ್ಯವಂತರನ್ನಾಗಿ ಮಾಡಿ ಬಿಡುತ್ತದೆ. ಪ್ರಜಾಪಿತ ಬ್ರಹ್ಮನಿಗೆ ಇಷ್ಟು ಮಂದಿ ಮಕ್ಕಳಿದ್ದಾರೆ, ಎಷ್ಟು ದೊಡ್ಡ ಗೃಹಸ್ಥಿಯಾಗಿದ್ದಾರೆ, ಇದು ಬೇಹದ್ದಿನ ಗೃಹಸ್ಥ ವ್ಯವಹಾರವಾಗಿದೆ, ಇವರು ಶಿವ ತಂದೆಯ ರಥವಲ್ಲವೆ ಅಂದಮೇಲೆ ಎಷ್ಟೊಂದು ಸಂಪಾದನೆಯಾಗುತ್ತದೆ. ತಂದೆಯು ತಿಳಿಸುತ್ತಾರೆ- ನಾನು ಈ ರಥದಲ್ಲಿ ಕುಳಿತು ಜ್ಞಾನವನ್ನು ತಿಳಿಸುತ್ತೇನೆ, ಇಲ್ಲದಿದ್ದರೆ ಹೇಗೆ ತಿಳಿಸಲಿ! ಕೃಷ್ಣನಿರುವುದೇ ಸತ್ಯಯುಗದ ಆದಿಯಲ್ಲಿ ಅದೇ ಆತ್ಮವು ಈಗ ಶ್ಯಾಮನಾಗಿದೆ. ಆದ್ದರಿಂದ ಇವರ ಬಹಳ ಜನ್ಮಗಳ ಅಂತಿಮದಲ್ಲಿ ಪ್ರವೇಶ ಮಾಡುತ್ತೇನೆ. ಆದ್ದರಿಂದ ಭಾಗ್ಯಶಾಲಿ ರಥವೆಂದು ಗಾಯನವಿದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತನ್ನ ಹಾಗೂ ಅನ್ಯರ ಜೀವನವನ್ನು ವಜ್ರ ಸಮಾನವನ್ನಾಗಿ ಮಾಡುವ ಸೇವೆ ಮಾಡುತ್ತಾ ಇರಬೇಕಾಗಿದೆ. ಸಮಯ, ಹಣ, ಶಕ್ತಿಯನ್ನು ವ್ಯರ್ಥವಾಗಿ ಕಳೆಯಬಾರದು. |
2. ಅನ್ಯರ ಕಲ್ಯಾಣ ಮಾಡುವುದರ ಜೊತೆ ಜೊತೆಗೆ ತಮ್ಮ ಕಲ್ಯಾಣವನ್ನೂ ಮಾಡಿಕೊಳ್ಳಬೇಕಾಗಿದೆ. ಬುದ್ಧಿರೂಪಿ ಜೋಳಿಗೆಯಲ್ಲಿ ಜ್ಞಾನ ರತ್ನಗಳನ್ನು ಧಾರಣೆ ಮಾಡಿಕೊಂಡು ದಾನ ಮಾಡಬೇಕಾಗಿದೆ. |
ಓಂ ಶಾಂತಿ. ಆತ್ಮಿಕ ಮಕ್ಕಳು ತಿಳಿದುಕೊಂಡಿದ್ದೀರಿ. ಈಗ ಆ ದಿನವು ಮತ್ತೆ ಬಂದಿದೆ. ಯಾವ ದಿನ? ಇದನ್ನು ಕೇವಲ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ - ಭಾರತದಲ್ಲಿ ಮತ್ತೆ ಸ್ವರ್ಗದ ಆದಿ ಸನಾತನ ದೇವಿ-ದೇವತಾ ಧರ್ಮವು ಸ್ಥಾಪನೆಯಾಗುತ್ತದೆ ಅರ್ಥಾತ್ ಲಕ್ಷ್ಮೀ-ನಾರಾಯಣರ ರಾಜ್ಯವು ಸ್ಥಾಪನೆಯಾಗುತ್ತಿದೆ ಅಂದಮೇಲೆ ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು. ಪತಿತ-ಪಾವನ ತಂದೆಯನ್ನು ನಾವು ಯಾರನ್ನು ಕರೆಯುತ್ತಿದ್ದೆವು ಅವರು ಬಂದಿದ್ದಾರೆ. ಅವರೇ ಮುಕ್ತಿದಾತ, ಮಾರ್ಗದರ್ಶಕನಾಗಿದ್ದಾರೆ ಅಥವಾ ದುಃಖಹರ್ತ-ಸುಖಕರ್ತನಾಗಿದ್ದಾರೆ. ಒಂದು ಬಾರಿ ಮುಕ್ತಗೊಳಿಸಿದ ನಂತರ ಮತ್ತೆ ಹೇಗೆ ಸಿಕ್ಕಿ ಹಾಕಿಕೊಂಡಿರಿ! ಎಂಬುದು ಯಾರಿಗೂ ತಿಳಿದಿಲ್ಲ. ಇಂತಹ ಕಲ್ಲು ಬುದ್ಧಿ ಮನುಷ್ಯರಿಗೆ ತಿಳಿಸಲು ಎಷ್ಟು ಪರಿಶ್ರಮವಾಗುತ್ತದೆ. ಕರ್ತವ್ಯವನ್ನು ನೋಡಿ, ಹೇಗೆ ಇಟ್ಟಿದ್ದಾರೆ! ಕೊಳಕಾದ ಬಟ್ಟೆಗಳನ್ನು ಬಂದು ಸ್ವಚ್ಛ ಮಾಡಿರಿ ಎಂದು. ದೇವತೆಗಳ ಆತ್ಮ ಮತ್ತು ಶರೀರ ಎರಡೂ ಪವಿತ್ರವಾಗಿರುವುದು. ರಾವಣ ರಾಜ್ಯದಲ್ಲಿ ಯಾರದೇ ಶರೀರವು ಪವಿತ್ರವಾಗಿಲ್ಲ, ಶರೀರವಂತು ಪತಿತವಾಗಿದೆ. ಇವೆಲ್ಲಾ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ಭಲೆ ಆತ್ಮವು ಸ್ವಲ್ಪ ಪವಿತ್ರವಾಗಿದ್ದರೆ ಅವರದು ಪ್ರಭಾವವಿರುತ್ತದೆ ಆದರೂ ಪತಿತರಂತೂ ಆಗಲೇಬೇಕಲ್ಲವೆ. ಬೇಹದ್ದಿನ ತಂದೆ ಪತಿತ-ಪಾವನನು ಬಂದು ತಿಳಿಸುತ್ತಾರೆ - ಈ ಐದು ವಿಕಾರಗಳು ಶತ್ರುಗಳಾಗಿವೆ, ಇವನ್ನು ಬಿಡಿ. ಒಂದುವೇಳೆ ನನ್ನ ಮತವನ್ನು ಒಪ್ಪದಿದ್ದರೆ ನಿಮಗೆ ಧರ್ಮರಾಜನು ಶಿಕ್ಷೆ ಕೊಡುವರು. ನೀವು ಆಲ್ಮೈಟಿ ಅಥಾರಿಟಿಯ ಮಾತನ್ನು ಪಾಲಿಸದಿದ್ದರೆ ಧರ್ಮರಾಜನು ಬಹಳ ಕಠಿಣ ಶಿಕ್ಷೆ ಕೊಡುವರು. ತಂದೆಯು ಪಾವನರನ್ನಾಗಿ ಮಾಡಲು ಬಂದಿದ್ದಾರೆ. ನಾವೇ ಪಾವನ ದೇವಿ-ದೇವತೆಗಳಾಗಿದ್ದೆವು, ಈಗ ಪತಿತರಾಗಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ ಅಂದಮೇಲೆ ಈಗ ಬಹುಬೇಗನೆ ಅದನ್ನು ಬಿಡಬೇಕಾಗಿದೆ. ದೇಹಾಭಿಮಾನವು ರಾವಣನ ಮತವಾಗಿದೆ, ಅದನ್ನು ಬಿಡಬೇಕಾಗಿದೆ. ಮೊದಲ ನಂಬರಿನ ವಿಕಾರವೂ ಬಿಡಬೇಕಾಗಿದೆ. ಅಂತಹ ದಿನವೂ ಬರುವುದು ಯಾವಾಗ ತಂದೆಯ ಜೊತೆ ಈ ಸಭೆಯಲ್ಲಿ ಪತಿತರು ಯಾರೂ ಕುಳಿತುಕೊಳ್ಳಲು ಸಾಧ್ಯವಿಲ್ಲ, ಅಂತಹವರಿಗೆ ಅನುಮತಿ ಕೊಡುವುದಿಲ್ಲ. ಪತಿತರನ್ನು ಹೊರ ಹಾಕಿರಿ ಎಂದು ಹೇಳಲಾಗುತ್ತದೆ, ಇಂದ್ರ ಸಭೆಯಲ್ಲಿ ಬರಲು ಬಿಡುವುದಿಲ್ಲ. ಭಲೆ ಯಾರೆಷ್ಟೇ ಕೋಟ್ಯಾಧಿಪತಿಯಾಗಿರಲಿ ಅಥವಾ ಏನೇ ಆಗಿರಲಿ ಸಭೆಯಲ್ಲಿ ಬರಲು ಸಾಧ್ಯವಿಲ್ಲ. ಭಲೆ ಅವರಿಗೆ ತಿಳಿಸಲಾಗುತ್ತದೆ ಆದರೆ ತಂದೆಯ ಸಭೆಯಲ್ಲಿ ಅನುಮತಿ ನೀಡಲಾಗುವುದಿಲ್ಲ. ಈಗ ಅವರಿಗೆ ಅನುಮತಿ ನೀಡಲಾಗುತ್ತಿದೆ, ನಂತರ ಇರುವುದಿಲ್ಲ. ಈಗಲೂ ಸಹ ತಂದೆಯು ಕೇಳುತ್ತಾರೆ- ಯಾರಾದರೂ ಪತಿತರು ಬಂದು ಕುಳಿತುಕೊಂಡರೆ ತಂದೆಗೆ ಇಷ್ಟವಾಗುವುದಿಲ್ಲ, ಹೀಗೆ ಅನೇಕರು ಬಂದು ಕುಳಿತುಕೊಳ್ಳುತ್ತಾರೆ. ಅಂತಹವರು ಬಹಳ ಕಠಿಣ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಗುಡಿ-ಗೋಪುರಗಳಿಗೆ ಸ್ನಾನ ಮಾಡಿಕೊಂಡು ಹೋಗುತ್ತಾರೆ, ಸ್ನಾನ ಮಾಡದೇ ಯಾರೂ ಹೋಗುವುದಿಲ್ಲ. ಅದು ಸ್ಥೂಲ ಸ್ನಾನವಾಗಿದೆ, ಇದು ಜ್ಞಾನ ಸ್ನಾನವಾಗಿದೆ. ಇದರಿಂದಲೂ ಶುದ್ಧವಾಗಬೇಕಾಗಿದೆ. ಯಾವುದೇ ಮಾಂಸಹಾರಿಗಳು ಬರಲು ಸಾಧ್ಯವಿಲ್ಲ, ಯಾವಾಗ ಸಮಯ ಬರುವುದೋ ಆಗ ತಂದೆಯು ಬಹಳ ಕಠಿಣವಾಗುತ್ತಾರೆ. ಪ್ರಪಂಚದಲ್ಲಿ ನೋಡಿ, ಭಕ್ತಿಯದು ಎಷ್ಟೊಂದು ಪ್ರಭಾವವಿದೆ, ಯಾರು ಬಹಳ ಶಾಸ್ತ್ರಗಳನ್ನು ಓದುವರೋ ಅವರು ಶಾಸ್ತ್ರಿ ಎಂಬ ಪದವಿಯನ್ನು ತೆಗೆದುಕೊಳ್ಳುತ್ತಾರೆ. ನೀವೀಗ ಸಂಸ್ಕೃತ ಇತ್ಯಾದಿಗಳನ್ನು ಕಲಿತು ಏನು ಮಾಡುತ್ತೀರಿ! ಈಗ ತಂದೆಯು ತಿಳಿಸುತ್ತಾರೆ - ಎಲ್ಲವನ್ನೂ ಮರೆತು ಹೋಗಿ, ಕೇವಲ ಒಬ್ಬ ತಂದೆಯನ್ನು ನೆನಪು ಮಾಡಿದರೆ ನೀವು ಪವಿತ್ರರಾಗಿ ವಿಷ್ಣು ಪುರಿಯ ಮಾಲೀಕರಾಗಿ ಬಿಡುತ್ತೀರಿ. ಯಾವಾಗ ಈ ಮಾತನ್ನು ಚೆನ್ನಾಗಿ ತಿಳಿದುಕೊಳ್ಳುವರೊ ಆಗ ಈ ಶಾಸ್ತ್ರಗಳೆಲ್ಲವನ್ನೂ ಮರೆತು ಹೋಗುವರು. ಲೌಕಿಕ ವಿದ್ಯೆಯನ್ನು ಓದಿ ವಕೀಲ ಇತ್ಯಾದಿಯಾಗುತ್ತಾರೆ ಆದರೆ ಅದೆಲ್ಲದಕ್ಕಿಂತ ಉನ್ನತ ವಿದ್ಯೆಯು ಇದಾಗಿದೆ ಯಾವುದನ್ನು ಪರಮಾತ್ಮ ಜ್ಞಾನ ಸಾಗರನೇ ಓದಿಸುತ್ತಾರೆ. ಅವರನ್ನು ಪತಿತ-ಪಾವನ ಬನ್ನಿರಿ ಎಂದು ಕರೆಯುತ್ತಾರೆ ಆದರೆ ನಾವು ಪತಿತರಾಗಿದ್ದೇವೆ ಎಂಬುದನ್ನು ತಿಳಿದುಕೊಳ್ಳುವುದಿಲ್ಲ. ತಂದೆಯು ಇದನ್ನು ತಿಳಿಸುತ್ತಲೇ ಇರುತ್ತಾರೆ - ಸತ್ಯಯುಗಕ್ಕೆ ರಾಮ ರಾಜ್ಯವೆಂದು, ಕಲಿಯುಗಕ್ಕೆ ರಾವಣ ರಾಜ್ಯವೆಂದು ಹೇಳುತ್ತಾರೆ. ಈ ಸಮಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ. ಪಾವನ ದೇವಿ - ದೇವತೆಗಳನ್ನು ಮಂದಿರಗಳಲ್ಲಿ ಪೂಜಿಸಲಾಗುತ್ತದೆ ಮತ್ತು ಅವರ ಮುಂದೆ ಪತಿತರು ಹೋಗಿ ತಲೆ ಬಾಗುತ್ತಾರೆ. ಅವರು ಪವಿತ್ರತೆಯಲ್ಲಿ ಎಲ್ಲರಿಗಿಂತ ಶ್ರೇಷ್ಠವಾಗಿದ್ದಾರೆಂದು ಇದರಿಂದಲೇ ಸಿದ್ಧವಾಯಿತು. ಸನ್ಯಾಸಿಗಳಿಗಿಂತಲೂ ಶ್ರೇಷ್ಠರಾಗಿದ್ದಾರೆ. ಸನ್ಯಾಸಿಗಳ ಮಂದಿರವಾಗುವುದಿಲ್ಲ. ಈಗ ಮನುಷ್ಯರು ತಮೋಪ್ರಧಾನ ಭಕ್ತಿಯಲ್ಲಿ ಹೋಗಿರುವುದರಿಂದ ಸನ್ಯಾಸಿಗಳ ಚಿತ್ರವನ್ನೂ ಇಟ್ಟುಕೊಳ್ಳುತ್ತಾರೆ, ಅದಕ್ಕೆ ತಮೋಪ್ರಧಾನ ಭಕ್ತಿಯೆಂದು ಹೇಳಲಾಗುತ್ತದೆ. ಮನುಷ್ಯರ ಪೂಜೆ, ಪಂಚತತ್ವಗಳ ಪೂಜೆಯು ನಡೆಯುತ್ತಿದೆ, ಸತೋಪ್ರಧಾನ ಭಕ್ತಿಯಿದ್ದಾಗ ಒಬ್ಬರ ಪೂಜೆಯು ನಡೆಯುತ್ತಿತ್ತು, ಅದಕ್ಕೆ ಅವ್ಯಭಿಚಾರಿ ಭಕ್ತಿಯೆಂದು ಹೇಳಲಾಗುತ್ತದೆ. ದೇವತೆಗಳನ್ನೂ ಸಹ ತಂದೆಯೇ ಮಾಡಿದ್ದಾರೆ ಅಂದಮೇಲೆ ಅವರೊಬ್ಬರಿಗೇ ಪೂಜೆಯು ನಡೆಯಬೇಕು ಆದರೆ ಇದೂ ಸಹ ಡ್ರಾಮಾದಲ್ಲಿ ಮಾಡಲ್ಪಟ್ಟಿದೆ. ಸತೋಪ್ರಧಾನದಿಂದ ಸತೋ, ರಜೋ, ತಮೋದಲ್ಲಿ ಬರಲೇಬೇಕಾಗಿದೆ. ಕೆಲವರು ಸತೋಪ್ರಧಾನರಾಗಿಬಿಡುತ್ತಾರೆ, ಕೆಲವರು ಸತೋ, ಕೆಲವರು ರಜೋ, ಕೆಲವರು ತಮೋ ಆಗುತ್ತಾರೆ. |
ಸತ್ಯಯುಗದಲ್ಲಿ ಬಹಳ ಸ್ವಚ್ಛತೆಯಿರುತ್ತದೆ, ಅಲ್ಲಿ ಶರೀರ(ಶವ)ಕ್ಕೆ ಯಾವುದೇ ಬೆಲೆಯಿರುವುದಿಲ್ಲ. ವಿದ್ಯುತ್ತಿಗೆ ಕೊಟ್ಟು ಸಮಾಪ್ತಿ ಮಾಡುತ್ತಾರೆ, ಇಲ್ಲಿನ ತರಹ ಭಸ್ಮ(ಬೂದಿ)ವನ್ನು ನದಿ ಮೊದಲಾದುವುಗಳಲ್ಲಿ ಹಾಕುವುದಿಲ್ಲ ಅಥವಾ ಆ ಶರೀರವನ್ನು ಎಲ್ಲಿಯೂ ತೆಗೆದುಕೊಂಡು ಹೋಗುವುದಿಲ್ಲ, ಈ ಕಷ್ಟದ ಮಾತೇ ಇರುವುದಿಲ್ಲ. ವಿದ್ಯುತ್ತಿಗೆ ಕೊಟ್ಟು ಸಮಾಪ್ತಿ ಮಾಡಿ ಬಿಡುವರು. ಇಲ್ಲಿ ಶರೀರದ ಹಿಂದೆ ಮನುಷ್ಯರು ಎಷ್ಟೊಂದು ಅಳುತ್ತಾರೆ, ನೆನಪು ಮಾಡುತ್ತಾರೆ, ಬ್ರಾಹ್ಮಣರಿಗೆ ತಿನ್ನಿಸುತ್ತಾರೆ, ಅಲ್ಲಿ ಇಂತಹ ಯಾವುದೇ ಮಾತುಗಳು ಇರುವುದಿಲ್ಲ. ಬುದ್ಧಿಯಿಂದ ಕೆಲಸ ತೆಗೆದುಕೊಳ್ಳಬೇಕಾಗಿದೆ, ಅಲ್ಲಿ ಏನೇನಿರಬಹುದು. ಸ್ವರ್ಗವೆಂದರೆ ಮತ್ತೇನು! ಇದು ನರಕ, ಅಸತ್ಯ ಖಂಡವಾಗಿದೆ ಆದ್ದರಿಂದಲೇ ಸುಳ್ಳು ಕಾಯ, ಸುಳ್ಳು ಮಾಯೆ ಎಂದು ಗಾಯನವಿದೆ. ಗೋಹತ್ಯೆಯನ್ನು ನಿಲ್ಲಿಸಿ ಎಂದು ಸರ್ಕಾರವೂ ಹೇಳುತ್ತದೆ. ಅವರಿಗೆ ಬರೆಯಬೇಕು - ಮೊದಲು ಒಬ್ಬರು ಇನ್ನೊಬ್ಬರ ಮೇಲೆ ಕಾಮದ ಕಟಾರಿಯನ್ನು ನಡೆಸುವ ಹತ್ಯೆಯನ್ನು ನಿಲ್ಲಿಸಿ, ಈ ಕಾಮವು ಮಹಾಶತ್ರುವಾಗಿದೆ. ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ. ಅದನ್ನು ಜಯಿಸಿರಿ. ನೀವು ಪವಿತ್ರರಾದರೆ ಪವಿತ್ರ ಪ್ರಪಂಚದ ಮಾಲೀಕರಾಗುವಿರಿ. ಅಲ್ಲಿ ದೇವತೆಗಳಿಗೆ ಹೊಸ ರಕ್ತವಿರುತ್ತದೆ. ಮಕ್ಕಳದು ಹೊಸ ರಕ್ತವೆಂದು ಮನುಷ್ಯರು ಹೇಳುತ್ತಾರೆ ಆದರೆ ಹೊಸ ರಕ್ತವೆಲ್ಲಿಂದ ಬಂದಿತು! ಇಲ್ಲಿ ಹಳೆಯ ರಕ್ತವಾಗಿದೆ. ಸತ್ಯಯುಗದಲ್ಲಿ ಯಾವಾಗ ಹೊಸ ಶರೀರವು ಸಿಗುವುದೋ ಆಗ ಹೊಸ ರಕ್ತವಿರುವುದು. ಈ ಶರೀರವೂ ಹಳೆಯದಾಗಿದೆ ಆದ್ದರಿಂದ ರಕ್ತವೂ ಹಳೆಯದಾಗಿದೆ. ಈಗ ಇದನ್ನು ಬಿಡಬೇಕಾಗಿದೆ ಮತ್ತು ಪಾವನರಾಗಬೇಕಾಗಿದೆ. ತಂದೆಯ ವಿನಃ ಮತ್ತ್ಯಾರೂ ಪಾವನ ಮಾಡಲು ಸಾಧ್ಯವಿಲ್ಲ. ಎಲ್ಲರ ಧರ್ಮವು ಬೇರೆ-ಬೇರೆಯಾಗಿದೆ ಮತ್ತು ಪ್ರತಿಯೊಬ್ಬರೂ ತಮ್ಮ ಧರ್ಮಶಾಸ್ತ್ರವನ್ನು ಓದಬೇಕಾಗಿದೆ. ಸಂಸ್ಕೃತದಲ್ಲಿ ಮುಖ್ಯವಾದುದು ಗೀತೆಯಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಸಂಸ್ಕೃತವನ್ನು ಕಲಿಸುತ್ತೇನೆಯೇ? ಈ ಬ್ರಹ್ಮನು ಯಾವ ಭಾಷೆಯನ್ನು ಅರಿತಿದ್ದಾರೆಯೋ ನಾನು ಅದರಲ್ಲಿಯೇ ತಿಳಿಸುತ್ತೇನೆ. ಒಂದುವೇಳೆ ನಾನು ಸಂಸ್ಕೃತದಲ್ಲಿ ತಿಳಿಸಿದರೆ ಈ ಮಕ್ಕಳು ಹೇಗೆ ತಿಳಿದುಕೊಳ್ಳುವರು! ಈ ಸಂಸ್ಕೃತವು ದೇವತೆಗಳ ಭಾಷೆಯೂ ಅಲ್ಲ, ಕೆಲಕೆಲವೊಮ್ಮೆ ಮಕ್ಕಳು ಬಂದು ಸತ್ಯಯುಗದ ಭಾಷೆಯನ್ನೇ ತಿಳಿಸುತ್ತಾರೆ. ಈ ಭಾಷೆಗಳನ್ನು ಕಲಿಯುವುದರಿಂದ ಶರೀರ ನಿರ್ವಹಣೆಗೆ ಕೆಲವರು ಲಕ್ಷಗಳನ್ನು, ಕೆಲವರು ಕೋಟಿಗಳನ್ನು ಸಂಪಾದಿಸುತ್ತಾರೆ, ಇಲ್ಲಿ ನೀವು ಎಷ್ಟೊಂದು ಸಂಪಾದನೆ ಮಾಡಿಕೊಳ್ಳುತ್ತೀರಿ. ಸತ್ಯಯುಗದಲ್ಲಿ ನಾವು ಮಹಾರಾಜ-ಮಹಾರಾಣಿಯಾಗುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ಎಷ್ಟು ಓದುವರೋ ಅಷ್ಟು ಧನವಂತರಾಗುವರು. ಬಡವರು ಮತ್ತು ಸಾಹುಕಾರರಲ್ಲಿ ಅಂತರವಂತೂ ಇರುತ್ತದೆಯಲ್ಲವೆ. ಎಲ್ಲವೂ ಪವಿತ್ರತೆಯ ಮೇಲೆ ಆಧಾರಿತವಾಗಿದೆ, ಯಾರು ಸೇವಾಕೇಂದ್ರಕ್ಕೆ ಬರುತ್ತಾರೆಯೋ ಅವರಿಗೆ ತಿಳಿಸಬೇಕಾಗಿದೆ - ಒಂದುವೇಳೆ ಪವಿತ್ರರಾಗದಿದ್ದರೆ ಜ್ಞಾನವು ಬುದ್ಧಿಯಲ್ಲಿ ನಿಲ್ಲುವುದಿಲ್ಲ. 5-7 ದಿನಗಳಕಾಲ ಬಂದು ಮತ್ತೆ ಪತಿತರಾದರೆ ಜ್ಞಾನವು ಸಮಾಪ್ತಿ. ಯೋಗವನ್ನು ಕಲಿಯುತ್ತಾ-ಕಲಿಯುತ್ತಾ ಒಂದುವೇಳೆ ಪತಿತರಾದರೆ ಎಲ್ಲವೂ ಮಣ್ಣು ಪಾಲಾಗುವುದು. ಒಂದುವೇಳೆ ಯಾರಾದರೂ ಪವಿತ್ರವಾಗಿರುವುದಿಲ್ಲವೆಂದರೆ ಭಲೆ ಬರುವುದೇ ಬೇಡ, ಅವರ ಚಿಂತೆ ಮಾಡಬಾರದು. ಜನ್ಮ-ಜನ್ಮಾಂತರದ ಪಾಪಗಳ ಹೊರೆಯು ತಲೆಯ ಮೇಲಿದೆ, ತಂದೆಯ ನೆನಪಿಲ್ಲದೆ ಅದು ಹೇಗೆ ಇಳಿಯುತ್ತದೆ! ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಗಾಯನವಿದೆ, ತಂದೆಯು ಏನು ಹೇಳುವರೋ ಅದನ್ನು ಮಾಡಬೇಕಾಗಿದೆ. ಹೇ ಪತಿತ-ಪಾವನ ಬನ್ನಿ ನಾವು ಪತಿತರಾಗಿದ್ದೇವೆಂದು ಇಡೀ ಪ್ರಪಂಚವೇ ಕರೆಯುತ್ತದೆ ಆದರೆ ಯಾರೂ ಪಾವನರಾಗುವುದಿಲ್ಲ ಅಂದಮೇಲೆ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಅವರಂತು ಬ್ರಹ್ಮತತ್ವವನ್ನೇ ಪರಮಾತ್ಮನೆಂದು ತಿಳಿದು ನೆನಪು ಮಾಡುತ್ತಾರೆ. ಪರಮಾತ್ಮನೆಂದರೆ ಯಾರು ಎಂಬ ಜ್ಞಾನವು ಯಾರಲ್ಲಿಯೂ ಇಲ್ಲ. ಬ್ರಹ್ಮತತ್ವವು ಪರಮಾತ್ಮನಲ್ಲ ಅಥವಾ ಬ್ರಹ್ಮತತ್ವದಲ್ಲಿ ಯಾರೂ ಲೀನವಾಗಲು ಸಾಧ್ಯವಿಲ್ಲ. ಮತ್ತೆ ಪುನರ್ಜನ್ಮದಲ್ಲಿ ಎಲ್ಲರೂ ಬರಲೇಬೇಕಾಗಿದೆ ಏಕೆಂದರೆ ಆತ್ಮ ಅವಿನಾಶಿಯಾಗಿದೆ. ಬುದ್ಧನು ಹಿಂತಿರುಗಿ ಹೊರಟು ಹೋದನೆಂದು ಅವರು ತಿಳಿದುಕೊಳ್ಳುತ್ತಾರೆ ಆದರೆ ಬುದ್ಧನು ಯಾವ ಧರ್ಮದ ಸ್ಥಾಪನೆ ಮಾಡಿದನೋ ಅವಶ್ಯವಾಗಿ ಅದರ ಪಾಲನೆಯನ್ನೂ ಮಾಡುತ್ತಾನೆ. ಇಲ್ಲದಿದ್ದರೆ ಪಾಲನೆಯನ್ನು ಯಾರು ಮಾಡುವರು? ಅವರು ಹಿಂತಿರುಗಿ ಹೋಗಲು ಹೇಗೆ ಸಾಧ್ಯ! ನಾವು ಹೋಗಿ ಮುಕ್ತಿಯಲ್ಲಿ ಕುಳಿತು ಬಿಡುತ್ತೇವೆಂದು ನೀವು ಹೇಳುತ್ತೀರಾ? ನೀವು ತಿಳಿದುಕೊಂಡಿದ್ದೀರಿ - ನಾವು ನಮ್ಮ ಧರ್ಮ ಸ್ಥಾಪನೆ ಮಾಡುತ್ತಿದ್ದೇವೆ, ಮತ್ತೆ ನೀವೇ ಪಾಲನೆಯನ್ನೂ ಮಾಡುತ್ತೀರಿ. ಅದು ಪಾವನ ಧರ್ಮವಾಗಿತ್ತು, ಈಗ ಪತಿತರಾಗಿ ಬಿಟ್ಟಿದ್ದೀರಿ. ಯಾರು ಈ ಧರ್ಮದವರಾಗಿರುವರೋ ಅವರೇ ಬರುತ್ತಾರೆ. ಈಗ ಸಸಿಯ ನಾಟಿಯಾಗುತ್ತಿದೆ, ಈ ದೇವಿ-ದೇವತಾ ಧರ್ಮವು ಎಲ್ಲದಕ್ಕಿಂತ ಮಧುರ ವೃಕ್ಷವಾಗಿದೆ, ಇದರ ಸ್ಥಾಪನಾ ಕಾರ್ಯವು ನಡೆಯುತ್ತಿದೆ. ಶಾಸ್ತ್ರ ಇತ್ಯಾದಿ ಏನೆಲ್ಲವನ್ನೂ ರಚಿಸಿದ್ದಾರೆಯೋ ಎಲ್ಲವೂ ಭಕ್ತಿಮಾರ್ಗಕ್ಕಾಗಿ. ಒಬ್ಬ ತಂದೆಯದೇ ಗಾಯನವಿದೆ, ಅವರು ಬಂದು ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತಾರೆ ಅಂದಮೇಲೆ ಈ ರೀತಿ ಮಾಡುವಂತಹ ತಂದೆಯನ್ನು ಎಷ್ಟು ಚೆನ್ನಾಗಿ ನೆನಪು ಮಾಡಬೇಕು! ಇದನ್ನೂ ಸಹ ತಿಳಿದುಕೊಂಡಿದ್ದೀರಿ - ಡ್ರಾಮಾನುಸಾರ ಭಕ್ತಿಮಾರ್ಗವೂ ಸಹ ನಡೆಯಬೇಕು. ವಾಸ್ತವದಲ್ಲಿ ಸರ್ವರ ಸದ್ಗತಿದಾತ ಒಬ್ಬರೇ ಆಗಿದ್ದಾರೆ ಅಂದಮೇಲೆ ಪೂಜೆಯು ಅವರೊಬ್ಬರಿಗೇ ಮಾಡಬೇಕಾಗಿದೆ. ದೇವಿ-ದೇವತೆಗಳು ಸತೋಪ್ರಧಾನರಿದ್ದವರು 84 ಜನ್ಮಗಳನ್ನು ತೆಗೆದುಕೊಂಡು ತಮೋಪ್ರಧಾನರಾಗಿದ್ದಾರೆ. ಈಗ ಮತ್ತೆ ಸತೋಪ್ರಧಾನರಾಗಬೇಕಾಗಿದೆ. ತಂದೆಯ ನೆನಪಿನ ವಿನಃ ಸತೋಪ್ರಧಾನರಾಗಲು ಸಾಧ್ಯವಿಲ್ಲ. ತಂದೆಯ ವಿನಃ ಮತ್ತ್ಯಾರಲ್ಲಿಯೂ ಆ ರೀತಿ ಮಾಡುವ ಶಕ್ತಿಯಿಲ್ಲ ಅಂದಮೇಲೆ ನೆನಪು ಅವರೊಬ್ಬರನ್ನೇ ಮಾಡಬೇಕಾಗಿದೆ. ಇದು ಅವ್ಯಭಿಚಾರಿ ನೆನಪಾಗಿದೆ. ಅನೇಕರನ್ನು ನೆನಪು ಮಾಡುವುದು ವ್ಯಭಿಚಾರಿ ನೆನಪಾಗಿದೆ. ಎಲ್ಲಾ ಆತ್ಮರಿಗೆ ಗೊತ್ತಿದೆ - ಶಿವನು ನಮ್ಮ ತಂದೆಯಾಗಿದ್ದಾರೆ ಆದ್ದರಿಂದಲೇ ಎಲ್ಲಾ ಕಡೆ ಶಿವನನ್ನು ಪೂಜಿಸುತ್ತಾರೆ. ದೇವಿ-ದೇವತೆಗಳ ಮುಂದೆ ಶಿವನನ್ನು ಇಟ್ಟಿರುತ್ತಾರೆ. ವಾಸ್ತವದಲ್ಲಿ ದೇವತೆಗಳಂತೂ ಪೂಜೆ ಮಾಡುವುದಿಲ್ಲ, ಗಾಯನವಿದೆ - ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುವರು, ಸುಖದಲ್ಲಿ ಯಾರೂ ಮಾಡುವುದಿಲ್ಲ ಅಂದಮೇಲೆ ದೇವತೆಗಳು ಹೇಗೆ ಪೂಜೆ ಮಾಡುತ್ತಾರೆ, ಅದು ತಪ್ಪಾಗಿದೆ. ಸುಳ್ಳು ಮಹಿಮೆಯನ್ನು ತೋರಿಸುವುದೇ? ಶಿವ ತಂದೆಯನ್ನು ನೆನಪು ಮಾಡಲು ಅವರನ್ನು ಎಲ್ಲಿ ಅರಿತುಕೊಂಡಿದ್ದಾರೆ? ಅಂದಮೇಲೆ ಆ ಚಿತ್ರವನ್ನು ತೆಗೆದುಹಾಕಬೇಕು. ಬಾಕಿ ಸಿಂಗಲ್ ಕಿರೀಟಧಾರಿಗಳು ಪೂಜೆ ಮಾಡುವುದನ್ನು ತೋರಿಸಬೇಕು. ಸಾಧು-ಸಂತ ಯಾರಿಗೂ ಸಹ ಪ್ರಕಾಶತೆಯ ಕಿರೀಟವಿಲ್ಲ ಆದ್ದರಿಂದ ಬ್ರಾಹ್ಮಣರಿಗೂ ಸಹ ಪ್ರಕಾಶತೆಯ ಕಿರೀಟವನ್ನು ತೋರಿಸಲು ಸಾಧ್ಯವಿಲ್ಲ. ಯಾರಿಗೆ ಜ್ಞಾನದಲ್ಲಿ ಪೂರ್ಣ ಗಮನ ಹರಿಯುವುದೋ ಅವರು ತಿದ್ದುಪಡಿ ಮಾಡುತ್ತಾ ಇರುತ್ತಾರೆ. ಇನ್ನೂ ಯಾರೂ ಪರಿಪೂರ್ಣರಾಗಿಲ್ಲ. ತಪ್ಪುಗಳಾಗುತ್ತಲೇ ಇರುತ್ತವೆ. ತ್ರಿಮೂರ್ತಿಯ ಚಿತ್ರವು ಎಷ್ಟು ಚೆನ್ನಾಗಿದೆ! ಇವರು ತಂದೆ, ಇವರು ದಾದಾ ಆಗಿದ್ದಾರೆ. ತಂದೆಯು ತಿಳಿಸುತ್ತಾರೆ - ನೀವು ನನ್ನನ್ನು ನೆನಪು ಮಾಡಿದರೆ ಈ ರೀತಿಯಾಗುತ್ತೀರಿ, ದೇಹೀ-ಅಭಿಮಾನಿಗಳಾಗಬೇಕಾಗಿದೆ. ಆತ್ಮವು ಹೇಳುತ್ತದೆ - ಒಬ್ಬ ತಂದೆಯ ವಿನಃ ನನಗೆ ಮತ್ತ್ಯಾರಲ್ಲಿಯೂ ಮಮತೆಯಿಲ್ಲ. ನಾವು ಇಲ್ಲಿದ್ದರೂ ಸಹ ಶಾಂತಿಧಾಮ, ಸುಖಧಾಮವನ್ನು ನೆನಪು ಮಾಡುತ್ತೇವೆ. ಈಗ ದುಃಖಧಾಮವನ್ನು ಬಿಡಬೇಕಾಗಿದೆ ಆದರೆ ನಮ್ಮ ಹೊಸ ಮನೆಯು ತಯಾರಾಗುವವರೆಗೆ ಹಳೆಯ ಮನೆಯಲ್ಲಿಯೇ ಇರಬೇಕಾಗಿದೆ. ಹೊಸ ಮನೆಗೆ ಹೋಗಲು ಯೋಗ್ಯರಾಗಬೇಕಾಗಿದೆ. ಆತ್ಮವು ಪವಿತ್ರವಾಗಿ ಬಿಟ್ಟರೆ ಮತ್ತೆ ಮನೆಗೆ ಹೊರಟು ಹೋಗುವುದು. ಎಷ್ಟು ಸಹಜವಾಗಿದೆ! ಮೂಲ ಮಾತು ಇದನ್ನೇ ತಿಳಿದುಕೊಳ್ಳಬೇಕಾಗಿದೆ - ಪರಮಾತ್ಮ ಯಾರು ಮತ್ತು ಈ ದಾದಾ ಯಾರು? ತಂದೆಯು ಇವರ ಮೂಲಕ ಆಸ್ತಿಯನ್ನು ಕೊಡುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಮನ್ಮನಾಭವ. ನನ್ನನ್ನು ನೆನಪು ಮಾಡಿದರೆ ನೀವು ಸತ್ಯಯುಗದಲ್ಲಿ ಪಾವನ ದೇವತೆಗಳಾಗಿ ಬಿಡುತ್ತೀರಿ. ಉಳಿದೆಲ್ಲರೂ ಆ ಸಮಯದಲ್ಲಿ ಮುಕ್ತಿಧಾಮದಲ್ಲಿರುತ್ತಾರೆ. ಎಲ್ಲಾ ಆತ್ಮರನ್ನೂ ಶಾಂತಿಧಾಮಕ್ಕೆ ಕರೆದುಕೊಂಡು ಹೋಗುವವರು ತಂದೆಯೇ ಆಗಿದ್ದಾರೆ. ಎಷ್ಟು ಸಹಜವಾಗಿದೆ! ಮಕ್ಕಳಿಗೆ ಬಹಳ ಖುಷಿಯಿರಬೇಕು. ಹೃದಯವು ಬಹಳ ಸ್ವಚ್ಛವಾಗಿರಬೇಕು. ಮನಸ್ಸು ಸ್ವಚ್ಛವಾಗಿದ್ದಲ್ಲಿ ಎಲ್ಲಾ ಬಯಕೆಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ಮನಸ್ಸು ಆತ್ಮದಲ್ಲಿದೆ, ಸತ್ಯ ಹೃದಯರಾಮನು ಆತ್ಮರ ತಂದೆಯಾಗಿದ್ದಾರೆ, ಹೃದಯವನ್ನು ಗೆಲ್ಲುವವರೆಂದು ಹೃದಯರಾಮ ತಂದೆಗೆ ಹೇಳಲಾಗುತ್ತದೆ. ಅವರು ಬರುವುದೇ ಎಲ್ಲರ ಹೃದಯವನ್ನು ಗೆಲ್ಲುವುದಕ್ಕಾಗಿ ಸಂಗಮದಲ್ಲಿ ಬಂದು ಎಲ್ಲರ ಹೃದಯವನ್ನು ಗೆಲ್ಲುತ್ತಾರೆ. ಆತ್ಮರ ಹೃದಯವನ್ನು ಗೆಲ್ಲುವವರು ಪರಮಾತ್ಮನಾಗಿದ್ದಾರೆ, ಮನುಷ್ಯರ ಹೃದಯವನ್ನು ಗೆಲ್ಲುವವರು ಮನುಷ್ಯರಾಗಿದ್ದಾರೆ. ರಾವಣ ರಾಜ್ಯದಲ್ಲಿ ಎಲ್ಲರೂ ಒಬ್ಬರು ಇನ್ನೊಬ್ಬರ ಹೃದಯವನ್ನು ಕೆಡಿಸುವವರಾಗಿದ್ದಾರೆ. |
ನೀವು ಮಕ್ಕಳಿಗೆ ಕಲ್ಪದ ಮೊದಲೂ ಸಹ ಈ ತ್ರಿಮೂರ್ತಿಯ ಚಿತ್ರದಲ್ಲಿ ತಿಳಿಸಿದ್ದಾರೆ ಆದ್ದರಿಂದಲೇ ಈಗಲೂ ಸಹ ಇದು ಇದೆಯಲ್ಲವೆ. ಅಂದಮೇಲೆ ಅವಶ್ಯವಾಗಿ ತಿಳಿಸಬೇಕಾಗುವುದು. ಈಗ ತಿಳಿಸುವುದಕ್ಕಾಗಿ ಎಷ್ಟೊಂದು ಚಿತ್ರಗಳು ಬಿಡುಗಡೆಯಾಗಿದೆ. ಏಣಿ ಚಿತ್ರವು ಎಷ್ಟು ಚೆನ್ನಾಗಿದೆ! ಆದರೂ ಸಹ ತಿಳಿದುಕೊಳ್ಳುವುದಿಲ್ಲ. ಅರೆ! ಭಾರತವಾಸಿಗಳೇ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ಈಗ ಇದು ಅಂತಿಮ ಜನ್ಮವಾಗಿದೆ. ನಾವಂತೂ ಶುಭವನ್ನು ನುಡಿಯುತ್ತೇವೆ ಅಂದಮೇಲೆ ನಾವು 84 ಜನ್ಮಗಳನ್ನು ತೆಗೆದುಕೊಂಡಿಲ್ಲವೆಂದು ನೀವೇಕೆ ಹೇಳುತ್ತೀರಿ! ಅಂದಮೇಲೆ ನೀವು ಸ್ವರ್ಗದಲ್ಲಿ ಬರುವುದಿಲ್ಲ, ಮತ್ತೆ ನರಕದಲ್ಲಿಯೇ ಬರುತ್ತೀರಿ. ಸ್ವರ್ಗದಲ್ಲಿ ಬರಲು ಬಯಸುತ್ತಿಲ್ಲ. ಭಾರತವೇ ಸ್ವರ್ಗವಾಗಬೇಕಾಗಿದೆ. ಇದಂತೂ ತಿಳಿದುಕೊಳ್ಳುವ ಲೆಕ್ಕವಾಗಿದೆ. ಮಹಾರಥಿಗಳು ಬಹಳ ಚೆನ್ನಾಗಿ ತಿಳಿಸುತ್ತಾರೆ. ನಾವು ಹೋಗಿ ಯಾರಿಗಾದರೂ ದಾನ ಮಾಡಬೇಕು ಎಂದು ಸರ್ವೀಸ್ ಮಾಡುವ ಉಲ್ಲಾಸವಿರಬೇಕು. ಧನವೇ ಇಲ್ಲದಿದ್ದರೆ ದಾನ ಮಾಡುವ ವಿಚಾರವೂ ಬರುವುದಿಲ್ಲ. ಮೊದಲು ಕೇಳಬೇಕು - ಯಾವ ಆಸೆಯನ್ನು ಇಟ್ಟುಕೊಂಡು ಬಂದಿದ್ದೀರಿ? ಇಲ್ಲಿ ದರ್ಶನದ ಮಾತಿಲ್ಲ. ಬೇಹದ್ದಿನ ತಂದೆಯಿಂದ ಬೇಹದ್ದಿನ ಸುಖ ಪಡೆಯಬೇಕಾಗಿದೆ. ಇಬ್ಬರು ತಂದೆಯರಿದ್ದಾರಲ್ಲವೆ. ಬೇಹದ್ದಿನ ತಂದೆಯನ್ನು ಎಲ್ಲರೂ ನೆನಪು ಮಾಡುತ್ತಾರೆ, ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಹೇಗೆ ಸಿಗುತ್ತದೆ ಎಂಬುದನ್ನು ಬಂದು ತಿಳಿದುಕೊಳ್ಳಿ. ಇದನ್ನೂ ಸಹ ತಿಳಿದುಕೊಳ್ಳುವವರೇ ತಿಳಿದುಕೊಳ್ಳುತ್ತಾರೆ. ರಾಜ್ಯಭಾಗ್ಯವನ್ನು ಪಡೆಯುವವರಿದ್ದರೆ ಕೂಡಲೇ ತಿಳಿದುಕೊಳ್ಳುವರು. ಇದನ್ನಂತೂ ತಂದೆಯು ತಿಳಿಸುತ್ತಾರೆ - ಮನೆಯಲ್ಲಿ ಕುಳಿತುಕೊಂಡು ಕೆಲಸ ಕಾರ್ಯಗಳನ್ನು ಮಾಡುತ್ತಲೂ ಕೇವಲ ತಂದೆಯ ನೆನಪು ಮಾಡಿರಿ, ನೆನಪು ಮಾಡುವುದರಿಂದಲೇ ಪಾಪಗಳು ಕಳೆಯುತ್ತಾ ಹೋಗುತ್ತವೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಎಂದೂ ಒಬ್ಬರು ಇನ್ನೊಬ್ಬರ ಮನಸ್ಸನ್ನು ಕೆಡಿಸಬಾರದು. ಸರ್ವೀಸ್ ಮಾಡುವ ಉಲ್ಲಾಸವನ್ನು ಇಟ್ಟುಕೊಳ್ಳಬೇಕು. ಜ್ಞಾನ ಧನವಿದ್ದರೆ ಅವಶ್ಯವಾಗಿ ದಾನ ಮಾಡಬೇಕು. |
2. ಹೊಸ ಮನೆಯಲ್ಲಿ ಹೋಗುವುದಕ್ಕಾಗಿ ಸ್ವಯಂನ್ನು ಯೋಗ್ಯನನ್ನಾಗಿ ಮಾಡಿಕೊಳ್ಳಬೇಕಾಗಿದೆ. ಆತ್ಮವನ್ನು ನೆನಪಿನ ಬಲದಿಂದ ಪಾವನ ಮಾಡಿಕೊಳ್ಳಬೇಕಾಗಿದೆ. |
ಓಂ ಶಾಂತಿ. ಈ ಗೀತೆಯನ್ನು ಯಾರು ಕೇಳುತ್ತಾರೆ? ಮಕ್ಕಳೇ ಕೇಳುತ್ತಾರೆ, ಅವರೇ ಅರ್ಥವನ್ನು ತಿಳಿದುಕೊಳ್ಳುತ್ತಾರೆ. ಪ್ರಜೆಗಳೂ ಸಹ ಯಾರು ಕೇಳುವರೋ ಅವರೂ ವಿಶ್ವದ ಮಾಲೀಕರಾಗುತ್ತಾರೆ. ಹೇಗೆ ಭಾರತವಾಸಿಗಳೆಲ್ಲರೂ ನಮ್ಮ ಭಾರತ ಎಂದು ಹೇಳುತ್ತಾರೆ, ಹಾಗೆಯೇ ಸತ್ಯಯುಗದಲ್ಲಿಯೂ ಸಹ ಯಥಾರಾಜ-ರಾಣಿ ತಥಾ ಪ್ರಜಾ ಇರುತ್ತಾರೆ. ನಾವು ವಿಶ್ವದ ಮಾಲೀಕರೆಂದು ಎಲ್ಲರೂ ತಿಳಿದುಕೊಳ್ಳುತ್ತಾರೆ. ಹೇಗೆ ಯುರೋಪಿಯನ್ನರು ಬಂದರು, ಅವರೂ ಸಹ ನಾವು ಹಿಂದೂಸ್ತಾನದ ಮಾಲೀಕರೆಂದು ಹೇಳಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ನಾವು ಹಿಂದೂಸ್ತಾನಿಗಳು ಹಿಂದೂಸ್ತಾನದ ಮಾಲೀಕರೆಂದು ಹೇಳುತ್ತಿರಲಿಲ್ಲ. ಅವರ ಗುಲಾಮರಾಗಿದೆವು. ರಾಜ್ಯವೆಲ್ಲವೂ ಯುರೋಪಿಯನ್ನರ ಕೈಯಲ್ಲಿತ್ತು, ಮತ್ತೆ ನಮ್ಮ ರಾಜ್ಯಭಾಗ್ಯವನ್ನು ರಾವಣನು ಕಸಿದುಕೊಂಡನು. ಈಗ ನಮಗೆ ನಮ್ಮ ರಾಜ್ಯವು ಬೇಕು, ಇದು ಪರರಾಜ್ಯವಾಗಿದೆ. ದೂರದೇಶದಲ್ಲಿ ಇರುವವರು ಪರದೇಶದಲ್ಲಿ ಬಂದರೆಂದು ಗಾಯನವಿದೆ. ನೀವೀಗ ತಮ್ಮ ರಾಜ್ಯವನ್ನು ತೆಗೆದುಕೊಳ್ಳುತ್ತಿದ್ದೀರಿ. ನೀವು ಹೊಡೆದಾಡುವುದಿಲ್ಲ, ಎಲ್ಲವನ್ನು ತಮಗಾಗಿಯೇ ಮಾಡುತ್ತೀರಿ. ಆ ಸೈನ್ಯವಂತೂ ತಮ್ಮ ರಾಷ್ಟ್ರಪತಿ ಅಥವಾ ಪ್ರಧಾನಮಂತ್ರಿಗಾಗಿ ಹೊಡೆದಾಡುತ್ತಾರೆ. ಗಣ್ಯ ವ್ಯಕ್ತಿಗಳಂತೂ ಅವರೇ ಆಗುತ್ತಾರಲ್ಲವೆ. ಅವರಿಗೇ ಬಹಳ ಒಳ್ಳೆಯ ನಶೆಯಿರುತ್ತದೆ. ಈಗಲೂ ಸಹ ನಮ್ಮ ಭಾರತವೆಂದು ಹೇಳುತ್ತಾರಲ್ಲವೆ ಆದರೆ ಇದೇನೂ ನಮ್ಮ ರಾಜ್ಯವಲ್ಲ, ರಾವಣನ ರಾಜ್ಯವಾಗಿದೆ. ಇದರಲ್ಲಿ ನಾವು ಜೀವಿಸುತ್ತಿದ್ದೇವೆಂದು ಭಾರತವಾಸಿಗಳಿಗೆ ಗೊತ್ತಿಲ್ಲ. ರಾಮರಾಜ್ಯದಲ್ಲಿರುವಾಗ ಇದು ಪರರಾಜ್ಯವೆಂದು ಹೇಳುವುದಿಲ್ಲ, ಈಗ ಭಾರತದಲ್ಲಿ ಸಂಪೂರ್ಣ ರಾವಣ ರಾಜ್ಯವಿದೆ. ರಾಮನ ರಾಜ್ಯವಿತ್ತು, ದೇವತೆಗಳ ರಾಜ್ಯವಿತ್ತು, ಈಗಿಲ್ಲ. ನೀವು ತಿಳಿದುಕೊಂಡಿದ್ದೀರಿ - 5000 ವರ್ಷಗಳ ನಂತರ ನಾವು ರಾಜ್ಯವನ್ನು ಪಡೆಯುತ್ತಿದ್ದೇವೆ. ಯಾರಿಂದ? ಪರಮಾತ್ಮ ತಂದೆಯಿಂದ. ರಾಮ ಎಂಬ ಶಬ್ಧವನ್ನು ಕೇಳಿ ಮನುಷ್ಯರು ತಬ್ಬಿಬ್ಬಾಗುತ್ತಾರೆ ಆದ್ದರಿಂದ ಬೇಹದ್ದಿನ ತಂದೆಯೆಂದು ಹೇಳುವುದು ಸರಿಯಿದೆ. ತಂದೆ ಶಬ್ಧವು ಬಹಳ ಮಧುರವಾಗಿದೆ. ತಂದೆಯೇ ಆಸ್ತಿಯನ್ನು ನೆನಪಿಗೆ ತರಿಸುತ್ತಾರೆ. ಒಬ್ಬ ತಂದೆಯ ವಿನಃ ಮತ್ತೆಲ್ಲವನ್ನೂ ಮರೆಯಬೇಕಾಗಿದೆ. ನಾವಾತ್ಮರು ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದೇವೆ, ತಂದೆಯು ಬಂದು ನಿಮ್ಮನ್ನು ಆತ್ಮಾಭಿಮಾನಿಗಳನ್ನಾಗಿ ಮಾಡುತ್ತಾರೆ. ನಾವಾತ್ಮರಾಗಿದ್ದೇವೆ, ಆತ್ಮವು ಎಷ್ಟು ಸೂಕ್ಷ್ಮವಾಗಿದೆ ಅದರಲ್ಲಿ 84 ಜನ್ಮಗಳ ಪಾತ್ರವು ಅಡಕವಾಗಿದೆ, ಇದನ್ನು ಮಂಧ ಬುದ್ಧಿಯ ಮನುಷ್ಯರು ಅರಿತುಕೊಳ್ಳುವುದಿಲ್ಲ ಮತ್ತು ತಿಳಿಸುವುದೂ ಇಲ್ಲ. ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ, ಇದು ಎಷ್ಟು ಸಹಜವಾಗಿದೆ! ಆದರೆ ಮಾಯೆಯು ಮರೆಸಿಬಿಡುತ್ತದೆ ಆದ್ದರಿಂದ ಮಕ್ಕಳು ಪರಿಶ್ರಮ ಪಡಬೇಕಾಗುತ್ತದೆ. ಇದರಲ್ಲಿ ಯಾವುದೇ ಆಯುಧಗಳು ಮದ್ದು ಗುಂಡುಗಳ ಮಾತಿಲ್ಲ. ಯಾವುದೇ ವ್ಯಾಯಾಮವನ್ನು ಕಲಿಯಬೇಕಾಗಿಲ್ಲ. ಶಾಸ್ತ್ರ ಇತ್ಯಾದಿಗಳನ್ನು ಓದುವಂತಿಲ್ಲ, ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ನಾವು ನಮ್ಮ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದೇವೆ, ಹೇಗೆ ನಾಟಕದಲ್ಲಿ ಪಾತ್ರಧಾರಿಯು ಪಾತ್ರವನ್ನಭಿನಯಿಸಿ ನಂತರ ತಮ್ಮ ವೇಷ ಭೂಷಣಗಳನ್ನು ಬದಲಾಯಿಸಿ ತಮ್ಮ ಮನೆಗೆ ಹೋಗುತ್ತಾರೆ ಹಾಗೆಯೇ ನಿಮ್ಮ ಬುದ್ಧಿಯಲ್ಲಿಯೂ ಇದೆ - ಈಗ ನಾಟಕವು ಮುಕ್ತಾಯವಾಗಲಿದೆ. ಈಗ ಅಶರೀರಿಯಾಗಿ ಮನೆಗೆ ಹೋಗಬೇಕಾಗಿದೆ. ನಾವು ಪ್ರತೀ 5000 ವರ್ಷಗಳ ನಂತರ ಪಾತ್ರವನ್ನಭಿನಯಿಸುತ್ತೇವೆ. ಅರ್ಧಕಲ್ಪ ರಾಜ್ಯಭಾರ ಮಾಡುತ್ತೇವೆ, ಅರ್ಧಕಲ್ಪ ಗುಲಾಮರಾಗಿ ಬಿಡುತ್ತೇವೆ. ಈಗ ಮಕ್ಕಳಿಗೆ ಹೆಚ್ಚು ಕಷ್ಟ ಕೊಡುವುದಿಲ್ಲ. ಕೇವಲ ಬುದ್ಧಿಯಲ್ಲಿ ನೆನಪಿರಬೇಕಾಗಿದೆ. ಪುರುಷಾರ್ಥ ಮಾಡಿ ಸಾಧ್ಯವಾದಷ್ಟು ಇದನ್ನು ಮರೆಯಬಾರದು. ಈಗ ನಾಟಕವು ಪೂರ್ಣವಾಗುತ್ತಿದೆ. ಇನ್ನು ಸ್ವಲ್ಪವೇ ಸಮಯವಿದೆ, ನಾವು ಹೋಗಬೇಕಾಗಿದೆ. ಹೀಗೆ ತಮ್ಮೊಂದಿಗೆ ಮಾತನಾಡಿಕೊಳ್ಳುತ್ತಾ-ಮಾತನಾಡಿಕೊಳ್ಳುತ್ತಾ ನೀವು ಪಾವನರಾಗಿ ಹಿಂತಿರುಗಿ ಹೋಗಿ ಬಿಡುತ್ತೀರಿ. ಪ್ರತಿಯೊಬ್ಬ ಮಗು ಇದನ್ನು ಅರಿತುಕೊಳ್ಳಬಹುದಾಗಿದೆ - ನಾನು ತಂದೆಯನ್ನು ಎಷ್ಟು ನೆನಪು ಮಾಡುತ್ತೇನೆ? ಯಾರಾದರೂ ಚಾರ್ಟ್ ರೆಯಲಿ, ಬರೆಯದಿರಲಿ ಆದರೆ ಬುದ್ಧಿಯಲ್ಲಂತೂ ಇರುತ್ತದೆಯಲ್ಲವೆ – ಇಡೀ ದಿನದಲ್ಲಿ ನಾನು ಏನೇನು ಮಾಡಿದೆನು? ಹೇಗೆ ವ್ಯಾಪಾರಿಗಳು ರಾತ್ರಿಯಲ್ಲಿ ತಮ್ಮ ಲಾಭ-ನಷ್ಟಗಳನ್ನು ನೋಡುತ್ತಾರೆ, ಇದೂ ಸಹ ವ್ಯಾಪಾರವಾಗಿದೆ. ರಾತ್ರಿ ಮಲಗುವ ಸಮಯದಲ್ಲಿ ಪರಿಶೀಲನೆ ಮಾಡಿಕೊಳ್ಳಿ – ಇಡೀ ದಿನದಲ್ಲಿ ತಂದೆಯನ್ನು ಎಷ್ಟು ನೆನಪು ಮಾಡಿದೆನು, ಎಷ್ಟು ಜನರಿಗೆ ತಂದೆಯ ಪರಿಚಯ ಕೊಟ್ಟೆನು? ಯಾರು ಬುದ್ಧಿವಂತರಾಗಿರುವರೋ ಅವರ ವ್ಯಾಪಾರವು ಚೆನ್ನಾಗಿ ನಡೆಯುತ್ತದೆ. ಮಂಧಬುದ್ಧಿಯವರಾಗಿದ್ದರೆ ವ್ಯಾಪಾರವೂ ಹಾಗೆಯೇ ನಡೆಯುತ್ತದೆ. ಇಲ್ಲಂತೂ ತಮ್ಮ ಸಂಪಾದನೆ ಮಾಡಿಕೊಳ್ಳಬೇಕಾಗಿದೆ. ಕೇವಲ ತಂದೆಯು ತಿಳಿಸುವುದೇನೆಂದರೆ - ನನ್ನನ್ನು ನೆನಪು ಮಾಡಿ ಹಾಗೂ ಚಕ್ರವನ್ನು ನೆನಪು ಮಾಡಿದರೆ ನೀವು ಚಕ್ರವರ್ತಿ ರಾಜರಾಗುತ್ತೀರಿ. ಅತಿಯಾದ ಆಸೆಯೂ ಇರಬಾರದು, ಹಳ್ಳಿಗಳಲ್ಲಿ ಇರುವವರಿಗೆ ಆಸೆಗಳು ಕಡಿಮೆಯಿರುತ್ತದೆ, ಸಾಹುಕಾರರಿಗೆ ಬಹಳ ಇರುತ್ತದೆ. ಬಡವರು ತಮ್ಮ ಬಡತನದಲ್ಲಿಯೇ ಖುಷಿಯಾಗಿರುತ್ತಾರೆ. ಒಣ ರೊಟ್ಟಿಯನ್ನು ತಿನ್ನುವುದೇ ಅಭ್ಯಾಸವಾಗಿ ಬಿಟ್ಟಿರುತ್ತದೆ. ಸಾಹುಕಾರರಲ್ಲಿ ಬಹಳ ಇಚ್ಛೆಗಳಿರುತ್ತವೆ, ತಂದೆ-ತಾಯಿಗೂ ಸಹ ತೊಂದರೆ ಕೊಡುತ್ತಾರೆ. ಬ್ರಹ್ಮಾ ತಂದೆಯು ಅನುಭವಿಯಾಗಿದ್ದಾರೆ. ಬಡವರ ಮೇಲೆ ಅನುಕಂಪವೂ ಬರುತ್ತದೆ. ಬಡವರು ನೋಡುತ್ತಾರೆ- ಇಷ್ಟು ದೊಡ್ಡ ವ್ಯಕ್ತಿಯು ಜ್ಞಾನ ಕೇಳುತ್ತಾರೆಂದರೆ ನಾವೂ ಕೇಳೋಣ ಎಂದು ತಿಳಿಯುತ್ತಾರೆ, ತಂದೆಯು ಬಹಳ ಚಿತ್ರಗಳನ್ನು ಮಾಡಿಸಿದ್ದಾರೆ. ಸರ್ವೀಸ್ ಮಾಡುತ್ತೇವೆಂದು ಕೆಲವರು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಮೊದಲು ನೀವು ಬುದ್ಧಿವಂತರಾಗಿ ನಂತರ ಸರ್ವೀಸ್ ಮಾಡಿರಿ ಏಕೆಂದರೆ ಇತ್ತೀಚೆಗೆ ಭಕ್ತಿಯ ಪ್ರಭಾವ ಹೆಚ್ಚಾಗಿದೆ. ಒಂದು ಕಡೆ ತಿಳಿಸಿದರೆ ಇನ್ನೊಂದು ಕಡೆ ಗುರುಗಳ ಉಪದೇಶ ನಡೆಯುತ್ತದೆ. ಅವರು ಭಯ ಪಡಿಸುತ್ತಾರೆ - ಒಂದುವೇಳೆ ನೀವು ಭಕ್ತಿ ಮಾಡದಿದ್ದರೆ ನಿಮಗೆ ಫಲ ಹೇಗೆ ಸಿಗುವುದು! ಭಕ್ತಿಯಿಂದ ಭಗವಂತ ಸಿಗುತ್ತಾರೆ. ಎಲ್ಲಿಯವರೆಗೆ ಈ ಜ್ಞಾನದಲ್ಲಿ ಪಕ್ಕಾ ಆಗುವುದಿಲ್ಲವೋ, ನಮಗೆ ಭಗವಂತ ಸಿಕ್ಕಿದ್ದಾರೆ ನನ್ನನ್ನು ನೆನಪು ಮಾಡಿದರೆ ವಿಕರ್ಮ ವಿನಾಶವಾಗುತ್ತದೆಯೆಂದು ಅವರು ನಮಗೆ ತಿಳಿಸುತ್ತಿದ್ದಾರೆಂದು ಪೂರ್ಣ ನಿಶ್ಚಯವಾಗುವುದಿಲ್ಲವೊ ಅಲ್ಲಿಯವರೆಗೆ ಯಾವುದೇ ವಿರೋಧವನ್ನು ಎದುರಿಸಲು ಸಾಧ್ಯವಿಲ್ಲ. ನಿಮ್ಮೊಂದಿಗೆ ವಿರೋಧವಿದೆ, ನೀವು ಒಂದು ಮಾತನ್ನು ಹೇಳುತ್ತೀರೆಂದರೆ ಅವರು ಇನ್ನೊಂದು ಮಾತನ್ನು ಹೇಳುತ್ತಾರೆ. ಪ್ರಪಂಚದಲ್ಲಿ ಅನೇಕ ಮಠ ಪಂಥಗಳಿವೆ, ಅಲ್ಲಿ ಮನುಷ್ಯರು ಹೋಗಿ ಒಂದಲ್ಲ ಒಂದು ಕೇಳಿಕೊಂಡು ಬರುತ್ತಾರೆ. ಭಗವದ್ಗೀತೆಗೂ ಭಿನ್ನ-ಭಿನ್ನ ಅರ್ಥಗಳನ್ನು ತಿಳಿಸುತ್ತಾರೆ ಆದ್ದರಿಂದ ಮನುಷ್ಯರು ಸಿಕ್ಕಿಕೊಳ್ಳುತ್ತಾರೆ. ಸನ್ಯಾಸಿಗಳು ಎಂದೂ ಸಹ ಗೃಹಸ್ಥಿಗಳಿಗೆ ವಿಕಾರದಲ್ಲಿ ಹೋಗಬೇಡಿ ಎಂದು ಹೇಳುವುದಿಲ್ಲ. ಒಂದುವೇಳೆ ಅವರು ನಿರ್ವಿಕಾರಿಗಳಾಗಿರಿ ಎಂದು ಹೇಳಿದರೂ ಸಹ ಏನಾಗುವುದು? ಗುರಿ-ಧ್ಯೇಯ ಯಾವುದೂ ಇಲ್ಲ. ಪ್ರಪಂಚದಲ್ಲಿ ಉಲ್ಟಾ ಮಾರ್ಗಗಳನ್ನು ತಿಳಿಸುವವರು ಅನೇಕರಿದ್ದಾರೆ. ಸತ್ಯ ಮಾರ್ಗವನ್ನು ತಿಳಿಸುವವರು ಕೆಲವರೇ ಇದ್ದಾರೆ. ಅವರಮೇಲೂ ಸಹ ಮಾಯೆಯ ಪ್ರಭಾವ ಬೀರುತ್ತಾ ಇರುತ್ತದೆ. ಪವಿತ್ರರಾಗಬೇಕೆಂದು ಮನಸ್ಸು ಹೇಳುತ್ತದೆ ಆದರೆ ಮಾಯೆಯು ಬುದ್ಧಿಯನ್ನು ತಿರುಗಿಸುತ್ತದೆ. ಬಹಳ ಕೆಟ್ಟ ವಿಚಾರಗಳನ್ನು ತರುತ್ತಾ ಇರುತ್ತದೆ. ಮಾಯೆಯ ಯುದ್ಧವು ಬಹಳ ಇದೆ. ನಡೆಯುತ್ತಾ-ನಡೆಯುತ್ತಾ ಬಹಳ ಬಿರುಗಾಳಿಗಳು ಬರುತ್ತವೆ. ಒಂದುವೇಳೆ ಯಾವುದೇ ವಿಕಾರದ ಭೂತವು ಒಳಗಡೆ ಇದ್ದರೆ ಅದು ಮನಸ್ಸನ್ನು ತಿನ್ನುತ್ತಾ ಇರುವುದು. ಕ್ರೋಧದ ದಾನ ಕೊಡಿ ಎಂದು ಅನ್ಯರಿಗೆ ಹೇಳಿ, ತಾನು ಕ್ರೋಧ ಮಾಡುತ್ತಿದ್ದರೆ ಅವರು ನೇರವಾಗಿ ಹೇಳಿಬಿಡುತ್ತಾರೆ- ನೀವೇ ಕ್ರೋಧ ಮಾಡಿಕೊಳ್ಳುತ್ತೀರಿ ಮತ್ತೆ ನಮಗೆ ಹೇಗೆ ಹೇಳುತ್ತೀರಿ? ಆದ್ದರಿಂದ ಕ್ರೋಧವನ್ನು ಬಿಡಲೇಬೇಕಾಗುವುದು. ಕ್ರೋಧವನ್ನು ಮುಚ್ಚಿಟ್ಟು ಕಾರ್ಯ ಮಾಡಲಾಗುವುದಿಲ್ಲ. ಕ್ರೋಧದಲ್ಲಿ ಬಹಳ ಶಬ್ಧವಿರುತ್ತದೆ, ಪರಸ್ಪರ ಹೊಡೆದಾಡುತ್ತಾರೆ. ಒಬ್ಬರು ಇನ್ನೊಬ್ಬರಿಗೆ ಗ್ಲಾನಿ ಮಾಡುತ್ತಾರೆ. ತಂದೆಯೂ ನೋಡುತ್ತಾರೆ - ಕ್ರೋಧದ ಭೂತವು ಬಿಟ್ಟು ಹೋಗುವುದೇ ಇಲ್ಲ. ಕೆಲಕೆಲವರು ಇಲ್ಲಿ ತಂದೆಯ ಸನ್ಮುಖದಲ್ಲಿದ್ದರೂ ಸಹ ಕ್ರೋಧ ಮಾಡುತ್ತಾರೆ. ಅನೇಕರಲ್ಲಿ ಕ್ರೋಧದ ಭೂತವು ಬಂದು ಬಿಡುತ್ತದೆ. ಇದು ಬಹಳ ಕೆಟ್ಟದ್ದಾಗಿದೆ. ತೊಂದರೆ ಕೊಡುತ್ತಾರೆ. ತಂದೆಯು ಮತ್ತೆ ಪ್ರೀತಿಯಿಂದ ತಿಳಿಸುತ್ತಾರೆ- ಒಂದುವೇಳೆ ಹೆಸರನ್ನು ಕೆಡಿಸುತ್ತೀರೆಂದರೆ ಮತ್ತೆ ಪದವಿ ಭ್ರಷ್ಟರಾಗುತ್ತಾರೆ. ನೀವು ಪಂಚ ವಿಕಾರಗಳನ್ನು ತಂದೆಗೆ ದಾನವಾಗಿ ಕೊಟ್ಟಿದ್ದೀರಿ ಅಂದಮೇಲೆ ಮತ್ತೇಕೆ ಹಿಂತೆಗೆದುಕೊಳ್ಳುತ್ತೀರಿ ಎಂಬುದನ್ನಂತೂ ತಿಳಿಸಬೇಕು. ಒಂದುವೇಳೆ ಮತ್ತೆ ಕ್ರೋಧ ಮಾಡಿಕೊಂಡರೆ ಗ್ರಹಣವು ಬಿಟ್ಟು ಹೋಗುವುದಿಲ್ಲ, ಅದು ವೃದ್ಧಿಯಾಗುತ್ತಿರುತ್ತದೆ. ತಂದೆಯ ಆಶೀರ್ವಾದದ ಬದಲು ಶಾಪವು ಸಿಗುತ್ತದೆ ಏಕೆಂದರೆ ತಂದೆಯ ಜೊತೆ ಧರ್ಮರಾಜನೂ ಇದ್ದಾರೆ, ಇದು ಡ್ರಾಮಾದಲ್ಲಿ ನಿಗಧಿಯಾಗಿದೆ. ಕ್ರೋಧ ಮಾಡುವುದೂ ಸಹ ಪಾಪವಾಗಿದೆ, ಯಾರಲ್ಲಿ ಪಂಚ ವಿಕಾರಗಳಿದೆಯೋ ಅವರಿಗೆ ಪಾಪಾತ್ಮರೆಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ಎಲ್ಲರೂ ಪುಣ್ಯಾತ್ಮರಿರುತ್ತಾರೆ, ಅಲ್ಲಿ ಯಾವುದೇ ಪಾಪ ಮಾಡುವುದಿಲ್ಲ. ಈಗ ಜನ್ಮ-ಜನ್ಮಾಂತರದ ಬಹಳಷ್ಟು ಹೊರೆಯು ತಲೆಯ ಮೇಲಿದೆ. ಮೊದಲು ಅದನ್ನು ಯೋಗಬಲದಿಂದ ಕಳೆಯಬೇಕಾಗಿದೆ. ಮಾಯೆಯು ಬಹಳ ಕೆಟ್ಟದ್ದಾಗಿದೆ, ಲೋಭವು ಅನೇಕರಲ್ಲಿದೆ. ಬಟ್ಟೆ, ಚಪ್ಪಲಿ, ಬಿಡುಗಾಸಿನ ಲೋಭವಿದೆ, ಇದಕ್ಕಾಗಿ ಸುಳ್ಳು ಹೇಳುತ್ತಿರುತ್ತಾರೆ - ಇದೆಲ್ಲವೂ ಲೋಭದ ಚಿಹ್ನೆಗಳಾಗಿದೆ. ಇಲ್ಲಂತೂ ಎಲ್ಲವೂ ಸಿಗುತ್ತವೆ. ಹೊರಗಡೆ ಮನೆ-ಮನೆಯಲ್ಲಿ ಬಹಳ ಕಿರಿಕಿರಿಯಿರುತ್ತದೆ, ಸಂಗವು ಬಹಳ ಕೆಟ್ಟದ್ದಾಗಿದೆ. ಪತಿಯು ಬ್ರಾಹ್ಮಣನಾಗಿದ್ದರೂ, ಸ್ತ್ರೀ ಶೂದ್ರಳು. ಒಂದುವೇಳೆ ಸ್ತ್ರೀ ಬ್ರಾಹ್ಮಣಿಯಾಗಿದ್ದರೆ ಪತಿಯು ಶೂದ್ರನಾಗಿರುತ್ತಾನೆ. ಮನೆಯಲ್ಲಿಯೂ ಹಂಸ ಮತ್ತು ಕೊಕ್ಕರೆ, ಇದರಿಂದ ಬಹಳ ಕಿರಿಕಿರಿಯಾಗುತ್ತಿರುತ್ತದೆ. ತಮ್ಮನ್ನು ಶಾಂತವಾಗಿಟ್ಟುಕೊಳ್ಳುವ ಯುಕ್ತಿಯನ್ನು ಕಲಿಯಬೇಕಾಗುತ್ತದೆ. ಮನೆಮಠ ಬಿಡುವುದನ್ನು ತಂದೆಯು ಒಪ್ಪುವುದಿಲ್ಲ. ಇಂತಹ ಆಶ್ರಮಗಳು ಬಹಷ್ಟಿವೆ ಅಲ್ಲಿ ಮಕ್ಕಳ ಸಮೇತವಾಗಿ ಹೋಗಿ ಇರುತ್ತಾರೆ, ಮತ್ತೆ ಎಲ್ಲಾ ಜಾಗಗಳಲ್ಲಿಯೂ ಏರುಪೇರುಗಳು ಇದ್ದೇ ಇರುತ್ತದೆ, ಶಾಂತಿಯು ಎಲ್ಲಿಯೂ ಇಲ್ಲ. ಸತ್ಯ-ಸತ್ಯವಾದ ಶಾಂತಿ, ಸುಖ, ಪವಿತ್ರತೆಯು 21 ಜನ್ಮಗಳಿಗಾಗಿ ಈಗ ನೀವು ಮಕ್ಕಳಿಗೆ ಸಿಗುತ್ತಿದೆ. ಇಂತಹ ಮತವನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. |
ತಂದೆಯು ತಿಳಿಸುತ್ತಾರೆ - ನಾನು ಸರ್ವೀಸ್ ಮಾಡಲು ಎಷ್ಟು ದೂರದ ದೇಶದಿಂದ ಬರುತ್ತೇನೆ. ನೀವೂ ಸಹ ಸರ್ವೀಸ್ ಮಾಡಬೇಕಾಗಿದೆ. ಪ್ರದರ್ಶನಿ, ಮೇಳಗಳಲ್ಲಿ ಬಹಳಷ್ಟು ತಿಳಿದುಕೊಳ್ಳಲು ಸಾಧ್ಯವಿಲ್ಲ. ಭಲೆ ರಾಜ್ಯಪಾಲ ಮೊದಲಾದವರು ಉದ್ಘಾಟನೆ ಮಾಡುತ್ತಾರೆ ಆದರೆ ಇವರಿಗೆ ಪರಮಾತ್ಮನೇ ಬ್ರಹ್ಮಾರವರ ಮೂಲಕ ಓದಿಸುತ್ತಾರೆ, ಇದರಿಂದ ವಿಶ್ವದ ಆಸ್ತಿಯು ಸಿಗುತ್ತದೆಯೆಂಬುದು ಅವರ ಬುದ್ಧಿಯಲ್ಲಿ ಬರುತ್ತದೆಯೇ? ಇದು ಬಹಳ ಚೆನ್ನಾಗಿದೆ, ಮಾತೆಯರು ಒಳ್ಳೆಯ ಕರ್ತವ್ಯ ಮಾಡುತ್ತಿದ್ದಾರೆ. ಶ್ರೇಷ್ಠಾಚಾರಿಗಳನ್ನಾಗಿ ಮಾಡುತ್ತಿದ್ದಾರೆ ಎಂದಷ್ಟೇ ಹೇಳುತ್ತಾರೆ. ಭಲೆ ಇದನ್ನೂ ಬರೆಯುತ್ತಾರೆ- ಗೀತೆಯನ್ನು ಭಗವಂತನೇ ಹೇಳಿದ್ದಾರೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಬರೆದರೂ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ತಿಳಿದುಕೊಳ್ಳುವ ಪುರುಷಾರ್ಥವೂ ನಡೆಯುವುದಿಲ್ಲ. ನಿಮ್ಮ ಬುದ್ಧಿಯಲ್ಲಿದೆ – ಶಿವ ತಂದೆಯು ಬ್ರಹ್ಮನ ಮೂಲಕ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನೀವು ಈ ಲಕ್ಷ್ಮೀ-ನಾರಾಯಣರಾಗುತ್ತೀರಿ. ಈ ಸಂದೇಶವನ್ನು ಎಲ್ಲರಿಗೆ ತಿಳಿಸಬೇಕಾಗಿದೆ. ನೀವು ಪೈಗಂಬರನ ಮಕ್ಕಳಾಗಿದ್ದೀರಿ. ಅನ್ಯ ಯಾರೆಲ್ಲರೂ ಬರುತ್ತಾರೆಯೋ ಅವರು ಧರ್ಮ ಸ್ಥಾಪಕರಾಗಿದ್ದಾರೆ. ನೀವು ಎಲ್ಲರಿಗೆ ಈ ಸಂದೇಶವನ್ನು ತಿಳಿಸಿರಿ - ತಂದೆಯು ಸ್ವರ್ಗ ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ - ಒಂದುವೇಳೆ ನೀವು ನನ್ನನ್ನು ನೆನಪು ಮಾಡುತ್ತೀರಿ ಮತ್ತು ಪವಿತ್ರರಾಗುತ್ತೀರೆಂದರೆ ನೀವೂ ಸಹ ಸ್ವರ್ಗದ ಮಾಲೀಕರಾಗಿ ಬಿಡುತ್ತೀರಿ, ಪದೇ-ಪದೇ ಈ ವಿಚಾರಗಳೂ ನಡೆಯಬೇಕು. ಸ್ಥಿತಿಯು ಪರಿಪಕ್ವವಿಲ್ಲದಿರುವ ಕಾರಣ ಉದ್ಯೋಗ-ವ್ಯವಹಾರಗಳಲ್ಲಿ ಹೋಗುತ್ತಿದ್ದಂತೆಯೇ ಎಲ್ಲವೂ ಮರೆತು ಹೋಗುತ್ತದೆ. ಆದರೆ ಯಾವ ಮಹಾವಾಕ್ಯಗಳನ್ನು ಕೇಳುತ್ತೀರಿ ಅದು ವ್ಯರ್ಥವಾಗುವುದಿಲ್ಲ. ಒಂದೊಂದು ರತ್ನವು ಕಡಿಮೆಯಲ್ಲ, ಒಂದು ರತ್ನವೂ ಸಹ ಸ್ವರ್ಗದ ಮಾಲೀಕರನ್ನಾಗಿ ಮಾಡಬಲ್ಲದು. ನಮ್ಮ ಭಾರತವು ಬಹಳ ಶ್ರೇಷ್ಠ ದೇಶವಾಗಿದೆ ಎಂದು ಹಾಡುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ನಮ್ಮ ಭಾರತ ಯಾವುದು ಸ್ವರ್ಗವಾಗಿತ್ತೋ ಅದೀಗ ನರಕವಾಗಿದೆ. ಈಗ ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ. ಪ್ರಜೆಗಳಂತೂ ಅನೇಕರು ತಯಾರಾಗುತ್ತಿರುತ್ತಾರೆ, ವೃದ್ಧಿಯಾಗುತ್ತಿರುತ್ತದೆ, ಸೇವಾಕೇಂದ್ರಗಳು ತೆರೆಯುತ್ತಲೇ ಇರುತ್ತವೆ. ತಂದೆಯೂ ಸಹ ತಿಳಿಸುತ್ತಾರೆ- ಹಳ್ಳಿಯಲ್ಲಿ ಹೋಗಿ ಸರ್ವೀಸ್ ಮಾಡಿರಿ. ಇಂತಹ ಅನೇಕ ಹಳ್ಳಿಗಳಿವೆ ಎಲ್ಲಿ ಎಲ್ಲರೂ ಸೇರಿ ತರಗತಿ ನಡೆಸುತ್ತಾರೆ ಮತ್ತೆ ತಂದೆಗೆ ಪತ್ರ ಬರೆಯುತ್ತಾರೆ. |
ನೀವು ಮಕ್ಕಳ ಕೆಲಸವಾಗಿದೆ - ಬ್ರಾಹ್ಮಣ ಧರ್ಮವನ್ನು ವೃದ್ಧಿ ಮಾಡುವುದು. ಇದರಿಂದ ಎಲ್ಲಾ ಮನುಷ್ಯರು ದೇವತೆಗಳಾಗಿ ಬಿಡುತ್ತಾರೆ. ಯಾರು ಇಲ್ಲಿನವರಾಗಿರುತ್ತಾರೆ ಅವರು ಅನ್ಯ ಸತ್ಸಂಗಗಳಲ್ಲಿ ಸಿಕ್ಕಿ ಹಾಕಿಕೊಳ್ಳುವುದಿಲ್ಲ. ಇಲ್ಲಿ ಮುಖ್ಯ ಮಾತು ಪವಿತ್ರತೆಯಾಗಿದೆ. ಇದಕ್ಕಾಗಿಯೇ ತಂದೆ ಮಕ್ಕಳ, ಸ್ತ್ರೀ-ಪುರುಷರ, ಪುರುಷರು ಸ್ತ್ರೀಯರಿಗೆ ಶತ್ರುಗಳಾಗಿ ಬಿಡುತ್ತಾರೆ. ಸರ್ಕಾರವೂ ಸಹ ಹೇಳುತ್ತದೆ- ಇವರೇನು ಮಾಡುತ್ತಾರೆ? ಇದು ಏಕೆ ಆಗುತ್ತದೆ ಎಂದು. ಆದರೆ ಧರ್ಮದಲ್ಲಿ ಅವರು ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ಸ್ವರಾಜ್ಯವನ್ನಂತೂ ಅವಶ್ಯವಾಗಿ ಸ್ಥಾಪನೆ ಮಾಡುತ್ತೀರಿ. ಮೊದಲು ಯಾವ ಯುದ್ಧವಾಗಿದೆಯೋ ಅದರ ಮತ್ತು ಇದರ ಮಧ್ಯೆ ರಾತ್ರಿ-ಹಗಲಿನ ಅಂತರವಿದೆ. ಮೊದಲು ಈ ಅಣು ಬಾಂಬುಗಳು ತಯಾರಾಗಿರಲಿಲ್ಲ. ನೀವು ತಿಳಿದುಕೊಂಡಿದ್ದೀರಿ - ನಮ್ಮ ರಾಜ್ಯದಲ್ಲಿ ಯುದ್ಧದ ಹೆಸರು, ಗುರುತೂ ಇರಲಿಲ್ಲ. ಸತ್ಯ-ತ್ರೇತಾಯುಗದಲ್ಲಿ ಸುಖವಿರುತ್ತದೆ, ದ್ವಾಪರ-ಕಲಿಯುಗದಲ್ಲಿ ದುಃಖವಿದೆ. ಹೊಸ ಪ್ರಪಂಚ ಮತ್ತು ಹಳೆಯ ಪ್ರಪಂಚ. ಪ್ರಪಂಚವು ಒಂದೇ ಆಗಿರುತ್ತದೆ. ಕೇವಲ ಹೊಸದು ಮತ್ತು ಹಳೆಯದಾಗುತ್ತದೆ. ಈಗ ಹಳೆಯ ಪ್ರಪಂಚವು ವಿನಾಶವಾಗಿ ಹೊಸದಾಗುತ್ತದೆ. ಈ ಹಳೆಯ ಪ್ರಪಂಚವು ಈಗ ಏನೂ ಪ್ರಯೋಜನವಿಲ್ಲ ಮತ್ತೆ ಹೊಸ ಪ್ರಪಂಚ ಸ್ಥಾಪಿಸಬೇಕಾಗಿದೆ. ದೆಹಲಿಯಲ್ಲಿ ಎಷ್ಟು ಬಾರಿ ಹೊಸ ಮಹಲುಗಳಾಗಿರಬಹುದು. ಯಾರು ಬರುತ್ತಾರೆಯೋ ಅವರು ಆ ಕಟ್ಟಡವನ್ನು ಬೀಳಿಸಿ ಮತ್ತೆ ತಮ್ಮ ನೆನಪಿಗಾಗಿ ಹೊಸದನ್ನು ಕಟ್ಟಿಸುತ್ತಾರೆ. ಯಾವಾಗ ದೊಡ್ಡ ಯುದ್ಧವಾಗುವುದೋ ಆಗ ಇವೆಲ್ಲವೂ ನುಚ್ಚು ನೂರಾಗುವವು. ಮತ್ತೆ ಹೊಸ ಪ್ರಪಂಚದಲ್ಲಿ ಹೊಸ ಮಹಲುಗಳನ್ನು ನಿರ್ಮಾಣ ಮಾಡುತ್ತೀರಿ. ಯಾರೆಷ್ಟು ಓದುವರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುವರು. ಕೆಲವರು ಚೆನ್ನಾಗಿ ಓದುತ್ತಾರೆ, ಕೆಲವರು ಕಡಿಮೆ. ಇದಂತೂ ನಡೆಯುತ್ತಾ ಇರುತ್ತದೆ. |
ನೀವು ಮಕ್ಕಳು ಇದನ್ನು ಪಕ್ಕಾ ನೆನಪಿಟ್ಟುಕೊಳ್ಳಿ - ನಾವೀಗ 84 ಜನ್ಮಗಳನ್ನು ಪೂರ್ಣ ಮಾಡಿದ್ದೇವೆ, ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಈ ಹಳೆಯ ಶರೀರವನ್ನು ಬಿಟ್ಟು ನಾವು ನಮ್ಮ ಮನೆಗೆ ಹೋಗುವೆವು. ಈ ಸ್ಥಿತಿಯು ಪಕ್ಕಾ ಆಗಿ ಬಿಟ್ಟರೆ ಮತ್ತೇನು ಬೇಕು! ಈ ಸ್ಥಿತಿಯಲ್ಲಿ ಶರೀರ ಬಿಟ್ಟರೂ ಸಹ ಬಹಳ ಶ್ರೇಷ್ಠ ಕುಲದಲ್ಲಿ ಜನ್ಮ ಪಡೆಯುತ್ತೀರಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಮ್ಮ ಸಂಪಾದನೆಯನ್ನು ಜಮಾ ಮಾಡಿಕೊಳ್ಳುವುದಕ್ಕಾಗಿ ತಂದೆ ಮತ್ತು ಚಕ್ರವನ್ನು ನೆನಪು ಮಾಡುತ್ತಾ ಇರಬೇಕಾಗಿದೆ. ಮಾಯೆಯ ಚಕ್ರವ್ಯೂಹದಲ್ಲಿ ಎಂದೂ ಬರಬಾರದು. ಅತಿಯಾದ ಆಸೆಗಳನ್ನಿಟ್ಟುಕೊಳ್ಳಬಾರದು. |
2. ಮನುಷ್ಯರನ್ನು ದೇವತೆಗಳನ್ನಾಗಿ ಮಾಡಲು ತಮ್ಮ ಬ್ರಾಹ್ಮಣ ಧರ್ಮವನ್ನು ವೃದ್ಧಿ ಮಾಡಬೇಕಾಗಿದೆ. ಹಳ್ಳಿ-ಹಳ್ಳಿಗಳಿಗೆ ಹೋಗಿ ಸೇವೆ ಮಾಡಬೇಕಾಗಿದೆ. |
ಸದಾ ಪ್ರಸನ್ನರಾಗಿರುವುದು ಹೇಗೆ? |
ಇಂದು ಬಾಪ್ದಾದಾ ನಾಲ್ಕಾರು ಕಡೆಯ ಮಕ್ಕಳನ್ನು ನೋಡುತ್ತಿದ್ದರು, ಏನನ್ನು ನೋಡಿದರು? ಪ್ರತಿಯೊಬ್ಬ ಮಗು ಪ್ರತೀ ಸಮಯ ಸ್ವಯಂ ಎಷ್ಟು ಪ್ರಸನ್ನವಾಗಿರುತ್ತಾರೆ, ಜೊತೆ ಜೊತೆಗೆ ಅನ್ಯರನ್ನೂ ಸ್ವಯಂನ ಮೂಲಕ ಎಷ್ಟು ಪ್ರಸನ್ನಗೊಳಿಸುತ್ತಾರೆ? ಏಕೆಂದರೆ ಪರಮಾತ್ಮನ ಸರ್ವಪ್ರಾಪ್ತಿಗಳ ಪ್ರತ್ಯಕ್ಷ ಸ್ವರೂಪದಲ್ಲಿ ಪ್ರಸನ್ನತೆಯೇ ಚಹರೆಯ ಮೇಲೆ ಕಂಡು ಬರುತ್ತದೆ. “ಪ್ರಸನ್ನತೆ”ಯು ಬ್ರಾಹ್ಮಣ ಜೀವನದ ವಿಶೇಷ ಆಧಾರವಾಗಿದೆ. ಅಲ್ಪಕಾಲದ ಪ್ರಸನ್ನತೆ ಮತ್ತು ಸದಾಕಾಲದ ಸಂಪನ್ನತೆಯ ಪ್ರಸನ್ನತೆ - ಇವೆರಡರಲ್ಲಿ ರಾತ್ರಿ-ಹಗಲಿನ ಅಂತರವಿದೆ. ಅಲ್ಪಕಾಲದ ಪ್ರಸನ್ನತೆಯು ಅಲ್ಪಕಾಲದ ಪ್ರಾಪ್ತಿಯವರ ಚಹರೆಯ ಮೇಲೆ ಸ್ವಲ್ಪ ಸಮಯಕ್ಕಾಗಿ ಅವಶ್ಯವಾಗಿ ಕಂಡು ಬರುತ್ತದೆ ಆದರೆ ಆತ್ಮಿಕ ಪ್ರಸನ್ನತೆಯು ಸ್ವಯಂನ್ನು ಪ್ರಸನ್ನನನ್ನಾಗಿ ಮಾಡಿಯೇ ಮಾಡುತ್ತದೆ ಆದರೆ ಆತ್ಮಿಕ ಪ್ರಸನ್ನತೆಯ ವೈಬ್ರೇಷನ್ ಅನ್ಯ ಆತ್ಮಗಳವರೆಗೂ ತಲುಪುತ್ತದೆ. ಅನ್ಯ ಆತ್ಮರೂ ಸಹ ಶಾಂತಿ ಮತ್ತು ಶಕ್ತಿಯ ಅನುಭೂತಿ ಮಾಡುತ್ತಾರೆ. ಹೇಗೆ ಫಲದಾಯಕ ವೃಕ್ಷವು ತನ್ನ ಶೀತಲತೆಯ ಛಾಯೆಯಲ್ಲಿ ಮಾನವನಿಗೆ ಸ್ವಲ್ಪ ಸಮಯಕ್ಕಾಗಿ ಶೀತಲತೆಯ ಅನುಭವ ಮಾಡಿಸುತ್ತದೆ ಮತ್ತು ಮಾನವನು ಪ್ರಸನ್ನನಾಗಿ ಬಿಡುತ್ತಾನೆ ಹಾಗೆಯೇ ಪರಮಾತ್ಮ ಪ್ರಾಪ್ತಿಗಳ ಫಲ ಸಂಪನ್ನ ಆತ್ಮಿಕ ಪ್ರಸನ್ನತೆಯಿರುವ ಆತ್ಮನು ಅನ್ಯರಿಗೂ ಸಹ ತನ್ನ ಪ್ರಾಪ್ತಿಗಳ ಛಾಯೆಯ ತನು-ಮನದ ಶಾಂತಿ ಮತ್ತು ಶಕ್ತಿಯ ಅನುಭೂತಿ ಮಾಡಿಸುತ್ತಾರೆ. ಪ್ರಸನ್ನತೆಯ ವೈಬ್ರೇಷನ್ ಸೂರ್ಯನ ಕಿರಣಗಳಂತೆ ವಾಯುಮಂಡಲವನ್ನು, ವ್ಯಕ್ತಿಯನ್ನು ಮತ್ತೆಲ್ಲಾ ಮಾತುಗಳನ್ನು ಮರೆಸಿ ಸತ್ಯ, ಆತ್ಮಿಕ ಶಾಂತಿಯ ಖುಷಿಯ ಅನುಭೂತಿಯಲ್ಲಿ ಬದಲಾವಣೆ ಮಾಡಿ ಬಿಡುತ್ತದೆ. ವರ್ತಮಾನ ಸಮಯದ ಅಜ್ಞಾನಿ ಆತ್ಮಗಳು ತಮ್ಮ ಜೀವನದಲ್ಲಿ ಬಹಳ ಖರ್ಚು ಮಾಡಿಯಾದರೂ ಪ್ರಸನ್ನತೆಯಲ್ಲಿರಲು ಬಯಸುತ್ತಾರೆ. ತಾವೆಲ್ಲರೂ ಏನು ಖರ್ಚು ಮಾಡಿದಿರಿ? ಪೈಸೆಯನ್ನೂ ಖರ್ಚು ಮಾಡದೇ ಸದಾ ಪ್ರಸನ್ನರಾಗಿರುತ್ತೀರಲ್ಲವೆ! ಅಥವಾ ಅನ್ಯರ ಸಹಯೋಗದಿಂದ ಪ್ರಸನ್ನರಾಗಿರುತ್ತೀರಾ? ಬಾಪ್ದಾದಾ ಮಕ್ಕಳ ಚಾರ್ಟನ್ನು ಪರಿಶೀಲನೆ ಮಾಡುತ್ತಿದ್ದೆವು. ಏನು ನೋಡಿರಬಹುದು? ಒಂದನೆಯವರು ಸದಾ ಪ್ರಸನ್ನರಾಗಿರುವವರು ಮತ್ತು ಎರಡನೇ ಪ್ರಕಾರದವರು ಪ್ರಸನ್ನರಾಗಿರುವವರು. ಅವರಲ್ಲಿ “ಸದಾ” ಶಬ್ಧವಿಲ್ಲ. ಪ್ರಸನ್ನತೆಯೂ ಮೂರು ಪ್ರಕಾರದ್ದನ್ನು ನೋಡಿದೆವು. 1. ಸ್ವಯಂನಿಂದ ಪ್ರಸನ್ನ. 2. ಅನ್ಯರ ಮೂಲಕ ಪ್ರಸನ್ನ. 3. ಸೇವೆಯ ಮೂಲಕ ಪ್ರಸನ್ನ. ಒಂದುವೇಳೆ ಮೂರರಲ್ಲಿಯೂ ಪ್ರಸನ್ನರಾಗಿದ್ದರೆ ಬಾಪ್ದಾದಾರವರನ್ನು ಸ್ವತಹ ಪ್ರಸನ್ನಗೊಳಿಸಿದ್ದಾರೆ ಮತ್ತು ಯಾವ ಆತ್ಮನ ಮೇಲೆ ತಂದೆಯು ಪ್ರಸನ್ನರಾಗಿದ್ದಾರೆಯೋ ಅವರು ಸದಾ ಸಫಲತಾಮೂರ್ತಿಗಳು ಆಗಿಯೇ ಆಗುವರು. |
ಬಾಪ್ದಾದಾ ನೋಡಿದೆವು - ಕೆಲವು ಮಕ್ಕಳು ತನ್ನೊಂದಿಗೂ ಅಪ್ರಸನ್ನವಾಗಿರುತ್ತಾರೆ, ಚಿಕ್ಕಮಾತಿನ ಕಾರಣ ಅಪ್ರಸನ್ನವಾಗಿರುತ್ತಾರೆ. ಮೊಟ್ಟ ಮೊದಲ ಪಾಠವಾದ “ನಾನು ಯಾರು” ಇದನ್ನು ತಿಳಿದುಕೊಂಡಿದ್ದರೂ ಸಹ ಮರೆತು ಹೋಗುತ್ತಾರೆ. ಯಾವ ತಂದೆಯು ಆ ರೀತಿ ಮಾಡಿದ್ದಾರೆಯೋ, ಕೊಟ್ಟಿದ್ದಾರೆಯೋ ಅವರನ್ನೇ ಮರೆತು ಹೋಗುತ್ತಾರೆ. ತಂದೆಯು ಪ್ರತಿಯೊಬ್ಬ ಮಗುವನ್ನು ಪೂರ್ಣ ಆಸ್ತಿಗೆ ಅಧಿಕಾರಿಗಳನ್ನಾಗಿ ಮಾಡಿದ್ದಾರೆ. ಕೆಲವರಿಗೆ ಪೂರ್ಣ, ಕೆಲವರಿಗೆ ಅರ್ಧ ಆಸ್ತಿಯನ್ನು ನೀಡಿಲ್ಲ. ಯಾರಿಗಾದರೂ ಅರ್ಧ ಅಥವಾ ಕಾಲು ಭಾಗದಷ್ಟು ಸಿಕ್ಕಿದೆಯೇ? ಅರ್ಧ ಸಿಕ್ಕಿದೆಯೋ ಅಥವಾ ಅರ್ಧ ತೆಗೆದುಕೊಂಡಿದ್ದೀರೋ? ತಂದೆಯು ಎಲ್ಲರಿಗೆ ಮಾ|| ಸರ್ವಶಕ್ತಿವಂತನ ವರದಾನ ಹಾಗೂ ಆಸ್ತಿಯನ್ನು ಕೊಟ್ಟರು. ಕೆಲವು ಶಕ್ತಿಗಳನ್ನು ಮಕ್ಕಳಿಗೆ ಕೊಟ್ಟರು, ಕೆಲವೊಂದನ್ನು ಕೊಡಲಿಲ್ಲವೆಂದಲ್ಲ. ತನಗಾಗಿ ಏನನ್ನೂ ಇಟ್ಟುಕೊಳ್ಳಲಿಲ್ಲ. ಸರ್ವಗುಣ ಸಂಪನ್ನರನ್ನಾಗಿ ಮಾಡಿದ್ದಾರೆ, ಸರ್ವಪ್ರಾಪ್ತಿ ಸ್ವರೂಪರನ್ನಾಗಿ ಮಾಡಿದ್ದಾರೆ ಆದರೆ ತಂದೆಯ ಮೂಲಕ ಏನು ಪ್ರಾಪ್ತಿಗಳಾಗಿದೆಯೋ ಅದನ್ನು ಸ್ವಯಂನಲ್ಲಿ ಸಮಾವೇಶ ಮಾಡಿಕೊಳ್ಳುವುದಿಲ್ಲ. ಹೇಗೆ ಸ್ಥೂಲ ಧನ ಹಾಗೂ ಸಾಧನಗಳು ಪ್ರಾಪ್ತಿಯಾಗಿದ್ದರೂ ಸಹ ಅದನ್ನು ಖರ್ಚು ಮಾಡುವುದು ಬರುವುದಿಲ್ಲ ಅಥವಾ ಸಾಧನಗಳನ್ನು ಉಪಯೋಗಿಸುವುದು ಬರಲಿಲ್ಲವೆಂದರೆ ಪ್ರಾಪ್ತಿ ಇದ್ದರೂ ಸಹ ಅದರಿಂದ ವಂಚಿತರಾಗಿ ಉಳಿಯುತ್ತಾರೆ. ಹಾಗೆಯೇ ಎಲ್ಲಾ ಪ್ರಾಪ್ತಿಗಳು ಹಾಗೂ ಖಜಾನೆಗಳು ಎಲ್ಲರ ಬಳಿ ಇವೆ ಆದರೆ ಅದನ್ನು ಕಾರ್ಯದಲ್ಲಿ ತೊಡಗಿಸುವ ವಿಧಿ ಬರುವುದಿಲ್ಲ ಮತ್ತು ಸಮಯದಲ್ಲಿ ಉಪಯೋಗಿಸುವುದು ಬರುವುದಿಲ್ಲ ಮತ್ತೆ ಹೇಳುತ್ತಾರೆ - ಇದನ್ನು ಮಾಡಬೇಕು, ಇದನ್ನು ಮಾಡಬಾರದು ಎಂಬುದನ್ನು ನಾನು ತಿಳಿದುಕೊಂಡಿದ್ದೇನೆ ಆದರೆ ಆ ಸಮಯದಲ್ಲಿ ಮರೆತು ಹೋಯಿತು, ಈಗ ತಿಳಿದುಕೊಳ್ಳುತ್ತೇನೆ - ಈ ರೀತಿಯಾಗಬಾರದು ಎಂದು. ಆದರೆ ಆ ಸಮಯದಲ್ಲಿ ಒಂದು ಕ್ಷಣವು ಹೊರಟು ಹೋದರೂ ಸಹ ಸಫಲತೆಯ ಗುರಿಯನ್ನು ತಲುಪಲು ಸಾಧ್ಯವಿಲ್ಲ. ಏಕೆಂದರೆ ಸಮಯದ ವಾಹನವು ಹೊರಟು ಹೋಯಿತು. ಭಲೆ ಒಂದು ಕ್ಷಣವೇ ತಡ ಮಾಡಿರಬಹುದು ಅಥವಾ ಒಂದು ಗಂಟೆಯನ್ನಾದರೂ ತಡ ಮಾಡಿರಬಹುದು ಆದರೆ ಸಮಯವಂತೂ ಹೊರಟು ಹೋಯಿತಲ್ಲವೆ ಮತ್ತು ಯಾವಾಗ ಸಮಯದ ವಾಹನವು ಹೊರಟು ಹೋಗುವುದೋ ಆಗ ಸ್ವಯಂನೊಂದಿಗೆ ಹೃದಯ ವಿಧೀರ್ಣರಾಗಿ ಬಿಡುತ್ತಾರೆ ಮತ್ತು ನನ್ನ ಭಾಗ್ಯವೇ ಹೀಗಿದೆ, ಡ್ರಾಮಾದಲ್ಲಿ ನನ್ನ ಪಾತ್ರವೇ ಹೀಗಿದೆ ಎಂದು ಅಪ್ರಸನ್ನತೆಯ ಸಂಸ್ಕಾರವು ಇಮರ್ಜ್ ಆಗಿ ಬಿಡುವುದು. ಮೊದಲೂ ತಿಳಿಸಿದ್ದೆವು - ಸ್ವಯಂನೊಂದಿಗೆ ಅಪ್ರಸನ್ನರಾಗಿರಲು ಮುಖ್ಯವಾಗಿ ಎರಡು ಕಾರಣಗಳಿರುತ್ತವೆ - ಹೃದಯ ವಿಧೀರ್ಣರಾಗುವುದು ಮತ್ತು ಇನ್ನೊಂದು ಕಾರಣವಿದೆ - ಅನ್ಯರ ವಿಶೇಷತೆ ಹಾಗೂ ಭಾಗ್ಯವನ್ನು ಅಥವಾ ಪಾತ್ರವನ್ನು ನೋಡಿ ಈರ್ಷ್ಯೆಯು ಉತ್ಪನ್ನವಾಗುವುದು ಆಗ ಈರ್ಷ್ಯೆಯೂ ಹೆಚ್ಚಾಗುತ್ತದೆ, ಧೈರ್ಯವೂ ಕಡಿಮೆಯಾಗುತ್ತದೆ. ಹೃದಯ ವಿಧೀರ್ಣರಾಗಿರುವವರು ಎಂದೂ ಪ್ರಸನ್ನರಾಗಿರಲು ಸಾಧ್ಯವಿಲ್ಲ ಮತ್ತು ಈರ್ಷ್ಯೆ ಪಡುವವರು ಎಂದೂ ಪ್ರಸನ್ನರಾಗಿರಲು ಸಾಧ್ಯವಿಲ್ಲ ಏಕೆಂದರೆ ಎರಡೂ ಲೆಕ್ಕದಿಂದ ಇಂತಹ ಆತ್ಮಗಳ ಇಚ್ಛೆಯು ಎಂದಿಗೂ ಪೂರ್ಣವಾಗುವುದಿಲ್ಲ ಮತ್ತು ಇಚ್ಛೆಗಳು “ಅಚ್ಛಾ” ಅರ್ಥಾತ್ ಒಳ್ಳೆಯವರಾಗಲು ಬಿಡುವುದಿಲ್ಲ, ಆದ್ದರಿಂದ ಪ್ರಸನ್ನರಾಗಿರುವುದಿಲ್ಲ. ಪ್ರಸನ್ನರಾಗಿರಲು ಸದಾ ಒಂದು ಮಾತನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಿ - ಡ್ರಾಮಾದ ನಿಯಮ ಪ್ರಮಾಣ ಸಂಗಮಯುಗದಲ್ಲಿ ಪ್ರತಿಯೊಬ್ಬ ಬ್ರಾಹ್ಮಣ ಆತ್ಮನಿಗೂ ಯಾವುದಾದರೊಂದು ವಿಶೇಷತೆ ಸಿಕ್ಕಿದೆ, ಅವರು 16,000ದ ಮಾಲೆಯ ಕೊನೆಯ ಮಣಿಯೇ ಆಗಿರಲಿ, ಅವರಿಗೂ ಒಂದಲ್ಲ ಒಂದು ವಿಶೇಷತೆ ಪ್ರಾಪ್ತಿಯಾಗಿರುತ್ತದೆ. ಅದಕ್ಕಿಂತಲೂ ಮುಂದೆ ಹೋದಾಗ 9 ಲಕ್ಷ ಎಂದು ಯಾವ ಗಾಯನವಿದೆಯೋ ಅವರಿಗೂ ಸಹ ಒಂದಲ್ಲ ಒಂದು ವಿಶೇಷತೆಯಿರುತ್ತದೆ. ತಮ್ಮ ವಿಶೇಷತೆಯನ್ನು ಮೊದಲು ಗುರುತಿಸಿ. ಬ್ರಾಹ್ಮಣ ಜನ್ಮದ ಭಾಗ್ಯದ ವಿಶೇಷತೆಯನ್ನು ಗುರುತಿಸಲು ಈಗಿನ್ನೂ 9 ಲಕ್ಷದವರೆಗೆ ತಲುಪಿಲ್ಲ. ಅದನ್ನು ಗುರುತಿಸಿ ಕಾರ್ಯದಲ್ಲಿ ತೊಡಗಿಸಿ. ಕೇವಲ ಅನ್ಯರ ವಿಶೇಷತೆಯನ್ನು ನೋಡಿ ಹೃದಯ ವಿಧೀರ್ಣರಾಗುವುದಾಗಲಿ ಅಥವಾ ಈರ್ಷ್ಯೆಯಲ್ಲಿ ಬರಬಾರದು ಆದರೆ ತನ್ನ ವಿಶೇಷತೆಯನ್ನು ಕಾರ್ಯದಲ್ಲಿ ತೊಡಗಿಸಿದಾಗ ಒಂದು ವಿಶೇಷತೆಯು ಮತ್ತೆಲ್ಲಾ ವಿಶೇಷತೆಗಳನ್ನು ತರುವುದು. ಒಂದರ ಮುಂದೆ ಬಿಂದು ಹಾಕುತ್ತಾ ಹೋದರೆ ಎಷ್ಟಾಗುವುದು? 1ರ ಪಕ್ಕದಲ್ಲಿ ಒಂದು ಬಿಂದುವನ್ನಿಟ್ಟರೆ (0) 10 ಆಗುವುದು. ಇನ್ನೊಂದು ಬಿಂದುವನ್ನಿಟ್ಟರೆ 100 ಆಗಿಬಿಡುವುದು. ಮೂರನೇ ಬಿಂದುವನ್ನಿಟ್ಟರೆ...... ಈ ಲೆಕ್ಕವಂತೂ ಬರುತ್ತದೆಯಲ್ಲವೆ. ಕಾರ್ಯದಲ್ಲಿ ತೊಡಗಿಸುವುದು ಎಂದರೆ ಹೆಚ್ಚಿಸಿಕೊಳ್ಳುವುದು. ಇದರಲ್ಲಿ ಅನ್ಯರನ್ನು ನೋಡಬೇಡಿ, ತನ್ನ ವಿಶೇಷತೆಯನ್ನು ಕಾರ್ಯದಲ್ಲಿ ತೊಡಗಿಸಿ. ಹೇಗೆ ನೋಡಿ, ಬಾಪ್ದಾದಾ ಸದಾ “ಭೋಲಿ ಭಂಡಾರಿ” (ಭೋಲಿ ದಾದಿ) ಯ ಉದಾಹರಣೆಯನ್ನು ತಿಳಿಸುತ್ತಾರೆ. ಮಹಾರಥಿಗಳ ಹೆಸರು ಕೆಲವೊಮ್ಮೆ ಬರುತ್ತದೆ ಆದರೆ ಇವರ ಹೆಸರನ್ನು ಹೇಳುತ್ತಲೇ ಇರುತ್ತಾರೆ. ಯಾವ ವಿಶೇಷತೆಯಿತ್ತೋ ಅದನ್ನು ಕಾರ್ಯದಲ್ಲಿ ತೊಡಗಿಸಿದರು. ಭಲೆ ಭಂಡಾರವನ್ನೇ ಸಂಭಾಲನೆ ಮಾಡುತ್ತಾರೆ ಆದರೆ ವಿಶೇಷತೆಯನ್ನು ಕಾರ್ಯದಲ್ಲಿ ತೊಡಗಿಸುವುದರಿಂದ ವಿಶೇಷ ಆತ್ಮಗಳ ಹೆಸರಿನ ಗಾಯನವಾಗುತ್ತದೆ. ಎಲ್ಲರೂ ಮಧುಬನದ ವರ್ಣನೆ ಮಾಡುವಾಗ ದಾದಿಯರ ಮಾತುಗಳನ್ನು ತಿಳಿಸುತ್ತಾರೆ, ಜೊತೆಗೆ ಭೋಲಿ ದಾದಿಯ ಉದಾಹರಣೆಯನ್ನೂ ಕೊಡುತ್ತಾರೆ. ಭಲೆ ಭಾಷಣ ಮಾಡುವುದಿಲ್ಲ ಆದರೆ ವಿಶೇಷತೆಯನ್ನು ಕಾರ್ಯದಲ್ಲಿ ತೊಡಗಿಸಿದ ಕಾರಣ ಸ್ವಯಂ ವಿಶೇಷ ಆತ್ಮನಾಗಿ ಬಿಟ್ಟರು. ಅನ್ಯರೂ ಸಹ ವಿಶೇಷ ದೃಷ್ಟಿಯಿಂದ ನೋಡುತ್ತಾರೆ, ಅಂದಮೇಲೆ ಪ್ರಸನ್ನರಾಗಿರಲು ಏನು ಮಾಡುವಿರಿ? ವಿಶೇಷತೆಯನ್ನು ಕಾರ್ಯದಲ್ಲಿ ತೊಡಗಿಸಿ ಆಗ ವೃದ್ಧಿಯೂ ಆಗುವುದು ಮತ್ತು ಯಾವಾಗ ಸರ್ವ ವಿಶೇಷತೆಗಳು ಬಂದು ಬಿಡುವುದೋ ಆಗ ಸಂಪನ್ನರಾಗಿ ಬಿಡುತ್ತೀರಿ ಮತ್ತು ಪ್ರಸನ್ನತೆಗೆ ಆಧಾರವಾಗಿದೆ - ``ಸಂಪನ್ನತೆ'' ಯಾರು ಸ್ವಯಂನೊಂದಿಗೆ ಪ್ರಸನ್ನರಾಗಿರುವರೋ ಅವರು ಅನ್ಯರೊಂದಿಗೂ ಪ್ರಸನ್ನರಾಗಿರುತ್ತಾರೆ, ಸೇವೆಯೊಂದಿಗೂ ಪ್ರಸನ್ನರಾಗಿರುತ್ತಾರೆ. ಯಾವುದೇ ಸೇವೆ ಸಿಗಲಿ ಅದರಲ್ಲಿ ಅನ್ಯರನ್ನು ಪ್ರಸನ್ನಗೊಳಿಸುತ್ತಾ ಸೇವೆಯಲ್ಲಿ ಮೊದಲಿನ ನಂಬರನ್ನು ಪಡೆಯುತ್ತಾರೆ. ಎಲ್ಲದಕ್ಕಿಂತ ಅತಿ ದೊಡ್ಡ ಸೇವೆಯನ್ನು ತಮ್ಮ ಪ್ರಸನ್ನಚಿತ್ತ ಮೂರ್ತಿಯೇ (ಚಹರೆ) ಮಾಡುವುದು ಅಂದಾಗ ಯಾವ ಚಾರ್ಟ್ ನೋಡಿದೆವೆಂದು ಕೇಳಿದಿರಾ! ಒಳ್ಳೆಯದು. |
ಟೀಚರ್ಸ್ಗೆ ಮುಂದೆ ಕುಳಿತುಕೊಳ್ಳುವ ಭಾಗ್ಯ ಸಿಕ್ಕಿದೆ ಏಕೆಂದರೆ ಮಾರ್ಗದರ್ಶಕರಾಗಿ ಬರುತ್ತಾರೆ, ಬಹಳ ಪರಿಶ್ರಮ ಪಡುತ್ತಾರೆ. ಒಬ್ಬರನ್ನು ಸುಖಧಾಮದಿಂದ ಕರೆದರೆ ಇನ್ನೊಬ್ಬರನ್ನು ವಿಶಾಲ ಭವನದಿಂದ (ಮಧುಬನದಲ್ಲಿ) ಕರೆಯುತ್ತಾರೆ. ಇದರಿಂದ ಒಳ್ಳೆಯ ವ್ಯಾಯಾಮವಾಗಿ ಬಿಡುತ್ತದೆ. ಸೇವಾಕೇಂದ್ರದಲ್ಲಂತೂ ವಾಕಿಂಗ್ ಮಾಡುವುದಿಲ್ಲ, ಯಜ್ಞದ ಆದಿಯಲ್ಲಿ ಸೇವೆಯನ್ನು ಆರಂಭ ಮಾಡಿದಾಗ ಎಲ್ಲರೂ ನಡೆದುಕೊಂಡೇ ಹೋಗುತ್ತಿದ್ದರಲ್ಲವೆ. ನಿಮ್ಮ ಹಿರಿಯ ದಾದಿಯರೂ ಸಹ ನಡೆದಾಡುತ್ತಿದ್ದರು, ಸಾಮಾನುಗಳ ಚೀಲವನ್ನು ಕೈಯಲ್ಲಿ ಹಿಡಿದುಕೊಂಡು ನಡೆದುಕೊಂಡೇ ಹೋಗುತ್ತಿದ್ದರು, ಈಗಂತೂ ತಾವೆಲ್ಲರೂ ಮಾಡಿ-ಮಾಡಲ್ಪಟ್ಟಿರುವ ಸಮಯದಲ್ಲಿ ಬಂದಿದ್ದೀರಿ ಆದ್ದರಿಂದ ಭಾಗ್ಯಶಾಲಿಗಳಲ್ಲವೆ. ತಯಾರಾಗಿರುವ ಸೇವಾಕೇಂದ್ರಗಳು ಸಿಕ್ಕಿದೆ, ತಮ್ಮ ಮನೆಯಾಗಿ ಬಿಟ್ಟಿದೆ. ಮೊದಲಂತೂ ಯಮುನಾ ನದಿಯ ತೀರದಲ್ಲಿದ್ದರು, ಒಂದೇ ಕೋಣೆಯಿತ್ತು, ರಾತ್ರಿಯಲ್ಲಿ ಮಲಗುವುದು ಹಗಲಿನಲ್ಲಿ ಅದೇ ಸೇವಾಸ್ಥಾನವಾಗಿರುತ್ತಿತ್ತು. ಆದರೆ ಖುಷಿ-ಖುಷಿಯಿಂದ ತ್ಯಾಗ ಮಾಡಿದ್ದೀರಿ ಅದರ ಭಾಗ್ಯದ ಫಲವನ್ನು ತಿನ್ನುತ್ತಿದ್ದೀರಿ. ತಾವು ಫಲವನ್ನು ತಿನ್ನುವ ಸಮಯದಲ್ಲಿ ಬಂದಿದ್ದೀರಿ. ಮೊದಲಿನವರೆಲ್ಲರೂ ಬೀಜವನ್ನು ಬಿತ್ತಿದ್ದರು, ಅದರ ಫಲವನ್ನು ತಾವು ತಿನ್ನುತ್ತಿದ್ದೀರಿ. ಫಲ ತಿನ್ನುವುದು ಬಹಳ ಸಹಜವಲ್ಲವೆ. ಈಗ ಇಂತಹ ಫಲಸ್ವರೂಪ, ಕ್ವಾಲಿಟಿಯವರನ್ನು ತಯಾರು ಮಾಡಿ. ತಿಳಿಯಿತೆ- ಕ್ವಾಂಟಿಟಿ (ಸಂಖ್ಯೆ) ಅಂತೂ ಇದ್ದೇ ಇದೆ ಮತ್ತು ಇದೂ ಬೇಕಾಗಿದೆ. 9 ಲಕ್ಷದವರೆಗೆ ತಲುಪಬೇಕೆಂದರೆ ಕ್ವಾಲಿಟಿ ಮತ್ತು ಕ್ವಾಂಟಿಟಿ ಎರಡೂ ಬೇಕಾಗಿದೆ ಆದರೆ ಈಗ 16,000ದ ಪಕ್ಕಾ ಮಾಲೆಯನ್ನು ತಯಾರು ಮಾಡಿ. ಈಗ ಕ್ವಾಲಿಟಿ ಆತ್ಮರನ್ನು ತಯಾರು ಮಾಡುವ ಸೇವೆಯಲ್ಲಿ ವಿಶೇಷ ಅಂಡರ್ಲೈನ್ ಮಾಡಿಕೊಳ್ಳಿ. |
ಪ್ರತಿಯೊಂದು ಗ್ರೂಪ್ನಲ್ಲಿ ಶಿಕ್ಷಕಿ ಸಹೋದರಿಯರೂ ಬರುತ್ತಾರೆ, ಕುಮಾರಿಯರೂ ಬರುತ್ತಾರೆ ಆದರೆ ಯಾರೂ ಸಮರ್ಪಣೆ ಆಗುವುದಿಲ್ಲ. ಮಧುಬನವು ಇಷ್ಟವಾಗುತ್ತದೆ, ತಂದೆಯೊಂದಿಗೆ ಪ್ರೀತಿಯೂ ಇದೆ ಆದರೆ ಸಮರ್ಪಣೆಯಾಗಲು ಆಲೋಚಿಸುತ್ತಾರೆ. ಯಾರು ಸ್ವಯಂ ತಾವಾಗಿಯೇ ಮುಂದೆ ಬರುವರೋ ಅರ್ಥಾತ್ ಸಮರ್ಪಣೆಯಾಗುವರೋ ಅವರು ನಿರ್ವಿಘ್ನರಾಗಿ ನಡೆಯುತ್ತಾರೆ ಮತ್ತು ಯಾರು ಹೇಳುವುದರಿಂದ ನಡೆಯುವರೋ ಅವರು ನಿಲ್ಲುತ್ತಾರೆ ಮತ್ತೆ ನಡೆಯುತ್ತಾರೆ. ನಾವಂತೂ ಸಮರ್ಪಣೆಯಾಗುವುದಿಲ್ಲ ಎಂದು ಮೊದಲೇ ಹೇಳಿದ್ದೆವು ಎಂದು ಅವರು ಪದೇ-ಪದೇ ತಮಗೇ ಹೇಳುತ್ತಾರೆ. ಇನ್ನೂ ಕೆಲವರು ಆಲೋಚಿಸುತ್ತಾರೆ - ಇದಕ್ಕಿಂತಲೂ ಹೊರಗಡೆಯಿದ್ದು ಸೇವೆ ಮಾಡುವುದು ಒಳ್ಳೆಯದಾಗಿದೆ ಎಂದು. ಆದರೆ ಹೊರಗೆ ಇದ್ದು ಸೇವೆ ಮಾಡುವುದು ಮತ್ತು ತ್ಯಾಗ ಮಾಡಿ ಸೇವೆ ಮಾಡುವುದರಲ್ಲಿ ಖಂಡಿತ ವ್ಯತ್ಯಾಸವಿದೆ. ಯಾರು ಸಮರ್ಪಣತೆಯ ಮಹತ್ವಿಕೆಯನ್ನು ಅರಿತುಕೊಂಡಿದ್ದಾರೆಯೋ ಅವರು ಸದಾ ಸ್ವಯಂನ್ನು ಕೆಲವು ಮಾತುಗಳಿಂದ ಬಿಡಿಸಿಕೊಂಡು ಆರಾಮದಿಂದ ಬಂದು ಬಿಟ್ಟಿದ್ದಾರೆ. ಕೆಲವರು ಪರಿಶ್ರಮದಿಂದ ಬಂದಿದ್ದಾರೆ ಅಂದಾಗ ಟೀಚರ್ಸ್ ತಮ್ಮ ಮಹತ್ವಿಕೆಯನ್ನು ಚೆನ್ನಾಗಿ ಅರಿತುಕೊಂಡಿದ್ದೀರಲ್ಲವೆ? ನೌಕರಿ ಮತ್ತು ಈ ಸೇವೆ ಎರಡೂ ಕೆಲಸಗಳನ್ನು ಮಾಡುವವರು ಒಳ್ಳೆಯವರೋ ಅಥವಾ ಒಂದು ಕೆಲಸ ಮಾಡುವವರು ಒಳ್ಳೆಯವರೋ? ನೌಕರಿ ಮಾಡುವವರಾದರೂ ಡಬಲ್ ಪಾತ್ರವನ್ನು ಅಭಿನಯಿಸಬೇಕಾಗುವುದು. ಭಲೆ ನಿರ್ಬಂಧನರಾಗಿರಬಹುದು ಆದರೂ ಡಬಲ್ ಪಾತ್ರವಂತೂ ಇದೆಯಲ್ಲವೆ. ನಿಮ್ಮದು ಒಂದೇ ಪಾತ್ರವಾಗಿದೆ, ಪ್ರವೃತ್ತಿಯವರಾದರೆ ಒಂದು ವಿದ್ಯಾಭ್ಯಾಸ, ಇನ್ನೊಂದು ಸೇವೆ ಮತ್ತು ಜೊತೆ ಜೊತೆಗೆ ಪ್ರವೃತ್ತಿಯನ್ನೂ ಪಾಲನೆ ಮಾಡುವ ಮೂರು ಪಾತ್ರವನ್ನು ಅಭಿನಯಿಸಬೇಕಾಗುತ್ತದೆ. ತಾವಂತೂ ಎಲ್ಲಾ ಮಾತುಗಳಿಂದ ಮುಕ್ತರಾದಿರಿ. ಒಳ್ಳೆಯದು. |
ಸರ್ವ ಸದಾ ಪ್ರಸನ್ನತೆಯ ವಿಶೇಷತೆಯಿಂದ ಸಂಪನ್ನ, ಶ್ರೇಷ್ಠಾತ್ಮರಿಗೆ, ಸದಾ ತಮ್ಮ ವಿಶೇಷತೆಯನ್ನು ಅರಿತುಕೊಂಡು ಕಾರ್ಯದಲ್ಲಿ ತೊಡಗಿಸುವಂತಹ ಬುದ್ಧಿವಂತ ಮತ್ತು ಉದಾಹರಣಾ ಮೂರ್ತಿ ಆತ್ಮರಿಗೆ, ಸದಾ ಪ್ರಸನ್ನರಾಗಿರುವಂತಹ ಪ್ರಸನ್ನಗೊಳಿಸುವ ಶ್ರೇಷ್ಠತೆಯನ್ನು ಹೊಂದಿರುವ ಮಹಾನ್ ಆತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ. |
ಆಗ್ರಾ-ರಾಜಸ್ಥಾನ: |
ಸದಾ ತಮ್ಮನ್ನು ಅಕಾಲ ಸಿಂಹಾನಧಿಕಾರಿ ಶ್ರೇಷ್ಠ ಆತ್ಮನೆಂದು ತಿಳಿಯುವಿರಾ? ಆತ್ಮನು ಅಕಾಲನಾಗಿದ್ದಾನೆ ಅಂದಮೇಲೆ ಅದರ ಸಿಂಹಾಸನವೂ ಅಕಾಲ ಸಿಂಹಾಸನವಾಯಿತಲ್ಲವೆ! ಈ ಸಿಂಹಾಸನದ ಮೇಲೆ ಆತ್ಮವು ಕುಳಿತುಕೊಂಡು ಎಷ್ಟೊಂದು ಕಾರ್ಯವನ್ನು ಮಾಡುತ್ತದೆ. ನಾನು `ಸಿಂಹಾಸನಾಧಿಕಾರಿ ಆತ್ಮನಾಗಿದ್ದೇನೆ' ಎಂಬ ಸ್ಮೃತಿಯಿಂದ ಸ್ವತಹವಾಗಿಯೇ ಸ್ವರಾಜ್ಯದ ಸ್ಮೃತಿಯು ಬರುತ್ತದೆ. ಯಾವಾಗ ರಾಜನು ಸಿಂಹಾಸನದ ಮೇಲೆ ಕುಳಿತುಕೊಳ್ಳುವನು ಆಗ ರಾಜನೆಂಬ ನಶೆ, ಖುಷಿಯು ಸ್ವತಹವಾಗಿಯೇ ಉತ್ಪನ್ನವಾಗುವುದು. ಸಿಂಹಾಸನಾಧಿಕಾರಿ ಎಂದರೆ ಸ್ವರಾಜ್ಯ ಅಧಿಕಾರಿ ರಾಜನಾಗಿದ್ದೇನೆ - ಈ ಸ್ಮೃತಿಯಿಂದ ಸ್ವತಹವಾಗಿಯೇ ಸರ್ವ ಕರ್ಮೇಂದ್ರಿಯಗಳೂ ಆದೇಶದ ಅನುಸಾರ ನಡೆಯುವುದು. ಯಾರು ಅಕಾಲ ಸಿಂಹಾಸನಾಧಿಕಾರಿ ಎಂದು ತಿಳಿದುಕೊಂಡು ನಡೆಯುವರೋ ಅವರಿಗಾಗಿ ತಂದೆಯ ಹೃದಯ ಸಿಂಹಾಸನವೂ ಇದೆ. ಏಕೆಂದರೆ ಆತ್ಮನೆಂದು ತಿಳಿಯುವುದರಿಂದ ತಂದೆಯದೇ ನೆನಪು ಬರುತ್ತದೆ. ನಂತರ ದೇಹವೂ ಇರುವುದಿಲ್ಲ, ದೇಹದ ಸಂಬಂಧ/ದೇಹದ ಪದಾರ್ಥವೂ ಇರುವುದಿಲ್ಲ. ತಂದೆಯೇ ತನ್ನ ಪ್ರಪಂಚವಾಗಿದ್ದಾರೆ ಆದ್ದರಿಂದ ಅಕಾಲ-ಸಿಂಹಾಸನ-ಅಧಿಕಾರಿಯು ತಂದೆಯ ಹೃದಯ-ಸಿಂಹಾಸನ-ಅಧಿಕಾರಿಯೂ ಆಗುವರು. ಯಾರಲ್ಲಿ ಒಬ್ಬ ತಂದೆಯ ಹೊರತು ಮತ್ತ್ಯಾರೂ ಇರುವುದಿಲ್ಲ - ಇಂತಹ ಮಕ್ಕಳೇ ತಂದೆಯ ಹೃದಯದಲ್ಲಿರುವರು ಅಂದಮೇಲೆ ಡಬಲ್ ಸಿಂಹಾಸನವಾಯಿತು. ಯಾರು ಅಗಲಿ ಮರಳಿ ಸಿಕ್ಕಿರುವ ಮಕ್ಕಳಿರುತ್ತಾರೆ, ಬಹಳ ಪ್ರಿಯವಾಗುವರು, ಅವರನ್ನು ಸದಾ ಮಡಿಲಿನಲ್ಲಿಯೇ ಕೂರಿಸಿಕೊಳ್ಳುವರು, ತಲೆಯ ಮೇಲೆ ಕೂರಿಸಿಕೊಳ್ಳುವರೇ ಹೊರತು ಕೆಳಗಿಡುವುದಿಲ್ಲ. ಅದಕ್ಕಾಗಿಯೇ ತಂದೆಯೂ ಹೇಳುವರು - ಸಿಂಹಾಸನದ ಮೇಲೆ ಕುಳಿತುಕೊಳ್ಳಿರಿ, ಕೆಳಗೆ ಬಂದು ಬಿಡಬಾರದು. ಯಾರಿಗೆ ಸಿಂಹಾಸನವು ಸಿಗುತ್ತದೆಯೋ ಅವರು ಬೇರೆ ಜಾಗದಲ್ಲಿ ಕುಳಿತುಕೊಳ್ಳುವರೇನು? ಹಾಗಾದರೆ ಅಕಾಲ ಸಿಂಹಾಸನ ಅಥವಾ ಹೃದಯ ಸಿಂಹಾಸನವನ್ನು ಮರೆತು ದೇಹದ ಧರಣಿಯಲ್ಲಿ, ಮಣ್ಣಿನಲ್ಲಿ ಬರಬಾರದು. ದೇಹವನ್ನು ಮಣ್ಣು ಎಂದು ಹೇಳುವಿರಲ್ಲವೆ, ಮಣ್ಣು-ಮಣ್ಣಿನಲ್ಲಿ ಸೇರಿ ಹೋಗುತ್ತದೆ ಎಂದು ಹೇಳುವರಲ್ಲವೆ! ಹಾಗಾದರೆ ದೇಹದಲ್ಲಿ ಬರುವುದು ಅರ್ಥಾತ್ ಮಣ್ಣಿನಲ್ಲಿ ಬರುವುದಾಯಿತು. ಯಾರು ರಾಯಲ್ ಫ್ಯಾಮಿಲಿ ಮಕ್ಕಳಾಗಿರುತ್ತಾರೆಯೋ ಅವರೆಂದಿಗೂ ಸಹ ಮಣ್ಣಿನಲ್ಲಿ ಆಡುವುದಿಲ್ಲ. ಪರಮಾತ್ಮನ ಮಕ್ಕಳಂತು ಎಲ್ಲರಿಗಿಂತಲೂ ರಾಯಲ್ ಆಗಿರುವರು ಅಂದಾಗ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದು ಪ್ರಿಯವಾಗುತ್ತದೆಯೋ ಅಥವಾ ಮಣ್ಣನ್ನೂ ಸ್ವಲ್ಪ ನೋಡಿ ಬಿಡೋಣ ಎಂದು ಸ್ವಲ್ಪ-ಸ್ವಲ್ಪ ಮನಸ್ಸಾಗುತ್ತದೆಯೇ! ಕೆಲವು ಮಕ್ಕಳಲ್ಲಿ ಮಣ್ಣನ್ನು ತಿನ್ನುವ ಅಥವಾ ಮಣ್ಣಿನಲ್ಲಿಯೇ ಆಡುವ ಸ್ವಭಾವವಿರುತ್ತದೆ. ತಮ್ಮಲ್ಲಿ ಇಂತಹ ಸ್ವಭಾವವಂತು ಇಲ್ಲವಲ್ಲವೆ! 63 ಜನ್ಮಗಳಲ್ಲಿಯೂ ಮಣ್ಣಿನೊಂದಿಗೆ ಆಡಿದಿರಿ, ಈಗ ತಂದೆಯು ಸಿಂಹಾಸನಾಧಿಕಾರಿ ಮಾಡುತ್ತಿದ್ದಾರೆ, ಅಂದಾಗ ಮಣ್ಣಿನೊಂದಿಗೆ ಹೇಗೆ ಆಡುವಿರಿ, ಯಾರು ಮಣ್ಣಿನಲ್ಲಿ ಆಡುವರೋ ಅವರು ಅಶುದ್ಧವಾಗುತ್ತಾರೆ. ಹಾಗಾದರೆ ತಾವೂ ಸಹ ಎಷ್ಟೊಂದು ಅಶುದ್ಧವಾಗಿ ಬಿಟ್ಟಿದ್ದೀರಿ. ಈಗ ತಂದೆಯವರು ಸ್ವಚ್ಛರನ್ನಾಗಿ ಮಾಡಿ ಬಿಟ್ಟಾರು, ಇದೇ ಸ್ಮೃತಿಯಿಂದ ಸದಾ ಸಮರ್ಥವಾಗಿ ಇರಬೇಕು. ಎಂದಿಗೂ ಸಹ ಶಕ್ತಿಶಾಲಿಗಳು ಬಲಹೀನರಾಗುವುದಿಲ್ಲ. ಬಲಹೀನರಾಗುವುದು ಎಂದರೆ ಮಾಯೆಯ ರೋಗವುಂಟಾಗುವುದು. ಈಗಂತು ಸದಾ ಆರೋಗ್ಯವಂತರು ಆಗಿದ್ದೀರಿ, ಆತ್ಮವು ಶಕ್ತಿಶಾಲಿ ಆಗಿ ಬಿಟ್ಟಿತು. ಶರೀರದ ಲೆಕ್ಕಚಾರವು ಬೇರೆ ಮಾತು ಆದರೆ ಮನಸ್ಸಂತು ಶಕ್ತಿಶಾಲಿ ಆಯಿತಲ್ಲವೆ. ಶರೀರವು ಬಲಹೀನವಾಗಿದೆ ಆದ್ದರಿಂದ ನಡೆಯುವುದಿಲ್ಲ, ಅದಂತು ಅಂತಿಮದಲ್ಲಿದೆ, ಆ ರೀತಿ ಅವಶ್ಯವಾಗಿ ಆಗುವುದು ಆದರೆ ಆತ್ಮವು ಶಕ್ತಿಶಾಲಿ ಆಗಿರಲಿ. ಶರೀರದ ಜೊತೆ ಆತ್ಮವಂತು ಬಲಹೀನವಾಗಬಾರದು. ಅದಕ್ಕಾಗಿ ಸದಾ ನೆನಪಿಟ್ಟುಕೊಳ್ಳಿರಿ - ಡಬಲ್ ಸಿಂಹಾಸನ ಅಧಿಕಾರಿಯಿಂದ ಡಬಲ್ ಕಿರೀಟಧಾರಿ ಆಗುವವರಿದ್ದೀರಿ. ಒಳ್ಳೆಯದು! |
ಎಲ್ಲರೂ ಸಂತುಷ್ಟವಾಗಿ ಇದ್ದೀರಲ್ಲವೆ! ಸಂತುಷ್ಟತೆ ಅರ್ಥಾತ್ ಪ್ರಸನ್ನವಾಗಿರುವುದು. ಸದಾ ಪ್ರಸನ್ನವಾಗಿ ಇರುತ್ತೀರಾ ಅಥವಾ ಕೆಲವೊಮ್ಮೆ ಪ್ರಸನ್ನವಾಗಿರುತ್ತೀರಾ? ಕೆಲವೊಮ್ಮೆ ಅಪ್ರಸನ್ನ, ಕೆಲವೊಮ್ಮೆ ಪ್ರಸನ್ನವಾಗಿರುವಂತೆ ಇರುವುದಿಲ್ಲವೇ, ಕೆಲವೊಮ್ಮೆ ಕೆಲವು ಮಾತುಗಳಲ್ಲಿ ಅಪ್ರಸನ್ನರಂತು ಆಗುವುದಿಲ್ಲವೇ?ಇಂದು ಇದನ್ನು ಮಾಡಿದೆನು, ಇಂದು ಇದಾಯಿತು, ನೆನ್ನೆ ಅದಾಯಿತು - ಈ ರೀತಿಯಾಗಿ ಪತ್ರವನ್ನು ಬರೆಯುವುದಿಲ್ಲವೇ?ಸದಾ ಪ್ರಸನ್ನಚಿತ್ತರಾಗಿ ಇರುವವರು ತನ್ನ ಆತ್ಮಿಕ ಪ್ರಕಂಪನಗಳಿಂದ ಅನ್ಯರನ್ನೂ ಪ್ರಸನ್ನಗೊಳಿಸುವರು.ನಾನಂತು ಪ್ರಸನ್ನವಾಗಿಯೇ ಇರುವೆನು ಅಷ್ಟೇ ಅಲ್ಲ, ಆದರೆ ಪ್ರಸನ್ನತೆಯ ಶಕ್ತಿಯು ಅವಶ್ಯವಾಗಿ ಹರಡುವುದು ಅಂದಮೇಲೆ ಯಾರನ್ನಾದರೂ ಪ್ರಸನ್ನಗೊಳಿಸಬಹುದು - ಈ ರೀತಿ ಇದ್ದೀರಾ ಅಥವಾ ತಮ್ಮವರೆಗಷ್ಟೇ ಪ್ರಸನ್ನತೆಯಿರುವುದು ಸರಿಯೇ? ಅನ್ಯರನ್ನೂ ಪ್ರಸನ್ನಗೊಳಿಸುವಿರೆಂದರೆ ನಂತರ ಯಾವುದೇ ಪತ್ರಗಳು ಬರುವುದಿಲ್ಲ. ಒಂದುವೆಳೆ ಯಾರಿಂದಲಾದರೂ ಅಪ್ರಸನ್ನತೆಯ ಪತ್ರವು ಬಂದಿತೆಂದರೆ, ಮತ್ತೆ ಅವರಿಗೇ ಹಿಂತಿರುಗಿಸಿ ಕಳುಹಿಸಬೇಕಲ್ಲವೆ! ಈ ಸಮಯ ಮತ್ತು ದಿನಾಂಕವನ್ನು ನೆನಪಿಟ್ಟುಕೊಳ್ಳಿರಿ. ಮತ್ತು ಈ ಪತ್ರವನ್ನು ಬರೆಯಿರಿ - ಓ.ಕೆ.ಆಗಿದ್ದೇನೆ ಮತ್ತು ಎಲ್ಲರೂ ನನ್ನಿಂದಲೂ ಒ.ಕೆ.ಆಗಿದ್ದಾರೆ. ಕೇವಲ ಈ ಎರಡು ಸಾಲುಗಳಲ್ಲಿಯೇ ಬರೆಯಿರಿ. ನಾನೂ ಒ.ಕೆ., ಮತ್ತು ನನ್ನಿಂದ ಅನ್ಯರೂ ಒ.ಕೆ., ಇದ್ದಾರೆ, ಇವೆರಡು ಸಾಲುಗಳನ್ನು ಕಾರ್ಡಿನಲ್ಲಿ ಬರೆದರೂ ತಲುಪುತ್ತದೆ, ಅದಕ್ಕಾಗಿ ಇಷ್ಟೆಲ್ಲಾ ಖರ್ಚನ್ನೇಕೆ ಮಾಡುತ್ತೀರಿ! ಮತ್ತು ಪದೇ-ಪದೇ ಬರೆಯಬೇಡಿ, ಇಲ್ಲದಿದ್ದರೆ ಪ್ರತಿನಿತ್ಯವೂ ಕಾರ್ಡನ್ನು ಕಳುಹಿಸುತ್ತೀರಿ, ನಿತ್ಯವೂ ಕಳುಹಿಸಬಾರದು. ತಿಂಗಳಿಗೆ ಎರಡು ಬಾರಿ, 15 ದಿನದಲ್ಲಿ ಒಮ್ಮೆ “ಒ.ಕೆ.” ಎಂದು ಬರೆದು ಕಾರ್ಡನ್ನು ಕಳುಹಿಸಿರಿ, ಬೇರೆ ಕಥೆಗಳನ್ನು ಬರೆಯಬಾರದು. ತಮ್ಮ ಪ್ರಸನ್ನತೆಯಿಂದ ಅನ್ಯರನ್ನೂ ಪ್ರಸನ್ನರನ್ನಾಗಿ ಮಾಡಿರಿ. ಒಳ್ಳೆಯದು! |
ಓಂ ಶಾಂತಿ. ಇದನ್ನು ಯಾರು ಹೇಳಿದರು? ಧೈರ್ಯವಹಿಸಿ ಅರ್ಥಾತ್ ತಾಳ್ಮೆಯಿಂದಿರಿ ಎಂದು ತಂದೆಯು ಮಕ್ಕಳಿಗೆ ಹೇಳಿದರು, ಇಡೀ ಪ್ರಪಂಚಕ್ಕೆ ಹೇಳಲಿಲ್ಲ. ಭಲೆ ಎಲ್ಲರೂ ಮಕ್ಕಳಾಗಿದ್ದಾರೆ ಆದರೆ ಎಲ್ಲರೂ ಕುಳಿತುಕೊಂಡಿಲ್ಲ ಅಲ್ಲವೆ. ಮಕ್ಕಳೇ ತಿಳಿದುಕೊಂಡಿದ್ದೀರಿ, ಅವಶ್ಯವಾಗಿ ಈ ದುಃಖಧಾಮವು ಬದಲಾಗುತ್ತಿದೆ, ಸುಖಧಾಮಕ್ಕಾಗಿ ನಾವು ಓದುತ್ತಿದ್ದೇವೆ ಮತ್ತು ಶ್ರೀಮತದಂತೆ ನಡೆಯುತ್ತಿದ್ದೇವೆ. ಮಕ್ಕಳಿಗೆ ಧೈರ್ಯವನ್ನೂ ಕೊಡುತ್ತಾರೆ, ವಾಸ್ತವದಲ್ಲಿ ಇಡೀ ಪ್ರಪಂಚಕ್ಕೆ ಗುಪ್ತ ಧೈರ್ಯವು ಸಿಗುತ್ತಿದೆ. ನಾವು ಸನ್ಮುಖದಲ್ಲಿ ಕೇಳುತ್ತೇವೆಂದು ನೀವು ತಿಳಿದುಕೊಳ್ಳುತ್ತೀರಿ, ಎಲ್ಲರೂ ಕೇಳುವುದಿಲ್ಲ. ಅವರು ಬೇಹದ್ದಿನ ತಂದೆಯಾಗಿದ್ದಾರೆ, ಬೇಹದ್ದಿನ ದುಃಖಹರ್ತ-ಸುಖಕರ್ತನಾಗಿದ್ದಾರೆ. ದುಃಖವನ್ನು ದೂರ ಮಾಡಿ ಸುಖದ ಮಾರ್ಗವನ್ನು ತಿಳಿಸುತ್ತಾರೆ. ನಿಮಗೆ ಯಾವಾಗ ಸುಖವಿರುವುದೋ ಆಗ ದುಃಖದ ಹೆಸರೂ ಇರುವುದಿಲ್ಲ, ಸುಖದ ಪ್ರಪಂಚಕ್ಕೆ ಸತ್ಯಯುಗ, ದುಃಖದ ಪ್ರಪಂಚಕ್ಕೆ ಕಲಿಯುಗವೆಂದು ಹೇಳಲಾಗುತ್ತದೆ. ಇದನ್ನೂ ಸಹ ಮಕ್ಕಳೇ ತಿಳಿದುಕೊಂಡಿದ್ದೀರಿ. ಸತ್ಯಯುಗದಲ್ಲಿ ಸಂಪೂರ್ಣ ಸುಖವಿರುತ್ತದೆ, 16 ಕಲಾ ಸಂಪೂರ್ಣ. ಹೇಗೆ ಪೂರ್ಣ ಚಂದ್ರಮನಿರುತ್ತಾನೆ, ನಂತರ ಕಲೆಗಳು ಕಡಿಮೆಯಾಗುತ್ತಾ-ಆಗುತ್ತಾ ಅಮಾವಾಸ್ಯೆಯಂದು ಚಿಕ್ಕ ಗೆರೆಯಷ್ಟೇ ಉಳಿದುಕೊಳ್ಳುತ್ತದೆ. ಪೂರ್ಣ ಅಂಧಕಾರವಾಗಿ ಬಿಡುತ್ತದೆ. 16 ಕಲಾ ಸಂಪೂರ್ಣನಿದ್ದಾಗ ಸಂಪೂರ್ಣ ಸುಖವೂ ಇರುವುದು. ಕಲಿಯುಗದಲ್ಲಿ 16 ಕಲೆಗಳು ಅಪೂರ್ಣವಾಗಿವೆ ಆದ್ದರಿಂದ ದುಃಖವೂ ಆಗುತ್ತದೆ. ಈ ಇಡೀ ಪ್ರಪಂಚಕ್ಕೆ ಮಾಯಾರೂಪಿ ಗ್ರಹಣವು ಹಿಡಿಯುತ್ತದೆ ಆದ್ದರಿಂದ ಈಗ ತಂದೆಯು ತಿಳಿಸುತ್ತಾರೆ - ನಿಮ್ಮಲ್ಲಿ ಯಾವ ದೇಹಾಭಿಮಾನವಿದೆಯೋ ಅದನ್ನು ಮೊಟ್ಟ ಮೊದಲು ಬಿಡಿ. ಈ ದೇಹಾಭಿಮಾನವು ನಿಮಗೆ ಬಹಳ ದುಃಖ ಕೊಡುತ್ತದೆ, ಆತ್ಮಾಭಿಮಾನಿಯಾಗಿರಿ ಆಗ ತಂದೆಯನ್ನೂ ನೆನಪು ಮಾಡಬಲ್ಲಿರಿ. ದೇಹಾಭಿಮಾನದಲ್ಲಿ ಇರುವುದರಿಂದ ತಂದೆಯನ್ನು ನೆನಪು ಮಾಡಲು ಸಾಧ್ಯವಿಲ್ಲ. ಇದು ಅರ್ಧಕಲ್ಪದ ದೇಹಾಭಿಮಾನವಾಗಿದೆ, ಈ ಅಂತಿಮ ಜನ್ಮದಲ್ಲಿ ದೇಹೀ-ಅಭಿಮಾನಿಯಾಗುವುದರಿಂದ ಮೊದಲನೆಯದಾಗಿ ಪಾಪಗಳ ಹೊರೆಯು ಸಮಾಪ್ತಿಯಾಗುತ್ತದೆ ಮತ್ತು 16 ಕಲಾ ಸಂಪೂರ್ಣ, ಸತೋಪ್ರಧಾನರಾಗುತ್ತೀರಿ. ಅನೇಕರು ದೇಹಾಭಿಮಾನದ ಮಾತುಗಳನ್ನೂ ತಿಳಿದುಕೊಳ್ಳುವುದಿಲ್ಲ. ಮನುಷ್ಯನನ್ನು ದುಃಖಿಯನ್ನಾಗಿ ಮಾಡುವುದೇ ದೇಹಾಭಿಮಾನವಾಗಿದೆ. ನಂತರ ಅನ್ಯ ವಿಕಾರಗಳು ಬರುತ್ತವೆ. ದೇಹೀ-ಅಭಿಮಾನಿಗಳಾದರೆ ಇವೆಲ್ಲಾ ವಿಕಾರಗಳು ಬಿಟ್ಟು ಹೋಗುತ್ತವೆ. ಇಲ್ಲದಿದ್ದರೆ ಇವು ಬಿಡುವುದು ಕಷ್ಟವಿದೆ. ದೇಹಾಭಿಮಾನದ ಅಭ್ಯಾಸವು ಪಕ್ಕಾ ಆಗಿರುವ ಕಾರಣ ತನ್ನನ್ನು ಆತ್ಮನೆಂದು ತಿಳಿದುಕೊಳ್ಳುವುದೇ ಇಲ್ಲ. ಇದರಲ್ಲಿ ಎಲ್ಲಾ ವಿಕಾರಗಳನ್ನು ದಾನ ಮಾಡಬೇಕಾಗುತ್ತದೆ. ಮೊಟ್ಟ ಮೊದಲು ದೇಹಾಭಿಮಾನವನ್ನು ಬಿಡಬೇಕಾಗಿದೆ. ಕಾಮ, ಕ್ರೋಧ ಇತ್ಯಾದಿಗಳು ನಂತರ ಬರುತ್ತವೆ. ನಿಮ್ಮ ತಂದೆಯು ಅವರಾಗಿದ್ದಾರೆ. ದೇಹಾಭಿಮಾನದ ಕಾರಣ ಲೌಕಿಕ ತಂದೆಯನ್ನೇ ತಂದೆಯೆಂದು ತಿಳಿದುಕೊಳ್ಳುತ್ತಾ ಬಂದಿದ್ದೀರಿ. ಈಗ ಮುಖ್ಯ ಮಾತೇನೆಂದರೆ ಪಾವನರಾಗುವುದು ಹೇಗೆ? ಪತಿತ ಪ್ರಪಂಚದಲ್ಲಿ ಎಲ್ಲರೂ ಪತಿತರಾಗಿದ್ದಾರೆ, ಯಾರೂ ಪಾವನರಿರಲು ಸಾಧ್ಯವಿಲ್ಲ. ಒಬ್ಬ ತಂದೆಯೇ ಎಲ್ಲರನ್ನೂ ಪಾವನರನ್ನಾಗಿ ಮಾಡಿ ಖುಷಿ-ಖುಷಿಯಿಂದ ಮರಳಿ ಕರೆದುಕೊಂಡು ಹೋಗುತ್ತಾರೆ. |
ಈಗ ನೀವು ಮಕ್ಕಳಿಗೆ ಯೋಗದ ಚಿಂತನೆಯಿದೆ. ಜೀವಿಸಿದ್ದಂತೆಯೇ ಸಾಯಬೇಕಾಗಿದೆ. ದೇಹಾಭಿಮಾನವನ್ನು ಕಳೆಯುವುದು ಎಂದರೆ ಸಾಯುವುದು ಎಂದರ್ಥ. ನಾವಾತ್ಮರು ತಂದೆಯನ್ನು ನೆನಪು ಮಾಡಿ ಪತಿತರಿಂದ ಪಾವನರಾಗಿ ಬಿಡಬೇಕು, ಈ ಪಾವನರಾಗುವ ಯುಕ್ತಿಯನ್ನು ತಂದೆಯೇ ತಿಳಿಸಿದ್ದರು. ಈಗ ಪುನಃ ತಿಳಿಸುತ್ತಿದ್ದಾರೆ. ಕಲ್ಪ-ಕಲ್ಪವೂ ತಿಳಿಸುತ್ತಾರೆ. ಪ್ರಪಂಚದಲ್ಲಿ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಮೂಲ ಮಾತು ಶಿವ ತಂದೆಯನ್ನು ನೆನಪು ಮಾಡುವುದಾಗಿದೆ. ಯಾವಾಗ ಇಲ್ಲಿ ಬಂದು ಬಿ.ಕೆ.ಗಳ ಮುಖಾಂತರ ಕೇಳುವರೋ ಆಗಲೇ ಅರ್ಥವಾಗುತ್ತದೆ ಏಕೆಂದರೆ ತಾತನ ಆಸ್ತಿಯು ಸಿಗಬೇಕಾಗಿದೆ. ಅಂದಮೇಲೆ ಅವಶ್ಯವಾಗಿ ಯಾರ ಮುಖಾಂತರ ಸಿಗುವುದೋ ಅವರು ಅವಶ್ಯವಾಗಿ ಬೇಕಾಗಿದೆ. ಸಲಹೆಯನ್ನಂತೂ ಸಾಕಾರ ತಂದೆಯ ಮುಖಾಂತರವೇ ತೆಗೆದುಕೊಳ್ಳಬೇಕಾಗುವುದು. ಬಹಳ ಮಕ್ಕಳು ತಿಳಿಯುತ್ತಾರೆ - ನಾವಂತೂ ಶಿವ ತಂದೆಯೊಂದಿಗೆ ಬುದ್ಧಿಯೋಗವನ್ನು ಇಡುತ್ತೇವೆ, ಬ್ರಹ್ಮಾರವರನ್ನು ಬಿಟ್ಟು ಬಿಡುತ್ತೇವೆ. ಆದರೆ ಬ್ರಹ್ಮನಿಲ್ಲದೆ ಶಿವ ತಂದೆಯಿಂದ ಹೇಗೆ ಕೇಳುವಿರಿ! ನಮಗೆ ಬ್ರಹ್ಮಾ ತಂದೆಯೊಂದಿಗೆ ಯಾವುದೇ ಸಂಬಂಧವಿಲ್ಲವೆಂದು ಹೇಳುತ್ತಾರೆ. ಒಳ್ಳೆಯದು - ನೀವು ತಮ್ಮನ್ನು ಆತ್ಮನೆಂದು ತಿಳಿದು ಶಿವ ತಂದೆಯನ್ನು ನೆನಪು ಮಾಡಿರಿ, ಮನೆಗೆ ಹೋಗಿ ಕುಳಿತುಕೊಳ್ಳಿ ಆದರೆ ಯಾವ ಸೃಷ್ಟಿಚಕ್ರದ ಜ್ಞಾನವು ಸಿಗುತ್ತದೆಯೋ ಅದನ್ನು ಹೇಗೆ ಕೇಳುವಿರಿ? ಈ ಜ್ಞಾನವನ್ನು ತಿಳಿದುಕೊಳ್ಳದೆ ಕೇವಲ ನೆನಪು ಮಾಡಲು ಹೇಗೆ ಸಾಧ್ಯ! ಜ್ಞಾನವನ್ನು ಈ ಬ್ರಹ್ಮನ ಮುಖಾಂತರವೇ ತೆಗೆದುಕೊಳ್ಳಬೇಕಾಗುತ್ತದೆಯಲ್ಲವೆ. ಮತ್ತೆಂದೂ ಈ ಜ್ಞಾನ ಸಿಗಲು ಸಾಧ್ಯವಿಲ್ಲ. ಪ್ರತಿನಿತ್ಯವೂ ಹೊಸ-ಹೊಸ ಮಾತುಗಳು ತಂದೆಯ ಮುಖಾಂತರವೇ ಸಿಗುತ್ತದೆ. ಬ್ರಹ್ಮಾ ಮತ್ತು ಬ್ರಹ್ಮಾಕುಮಾರಿಯರಿಲ್ಲದೆ ಹೇಗೆ ತಿಳಿದುಕೊಳ್ಳುವಿರಿ! ಇದೆಲ್ಲವನ್ನೂ ಕಲಿಯಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಯಾರು ಮನೆಯಲ್ಲಿಯೇ ಕುಳಿತು ಕರ್ಮಾತೀತ ಸ್ಥಿತಿಯನ್ನು ಪಡೆಯುವ ಪುರುಷಾರ್ಥ ಮಾಡುವರೋ ಅವರು ಭಲೆ ಮುಕ್ತಿಯಲ್ಲಿ ಹೋಗುವರು ಆದರೆ ಜೀವನ್ಮುಕ್ತಿಯಲ್ಲಿ ಹೋಗಲು ಸಾಧ್ಯವಿಲ್ಲ. ಜ್ಞಾನ ಧನವನ್ನು ಧಾರಣೆ ಮಾಡಿಕೊಂಡು ದಾನ ಮಾಡಿದಾಗಲೇ ಧನವಂತರಾಗುವಿರಿ, ಇಲ್ಲದಿದ್ದರೆ ಸದಾ ಆರೋಗ್ಯವಂತರು ಹೇಗಾಗುತ್ತೀರಿ! ಮುರುಳಿಯ ಆಧಾರವನ್ನು ಅವಶ್ಯವಾಗಿ ತೆಗೆದುಕೊಳ್ಳಬೇಕಾಗುತ್ತದೆ. ವಿದ್ಯೆಯನ್ನಂತೂ ಓದಬೇಕಲ್ಲವೆ. ಇಂತಹವರು ಅನೇಕರು ಬರುತ್ತಾರೆ, ಕೇವಲ ಲಕ್ಷ್ಯವನ್ನು ತೆಗೆದುಕೊಂಡು ಮುಕ್ತಿಯಲ್ಲಿ ಹೋಗುತ್ತಾರೆ. ನೀವು ಎಲ್ಲಾ ಮನುಷ್ಯ ಮಾತ್ರರಿಗೂ ತಿಳಿಸುತ್ತೀರಿ - ನೀವು ಕೇವಲ ತಂದೆಯನ್ನು ನೆನಪು ಮಾಡಿದರೆ ಸತೋಪ್ರಧಾನರಾಗಿ ಬಿಡುತ್ತೀರಿ. ಯಾವಾಗ ಜ್ಞಾನ ಧನವನ್ನು ಪಡೆಯುವರೋ ಆಗಲೇ ಸತ್ಯಯುಗದಲ್ಲಿ ಸಾಹುಕಾರರಾಗುವರು. ಇಲ್ಲದಿದ್ದರೆ ಮುಕ್ತಿಯಲ್ಲಿ ಹೋಗಿ ಮತ್ತೆ ಭಕ್ತಿಮಾರ್ಗದ ಸಮಯದಲ್ಲಿ ಬಂದು ಭಕ್ತಿ ಮಾಡುತ್ತಾರೆ, ಯಾರ ಕಲ್ಯಾಣವನ್ನೂ ಮಾಡಲು ಸಾಧ್ಯವಿಲ್ಲ ಏಕೆಂದರೆ ಮನುಷ್ಯರಿಂದ ದೇವತೆಯಾಗಬೇಕೆಂದರೆ ಜ್ಞಾನವು ಅವಶ್ಯವಾಗಿ ಬೇಕಾಗಿದೆ. ಜ್ಞಾನವನ್ನು ಕೇಳಿದ ನಂತರ ತಿಳಿಸಬೇಕಾಗಿದೆ. ಪ್ರದರ್ಶನಿಯಲ್ಲಿ ನೋಡಿರಿ, ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೆ ಆದರೂ ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಆತ್ಮವು ಎಷ್ಟು ಚಿಕ್ಕ ಬಿಂದುವಾಗಿದೆ. ಪ್ರತಿಯೊಂದು ಆತ್ಮನಿಗೆ ತಮ್ಮ-ತಮ್ಮ ಪಾತ್ರವು ಸಿಕ್ಕಿದೆ, ಇದನ್ನು ನೀವೀಗ ತಿಳಿದುಕೊಂಡಿದ್ದೀರಿ. ಎಲ್ಲಾ ಮನುಷ್ಯ ಮಾತ್ರರು ಪಾತ್ರಧಾರಿಗಳಾಗಿದ್ದಾರೆ, ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಹಳೆಯ ಪ್ರಪಂಚದ ವಿನಾಶವೂ ಆಗಲಿದೆ. ರಾಮನೂ ಹೋದ, ರಾವಣನೂ ಹೋದನೆಂದು ಗಾಯನವಿದೆ. ಎಲ್ಲರೂ ಹೋಗುವರು ಆದರೆ ಮಕ್ಕಳಾದವರಿಗೆ ದುಃಖವಾಗಲು ಸಾಧ್ಯವಿಲ್ಲ. ನೀವು ತಿಳಿದುಕೊಂಡಿದ್ದೀರಿ, ಇದು ಮಾಡಿ-ಮಾಡಲ್ಪಟ್ಟ ಡ್ರಾಮಾ ಆಗಿದೆ, ಎಲ್ಲರ ವಿನಾಶವು ಆಗಲೇಬೇಕಾಗಿದೆ. ರಾಜ-ರಾಣಿ, ಸಾಧು-ಸಂತ ಎಲ್ಲರೂ ಮರಣ ಹೊಂದುತ್ತಾರೆ ಅಂದಮೇಲೆ ಅವರನ್ನು ಯಾರು ಸುಡುತ್ತಾರೆ? ಇದಂತೂ ಕೇವಲ ಅವರ ಹೆಸರನ್ನು ಪ್ರಸಿದ್ಧ ಮಾಡುವುದಕ್ಕಾಗಿ ಮಾಡುತ್ತಾರೆ. ಇದರಲ್ಲಿ ಯಾವುದೇ ಲಾಭವಿಲ್ಲ ಅಥವಾ ಅವರ ಆತ್ಮಕ್ಕೂ ಇದರಿಂದ ಸುಖ ಸಿಗುವುದಿಲ್ಲ. ಮನುಷ್ಯರಂತೂ ಭಕ್ತಿಮಾರ್ಗದಲ್ಲಿ ಏನೆಲ್ಲವನ್ನೂ ಮಾಡುತ್ತಾರೆಯೋ ಅದೆಲ್ಲವೂ ಅಂಧಶ್ರದ್ಧೆಯಿಂದ ಮಾಡುತ್ತಾರೆ. ಈಗ ತಂದೆಯು ನಿಮ್ಮನ್ನು ಎಷ್ಟು ಬುದ್ಧಿವಂತರನ್ನಾಗಿ ಮಾಡುತ್ತಾರೆ! ಪದೇ-ಪದೇ ಈ ಚಿತ್ರಗಳನ್ನು ನೋಡಿರಿ ಆಗ ನಮಗೆ ತಂದೆಯು ಓದಿಸಿ ಹೇಗೆ ಮಾಡುತ್ತಿದ್ದಾರೆಂದು ನೆನಪಿರುತ್ತದೆ ಆದರೆ ಯಾರ ಅದೃಷ್ಟದಲ್ಲಿಲ್ಲವೋ ಅವರು ಕಾರ್ಯದಲ್ಲಿ ತರುವುದಿಲ್ಲ. ತಂದೆಯು ಬಹಳಷ್ಟು ತಿಳಿಸುತ್ತಾರೆ ಆದರೆ ಅದನ್ನು ಕಾರ್ಯದಲ್ಲಿ ತರಬೇಕಲ್ಲವೆ. ತಂದೆಯ ಮಕ್ಕಳಾಗಿಯೂ ಸರ್ವೀಸ್ ಮಾಡುವುದಿಲ್ಲ. ತಂದೆಯಂತೂ ಕಲ್ಯಾಣಕಾರಿಯಾಗಿದ್ದಾರೆ. ಕೆಲವು ಮಕ್ಕಳು ಅನೇಕರ ಅಕಲ್ಯಾಣವನ್ನೇ ಮಾಡುತ್ತಾ ಇರುತ್ತಾರೆ. ಯಾರಿಗೆ ಸ್ವಲ್ಪ ಭಾವನೆಯಾದರೂ ಇರುತ್ತದೆಯೋ ಅವರ ಭಾವನೆಯನ್ನೂ ಸಹ ತೆಗೆಸಿ ಬಿಡುತ್ತಾರೆ. ಇಂತಿಂತಹ ವಿಕರ್ಮಗಳನ್ನು ಮಾಡುವವರೂ ಇದ್ದಾರೆ. ಭೂತಗಳ ಪ್ರವೇಶತೆಯಾಗುತ್ತದೆಯಲ್ಲವೆ! ಆದ್ದರಿಂದ ಸದ್ಗುರುವಿನ ನಿಂಧಕರಿಗೆ ನೆಲೆಯಿಲ್ಲವೆಂದು ಗಾಯನವಿದೆ. ಇದರಲ್ಲಿ ಬಾಪ್ದಾದಾ ಇಬ್ಬರೂ ಬಂದು ಬಿಡುತ್ತಾರೆ. ನಿರಾಕಾರನನ್ನು ಯಾರೇನೂ ಮಾಡಲು ಸಾಧ್ಯವಿಲ್ಲ. ಅವರಿಗೆ ಏನು ಹೇಳಲು ಸಾಧ್ಯ! ಭಕ್ತಿಮಾರ್ಗದಲ್ಲಿ ಭಗವಂತನೇ ದುಃಖ ಕೊಡುತ್ತಾರೆ ಎಂದು..... ಹೇಳುತ್ತಿದ್ದರು, ಅಜ್ಞಾನದ ಕಾರಣ ಹೀಗೆ ತಿಳಿಯುತ್ತಿದ್ದರು. ಈಗಂತೂ ಮಕ್ಕಳು ತಿಳಿದುಕೊಳ್ಳುತ್ತೀರಿ - ಅಜ್ಞಾನಕ್ಕೆ ವಶವಾಗಿ ತಂದೆಗೆ ಅಷ್ಟೊಂದು ತಿರಸ್ಕರಿಸುತ್ತಾರೆ. ತಮೋಪ್ರಧಾನರನ್ನು ಸತೋಪ್ರಧಾನರನ್ನಾಗಿ ಮಾಡುವವರು ಯಾರೂ ಇಲ್ಲ. ಪರಮಾತ್ಮ ಸರ್ವವ್ಯಾಪಿಯೆಂದು ಉಲ್ಟಾ ಮತ ಕೊಡುತ್ತಾರೆ. ಇದರಿಂದ ಮನುಷ್ಯರು ಎಷ್ಟೊಂದು ತಬ್ಬಿಬ್ಬಾಗುತ್ತಾರೆ! ಆದ್ದರಿಂದಲೇ ಬ್ರಹ್ಮನ ತನುವಿನಲ್ಲಿ ಪರಮಾತ್ಮನು ಬರಲು ಹೇಗೆ ಸಾಧ್ಯವೆಂದು ಹೇಳುತ್ತಾರೆ. ಅಂದಮೇಲೆ ಮತ್ತ್ಯಾರ ತನುವಿನಲ್ಲಿ ಬರುವುದು? ಕೃಷ್ಣನ ತನುವಿನಲ್ಲಿ ಬರುವುದೇ? ಅವರು ಇಲ್ಲದಿದ್ದರೆ ಬ್ರಹ್ಮಾಕುಮಾರ-ಕುಮಾರಿಯರು ಹೇಗಾಗುವಿರಿ? ಕೃಷ್ಣನ ತನುವಿನಲ್ಲಿ ಬಂದರೆ ಅವರಿಂದ ಜ್ಞಾನವನ್ನು ಕೇಳಿದವರು ದೈವೀಕುಮಾರ-ಕುಮಾರಿಯರಾಗಿ ಬಿಡುತ್ತಾರೆ. ಬ್ರಾಹ್ಮಣರಂತೂ ಅವಶ್ಯವಾಗಿ ಬ್ರಹ್ಮಾಕುಮಾರ ಮತ್ತು ಕುಮಾರಿಯರಾಗುತ್ತಾರೆ. ಬ್ರಾಹ್ಮಣರಿಲ್ಲದೆ ತಂದೆಯು ಏನನ್ನೂ ಮಾಡಲು ಸಾಧ್ಯವಿಲ್ಲ ಆದ್ದರಿಂದ ಇವರ ಚಿತ್ರವನ್ನು ಅವಶ್ಯವಾಗಿ ಕೊಡಬೇಕಾಗಿದೆ. ಈ ಬ್ರಹ್ಮನೂ ಸಹ ಬ್ರಾಹ್ಮಣನಾಗಿದ್ದಾರೆ, ಪ್ರಜಾಪಿತ ಬ್ರಹ್ಮನು ಭಾರತದಲ್ಲಿಯೇ ಬೇಕಾಗಿದೆ. ದಿನ-ಪ್ರತಿದಿನ ಮನೆಯಲ್ಲಿ ಕುಳಿತೇ ಅನೇಕರಿಗೆ ಬ್ರಹ್ಮನ ಸಾಕ್ಷಾತ್ಕಾರವಾಗುತ್ತಾ ಇರುತ್ತದೆ, ವೃದ್ಧಿಯಾಗುತ್ತಿರುತ್ತದೆ. ಯಾರ ಪಾತ್ರವಿರುವುದೋ ಅವರು ಓಡೋಡಿ ಬರುತ್ತಾರೆ. ಭಗವಂತನು ಅವಶ್ಯವಾಗಿ ಯಾವುದೋ ರೂಪದಲ್ಲಿದ್ದಾರೆಂದು ಅನೇಕರು ತಿಳಿದುಕೊಳ್ಳುತ್ತಾರೆ. ಸಾಕ್ಷಾತ್ಕಾರವನ್ನೂ ಸಹ ಪರಮಪಿತ ಪರಮಾತ್ಮನ ವಿನಃ ಮತ್ತ್ಯಾರೂ ಮಾಡಿಸಲು ಸಾಧ್ಯವಿಲ್ಲ. ಶಿವ ತಂದೆಯು ಬ್ರಹ್ಮನ ಮುಖಾಂತರವೇ ಸ್ಥಾಪನೆ ಮಾಡುತ್ತಾರೆ, ಜ್ಞಾನವನ್ನು ಕೊಡುತ್ತಾರೆ ಮತ್ತು ಬ್ರಾಹ್ಮಣ ಧರ್ಮವನ್ನೂ ರಚಿಸುತ್ತಾರೆ. ಬ್ರಾಹ್ಮಣ ಧರ್ಮವು ಅವಶ್ಯವಾಗಿ ಬೇಕಾಗಿದೆ, ಅವರು ಶ್ರೇಷ್ಠಾತಿ ಶ್ರೇಷ್ಠನಾಗಿದ್ದಾರೆ. ಪ್ರಜಾಪಿತ ಬ್ರಹ್ಮನೂ ಸಹ ಬಹಳ ಶ್ರೇಷ್ಠನಲ್ಲವೆ. ಅವರಿಗೆ ಎರಡನೇ ಭಗವಂತನೆಂದು ಹೇಳುತ್ತಾರೆ. ಸೂಕ್ಷ್ಮವತನದಲ್ಲಿ ಮತ್ತ್ಯಾರೂ ಇಲ್ಲ. ಬ್ರಹ್ಮನ ಮೂಲಕ ಸ್ಥಾಪನೆಯಾಗುತ್ತದೆ ಅಷ್ಟೇ. ಬ್ರಹ್ಮನೇ ನಂತರ ದೇವತೆಯಾಗುತ್ತಾರೆ, 84 ಜನ್ಮಗಳ ನಂತರ ಅವರೇ ಬ್ರಹ್ಮನಾಗುತ್ತಾರೆ. ಬ್ರಹ್ಮಾ-ಸರಸ್ವತಿಯೇ ಮತ್ತೆ ಲಕ್ಷ್ಮೀ-ನಾರಾಯಣರಾಗುತ್ತಾರೆ. ಜ್ಞಾನ ಜ್ಞಾನೇಶ್ವರಿಯೇ ನಂತರ ರಾಜ ರಾಜೇಶ್ವರಿಯಾಗುತ್ತಾರೆ. ಬ್ರಹ್ಮಾ ಸೋ ವಿಷ್ಣು, ವಿಷ್ಣು ಸೋ ಬ್ರಹ್ಮಾ ಹೇಗಾದರು? ಇದು ಬಹಳಒಳ್ಳೆಯ ಮಾತಾಗಿದೆ. ಇದರ ಬಗ್ಗೆ ನೀವು ಬಹಳ ಚೆನ್ನಾಗಿ ತಿಳಿಸಬಹುದು. ಈ ಜ್ಞಾನವು ಒಬ್ಬ ತಂದೆಯ ಮೂಲಕ ಸಿಗುತ್ತದೆ. ಪ್ರದರ್ಶನಿಯಲ್ಲಿ ಬಹಳ ಚೆನ್ನಾಗಿ ತಿಳಿಸಿರಿ - ನೀವು ಬ್ರಹ್ಮನನ್ನು ನೋಡಿ ಏಕೆ ತಬ್ಬಿಬ್ಬಾಗುತ್ತೀರಿ! ಇಷ್ಟೇಲ್ಲಾ ಬ್ರಾಹ್ಮಣ-ಬ್ರಾಹ್ಮಣಿಯರಿದ್ದಾರೆ. ಮೊದಲು ಬ್ರಾಹ್ಮಣರಾದರು ಆದ್ದರಿಂದ ವಿಷ್ಣುಪುರಿಯ ಮಾಲೀಕ ದೇವತೆಯಾದರು. ಬ್ರಹ್ಮನ ದಿನ ಮತ್ತು ಬ್ರಹ್ಮನ ರಾತ್ರಿಯು ಪ್ರಸಿದ್ಧವಾಗಿದೆ. ಈಗ ರಾತ್ರಿಯಾಗಿದೆ, ಹೀಗೆ ಚಿತ್ರಗಳ ಮುಂದೆ ಕುಳಿತು ಅಭ್ಯಾಸ ಮಾಡಿರಿ. ಯಾರು ಸರ್ವೀಸ್ ಮಾಡುತ್ತಾರೆಯೋ ಅವರಿಗೆ ಸರ್ವೀಸಿನ ವಿನಃ ಮತ್ತ್ಯಾವುದೇ ವಿಚಾರ ಬರುವುದಿಲ್ಲ. ಸರ್ವೀಸಿಗಾಗಿ ಓಡುತ್ತಾ ಇರುತ್ತಾರೆ. ಬುದ್ಧಿಯಲ್ಲಿ ಜ್ಞಾನದ ಹನಿ ಬೀಳುತ್ತಿದ್ದು ಬುದ್ಧಿರೂಪಿ ಜೋಳಿಗೆಯು ಚೆನ್ನಾಗಿ ತುಂಬಿದಾಗಲೇ ಉಮ್ಮಂಗ ಬರುವುದು. ಸರ್ವೀಸಿಗಾಗಿ ಓಡುತ್ತಾ ಇರುತ್ತೀರಿ. ಜ್ಞಾನವಿದ್ದು ಅನ್ಯರಿಗೆ ತಿಳಿಸದೇ ಇರಲು ಸಾಧ್ಯವೇ ಇಲ್ಲ. ಅಂದಮೇಲೆ ಜ್ಞಾನ ತೆಗೆದುಕೊಳ್ಳುವುದಾದರೂ ಏತಕ್ಕಾಗಿ? ತೆಗೆದುಕೊಳ್ಳುವುದೆಂದರೆ ದಾನ ಮಾಡುವುದಾಗಿದೆ. ದಾನ ಮಾಡುವುದಿಲ್ಲ, ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವುದಿಲ್ಲವೆಂದರೆ ಅವರು ಬ್ರಾಹ್ಮಣರೇನು! ಬಹಳ ಕನಿಷ್ಠ ದರ್ಜೆಯವರಾದರು. ತಂದೆಯು ನಿತ್ಯವೂ ಮಕ್ಕಳಿಗೆ ತಿಳಿಸುತ್ತಾರೆ, ಪ್ರಥಮ ದರ್ಜೆಯ ಬ್ರಾಹ್ಮಣರ ಕರ್ತವ್ಯವೇ ಇದಾಗಿದೆ - ಸರ್ವೀಸ್ ಮಾಡುವುದು. ಡಿಸ್ಸರ್ವೀಸ್ ಸಹ ಮಕ್ಕಳಿಂದಲೇ ಆಗುತ್ತದೆ. ಒಂದುವೇಳೆ ಸರ್ವೀಸ್ ಮಾಡದಿದ್ದರೆ ಅವಶ್ಯವಾಗಿ ಡಿಸ್ಸರ್ವೀಸ್ ಮಾಡುತ್ತೀರಿ. ಒಳ್ಳೊಳ್ಳೆಯ ಮಕ್ಕಳು ಎಲ್ಲಿಗೇ ಹೋದರೂ ಅವಶ್ಯವಾಗಿ ಸರ್ವೀಸ್ ಮಾಡುತ್ತಾರೆ. ಯಾವಾಗ ಜ್ಞಾನವು ಸಂಪೂರ್ಣವಾಗಿ ಬಿಡುವುದೋ ಆಗ ಅನನ್ಯ ಮಕ್ಕಳಿಂದ ಯಾವುದೇ ತಪ್ಪಾಗುವುದಿಲ್ಲ ಆಗಲೇ ಮಾಲೆಯ ಮಣಿಯಾಗುವರು. ಮುಖ್ಯವಾಗಿ 8 ಮಣಿಗಳಿವೆ, ಪರೀಕ್ಷೆಯು ಬಹಳ ದೊಡ್ಡದಾಗಿದೆಯಲ್ಲವೆ. ದೊಡ್ಡ ಪರೀಕ್ಷೆಯನ್ನು ಯಾವಾಗಲೂ ಕೆಲವರೇ ತೇರ್ಗಡೆ ಮಾಡುತ್ತಾರೆ ಏಕೆಂದರೆ ಸರ್ಕಾರವು ಅವರಿಗೆ ನೌಕರಿ ಕೊಡಬೇಕಾಗುತ್ತದೆ. ತಂದೆಯೂ ಸಹ ಇಲ್ಲಿ ವಿಶ್ವದ ಮಾಲೀಕರನ್ನಾಗಿ ಮಾಡಬೇಕಾಗುತ್ತದೆ ಆದ್ದರಿಂದ ಈ ಪರೀಕ್ಷೆಯಲ್ಲಿ ಕೆಲವರು ತೇರ್ಗಡೆಯಾಗುತ್ತಾರೆ, ಪ್ರಜೆಗಳಂತೂ ಲಕ್ಷಾಂತರ ಮಂದಿಯಾಗುತ್ತಾರೆ ಆದ್ದರಿಂದ ತಂದೆಯು ಕೇಳುತ್ತಾರೆ - ಮಹಾರಾಜರಾಗುತ್ತೀರೋ ಅಥವಾ ಪ್ರಜೆಗಳಲ್ಲಿ ಸಾಹುಕಾರರಾಗುತ್ತೀರೋ? ಇಲ್ಲವೆ ಬಡವರಾಗುತ್ತೀರೋ? ಹೇಳಿರಿ - ಏನಾಗುತ್ತೀರಿ? ಮಹಾರಾಜರ ಬಳಿ ದಾಸ-ದಾಸಿಯರಂತೂ ಅನೇಕರಿರುತ್ತಾರೆ ಮತ್ತು ವರದಕ್ಷಿಣೆಯಾಗಿಯೂ ದಾಸಿಯರನ್ನು ಕಳುಹಿಸುತ್ತಾರೆ. ಪುರುಷಾರ್ಥ ಮಾಡಿ ಒಳ್ಳೆಯ ಪದವಿಯನ್ನು ಪಡೆಯಬೇಕು. ನಿಮಂತ್ರಣ ಕೊಡುವಷ್ಟು ಬುದ್ಧಿವಂತರಾಗಬೇಕು. ಕೆಲವರನ್ನೇ ಭಾಷಣಕ್ಕಾಗಿ ಕರೆಯುತ್ತಾರೆ, ಇದನ್ನಂತೂ ತಿಳಿದುಕೊಂಡಿದ್ದೀರಲ್ಲವೆ. ಬಾಕಿ ಯಾರಲ್ಲಿ ಲಕ್ಷಣಗಳಿಲ್ಲವೋ ಅವರನ್ನು ಯಾರೂ ಕರೆಸುವುದಿಲ್ಲ. ಆದರೆ ನಾವು ಅಷ್ಟು ಕನಿಷ್ಠರಾಗಿದ್ದೇವೆ ಎಂಬುದು ಸ್ವಯಂಗೆ ಅರ್ಥವಾಗುತ್ತದೆಯೇ? ಕೆಲವರಂತೂ ಒಳ್ಳೆಯ ಸೇವಾಧಾರಿಗಳಿದ್ದಾರೆ. ಎಲ್ಲಿ ನೋಡಿದರಲ್ಲಿ ಸರ್ವೀಸಿಗಾಗಿ ಹೋಗುತ್ತಾರೆ. ನೌಕರಿಯ ವಿಚಾರವನ್ನೂ ಮಾಡದೆ ಸೇವೆಗೆ ಓಡುತ್ತಾರೆ. ಕೆಲವರು ನೌಕರಿಯಿಲ್ಲದಿದ್ದರೂ ಸಹ ಸರ್ವೀಸ್ ಮಾಡುವುದಿಲ್ಲ, ಉಮ್ಮಂಗವಿಲ್ಲ ಅಂದರೆ ಅದೃಷ್ಟದಲ್ಲಿಲ್ಲ ಅಥವಾ ಗ್ರಹಚಾರಿಯಿದೆ ಎಂದರ್ಥ. ಸರ್ವೀಸ್ ಬಹಳಷ್ಟಿದೆ, ಪರಿಶ್ರಮವೂ ಪಡಬೇಕಾಗುತ್ತದೆ. ಸುಸ್ತಾಗುತ್ತ, ತಿಳಿಸುತ್ತಾ-ತಿಳಿಸುತ್ತಾ ಗಂಟಲು ಕಟ್ಟುತ್ತದೆ, ಪುರುಷಾರ್ಥಿಗಳ ಗಂಟಲೂ ಕಟ್ಟುತ್ತದೆಯೆಂದರೆ ಬಹಳ ಚೆನ್ನಾಗಿ ಸರ್ವೀಸ್ ಮಾಡಿದರು ಎಂದಲ್ಲ. ಬಹಳ ರಾಯಲ್ ಸರ್ವೀಸ್ ಮಾಡುವವರು ಯಾರು ಎಂದು ತಂದೆಗೆ ಗೊತ್ತಿದೆ ಆದರೆ ಕೆಲವರಲ್ಲಿ ಬಲಹೀನತೆಗಳೂ ಇರುತ್ತವೆ, ನಾಮ-ರೂಪದಲ್ಲಿ ಸಿಲುಕುತ್ತಾ ಇರುತ್ತಾರೆ ಮತ್ತೆ ಶಿಕ್ಷಣವನ್ನು ಕೊಟ್ಟು ಸುಧಾರಣೆ ಮಾಡಲಾಗುತ್ತದೆ. ನಾಮ-ರೂಪದಲ್ಲಿ ಎಂದೂ ಸಿಲುಕಬಾರದು, ದೇಹೀ-ಅಭಿಮಾನಿಗಳಾಗಬೇಕಾಗಿದೆ. ಆತ್ಮವು ಚಿಕ್ಕ ಬಿಂದುವಾಗಿದೆ. ತಂದೆಯೂ ಬಿಂದುವಾಗಿದ್ದಾರೆ. ತನ್ನನ್ನು ಚಿಕ್ಕ ಬಿಂದುವೆಂದು ತಿಳಿದು ತಂದೆಯನ್ನು ನೆನಪು ಮಾಡುವುದು ಬಹಳ ಪರಿಶ್ರಮವಿದೆ. ಬಾಬಾ, ನಾವು ನಿಮ್ಮನ್ನು ಬಹಳ ನೆನಪು ಮಾಡುತ್ತೇವೆಂದು ಹೇಳುತ್ತಾರೆ ಆದರೆ ಬುದ್ಧಿಯಲ್ಲಿ ಆಕ್ಯೂರೇಟ್ ನೆನಪಿರಬೇಕಾಗಿದೆ. ಬಹಳ ಧೈರ್ಯ ಹಾಗೂ ಗಂಭೀರತೆಯಿಂದ ನೆನಪು ಮಾಡಬೇಕಾಗಿದೆ. ಈ ರೀತಿ ನೆನಪು ಮಾಡುವವರು ಕೆಲವರೇ ವಿರಳ. ಇದರಲ್ಲಿ ಬಹಳ ಪರಿಶ್ರಮವಿದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಮ್ಮ ಜೋಳಿಗೆಯನ್ನು ಜ್ಞಾನರತ್ನಗಳಿಂದ ತುಂಬಿಸಿಕೊಂಡು ದಾನ ಮಾಡಬೇಕಾಗಿದೆ. ಇದೇ ಕರ್ತವ್ಯದಲ್ಲಿ ತತ್ಫರರಾಗಿದ್ದು ಫಸ್ಟ್ಕ್ಲಾಸ್ ಬ್ರಾಹ್ಮಣರಾಗಬೇಕಾಗಿದೆ. |
2. ಕಲ್ಯಾಣಕಾರಿ ತಂದೆಯ ಮಕ್ಕಳಾಗಿದ್ದೀರಿ ಆದ್ದರಿಂದ ಎಲ್ಲರ ಕಲ್ಯಾಣ ಮಾಡಬೇಕಾಗಿದೆ. ಅನ್ಯರ ಭಾವನೆಯನ್ನು ಕೆಡಿಸುವುದು, ಉಲ್ಟಾ ಮತ ಕೊಡುವುದು, ಇಂತಹ ಅಕಲ್ಯಾಣದ ಕರ್ತವ್ಯವನ್ನು ಎಂದೂ ಮಾಡಬಾರದು. |
ಓಂ ಶಾಂತಿ. ಮಧುರಾತಿ ಮಧುರ ಆತ್ಮೀಯ ಮಕ್ಕಳೇ ಇದನ್ನು ತಿಳಿದುಕೊಂಡಿರುವಿರಿ ಒಂದು ಕಡೆ ಭಕ್ತಿ. ಇನ್ನೊಂದು ಕಡೆ ಜ್ಞಾನ. ಭಕ್ತಿಯಂತೂ ಅಪಾರವಾಗಿದೆ ಮತ್ತು ಕಲಿಸುವಂತಹವರು ಅನೇಕರಿದ್ದಾರೆ. ಶಾಸ್ತ್ರವನ್ನೂ ಕಲಿಸುತ್ತಾರೆ, ಮನುಷ್ಯರು ಕಲಿಯುತ್ತಾರೆ. ಇಲ್ಲಿ ಶಾಸ್ತ್ರವೂ ಇಲ್ಲಾ, ಮನುಷ್ಯರೂ ಇಲ್ಲ. ಇಲ್ಲಿ ಕಲಿಸುವಂತಹವರು ಆತ್ಮೀಯ ತಂದೆ ಒಬ್ಬರೇ ಯಾರು ಆತ್ಮಗಳಿಗೆ ತಿಳಿಸುತ್ತಾರೆ. ಆತ್ಮವೇ ಧಾರಣೆ ಮಾಡುತ್ತದೆ. ಪರಮಪಿತ ಪರಮಾತ್ಮನಲ್ಲಿ ಈ ಇಡೀ ಜ್ಞಾನ ಇದೆ, 84 ಚಕ್ರದ ಜ್ಞಾನ ಅವರಲ್ಲಿದೆ, ಆದ್ದರಿಂದ ಅವರನ್ನೂ ಸ್ವದರ್ಶನ ಚಕ್ರಧಾರಿ ಎಂದು ಹೇಳಬಹುದು. ನಾವು ಮಕ್ಕಳನ್ನೂ ಅವರು ಸ್ವದರ್ಶನ ಚಕ್ರಧಾರಿಗಳನ್ನಾಗಿ ಮಾಡುತ್ತಿದ್ದಾರೆ. ಬಾಬಾ ಕೂಡ ಬ್ರಹ್ಮಾರವರ ತನುವಿನ್ನಲ್ಲಿದ್ದಾರೆ, ಆದ್ದರಿಂದ ಅವರನ್ನು ಬ್ರಾಹ್ಮಣ ಎಂದೂ ಹೇಳಬಹುದಾಗಿದೆ. ನಾವೂ ಅವರ ಮಕ್ಕಳು ಬ್ರಾಹ್ಮಣರಿಂದ ದೇವತೆಗಳಾಗುತ್ತೇವೆ. ಈಗ ತಂದೆ ಕುಳಿತು ನೆನಪಿನಯಾತ್ರೆ ಯನ್ನು ಕಲಿಸುತ್ತಿದ್ದಾರೆ,ಇದರಲ್ಲಿ ಹಠಯೋಗ ಮುಂತಾದುವುಗಳ ಮಾತಿಲ್ಲ. ಅವರು ಹಠಯೋಗದಿಂದ ಟ್ರಾನ್ಸ್ ಮುಂತಾದುವಲ್ಲಿ ಹೋಗುತ್ತಾರೆ. ಇದೇನು ದೊಡ್ಡಮಾತಲ್ಲ. ಟ್ರಾನ್ಸ್ ನಿಂದ ಯಾವುದೇ ಹೆಚ್ಚುಗಾರಿಕೆ ಇಲ್ಲ. ಟ್ರಾನ್ಸ್ ಅಂತೂ ನಯಾಪೈಸೆಗೂ ಬರದ ಆಟವಾಗಿದೆ. ನೀವು ಈರೀತಿ ಯಾರಿಗೂ ಎಂದೂ ಹೇಳಬಾರದಾಗಿದೆ ನಾವು ಟ್ರಾನ್ಸ್ ನಲ್ಲಿ ಹೋಗುತ್ತೇವೆ ಎಂದು ಏಕೆಂದರೆ ಇತ್ತೀಚೆಗೆ ವಿದೇಶ ಮುಂತಾದಕಡೆ ಅಲ್ಲಿ-ಇಲ್ಲಿ ಬಹಳಷ್ಟು ಜನ ಟ್ರಾನ್ಸ್ ನಲ್ಲಿ ಹೋಗುವವರಿದ್ದಾರೆ. ಟ್ರಾನ್ಸ್ ನಲ್ಲಿ ಹೋಗುವುದರಿಂದ ಅವರಿಗೂ ಏನೂ ಪ್ರಯೋಜನವಿಲ್ಲ, ನಿಮಗೂ ಏನೂ ಪ್ರಯೋಜನವಿಲ್ಲ. ಬಾಬಾ ತಿಳುವಳಿಕೆ ಕೊಟ್ಟಿದ್ದಾರೆ.ಟ್ರಾನ್ಸ್ನಲ್ಲಿ ನೆನಪಿನಯಾತ್ರೆಯೂ ಇಲ್ಲಾ ಜ್ಞಾನವೂ ಇಲ್ಲ. ಧ್ಯಾನ ಅಥವಾ ಟ್ರಾನ್ಸ್ ನಲ್ಲಿ ಹೋಗುವವರು ಎಂದೂ ಸ್ವಲ್ಪವೂ ಜ್ಞಾನವನ್ನು ಕೇಳುವುದಿಲ್ಲ, ಇದರಿಂದ ಪಾಪವೂ ಭಸ್ಮ ವಾಗುವುದಿಲ್ಲ.ಟ್ರಾನ್ಸ್ ನ ಮಹತ್ವಿಕೆ ಏನೂ ಇಲ್ಲ. ಮಕ್ಕಳು ಯೋಗವನ್ನಿಡುತ್ತಾರೆ, ಅದನ್ನು ಟ್ರಾನ್ಸ್ ಎಂದು ಹೇಳಲಾಗುವುದಿಲ್ಲ. ನೆನಪಿನಿಂದ ವಿಕರ್ಮ ವಿನಾಶ ವಾಗುವುದು. ಟ್ರಾನ್ಸ್ ನಲ್ಲಿ ವಿಕರ್ಮ ವಿನಾಶವಾಗುವುದಿಲ್ಲ. ಬಾಬಾ ಎಚ್ಚರಿಕೆ ಕೊಡುತ್ತಾರೆ, ಮಕ್ಕಳೇ ಟ್ರಾನ್ಸ್ ನ ಆಸೆ ಇಟ್ಟಕೊಳ್ಳಬೇಡಿ ಎಂದು. |
ನೀವು ತಿಳಿದಿರುವಿರಿ ಈ ಸನ್ಯಾಸಿಗಳು ಮುಂತಾದವರಿಗೆ ಜ್ಞಾನ ಯಾವಾಗ ಸಿಗುವುದೆಂದರೆ ಯಾವಾಗ ವಿನಾಶದ ಸಮಯ ವಾಗುತ್ತದೆ ಆಗ. ಭಲೆ ಆದರೂ ನೀವು ಹೀಗೇ ನಿಮಂತ್ರಣ ಕೊಡುತ್ತಿರಿ ಆದರೆ ಈ ಜ್ಞಾನ ಅವರ ಕಳಷದಲ್ಲಿ ಬೇಗನೆ ಬರುವುದಿಲ್ಲ.ಯಾವಾಗ ವಿನಾಶ ಎದುರಲ್ಲಿ ನೋಡುತ್ತಾರೆ ಆಗ ಬರುತ್ತದೆ, ತಿಳಿಯುತ್ತಾರೆ ಈಗ ಮೃತ್ಯು ಇನ್ನೇನು ಬಂದಿತು. ಯಾವಾಗ ಸಮೀಪದಿಂದ ನೋಡುತ್ತಾರೆ ಆಗ ಒಪ್ಪುತ್ತಾರೆ. ಅವರ ಪಾತ್ರವೇ ಅಂತ್ಯದಲ್ಲಿದೆ. ನೀವು ಹೇಳುವಿರಿ ಈಗ ವಿನಾಶ ಇನ್ನೇನು ಬಂದಿತು, ಮೃತ್ಯು ಬರುವುದಿದೆ. ಆದರೆ ಅವರು ತಿಳಿಯುತ್ತಾರೆ ಇವರು ಸುಳ್ಳು ಹೇಳುತ್ತಿದ್ದಾರೆ ಎಂದು. |
ನಿಮ್ಮ ವೃಕ್ಷ ನಿಧಾನವಾಗಿ ಬೆಳೆಯುತ್ತಿದೆ. ಸನ್ಯಾಸಿಗಳಿಗೆ ಹೇಳಬೇಕುಕೇವಲ ತಂದೆಯನ್ನು ನೆನಪುಮಾಡಿ ಎಂದು. ತಂದೆ ಇದನ್ನೂ ತಿಳಿಸುತ್ತಾರೆ ನೀವು ಕಣ್ಣನ್ನು ಮುಚ್ಚಿಕೊಳ್ಳಬಾರದು ಎಂದು. ಕಣ್ಣನ್ನು ಮುಚ್ಚಿಕೊಂಡರೆ ತಂದೆಯನ್ನು ಹೇಗೆ ನೋಡುವಿರಿ. ನಾನು ಆತ್ಮ ಆಗಿದ್ದೇನೆ, ಪರಮಪಿತ ಮರಮಾತ್ಮನ ಎದುರು ಕುಳಿತಿದ್ದೇನೆ. ಅವರನ್ನು ನೋಡಲಾಗುವುದಿಲ್ಲ, ಅದರೆ ಈ ಜ್ಞಾನ ಬುದ್ಧಿಯಲ್ಲಿದೆ. ನೀವು ಮಕ್ಕಳು ತಿಳಿಯುತ್ತೀರಿ ಪರಮಪಿತ ಪರಮಾತ್ಮ ನಮಗೆ ಓದಿಸುತ್ತಿದ್ದಾರೆ-ಈ ಶರೀರದ ಆಧಾರ ಪಡೆದು. ಧ್ಯಾನ ಮುಂತಾದುವುಗಳ ಮಾತೇ ಇಲ್ಲ. ಧ್ಯಾನದಲ್ಲಿ ಹೋಗುವುದೇನು ದೊಡ್ಡಮಾತಲ್ಲ. ಈ ಭೋಗ ಮುಂತಾದುವುಗಳೆಲ್ಲಾ ಡ್ರಾಮದಲ್ಲಿ ನಿಗಧಿಯಾಗಿದೆ. ಸರ್ವೆಂಟ್ ಆಗಿ ಭೋಗವಿಟ್ಟು ಬರುವಿರಿ. ಹೇಗೆ ನೌಕರರು ದೊಡ್ಡ ಮನುಷ್ಯರಿಗೆ ಊಟ ಮಾಡಿಸುತ್ತಾರೆ ಹಾಗೆ. ನೀವೂ ಸಹ ನೌಕರರಾಗಿರುವಿರಿ ದೇವತೆಗಳಿಗೆ ಭೋಗವಿಡಲು ಹೋಗುವಿರಿ. ಅವರು ಫರಿಷ್ತಾ ಆಗಿದ್ದಾರೆ. ಅವರು ಮಮ್ಮಾ-ಬಾಬಾರವರನ್ನು ನೋಡುತ್ತಾರೆ. ಆ ಸಂಪೂರ್ಣ ಮೂರ್ತಿ ಕೂಡ ನಮ್ಮ ಗುರಿ ಉದ್ಧೇಶವಾಗಿದೆ. ಅವರನ್ನು ಇಂತಹ ಫರಿಷ್ತಾ ಯಾರು ಮಾಡಿದರು? ಬಾಕಿ ಧ್ಯಾನದಲ್ಲಿ ಹೋಗುವುದಂತೂ ದೊಡ್ಡಮಾತಲ್ಲ. ಹೇಗೆ ಇಲ್ಲಿ ಶಿವಬಾಬಾರವರು ನಿಮಗೆ ಓದಿಸುತ್ತಾರೆ ಅದೇರೀತಿ ಶಿವಬಾಬಾ ಇವರ (ಬ್ರಹ್ಮಾ) ಮುಖಾಂತರ ಅವರಿಗೂ ಸ್ವಲ್ಪ ತಿಳಿಸುತ್ತಾರೆ. ಸೂಕ್ಷ್ಮವತನದಲ್ಲಿ ಏನಾಗುತ್ತದೆ,ಇದನ್ನು ಕೇವಲ ತಿಳಿಯಬೇಕಾಗುತ್ತದೆ. ಬಾಕಿ ಟ್ರಾನ್ಸ್ ಮುಂತಾದುವಕ್ಕೆ ಏನೂ ಮಹತ್ವಿಕೆ ಕೊಡಬಾರದು. ಯಾರಿಗಾದರೂ ಟ್ರಾನ್ಸ್ ತೋರಿಸುವುದೂ-ಇದೂ ಸಹ ಹುಡುಗಾಟಿಕೆಯಾಗಿದೆ. ಬಾಬಾ ಎಲ್ಲರಿಗೂ ಎಚ್ಚರಿಕೆ ಕೊಡುತ್ತಾರೆ-ಟ್ರಾನ್ಸ್ ನಲ್ಲಿ ಹೋಗಬೇಡಿ, ಇದರಲ್ಲೂ ಎಷ್ಟೋಬಾರಿ ಮಾಯೆ ಪ್ರವೇಶವಾಗಿ ಬಿಡುತ್ತದೆ. |
ಇದು ವಿಧ್ಯೆಯಾಗಿದೆ, ಕಲ್ಪ-ಕಲ್ಪ ತಂದೆ ಬಂದು ನಿಮಗೆ ಓದಿಸುತ್ತಾರೆ. ಈಗ ಸಂಗಮಯುಗವಾಗಿದೆ. ನೀವು ಟ್ರಾನ್ಸ್ಫರ್ ಆಗಬೇಕಾಗಿದೆ. ಡ್ರಾಮಾದ ಪ್ಲಾನ್ ಅನುಸಾರ ನೀವು ಪಾತ್ರವನ್ನಭಿನಯಿಸುತ್ತಿರುವಿರಿ, ಪಾತ್ರದ ಮಹಿಮೆ ಇದೆ. ತಂದೆ ಬಂದು ಡ್ರಾಮಾನುಸಾರ ಓದಿಸುತ್ತಾರೆ. ನೀವು ತಂದೆಯಿಂದ ಒಂದು ಬಾರಿ ಓದಿ ಮನುಷ್ಯರಿಂದ ದೇವತೆ ಖಂಡಿತ ಆಗಬೇಕು. ಇದರಿಂದ ಮಕ್ಕಳಿಗಂತು ಖುಶಿಯಾಗುತ್ತದೆ. ಈಗ ನಾವು ತಂದೆಯನ್ನು ಮತ್ತು ರಚನೆಯ ಆದಿ ಮಧ್ಯೆ ಅಂತ್ಯವನ್ನೂ ತಿಳಿದಿರುವಿರಿ. ತಂದೆಯ ಶಿಕ್ಷಣ ಪಡೆದು ಬಹಳ ಹರ್ಷಿತರಾಗಬೇಕಾಗಿದೆ. ನೀವು ಹೊಸ ಪ್ರಪಂಚಕ್ಕಾಗಿ ಓದುತ್ತಿರುವಿರಿ. ಅದು ದೇವತೆಗಳ ರಾಜ್ಯ ಅಂದರೆ ಖಂಡಿತ ಪುರುಷೋತ್ತಮ ಸಂಗಮಯುಗದಲ್ಲೇ ಓದಬೇಕಾಗುತ್ತದೆ. ನೀವು ಈ ದುಃಖದಿಂದ ಬಿಡಿಸಿಕೊಂಡು ಸುಖದಲ್ಲಿ ಹೋಗುವಿರಿ. ಇಲ್ಲಿ ತಮೋಪ್ರದಾನರಾಗಿರುವ ಕಾರಣ ಕಾಯಿಲೆ ಮುಂತಾದುವುಗಳಲ್ಲಿ ಬರುವಿರಿ. ಈ ಎಲ್ಲಾ ರೋಗಗಳು ಅಳಿಸಿ ಹೋಗಬೇಕು. ಮುಖ್ಯವಾಗಿ ವಿಧ್ಯೆ ಆಗಿದೆ, ಇದರಲ್ಲಿ ಟ್ರಾನ್ಸ್ ಮುಂತಾದುವುಗಳ ಸಂಬಂಧವಿಲ್ಲ.ಇದು ದೊಡ್ಡ ಮಾತಲ್ಲ. ಬಹಳ ಜಾಗಗಳಲ್ಲಿ ಈ ರೀತಿ ಧ್ಯಾನದಲ್ಲಿ ಹೋಗುತ್ತಾರೆ ನಂತರ ಹೇಳುತ್ತಾರೆ ಮಮ್ಮಾ ಬಂದಿದ್ದರು, ಬಾಬಾ ಬಂದಿದ್ದರು ಎಂದು. ತಂದೆ ಹೇಳುತ್ತಾರೆ ಇದು ಯಾವುದೂ ಇಲ್ಲ. ತಂದೆಯಂತೂ ಒಂದೇ ಮಾತಲ್ಲಿ ತಿಳಿಸುತ್ತಾರೆ-ನೀವು ಏನು ಅರ್ಧ ಕಲ್ಪ ದೇಹ-ಅಭಿಮಾನಿಗಳಾಗಿದ್ದಿರಿ, ಈಗ ದೇಹೀ-ಅಭಿಮಾನಿಯಾಗಿ ತಂದೆಯನ್ನು ನೆನಪುಮಾಡಿ ಆಗ ವಿಕರ್ಮ ವಿನಾಶ ವಾಗುತ್ತೆ, ಇದಕ್ಕೆ ನೆನಪಿನ ಯಾತ್ರೆ ಎಂದು ಹೇಳಲಾಗುತ್ತದೆ. ಯೋಗ ಎಂದು ಹೇಳುವುದರಿಂದ ಯಾತ್ರೆ ಎಂದು ಸಿದ್ಧವಾಗುವುದಿಲ್ಲ. ನೀವು ಆತ್ಮಗಳು ಇಲ್ಲಿಂದ ಹೋಗಬೇಕಾಗಿದೆ, ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕು. ನೀವು ಈಗ ಯಾತ್ರೆ ಮಾಡುತ್ತಿರುವಿರಿ. ಅವರು ಮಾಡುವ ಯೋಗದಲ್ಲಿ ಯಾತ್ರೆಯ ಮಾತಿಲ್ಲ, ಹಠಯೋಗಿ ಗಳಂತೂ ಬಹಳಷ್ಟಿದ್ದಾರೆ, ಅದಾಗಿದೆ ಹಠಯೋಗ, ಇದಾಗಿದೆ ತಂದೆಯನ್ನು ನೆನಪು ಮಾಡುವುದು. ತಂದೆ ಹೇಳುತ್ತಾರೆ ಮಧುರ-ಮಧುರ ಮಕ್ಕಳೇ ತಮ್ಮನ್ನು ಆತ್ಮ ಎಂದು ತಿಳಿಯಿರಿ. ಈ ರೀತಿ ಬೇರೆ ಯಾರೂ ಎಂದೂ ತಿಳಿಸುವುದಿಲ್ಲ. ಇದು ವಿದ್ಯೆಯಾಗಿದೆ. ತಂದೆಗೆ ಮಕ್ಕಳಾದ ನಂತರ ತಂದೆಯಿಂದ ಓದಬೇಕು ಮತ್ತು ಓದಿಸಬೇಕು. ಬಾಬಾ ಹೇಳುತ್ತಾರೆ ನೀವು ಮ್ಯೂಜಿಯಂ ತೆರೆಯಿರಿ, ತಮಷ್ಟಕ್ಕೆ ತಾವೇ ನಿಮ್ಮ ಬಳಿ ಬರುತ್ತಾರೆ. ಕರೆಯವ ಗೊಡವೆಯೆ ಇರುವುದಿಲ್ಲ. ಈ ಜ್ಞಾನ ಬಹಳ ಚೆನ್ನಾಗಿದೆ ಎಂದು ಹೇಳುತ್ತಾರೆ,ಎಂದೂ ಕೇಳಿರಲಿಲ್ಲ ಎನ್ನುತ್ತಾರೆ. ಇದರಿಂದ ಚಾರಿತ್ರ್ಯೆ ಸುಧಾರಣೆಯಾಗುತ್ತದೆ. ಪವಿತ್ರತೆ ಮುಖ್ಯವಾಗಿದೆ, ಯಾವುದರ ಮೇಲೆ ಗಲಾಟೆ ಮುಂತಾದುವುಗಳಾಗುತ್ತದೆ. ಬಹಳ ಮಂದಿ ಫೇಲ್ ಕೂಡ ಆಗುತ್ತಾರೆ. ನಿಮ್ಮ ಅವಸ್ಥೆ ಈ ರೀತಿಯಾಗಿ ಬಿಡುತ್ತದೆ ಏನು ಈ ಪ್ರಪಂಚದಲ್ಲಿದ್ದರೂ ಅದನ್ನು ನೋಡುವುದಿಲ್ಲ. ತಿನ್ನುತ್ತಾ-ಕುಡಿಯುತ್ತಾ ನಿಮ್ಮ ಬುದ್ಧಿ ಆಕಡೆಯಿರುತ್ತದೆ. ಹೇಗೆ ಅಪ್ಪ ಹೊಸ ಮನೆ ಕಟ್ಟುತ್ತಿದ್ದರೆ ಎಲ್ಲರ ಬುದ್ಧಿ ಹೊಸ ಮನೆಯಕಡೆ ಹೋಗಿಬಿಡುತ್ತದೆ ಯಲ್ಲವೇ. ಈಗ ಹೊಸ ಪ್ರಪಂಚ ತಯಾರಾಗುತ್ತಿದೆ. ಬೇಹದ್ದಿನ ತಂದೆ ಬೇಹದ್ದಿನ ಮನೆ ತಯಾರಿಸುತ್ತಿದ್ದಾರೆ. ನೀವು ತಿಳಿದಿದ್ದೀರಿ ನಾವುಸ್ವರ್ಗವಾಸಿಗಳಾಗಲು ಪುರುಷಾರ್ಥ ಮಾಡುತ್ತಿದ್ದೇವೆ ಎಂದು. ಈಗ ಚಕ್ರ ಪೂರ್ಣವಾಯಿತು. ಈಗ ನಮಗೆ ಮನೆ ಮತ್ತು ಸ್ವರ್ಗಕ್ಕೆ ಹೋಗಬೇಕಾಗಿದೆ ಮತ್ತು ಅದಕ್ಕಾಗಿ ಖಂಡಿತ ಪಾವನರೂ ಆಗಬೇಕಿದೆ. ನೆನಪಿನ ಯಾತ್ರೆಯಿಂದ ಪಾವನರಾಗಬೇಕು. ನೆನಪಿನಲ್ಲೆ ವಿಘ್ನ ಬರುತ್ತದೆ, ಇದರಲ್ಲೇ ನಿಮ್ಮ ಯುದ್ದವಾಗಿದೆ. ವಿಧ್ಯಯಲ್ಲಿ ಯುದ್ಧದ ಮಾತಿರುವುದಿಲ್ಲ. ವಿಧ್ಯೆಯಂತೂ ಬಹಳ ಸರಳವಾಗಿದೆ. 84 ರ ಚಕ್ರದ ಜ್ಞಾನವಂತೂ ಬಹಳ ಸಹಜವಾಗಿದೆ. ಬಾಕಿ ನಿಮ್ಮನ್ನು ಆತ್ಮ ಎಂದು ತಿಳಿದು ತಂದೆಯನ್ನು ನೆನಪುಮಾಡಿ, ಇದರಲ್ಲೇ ಪರಿಶ್ರಮವಿದೆ. ತಂದೆ ಹೇಳುತ್ತಾರೆ ನೆನಪಿನಯಾತ್ರೆಯನ್ನು ಮರೆಯಬೇಡಿ. ಕಡೇ ಪಕ್ಷ 8 ಗಂಟೆಯಾದರೂ ಖಂಡಿತ ನೆನಪು ಮಾಡಬೇಕು. ಶರೀರ ನಿರ್ವಹಣೆಗೆ ಕೆಲಸವನ್ನೂ ಮಾಡಬೇಕು. ನಿದ್ರೆಯನ್ನೂ ಮಾಡಬೇಕು. ಸಹಜ ಮಾರ್ಗವಾಗಿದೆಯಲ್ಲವೇ. ಒಂದುವೇಳೆ ನಿದ್ರೆ ಮಾಡಬೇಡಿ ಎಂದರೆ ಅದು ಹಠಯೋಗವಾಗಿಬಿಡುತ್ತದೆ. ಹಠಯೋಗಿಗಳಂತೂ ಬಹಳಷ್ಟಿದ್ದಾರೆ ತಂದೆ ಹೇಳುತ್ತಾರೆ ಆ ಕಡೆ ಏನನ್ನೂ ನೋಡಬೇಡಿ, ಅದರಿಂದ ಏನೂ ಲಾಭವಿಲ್ಲ. ಹಠಯೋಗ ಮುಂತಾದುವನ್ನು ಎಷ್ಟು ಕಲಿಸುತ್ತಾರೆ. ಇದೆಲ್ಲ ಮನುಷ್ಯಮತವಾಗಿದೆ. ನೀವು ಅತ್ಮಗಳಾಗಿರುವಿರಿ, ಆತ್ಮವೇ ಶರೀರ ಪಡೆದು ಪಾತ್ರವನ್ನಭಿನಯಿಸುತ್ತದೆ, ಡಾಕ್ಟರ್ ಇತ್ಯಾದಿ ಆಗುತ್ತದೆ. ಆದರೆ ಮನುಷ್ಯ ದೇಹ-ಅಭಿಮಾನಿಯಾಗಿಬಿಟ್ಟಿದ್ದಾನೆ- ನಾನು ಇಂತಹವನು....... |
ಈಗ ನಿಮ್ಮ ಬುದ್ಧಿಯಲ್ಲಿದೆ- ನಾನು ಆತ್ಮನಾಗಿದ್ದೇನೆ. ತಂದೆಯೂ ಆತ್ಮ ಆಗಿದ್ದಾರೆ ಈ ಸಮಯದಲ್ಲಿ ನೀವು ಆತ್ಮಗಳಿಗೆ ಓದಿಸುತ್ತಿದ್ದಾರೆ ಆದ್ದರಿಂದ ಗಾಯನ ಇದೆ- ಆತ್ಮಗಳು ಮತ್ತು ಪರಮಾತ್ಮ ಬಹಳಕಾಲದಿಂದ ಅಗಲಿಹೋಗಿದ್ದರು.... ಎಂದು, ಕಲ್ಪ-ಕಲ್ಪ ಮಿಲನ ಮಾಡುತ್ತಿರುತ್ತಾರೆ. ಬಾಕಿ ಯಾವುದು ಇಡೀ ಪ್ರಪಂಚ ಇದೆ, ಅವರೆಲ್ಲ ದೇಹ-ಅಭಿಮಾನದಲ್ಲಿ ಬಂದು ದೇಹವೆಂದು ತಿಳಿದೇ ಒದುತ್ತಾರೆ ಹಾಗೂ ಓದಿಸುತ್ತಾರೆ. ತಂದೆ ಹೇಳುತ್ತಾರೆ ನಾನು ಆತ್ಮಗಳಿಗೆ ಓದಿಸುತ್ತೇನೆ. ಜಡ್ಜ್, ಬ್ಯಾರಿಸ್ಟರ್ ಮುಂತಾದವರು ಸಹ ಆತ್ಮವೇ ಆಗುತ್ತದೆ. ನೀವು ಆತ್ಮ ಸತೋಪ್ರಧಾನ ಪವಿತ್ರರಾಗಿದ್ದಿರಿ ನಂತರ ಪಾತ್ರ ಮಾಡುತ್ತಾ ಮಾಡುತ್ತಾ ಪತಿತರಾದಿರಿ ಆಗ ಕರೆಯುತ್ತೀರಿ ಬಾಬಾ ಬಂದು ನಮ್ಮನ್ನು ಪಾವನ ಆತ್ಮರನ್ನಾಗಿ ಮಾಡಿ ಎಂದು. ತಂದೆಯಂತೂ ಪಾವನರಾಗೆ ಇದ್ದಾರೆ. ಈ ಮಾತು ಯಾವಾಗ ಕೇಳುವಿರಿ ಆಗ ಧಾರಣೆಯಾಗುತ್ತದೆ. ನೀವು ಮಕ್ಕಳಿಗೆ ಧಾರಣೆ ಯಾದಾಗ ನೀವು ದೇವತೆಗಳಾಗುವಿರಿ. ಬೇರೆ ಯಾರ ಬುದ್ಧಿಯಲ್ಲೂ ಕುಳಿತುಕೊಳ್ಳುವುದಿಲ್ಲ ಏಕೆಂದರೆ ಇದಾಗಿದೆ ಹೊಸಮಾತು. ಇದು ಜ್ಞಾನವಾಗಿದೆ. ಅದು ಭಕ್ತಿಯಾಗಿದೆ. ನೀವೂ ಭಕ್ತಿ ಮಾಡುತ್ತಾ-ಮಾಡುತ್ತಾ ದೇಹ-ಅಭಿಮಾನಿಗಳಾಗಿಬಿಡುವಿರಿ. ಈಗ ತಂದೆಯು ತಿಳಿಸುತ್ತಾರೆ-ಮಕ್ಕಳೇ, ಆತ್ಮ-ಅಭಿಮಾನಿಗಳಾಗಿ ಎಂದು. ನಾವು ಆತ್ಮಗಳಿಗೆ ತಂದೆಯು ಈ ಶರೀರದ ಮೂಲಕ ಓದಿಸುತ್ತಾರೆ. ಘಳಿಗೆ-ಘಳಿಗೆ ನೆನಪಿನಲ್ಲಿಟ್ಟುಕೊಳ್ಳಿ ಇದು ಒಂದೇ ಸಮಯವಾಗಿದೆ ಯಾವುದು ಆತ್ಮಗಳಿಗೆ ಪರಮಪಿತ ತಂದೆ ಓದಿಸುತ್ತಾರೆ. ಬಾಕಿ ಇಡೀ ಡ್ರಾಮದಲ್ಲಿ ಎಂದೂ ಈ ಪಾತ್ರ ಇರುವುದಿಲ್ಲ. ಈ ಸಂಗಮಯುಗದ ವಿನಹ ಆದ್ದರಿಂದ ತಂದೆ ಮತ್ತೆ ಹೇಳುತ್ತಾರೆ ಮಧುರ-ಮಧುರ ಮಕ್ಕಳೇ ತಮ್ಮನ್ನು ಆತ್ಮ ಎಂದು ನಿಶ್ಚಯಮಾಡಿಕೊಳ್ಳಿ,ತಂದೆಯನ್ನು ನೆನಪುಮಾಡಿ. ಇದು ಬಹಳ ಉನ್ನತವಾದ ಯಾತ್ರೆಯಾಗಿದೆ- ಏರಿದರೆ ವೈಕುಂಠರಸವನ್ನು ಹೀರಿ. ವಿಕಾರದಲ್ಲಿ ಬೀಳುವುದರಿಂದ ಏಕದಂ ಚೂರು ಚೂರಾಗಿಬಿಡುವಿರಿ. ಆದರೂ ಸ್ವರ್ಗದಲ್ಲಿ ಬರುವಿರಿ, ಆದರೆ ಪದವಿ ಬಹಳ ಕಡಿಮೆಯಾಗುತ್ತದೆ. ಇಲ್ಲಿ ರಾಜಧಾನಿ ಸ್ಥಾಪನೆಯಾಗುತ್ತಿದೆ. ಇದರಲ್ಲಿ ಕಡಿಮೆ ಪದವಿಯವರೂ ಬೇಕಾಗುತ್ತದೆ, ಎಲ್ಲರೂ ಜ್ಞಾನದಲ್ಲಂತೂ ನಡೆಯುವುದಿಲ್ಲ. ಇಲ್ಲದೇ ಹೋದರೆ ಬಹಳಷ್ಟು ಮಕ್ಕಳು ಬಾಬಾರವರನ್ನು ಮಿಲನಮಾಡಬೇಕಿತ್ತು. ಒಂದುವೇಳೆ ಮಿಲನ ಮಾಡಿದ್ದರೂ ಸ್ವಲ್ಪ ಸಮಯಕ್ಕಾಗಿ. ನೀವು ಮಾತೆಯರ ಮಹಿಮೆ ಬಹಳ ಇದೆ. ವಂದೇಮಾತರಂ ಎಂದೂ ಗಾಯನ ಮಾಡಲಾಗುತ್ತದೆ. ಜಗದಂಬ ರ ಎಷ್ಟುದೊಡ್ಡ ಮೇಳಾ ನಡೆಯುತ್ತದೆ ಏಕೆಂದರೇ ಬಹಳ ಹೆಚ್ಚು ಸೇವೆಮಾಡಿದ್ದಾರೆ. ಯಾರು ಹೆಚ್ಚು ಸೇವೆ ಮಾಡುತ್ತಾರೆ ಅವರು ದೊಡ್ಡ ರಾಜರಾಗುತ್ತಾರೆ. ದಿಲ್ವಾಡಾ ಮಂದಿರದಲ್ಲೂ ನಿಮ್ಮದೆ ನೆನಪಾರ್ಥ ಇದೆ. ನೀವು ಮಕ್ಕಳಂತೂ ಬಹಳ ಸಮಯ ಕೊಡಬೇಕಾಗುತ್ತದೆ. ನೀವು ಭೋಜನ ಮುಂತಾದುವನ್ನು ಮಾಡುತ್ತೀರೆಂದರೆ ಬಹಳ ಶುದ್ಧ ಭೋಜನ ನೆನಪಿನಲ್ಲಿ ಕುಳಿತು ಮಾಡಬೇಕಾಗಿದೆ, ಯಾರಿಗೆ ತಿನ್ನಿಸುವಿರಿ ಅವರ ಹೃದಯ ಕೂಡ ಶುದ್ಧವಾಗಿಬಿಡಬೇಕು. ಈ ರೀತಿ ಬಹಳ ಕಡಿಮೆ ಜನ ಇದ್ದಾರೆ, ಯಾರಿಗೆ ಇಂಥಹ ಬೋಜನ ದೊರಕುತ್ತಿರುವುದು. ನಿಮ್ಮನ್ನು ನೀವು ಕೇಳಿಕೊಳ್ಳಿ- ನಾವು ಶಿವಬಾಬಾರವರ ನೆನಪಿನಲ್ಲಿದ್ದು ಭೋಜನ ಮಾಡುತ್ತಿರುವೆನಾ?, ಯಾವುದನ್ನು ತಿನ್ನುವುದರಿಂದಲೇ ಅವರ ಹೃದಯ ಕರಗಿಹೋಗಿಬಿಡಬೇಕು. ಘಳಿಗೆ-ಘಳಿಗೆ ನೆನಪು ಮರೆತುಹೋಗುತ್ತದೆ. ಬಾಬಾ ಹೇಳುತ್ತಾರೆ ಮರೆಯುವುದೂ ಡ್ರಾಮದಲ್ಲಿ ನಿಗಧಿಯಾಗಿದೆ ಏಕೆಂದರೆ ನೀವು 16 ಕಲೆ ಉಳ್ಳವರು ಇನ್ನೂ ಆಗಿಲ್ಲ. ಸಂಪೂರ್ಣರಂತೂ ಖಂಡಿತ ಆಗಬೇಕು. ಪೌರ್ಣಮಿಯ ಚಂದ್ರನಲ್ಲಿ ಎಷ್ಟು ಹೊಳಪಿರುತ್ತದೆ. ನಂತರ ಕಡಿಮೆ ಯಾಗುತ್ತಾ ಆಗುತ್ತಾ ಸಣ್ಣ ಗೆರೆಯಾಗಿ ಉಳಿದುಬಿಡುತ್ತದೆ. ಘೋರ ಅಂಧಕಾರ ಉಳಿದುಬಿಡುತ್ತದೆ ನಂತರ ಘೋರ ಬೆಳಕು. ಈ ವಿಕಾರಗಳನ್ನು ಬಿಟ್ಟು ತಂದೆಯನ್ನು ನೆನಪು ಮಾಡುತ್ತಿದ್ದರೆ ನಿಮ್ಮ ಆತ್ಮ ಸಂಪೂರ್ಣ ವಾಗಿಬಿಡುತ್ತದೆ. ನೀವು ಮಹಾರಾಜ ಆಗಬೇಕು ಎಂದು ಇಚ್ಛೆ ಪಡುತ್ತೀರಿ ಆದರೆ ಎಲ್ಲರೂ ಆಗಲು ಸಾಧ್ಯವಿಲ್ಲ. ಪುರುಷಾರ್ಥ ಎಲ್ಲರೂ ಮಾಡಬೇಕಾಗಿದೆ. ಕೆಲವರು ಯಾವುದೇ ಪುರುಷಾರ್ಥ ಮಾಡುವುದಿಲ್ಲ ಆದ್ದರಿಂದ ಮಹಾರಥಿ, ಕುದುರೇ ಸವಾರ, ಕಾಲಾಳು ಎಂದು ಕರೆಸಿಕೊಳ್ಳುವರು. ಮಹಾರಥಿಗಳು ಸ್ವಲ್ಪವೇ ಇರುತ್ತಾರೆ. ಪ್ರಜೆ ಅಥವಾ ಸೇನೆ ಎಷ್ಟಿರುತ್ತಾರೆ ಅಷ್ಟು ಕಮಾಂಡರ್ಸ್, ಮೇಜರ್ಸ್ ಇರುವುದಿಲ್ಲ. ನಿಮ್ಮಲ್ಲೂ ಕಮಾಂಡರ್ಸ್, ಮೇಜರ್ಸ್, ಕ್ಯಾಪ್ಟನ್ ಇದ್ದಾರೆ. ಕಾಲಾಳುಗಳೂ ಇದ್ದಾರೆ. ನಿಮ್ಮದೂ ಸಹ ಆತ್ಮೀಯ ಸೇನೆಯಾಗಿದೆಯಲ್ಲವೇ. ಎಲ್ಲದರ ಆಧಾರ ನೆನಪಿನಯಾತ್ರೆಯ ಮೇಲಿದೆ. ಅದರಲ್ಲೇ ಬಲ ಸಿಗುತ್ತದೆ. ನೀವು ಗುಪ್ತ ಸೈನಿಕರಾಗಿರುವಿರಿ. ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮಗಳ ಏನು ಕೊಳಕಿದೆ ಅದು ಭಸ್ಮವಾಗಿಬಿಡುತ್ತದೆ. ತಂದೆ ಹೇಳುತ್ತಾರೆ ವ್ಯಾಪಾರ ವ್ಯವಹಾರವನ್ನಂತೂ ಮಾಡಿ. ತಂದೆಯನ್ನು ನೆನಪುಮಾಡಿ. ನೀವು ಓಬ್ಬ ಪ್ರಿಯತಮನಿಗೆ ಜನ್ಮ-ಜನ್ಮಾಂತರ ಪ್ರಿಯತಮೆಯರಾಗಿರುವಿರಿ. ಈಗ ಆ ಪ್ರಿಯತಮ ಸಿಕ್ಕಿದ್ದಾನೆಂದರೆ ಅವನ ನೆನಪನ್ನು ಮಾಡಬೇಕಿದೆ. ಹಿಂದೆ ಭಲೇ ನೆನಪು ಮಾಡುತ್ತಿದ್ದಿರಿ ಆದರೆ ವಿಕರ್ಮ ವಿನಾಶ ಆಗುತ್ತಿರಲಿಲ್ಲ. ತಂದೆ ತಿಳಿಸಿಕೊಟ್ಟಿದ್ದಾರೆ ನಿಮಗೆ ಈಗ ತಮೋಪ್ರದಾನ ರಿಂದ ಸತೋ ಪ್ರದಾನರಾಗಬೇಕು ಆತ್ಮವೇ ಆಗಬೇಕಿದೆ. ಆತ್ಮವೇ ಪರಿಶ್ರಮ ಪಡುತ್ತಿದೆ. ಈ ಜನ್ಮದಲ್ಲಿ ನೀವು ಜನ್ಮ-ಜನ್ಮಾಂತರದ ಮೈಲಿಗೆಯನ್ನು ತೆಗೆಯಬೇಕಾಗಿದೆ. ಇದಾಗಿದೆ ಮೃತ್ಯುಲೋಕದ ಅಂತಿಮ ಜನ್ಮ ನಂತರ ಅಮರಲೋಕಕ್ಕೆ ಹೋಗಬೇಕಾಗಿದೆ. ಆತ್ಮ ಪಾವನವಾಗದ ಹೊರತು ಹೋಗಲು ಸಾಧ್ಯವಿಲ್ಲ. ಎಲ್ಲರ ಲೆಕ್ಕಾ-ಚಾರ ಚುಕ್ತು ಆಗಿಬಿಡಬೇಕು. ನಂತರ ಒಂದುವೇಳೆ ಸಜೆಗಳನ್ನು ಬೋಗಿಸಿದರೆ ಪದವಿ ಕಡಿಮೆಯಾಗಿಬಿಡುತ್ತದೆ. ಯಾರು ಸಜೆ ತಿನ್ನುವುದಿಲ್ಲ ಅವರನ್ನುಮಾಲೆಯ 8 ಮಣಿ ಗಳೆಂದು ಕರೆಯಲಾಗುತ್ತದೆ. 9 ರತ್ನಗಳ ಉಂಗುರ ಮುಂತಾದುವನ್ನು ಮಾಡಿಸುತ್ತಾರೆ. ಹೀಗಾಗಬೇಕಾದರೆ ತಂದೆಯನ್ನು ನೆನಪುಮಾಡುವ ಬಹಳ ಪರಿಶ್ರಮ ಮಾಡಬೇಕಾಗುತ್ತದೆ. ಒಳ್ಳೆಯದು!. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
Subsets and Splits
No community queries yet
The top public SQL queries from the community will appear here once available.